ಶ್ರೀನಗರ : ” ಸದ್ಯ ಆಡಳಿತಾರೂಢ ಸರಕಾರವು ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿಯೆತ್ತುತ್ತಿದೆ. ಆದರೆ ಆ ರೀತಿಯಾಗಿ ಕಣಿವೆ ಪ್ರದೇಶ ಭಾರತದಲ್ಲಿ ಉಳಿಯಲು ಮಹಾತ್ಮ ಗಾಂಧೀಜಿ ಕಾರಣ,” ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ಹಿಂದೂಗಳು ಬಹುಸಂಖ್ಯಾತರಾಗಿರುವ ರಾಷ್ಟ್ರದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿರುವ ರಾಜ್ಯವೆಂದರೆ , ಅದು ಜಮ್ಮು ಮತ್ತು ಕಾಶ್ಮೀರ. ಸ್ವಾತಂತ್ರ್ಯ ಸಿಕ್ಕ ನಂತರ ಮಹಾತ್ಮ ಗಾಂಧೀಜಿ ಅವರು ಈ ದೇಶದಲ್ಲಿ ವ್ಯಕ್ತಿಯು ಯಾವುದೇ ಧರ್ಮ, ಭಾಷೆ, ಸಂಸ್ಕೃತಿ ಪಾಲಿಸಿದರೂ ಅವರೆಲ್ಲರೂ ಭಾರತೀಯರು. ಆ ಬಗ್ಗೆ ಸಂಶಯವೇ ಇಲ್ಲ ಎಂದು ಘೋಷಿಸಿದರು. ಈ ವಾಗ್ದಾನವು ಕಣಿವೆಯಲ್ಲಿನ ಮುಸ್ಲಿಮರು ಭಾರತದಲ್ಲಿ ಉಳಿಯುವಂತೆ ಮಾಡಿತು,” ಎಂದು ವಿವರಿಸಿದರು.
” ಎಲ್ಲ ರಾಜ್ಯಗಳಿಂದ ಈ ದೇಶ ರಚಿತವಾಗಿದೆ ಎಂಬ ಮಹಾತ್ಮ ಗಾಂಧಿ ಅವರ ಉದಾತ್ತ ಚಿಂತನೆಗೆ ಗೌರವವಾಗಿ ಜಮ್ಮು ಮತ್ತು ಕಾಶ್ಮೀರದ ಜನರು ಪ್ರತ್ಯೇಕ ರಾಜ್ಯ ಅಥವಾ ಅನ್ಯ ರಾಷ್ಟ್ರದೊಂದಿಗೆ ಗುರುತಿಸಿಕೊಳ್ಳುವ ಯತ್ನ ನಡೆಸಿಲ್ಲ,” ಎಂದು ಫಾರೂಕ್ ಅಭಿಪ್ರಾಯಪಟ್ಟರು.
“ಕಾಶ್ಮೀರ ಎಂದಿಗೂ ಸ್ವಾತಂತ್ರ್ಯ ಕೇಳಿಲ್ಲ. ನಾವು ದೇಶದ ಭಾಗವಾಗಿದ್ದೇವೆ. ಸ್ವಾತಂತ್ರ್ಯ ಬಂದ ಸಂದರ್ಭದಿಂದಲೂ ಕ್ಷೋಭೆ ಇದೆ. ದಿಲ್ಲಿ ತನ್ನ ಆಟ ಆಡಿದೆ ಮತ್ತು ತನ್ನ ಆಟವನ್ನು ಮುಂದುವರಿದಿದೆ. ನೆಹರು ಕಾಲದಲ್ಲಿಯೂ ಹಾಗೆ ಇತ್ತು, ಈಗ ಕೂಡ ಅದು ಹಾಗೆಯೇ ಇದೆ” ಎಂದು ಹೇಳಿದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…
ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…
ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…
ನ್ಯಾಯಬೆಲೆ ಅಂಗಡಿಗಳ ಗ್ರಾಹಕರ ಮನವಿಗೆ ಸರ್ಕಾರದ ಸ್ಪಂದನೆ ಅ.1ರಿಂದ ಬೆಳಿಗ್ಗೆ 7ರಿಂದ ಮಧ್ಯಾಹ್ನ 12; ಸಂಜೆ 4ರಿಂದ ರಾತ್ರಿ 8…
ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…