BREAKING NEWS

ಬೆಂಗ​ಳೂರು-ಮೈಸೂರು ಮರಣ ಹೆದ್ದಾ​ರಿ ಕ್ರೆಡಿಟ್‌ ಅನ್ನೂ ಬಿಜೆಪಿಯವರೇ ತೆಗೆದಕೊಳ್ಳಬೇಕು : ರಾಮ​ಲಿಂಗಾ​ರೆಡ್ಡಿ

ರಾಮ​ನ​ಗರ : ಬೆಂಗ​ಳೂರು – ಮೈಸೂರು ರಾಷ್ಟ್ರೀಯ ಹೆದ್ದಾ​ರಿಯಾಗಿ ಉಳಿ​ದಿಲ್ಲ. ಅದೊಂದು ಮರಣ ಹೆದ್ದಾ​ರಿ​ಯಾಗಿ ರೂಪ ತಳೆ​ದಿದೆ. ಆ ಕ್ರೆಡಿಟ್‌ ಅನ್ನು ಜಂಬ ಕೊಚ್ಚಿ​ಕೊ​ಳ್ಳು​ತ್ತಿ​ರು​ವ​ವರು ಪಡೆ​ದು​ಕೊ​ಳ್ಳಲಿ ಎಂದು ಬಿಜೆಪಿ ನಾಯ​ಕರ ವಿರುದ್ಧ ಜಿಲ್ಲಾ ಉಸ್ತು​ವಾರಿ ಸಚಿವ ರಾಮ​ಲಿಂಗಾ​ರೆಡ್ಡಿ ಕಿಡಿ​ಕಾ​ರಿ​ದ​ರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತ​ನಾ​ಡಿದ ಅವರು, ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 200ಕ್ಕೂ ಹೆಚ್ಚು ಅಪ​ಘಾ​ತ​ಗಳು ಸಂಭ​ವಿ​ಸಿದ್ದು, 150ಕ್ಕೂ ಹೆಚ್ಚು ಜನರು ಜೀವ ಕಳೆ​ದು​ಕೊಂಡಿ​ದ್ದಾರೆ. ಇದಕ್ಕೆ ಯಾರು ಹೊಣೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿ​ಕಾ​ರದ ಅಧಿ​ಕಾ​ರಿ​ಯನ್ನು ಪ್ರಶ್ನಿ​ಸಿ​ದರು.

ನೀವು ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿ​ರು​ವು​ದೇ ಇಷ್ಟೊಂದು ಸಾವು ಸಂಭ​ವಿ​ಸಲು ಕಾರ​ಣ​ವಾ​ಗಿದೆ. ಇದರ ಹೊಣೆಯನ್ನು ಯಾರಾ​ದರು ಹೊರು​ತ್ತಾರೆಯೇ. ಕೆಲವರು ಮಾಧ್ಯಮ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ನಾವೇ ರಸ್ತೆ ಮಾಡಿದ್ದು ಎಂದು ಜಂಬ ಕೊಚ್ಚಿಕೊಳ್ಳುತ್ತಾರೆ. ರಸ್ತೆ ನಿರ್ಮಾ​ಣವಾಗಿದ್ದು ನಮ್ಮ ಹಣ​ದಲ್ಲಿ. ಆದರೂ ರಸ್ತೆ ಮಾಡಿ​ದ್ದಾಗಿ ಮಾತ್ರ ಹೇಳಿ​ಕೊ​ಳ್ಳು​ತ್ತಾರೆ. ಆ ಸಾವಿನ ಹೊಣೆ ಮಾತ್ರ ಹೊರಲ್ಲ. ಇದು ಹೈವೆಯಾಗಿ ಉಳಿ​ದಿ​ಲ್ಲ. ಮರಣ ಹೆದ್ದಾರಿ ಆಗಿದೆ. ಇದರ ಕ್ರೆಡಿಚ್‌ ಕೂಡ ಅವ​ರಿಗೆ ಸಲ್ಲುತ್ತದೆ ಎಂದು ಬಿಜೆಪಿ ನಾಯ​ಕರನ್ನು ಪರೋ​ಕ್ಷ​ವಾಗಿ ಟೀಕಿ​ಸಿ​ದರು.

ಹೆದ್ದಾ​ರಿ​ಯಲ್ಲಿ ಅಪ​ಘಾ​ತ​ಗಳು ಸಂಭ​ವಿ​ಸ​ದಂತೆ ಮಾಡುವ ಹೊಣೆ ನಿಮ್ಮದು. ನೀವು ಏನು ಮಾಡು​ತ್ತೀರೊ ಗೊತ್ತಿಲ್ಲ. ಹೆದ್ದಾ​ರಿ​ಯನ್ನು ವೈಜ್ಞಾ​ನಿ​ಕ​ವಾಗಿ ಮಾಡ​ಬೇಕು. ಸರ್ವಿಸ್‌ ರಸ್ತೆ, ತಂಗು​ದಾಣ, ಅಂಡರ್‌ ಪಾಸ್‌ ಸಮಸ್ಯೆ ಬಗೆ​ಹ​ರಿ​ಸ​ಬೇಕು ಎಂದು ರಾಮ​ಲಿಂಗಾ​ರೆಡ್ಡಿ ಸೂಚನೆ ನೀಡಿ​ದ​ರು.

lokesh

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

1 hour ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

5 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

5 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

5 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

6 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

6 hours ago