BREAKING NEWS

ಚಾಟ್‌ಜಿಪಿಟಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಆಸೀಸ್ ಮೇಯರ್

ಆಸ್ಟ್ರೇಲಿಯಾ : ಚಾಟ್‌ಜಿಪಿಟಿಯು ತಮ್ಮನ್ನು ‘ಅಪರಾಧಿ‘ ಎಂದು ಕರೆದಿರುವುದರ ವಿರುದ್ಧ ಆಕ್ರೋಶಗೊಂಡ ಆಸ್ಟ್ರೇಲಿಯಾದ ಮೇಯರ್‌ ಒಬ್ಬರು ಚಾಟ್‌ಜಿಪಿಟಿ ತಂತ್ರಾಂಶವನ್ನು ರೂಪಿಸಿದ ‘ಓಪನ್‌ ಎಐ’ ಕಂಪೆನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.
ಆಸ್ಟ್ರೇಲಿಯಾದ ಹೆಪ್ಬರ್ನ್ ಶೈರ್‌ನ ಮೇಯರ್‌ ಆಗಿರುವ ಬ್ರಿಯಾನ್‌ ಹುಡ್‌ ಚಾಟ್‌ಜಿಪಿಟಿ (ಎಐ ಆಧಾರಿತ ಚಾಟಿಂಗ್ ವ್ಯವಸ್ಥೆ) ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಬ್ರಿಯಾನ್‌ ಹುಡ್‌ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾಗಿ ಚಾಟ್‌ಜಿಪಿಟಿ ಸುಳ್ಳು ಮಾಹಿತಿ ನೀಡಿರುವುದೇ ಈ ಬೆಳವಣಿಗೆಗೆ ಕಾರಣವಾಗಿದೆ. ತಕ್ಷಣ ಮಾಹಿತಿ ಸರಿಪಡಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಈಗಾಗಲೇ ಬ್ರಿಯಾನ್‌ ‘ಓಪನ್‌ ಎಐ‘ಗೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಮೊಕದ್ದಮೆ ಹೂಡಿದ್ದೇ ಆದರೆ, ವಿಶ್ವದಲ್ಲಿಯೇ ವ್ಯಕ್ತಿಯೊಬ್ಬರು ಕೃತಕ ಬುದ್ದಿಮತ್ತೆ (ಎಐ) ವಿರುದ್ಧ ಹೂಡಿದ ಮೊದಲ ಮಾನನಷ್ಟ ಮೊಕದ್ದಮೆ ಇದಾಗಲಿದೆ.

ಚಾಟ್‌ಜಿಪಿಟಿಯಲ್ಲಿ ಬ್ರಿಯಾನ್‌ ಹುಡ್‌ ಬಗ್ಗೆ ಮಾಹಿತಿ ಕೇಳಿದಾಗ, ’2000ನೇ ಇಸವಿಯಲ್ಲಿ ಬ್ರಿಯಾನ್‌ ಹುಡ್‌ ‘ಫಾರಿನ್‌ ಬ್ರೈಬರಿ‘ ಹಗರಣದಲ್ಲಿ (ವಿದೇಶಿ ಸಾರ್ವಜನಿಕ ಅಧಿಕಾರಿಗೆ ಲಂಚ ನೀಡಿ ಪ್ರಯೋಜನ ಪಡೆಯುವುದು) ಅಪರಾಧಿ ಎಂದು ಸಾಬೀತಾಗಿ ಜೈಲು ಶಿಕ್ಷೆ ಅನುಭವಿಸಿದ್ದಾರೆ‘ ಎಂದು ಉತ್ತರಿಸಿತ್ತು. ಬ್ರಿಯಾನ್‌ ಸ್ನೇಹಿತರು ಈ ಮಾಹಿತಿಯನ್ನು ಅವರಿಗೆ ತಿಳಿಸಿದ್ದು, ತಕ್ಷಣ ಎಚ್ಚೆತ್ತ ಬ್ರಿಯಾನ್‌ ಟೆಕ್‌ ದೈತ್ಯ ‘ಚಾಟ್‌ಜಿಪಿಟಿ‘ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಬ್ರಿಯಾನ್‌ ಪರ ವಕೀಲ ಚಾಟ್‌ಜಿಪಿಟಿಯ ಮಾಲೀಕ ಸಂಸ್ಥೆ ‘ಓಪನ್‌ ಎಐ‘ಗೆ ಇ–ಮೇಲ್‌ ಮುಖಾಂತರ ನೋಟಿಸ್‌ ನೀಡಿದ್ದು, 28 ದಿನದೊಳಗೆ ಮಾಹಿತಿ ಸರಿಪಡಿಸುವಂತೆ ಸೂಚಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ಕ್ರಮ ಎದುರಿಸುವಂತೆ ತಿಳಿಸಿದ್ದಾರೆ. ವಕೀಲರ ನೋಟಿಸ್‌ಗೆ ಓಪನ್‌ ಎಐ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್‌ ವರದಿ ಮಾಡಿದೆ.

‘ಚಾಚ್‌ಜಿಪಿಟಿಯಂತಹ ಕೃತಕ ಬುದ್ದಿಮತ್ತೆ ತಂತ್ರಜ್ಞಾನಗಳು ಹೇಗೆ ಒಬ್ಬ ಮನುಷ್ಯನ ವ್ಯಕ್ತಿತ್ವವನ್ನು ಹಾಳು ಮಾಡಬಹುದು ಎಂಬುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ‘ ಎಂದು ಬ್ರಿಯಾನ್‌ ಪರ ವಕೀಲ ಜೇಮ್ಸ್ ನಾಟನ್‌ ಬೇಸರ ವ್ಯಕ್ತಪಡಿಸಿದ್ದಾರೆ.

lokesh

Recent Posts

ಅಗ್ನಿ ದುರಂತ | ಕೊನೆಗೂ ಅಬಕಾರಿ ಡಿಸಿ ತಲೆದಂಡ

ಮೈಸೂರು : ನಗರದ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ಡೆನ್‌ಬಾರ್) ನಲ್ಲಿ ಸಂಭವಿಸಿದ  ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ…

3 hours ago

ಮಕ್ಕಳ ಮನದಂಗಳದಲ್ಲಿ ಗಾಂಧೀ ಚಿಂತನೆಯ ಬೇರುಗಳು

ನನ್ನ ಆದರ್ಶ ವ್ಯಕ್ತಿ ಗಾಂಧಿ ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದರು. ಭಾರತದ ಸ್ವಾತಂತ್ರ್ಯ ಕ್ಕಾಗಿ…

6 hours ago

ಗಾಂಧೀ ಅಭಿಯಾನ ಅರಿವಿನ ಯಾನ | ಗಾಂಧೀಜಿ ಅಹಿಂಸಾ ಮಾರ್ಗಕ್ಕೆ ಮೈಲಾರ ಮಹಾದೇವ

ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಾಣತ್ಯಾಗ ಮಾಡಿದ ಮಹನೀಯರಲ್ಲಿ ಎದ್ದು ಕಾಣುವ ಹೆಸರು ಕರ್ನಾಟಕದ ಹೆಮ್ಮೆಯ ಪುತ್ರ ಮೈಲಾರ…

6 hours ago

ಗಾಂಧಿ ಅಭಿಯಾನ ಅರಿವಿನ ಯಾನ | ವಿಲಾಯತಿಗೆ ತೆರಳಲು ಅಮ್ಮ ಒಪ್ಪಿದರು

೧೮೮೭ನೇ ಇಸವಿಯಲ್ಲಿ ನಾನು ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದೆನು. ಮೆಟ್ರಿಕ್ ಪರೀಕ್ಷೆಗೆ ಬೊಂಬಾಯಿ ಮತ್ತು ಅಹಮದಾಬಾದ್ ಎರಡೂ ಕೇಂದ್ರಗಳಾಗಿದ್ದವು. ನಾನು ಹತ್ತಿರದ…

7 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 27 ಶನಿವಾರ

10 hours ago

ಚಿರಕನಹಳ್ಳಿ ; ಬೋನಿಗೆ ಬಿದ್ದ ಹುಲಿ

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದಲ್ಲಿ ಪೋತರಾಜು ಎಂಬುವವರ ಜಮೀನಿನಲ್ಲಿ ಅರಣ್ಯ…

1 day ago