ಸಧ್ಯ ಮೈಸೂರು ಅರಮನೆಯ ಹಿಂದಿನ ಆನೆ ಬಿಡಾರವೊಂದರ ವಾಸಿಯಾಗಿರುವ ದೋಬಿ ಎಂಬ ಈ ಜೇನುಕುರುಬರ ಹಿರಿಯ ಮೂಲತಃ ಕೊಡಗು ಜಿಲ್ಲೆ ಕುಶಾಲನಗರದ ಬಳಿಯ ದುಬಾರೆ ಆನೆಕ್ಯಾಂಪಿನ ಕಾವೇರಿ ಎಂಬ ಆನೆಯ ಮಾವುತರಾಗಿರುವವರು. ಕಾಡಾನೆಗಳ ಕುರಿತೂ, ಜೇನು ನೊಣಗಳ ಕುರಿತೂ, ನಾಶವಾಗುತ್ತಿರುವ ಆದಿವಾಸಿಗಳ ಬದುಕಿನ ಕುರಿತು ಹಾಡೂ ಹಾಡಬಲ್ಲ, ಕಥೆಯೂ ಹೇಳಬಲ್ಲ, ಭಾಷಣವನ್ನೂ ಮಾಡಬಲ್ಲ ದೋಬಿ ಹಠದ ಮನುಷ್ಯ. ತಮ್ಮ ಆನೆ ಕಾವೇರಿ ಎಂಬ ಕುಮ್ಕಿ ಆನೆ ಮತ್ತು ಹೆಂಡತಿ, ಮಕ್ಕಳು ಮೊಮ್ಮಕ್ಕಳ ಜೊತೆಗೆ ಕಳೆದ ಹಲವು ವರ್ಷಗಳಿಂದ ಮೈಸೂರು ಅರಮನೆಗೆ ದಸರಾದ ಹೊತ್ತಿಗೆ ಬಂದು ವಿಜಯದಶಮಿ ಮುಗಿಸಿ ದುಬಾರೆಗೆ ಹಿಂತಿರುಗುವ ದೋಬಿ ಬಾಯಿ ಬಿಟ್ಟರೆ ಜೇನುಕುರುಬ ಜನಾಂಗದ ತಲೆತಲಾಂತರಗಳ ಕಥೆಯನ್ನು ಹೇಳಬಲ್ಲವರು. ಜೊತೆಗೆ ಜೇನುಕುರುಬ ಮಕ್ಕಳ ಈಗಿನ ಅತಂತ್ರ ಸ್ಥಿತಿಯನ್ನು ಕಲ್ಲೂ ನೀರೂ ಕರಗುವ ಹಾಗೆ ವಿವರಿಸಬಲ್ಲವರು.

ಯಾವಾಗಲೂ ಜೊತೆಯಲ್ಲಿ ಮಡದಿಯನ್ನೂ, ಮೊಮ್ಮಕ್ಕಳನ್ನೂ ಕರೆದುಕೊಂಡು ಮೈಸೂರು ಅರಮನೆಗೆ ಬರುವ ದೋಬಿಯವರು ಈ ಸಲದ ದಸರೆಗೆ ಏಕಾಂಗಿಯಾಗಿ ಬಂದಿರುವರು. ಕಾರಣ ಇವರ ಮೊಮ್ಮಗಳು ಅವಳಿ ಮಕ್ಕಳನ್ನು ಹೆತ್ತಿರುವಳು. ಅವಧಿ ಪೂರ್ಣವಾಗುವ ಮೊದಲೇ ಅಕಾಲಿಕವಾಗಿ ಜನಿಸಿದ ಆ ಅವಳಿ ಹಸುಗೂಸುಗಳು ಮಡಿಕೇರಿಯ ಸರಕಾರೀ ಆಸ್ಪತ್ರೆಯ ಇನ್‌ಕ್ಯುಬೇಟರಿನಲ್ಲಿ ಹಲವು ದಿನಗಳಿಂದ ಮಲಗಿರುವವು. ಆ ಚಿಂತೆಯಲ್ಲಿ ದುಬಾರೆಯಲ್ಲೇ ಉಳಿದಿರುವ ಮಡದಿ ಮಕ್ಕಳನ್ನು ನೆನೆದುಕೊಂಡು ದೋಬಿಯವರು ಮೈಸೂರಿನಲ್ಲಿ ಕಾವೇರಿ ಆನೆಯ ಜೊತೆ ತಮ್ಮ ಕಷ್ಟಸುಖಗಳನ್ನು ಮಾತಾಡಿಕೊಂಡು ದಿನ ದೂಡುತ್ತಿರುವರು.

ಇದು ದೋಬಿ ಎಂಬ ಒಬ್ಬ ಮಾವುತನ ಕಥೆ. ಮೈಸೂರು ಸುತ್ತಲಿನ ಹಲವು ಆನೆ ಕ್ಯಾಂಪುಗಳಿಂದ ಆನೆಯ ಸಮೇತ ಮೈಸೂರಿಗೆ ಬಂದಿರುವ ಎಲ್ಲ ಮಾವುತ ಕಾವಾಡಿಯರದ್ದೂ ಹೀಗೆ ಒಂದೊಂದು ಚಿಂತೆಯ ಕಥೆಗಳು. ಮೈಸೂರಿನ ಅರಮನೆಯ ಹಿಂದಿನ ಆನೆ ಬಿಡಾರಗಳಲ್ಲಿ ಇರುವಷ್ಟು ದಿನ ಅಷ್ಟಿಷ್ಟು ಸಂತೋಷದಲ್ಲಿ ಇರುವ ಇವರೆಲ್ಲ ವಾಪಾಸು ಹೋದ ಮೇಲೆ ಅವರದ್ದೂ ಇದೇ ಬದುಕು, ಇದೇ ಕಥೆ ಮತ್ತು ನಮಗೆ ಯಾರಿಗೂ ಅರಿವೇ ಆಗದ ನೂರಾರು ಖಾಸಗೀ ವ್ಯಥೆಗಳು!

andolana

Recent Posts

ನಂ.ಗೂಡು | ಮತ್ತೆ ಕಳಚಿ ಬೀಳುತ್ತಿರುವ ಸೇತುವೆಯ ಸೀಲಿಂಗ್ ಕಾಂಕ್ರೀಟ್

ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…

1 hour ago

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…

2 hours ago

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…

2 hours ago

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

5 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

6 hours ago

ನೈಸ್ ಯೋಜನೆ ಸರ್ಕಾರದ ವಶಕ್ಕೆ ; ಮುಖ್ಯಮಂತ್ರಿ ಡಿಕೆಶಿಗೆ ಪತ್ರ ಬರೆದು ಒತ್ತಾಯಿಸಿದ ಹೆಚ್.ಡಿ.ಕುಮಾರಸ್ವಾಮಿ

ತಕ್ಷಣವೇ ನೈಸ್ ರಸ್ತೆ ಟೋಲ್ ಸಂಗ್ರಹಕ್ಕೆ ತಡೆ ಹಾಕಬೇಕು ಎಂದು ಕೇಂದ್ರ ಸಚಿವರ ಅಗ್ರಹ ಹೈಕೋರ್ಟ್ ಅಭಿಪ್ರಾಯದಂತೆ ನೈಸ್ ಯೋಜನೆಯನ್ನು…

6 hours ago