BREAKING NEWS

‘ಮಹಾರಾಜ ನಿವೃತ್ತಿ’: ಹೊಸ ಲೋಗೊ ಬಿಡುಗಡೆ ಮಾಡಿದ ಏರ್ ಇಂಡಿಯಾ

ನವದೆಹಲಿ : ಏರ್ ಇಂಡಿಯಾದ ಪ್ರಖ್ಯಾತ ಲೋಗೋ ಆದ ಮಹಾರಾಜನಿಗೆ ವಿದಾಯ ಹೇಳಿದ ಟಾಟಾ ಮಾಲಕತ್ವದ ಏರ್ ಇಂಡಿಯಾ, ಗುರುವಾರ ತನ್ನ ನೂತನ ಲೋಗೋ ಬಿಡುಗಡೆ ಮಾಡಿದ್ದು, ಅದು ಅಪರಿಮಿತ ಸಾಧ್ಯತೆಗಳನ್ನು ಸೂಚಿಸುವಂತಿದೆ. ಈ ನೂತನ ಲೋಗೋ ಬಿಡುಗಡೆ ಮಾಡಲು 15 ತಿಂಗಳಿನಿಂದ ಏರ್ ಇಂಡಿಯಾ ಕೆಲಸ ಮಾಡಿದೆ. ಈ ಲೋಗೋವು ಅಶೋಕ ಚಕ್ರದಿಂದ ಪ್ರೇರಣೆಗೊಂಡಿದ್ದ ಹಳೆಯ ಕೆಂಪು ಹಂಸ ಹಾಗೂ ಕೇಸರಿ ಮುಳ್ಳುಗಳ ಲೋಗೋದ ಸ್ಥಾನವನ್ನು ಆಕ್ರಮಿಸಲಿದೆ.

ಏರ್ ಇಂಡಿಯಾದ ನೂತನ ಲೋಗೋ ಚಿಹ್ನೆಯು ‘ದಿ ವಿಸ್ತಾ’ ಎಂದಿದ್ದು, ಆಧುನಿಕ ವಿನ್ಯಾಸ ಒಳಗೊಂಡಿರುವ ಸುವರ್ಣ, ಕೆಂಪು ಹಾಗೂ ನೇರಳೆ ಬಣ್ಣಗಳನ್ನು ಹೊಂದಿದೆ.

ನೂತನ ಲೋಗೋ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ ಕಂಪನಿಯು, “ಈ ವಿನ್ಯಾಸವು ಉತ್ಕೃಷ್ಟ ಸುವರ್ಣ ಕಿಟಕಿ ಚೌಕಟ್ಟಿನಿಂದ ಪ್ರೇರಿತಗೊಂಡಿದ್ದು, ಅಪರಿಮಿತ ಸಾಧ್ಯತೆಗಳು, ಪ್ರಗತಿಪರತೆ ಹಾಗೂ ಭವಿಷ್ಯದೆಡೆಗಿನ ಏರ್ ಲೈನ್ಸ್ ನ ಧೈರ್ಯ, ವಿಶ್ವಾಸದ ದೃಷ್ಟಿಕೋನವನ್ನು ಸೂಚಿಸುತ್ತದೆ” ಎಂದು ಹೇಳಿದೆ.

ನೂತನ ಲೋಗೋವು ಕಲಾತ್ಮಕ ಹಾಗೂ ವಿಶಿಷ್ಟ ಭಾರತೀಯ ಕಿಟಕಿಯ ವಿನ್ಯಾಸದಿಂದ ಪ್ರೇರಣೆಗೊಂಡಿದ್ದು, ಈ ವಿನ್ಯಾಸವನ್ನು ಏರ್ ಇಂಡಿಯಾ ಚಾರಿತ್ರಿಕವಾಗಿ ಬಳಸುತ್ತಾ ಬರುತ್ತಿದೆ. ಈ ವಿನ್ಯಾಸವನ್ನು ಏರ್ ಇಂಡಿಯಾ ಕಂಪನಿಯು “ಅವಕಾಶಗಳ ಕಿಟಕಿ” ಎಂದು ಭಾವಿಸಿದೆ.

andolanait

Recent Posts

ಓದುಗರ ಪತ್ರ: ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಆಗಲಿ

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮಸಣಾಪುರ ಚಾಟಿಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಫಲಕಕ್ಕೆ ಕಿಡಿಗೇಡಿಗಳು ಅಪಮಾನ…

11 mins ago

ಓದುಗರ ಪತ್ರ: ಒಡೆಯರ್ ಪೋಸ್ಟ್ ಕಾರ್ಡ್ ಬಿಡುಗಡೆ ಶ್ಲಾಘನೀಯ

ಭಾರತೀಯ ಅಂಚೆ ಹಾಗೂ ಕರ್ನಾಟಕ ಅಂಚೆ ಚೀಟಿ ಸಂಗ್ರಹಣಾ ಸಂಘವು ಆಧುನಿಕ ಮೈಸೂರು ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿರುವ ಮೈಸೂರು…

13 mins ago

ಓದುಗರ ಪತ್ರ: ಮೈಸೂರು ದಟ್ಟಗಳ್ಳಿಯ ಪಿನ್ ಕೋಡ್ ಸಮಸ್ಯೆ ನಿವಾರಿಸಿ

ಮೈಸೂರಿನ ದಟ್ಟಗಳ್ಳಿ ೩ ನೇ ಹಂತದ ಕನಕದಾಸನಗರವು, ಬಡಾವಣೆ ನಿರ್ಮಾಣವಾದ ಆರಂಭದಲ್ಲಿ ರಾಮಕೃಷ್ಣ ನಗರ ಉಪ ಅಂಚೆ ಕಚೇರಿಗೆ ಸೇರಿತ್ತು.…

15 mins ago

ಮಳೆಗಾಲದ ಸವಾಲು ಎದುರಿಸಲು ಸೆಸ್ಕ್ ಸಜ್ಜು

ಪುನೀತ್ ಮಡಿಕೇರಿ ಹೆಚ್ಚುವರಿ ಸಿಬ್ಬಂದಿಗಳ ನಿಯೋಜನೆ; ಅಗತ್ಯವಿರುವಷ್ಟು ವಿದ್ಯುತ್ ಕಂಬಗಳು, ಪರಿವರ್ತಕಗಳು, ವಾಹಕಗಳ ದಾಸ್ತಾನು ಮಡಿಕೇರಿ: ಗುಡ್ಡಗಾಡು ಪ್ರದೇಶವಾಗಿರುವ ಕೊಡಗು…

18 mins ago

ರಸ್ತೆ ಇಲ್ಲದೆ ಯೋಧನ ಕುಟುಂಬ ಪರದಾಟ

ಮಹೇಶ್ ಕರೋಠಿ ಮುಚ್ಚಿರುವ ರಸ್ತೆಯನ್ನು ಪುನಃ ತೆರೆದು ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರ ಒತ್ತಾಯ ಕಿಕ್ಕೇರಿ: ಜಮ್ಮು-ಕಾಶ್ಮೀರದ ಗಡಿಯಲ್ಲಿ ದೇಶದ ಭದ್ರತೆಗಾಗಿ…

22 mins ago

ಕುತೂಹಲ ಮೂಡಿಸಿದ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ

ಮಂಜು ಕೋಟೆ ಕೋಟೆ: ಕಾಂಗ್ರೆಸ್, ಬಿಜೆಪಿ, ಜಾ.ದಳ ಪಕ್ಷಗಳಲ್ಲಿ ಪೈಪೋಟಿ; ಮುಖಂಡರಿಗೆ ಪ್ರತಿ ಎಚ್.ಡಿ.ಕೋಟೆ: ಕ್ಷೇತ್ರದ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ…

27 mins ago