ಆಂದೋಲನ ಪುರವಣಿ

ಖುಷಿಯೊಂದನು ಕಾಯುತ್ತಾ ಬರೆಯದೇ ಉಳಿದೆ

ಹೀಗೆ ಏನಾದರೊಂದನ್ನು ಬರೆಯುವುದು ಸುಲಭ. ಅಂತೆಯೇ ಹೀಗೆ ಏನಾದರೊಂದನ್ನು ಬರೆಯುವುದು ಕಷ್ಟ. ತಟ್ಟೆಯಲ್ಲಿರುವ ತಿನಿಸುಗಳಲ್ಲಿ ಬಹಳ ಇಷ್ಟವಾದ ಆ ಒಂದು ತಿನಿಸನ್ನು ಕಡೆಯಲ್ಲಿ ತಿನ್ನಲು ಉಳಿಸುವಂತೆ ಕೆಲವೊಮ್ಮೆ ಬರಹಕ್ಕೆ ಕೈಹಾಕುವ ಮುನ್ನ ಇತರೆ ಕೆಲಸಗಳನ್ನು ಮುಗಿಸಿಬಿಡಬೇಕೆಂದು ಮನಸಾಗುತ್ತದೆ. ಆ ವೇಳೆಗಾಗಲೆ ಸಂಗೀತದಷ್ಟು, ಬರಹದಷ್ಟು ಸೊಗಸಲ್ಲದ ನೂರಾರು ಸಂಗತಿಗಳು ನಾ ಮುಂದು, ತಾ ಮುಂದೆಂದು ನುಗ್ಗಿ ಬರುತ್ತವೆ.

ಸಣ್ಣವರಿರುವಾಗ ನಾವು ತಣ್ಣೀರುಬಾವಿ ಕಡಲ ಕಿನಾರೆಗೆ ಹೋಗಿ ಆಡತೊಡಗಿ, ಪಾಯವಿಲ್ಲದ, ಗೋಡೆಯಿಲ್ಲದ, ಕಂಬವಿಲ್ಲದ ಮರಳ ಮನೆಯೊಂದನ್ನು ಕಟ್ಟಿ, ಕತ್ತಲಾಗುವವರೆಗೂ ಅದನ್ನು ಕಾದು, ಮನೆಗೆ ತೆರಳುವ ಹೊತ್ತಿಗೆ ಅದನ್ನು ಬಿಟ್ಟು ತೆರಳುವಾಗ ಆಗುತ್ತಿದ್ದ ಸಂಕಟದಂಥಾ ಭಾವವೊಂದು ಆಗಾಗ ಕಾಡಿ, ಅದೇನೋ ಹೆದರಿಕೆಯಾದಂತಾಗಿ, ಸೊಗಸಲ್ಲದ ಸಂಗತಿಗಳನ್ನು ಬದಿಗೊತ್ತಿ ಒಂದಷ್ಟು ಹೊತ್ತು ಬರೆಯಲೇಬೇಕೆಂದು ಕೂತಾಗ ಅರಿವಾಗುತ್ತದೆ.
ಹೀಗೆ ಹೇಗೋ, ಎಲ್ಲಂದರಲ್ಲಿ ಗುನುಗಿಬಿಡುವ ಯಾವುದೋ ರಾಗದ ಛಾಯೆಯೊಂದು ಮರೆಯಾಗದೆ ಹಾಗೇ ಉಳಿದು ಮುಂದೊಂದು ದಿನ ಒಂದು ಹಾಡಾಗಿಬಿಡುವಂತೆ, ಯಾವುದೋ ಲಹರಿಯಲ್ಲಿ ಹೊಳೆದ ಸಾಲೊಂದು ಕಾದಂಬರಿಯೇ ಆಗಿಬಿಡಬಹುದು. ಆಗದೆಯೂ ಇರಬಹುದು. ಅಂತಹದೊಂದು ಲಹರಿಯ ನೆನಕೆಗೆ ಮುಂದಾಗಿ ಆ ಸಾಲೇ ನೆನಪಾಗದೆ ಹೋದಾಗ, ಶಾಲೆಯ ಪರೀಕ್ಷೆ ನೆನಪಾಗುತ್ತದೆ. ಪ್ರಶ್ನೆ ಪತ್ರಿಕೆಯೆದುರು ಕೂತು, ಇದನ್ನು ಓದಬೇಕಿತ್ತೆಂಬ ಅರಿವಾಗುತ್ತದೆ.

ಇತರೆ ತಿಂಡಿಗಳನ್ನೆಲ್ಲ ಹೇಗೋ ಗಬಗಬನೆ ಮುಗಿಸಿ, ಸವಿದು ತಿನ್ನಲು ತಟ್ಟೆಯ ಮೂಲೆಯಲ್ಲಿರಿಸಿದ್ದ ಆ ಇಷ್ಟದ ತಿನಿಸನ್ನು ತಿನ್ನುವ ಹೊತ್ತಿಗೆ ಹೊಟ್ಟೆ ತುಂಬಿದಂತಾಗಿ, ಹಳೆಯ ಉತ್ಕಟತೆ ಉಳಿದಿರುವುದಿಲ್ಲ. ನಿರಾಶೆಯಾಗುತ್ತದೆ.

ಕೆಲವೊಂದು ಕ್ರಿಯೆಗಳೇ ಹೀಗೆ. ಸಂಗೀತದ ಹಾಗೆ. ಬರಹದ ಹಾಗೆ. ಪ್ರೀತಿಯ ಹಾಗೆ. ಅದರಲ್ಲಿ ಮುಳುಗದೆ ಅದು ದಕ್ಕುವುದಿಲ್ಲ.
ಕಡಲ ನೀರಲ್ಲಿ ಆಡುವ ತವಕ ಆಗಲೂ ಇರಲಿಲ್ಲ. ಸುಖಾಸುಮ್ಮನೆ ಮರಳಲ್ಲಿ ಕೂತು ಕಡಲ ನೋಡುವ ಹಪಹಪಿಕೆ ಈಗಲೂ ಇದೆ. ಅಂತಹದೊಂದು ಮರಳ ದಂಡೆಯ ಮೇಲೆ ಕೂತು ಮತ್ತೊಂದು ರಾಗವ ಗುನುಗಿದಾಗಲೋ, ಸಾಲೊಂದು ಹೊಳೆದಾಗಲೋ ಮಿಂಚುವ ಖುಷಿಯನ್ನು ನಾನು ಎದುರು ನೋಡುತ್ತೇನೆ ಮತ್ತು ಅಂತಹ ತಹತಹದ ಹಾಡಾಗಲಿ, ಬರಹವಾಗಲಿ ದಕ್ಕುವವರೆಗು ನಾನು ಅವೆರಡನ್ನೂ ಮಾಡದೆ ಸುಮ್ಮನಿರಲು ಬುಂಸುತ್ತೇನೆ.

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago