ಆಂದೋಲನ ಪುರವಣಿ

ಯೋಗ ಕ್ಷೇಮ : ನೀರು ಕುಡಿದು ನಿರ್ಜಲೀಕರಣ ತಡೆಯಿರಿ

ನೀವು ಕುಡಿಯುವ ನೀರಿನಲ್ಲಿದೆ ನಿಮ್ಮ ಆಯಸ್ಸು, ಜೀವಜಲ ದಿನಕ್ಕೆಷ್ಟು ಬೇಕು ಗೊತ್ತಾ…?
ಸಂಶೋಧಕರು ದೀರ್ಘಕಾಲ ಬದುಕುವ ಮಾರ್ಗಗಳನ್ನು ಸಂಶೋಧಿಸುತ್ತಿದ್ದಾರೆ. ವಿಜ್ಞಾನಿಗಳ ಪ್ರಕಾರ ಬಹುಬೇಗನೆ ವಯಸ್ಸಾಗಲು, ಆಯಸ್ಸು ಕಡಿಮೆಯಾಗಲು ಪ್ರಮುಖ ಕಾರಣ ಡಿಹೈಡ್ರೇಶನ್. ಸರಿಯಾಗಿ ನೀರು ಕುಡಿಯದೇ ಇರುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಚೆನ್ನಾಗಿ ನೀರು ಕುಡಿದು ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳುವವರು ನೀರು ಕುಡಿಯದವರಿಗಿಂತ ಹೆಚ್ಚು ಕಾಲ ಬದುಕುತ್ತಾರೆನ್ನುತ್ತದೆ ಸಂಶೋಧನೆ.

ನಿರ್ಜಲೀಕರಣವು ಹೃದಯ ಮತ್ತು ಶ್ವಾಸಕೋಶದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
ಹೈಡ್ರೇಶನ್ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಸತತ ಮೂರು ದಶಕಗಳ ಕಾಲ ಸುಮಾರು 10,000ಕ್ಕೂ ಹೆಚ್ಚು ಜನರ ಅಂಕಿ-ಅಂಶಗಳನ್ನು ಸಂಗ್ರಹಿಸಿ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರ ನೀರಿನ ಸೇವನೆ ಮತ್ತು ಡಿಹೈಡ್ರೇಶನ್ ಅನ್ನು ನಿರ್ಧರಿಸಲು ಸಂಶೋಧಕರು ಸೀರಮ್ ಸೋಡಿಯಂ ಪರೀಕ್ಷೆಯನ್ನು ಬಳಸಿದ್ದರು. ರಕ್ತದಲ್ಲಿ ಎಷ್ಟು ಸೋಡಿಯಂ ಇದೆ ಎಂಬುದನ್ನು ಇದು ಪರಿಶೀಲಿಸುತ್ತದೆ. ವ್ಯಕ್ತಿಯ ರಕ್ತದಲ್ಲಿ ಸೋಡಿಯಂನ ಸಾಮಾನ್ಯ ಮಟ್ಟವು ಪ್ರತಿ ಲೀಟರ್‌ಗೆ 135-145 ಎಂಎಂಒಎಲ್ ನಡುವೆ ಇರಬೇಕು.

ಸಂಶೋಧನೆಯ ಫಲಿತಾಂಶ: ಪ್ರತಿ ಲೀಟರ್‌ಗೆ 144 ಎಂಎಂಒಎಲ್‌ಗಿಂತ ಹೆಚ್ಚಿನ ಸೋಡಿಯಂ ಮಟ್ಟವು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸಂಶೋಧನೆಯ ಪ್ರಕಾರ ದೀರ್ಘಕಾಲದ ಡಿಹೈಡ್ರೇಶನ್ ನಮ್ಮ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.

ದಿನಕ್ಕೆ ಎಷ್ಟು ನೀರು ಕುಡಿಯಬೇಕು?
ತಜ್ಞರು ದಿನಕ್ಕೆ ಕನಿಷ್ಟ ಆರರಿಂದ ಎಂಟು ಗ್ಲಾಸ್ ನೀರನ್ನು ಕುಡಿಯಲು ಶಿಫಾರ ಮಾಡುತ್ತಾರೆ. ಪುರುಷರು 15 ಗ್ಲಾಸ್ ಮತ್ತು ಮಹಿಳೆಯರು 11.5 ಗ್ಲಾಸ್ ನೀರು ಕುಡಿಯಬೇಕೆಂದು ಶಿಫಾರಸು ಮಾಡುತ್ತಾರೆ. ಹೈಡ್ರೇಟೆಡ್ ಆಗಿರಲು ದಿನವಿಡೀ ಸಾಕಷ್ಟು ನೀರು ಮತ್ತು ಹಣ್ಣಿನ ರಸ ಕುಡಿಯಲು ಪ್ರಯತ್ನಿಸಿ.

andolanait

Recent Posts

ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ: ನಾಡದೇವಿಗೆ ಮಹಾಲಕ್ಷ್ಮೀ ಅಲಂಕಾರ

ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಹಾಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಇಡೀ…

2 hours ago

ಓದುಗರ ಪತ್ರ: ದಸರಾದಲ್ಲಿ ಕಂಬಳಕ್ಕೆ ಹಠವೇಕೆ?

ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ…

5 hours ago

ಓದುಗರ ಪತ್ರ: ದೇವಿಯ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು…

5 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಚಿತ್ರೋದ್ಯಮದತ್ತ ಕೇಂದ್ರದ ಗಮನ, ಅಧ್ಯಯನ ತಂಡ ರಚನೆ

ಭಾರತೀಯ ಚಿತ್ರೋದ್ಯಮದ ಉತ್ತೇಜನಕ್ಕಾಗಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮುಂದಾಗಿರುವ ಸುದ್ದಿ. ಚಿತ್ರರಂಗಕ್ಕೆ ಸಂಬಂಧಿಸಿದಂತೆ, ಚಿತ್ರಗಳನ್ನು ವರ್ಗೀಕರಿಸಿ, ಪ್ರಮಾಣಪತ್ರ…

5 hours ago

ಕೊಡಗು ಜಿಲ್ಲೆಯಲ್ಲಿ ನಮೂನೆ ವಿತರಣೆ ಕಾರ್ಯ ಪೂರ್ಣ

ನವೀನ್ ಡಿಸೋಜ ತ್ವರಿತಗತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ; ಒಟ್ಟು ೪,೬೮,೬೫೭ ನಮೂನೆ ವಿತರಣೆ ಮೂಲಕ ಶೇ.೧೦೦ ಪ್ರಗತಿ…

5 hours ago

ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ

ಹನೂರು: ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡುವಿನದೊಡ್ಡಿ ಮತ್ತು ಅರ್ಧನಾರೀಪುರ ಗ್ರಾಮಗಳಿಗೆ ಗುರುವಾರ ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್…

5 hours ago