ಆಂದೋಲನ ಪುರವಣಿ

ವನಿತೆ ಮಮತೆ:ದೀಪದ ಹಬ್ಬಕ್ಕೆ ಚಿನ್ನ ಲೇಪಿತ ಬೆಳ್ಳಿ ಆಭರಣದ ಬೆಳಕು !

ಚೈತ್ರಾ ಎನ್. ಭವಾನಿ

ಲೈಫ್ ಸ್ಟೈಲ್ ಜರ್ನಲಿಸ್ಟ್

ಎಲ್ಲೆಲ್ಲೂ ಸುರು ಸುರು ಬತ್ತಿ ಬೆಳಕು. ಕತ್ತಲಲ್ಲಿ ಕಾರ್ತೀಕ ನಿಸರ್ಗದ ಚೆಲುವನ್ನು ತೋರಲು ದೀಪಗಳ ಹಬ್ಬ ಸಜ್ಜಾಗುತ್ತಿದೆ. ಬಂಗಾರದ ಅಂಗಡಿಗಳಲ್ಲೂ ವಿವಿಧ ವಿನ್ಯಾಸದ ಆಭರಣಗಳು ಗ್ರಾಹಕರನ್ನು ಸೆಳೆಯುತ್ತಿವೆ. ಬಂಗಾರದೊಡವೆ ಕೊಳ್ಳಲು ಸಾಧ್ಯವಿಲ್ಲದವರಿಗೆ ಚಿನ್ನ ಲೇಪಿತ ವರ್ಮೈಲ್ ಬೆಳ್ಳಿ ಆಭರಣಗಳು ಕೈ ಬೀಸಿ ಕರೆಯುತ್ತಿವೆ. ಅಷ್ಟೇ ಅಲ್ಲ, ಚಿನ್ನ ಬೇಡ ಎನ್ನುವವರಿಗೆ ಚಿನ್ನದಷ್ಟೇ ಅಂದ ಹೆಚ್ಚಿಸುವ ಈ ಆಭರಣಗಳು ಸದ್ಯದ ಟ್ರೆಂಡ್.

ಏನಿದು ವರ್ಮೈಲ್ ಆಭರಣಗಳು?

ಬೆಳ್ಳಿಯನ್ನು ಚಿನ್ನದಿಂದ ಎಲೆಕ್ಟ್ರೋಪ್ಲೇಟಿಂಗ್ ವಾಡುವ ಮೂಲಕ ಈ ಆಭರಣಗಳನ್ನು ವಿನ್ಯಾಸ ವಾಡಲಾಗಿದೆ. ಮೂಲ ಬೆಳ್ಳಿಯ ಆಭರಣವೇ ಆಗಿದ್ದರೂ ಗೋಲ್ಡ್ ಪ್ಲೇಟಿಂಗ್ ಮೂಲಕ ಚಿನ್ನದ ಆಭರಣದಂತೆ ಕಂಗೊಳಿಸುತ್ತದೆ. ಚಿನ್ನವನ್ನು ಬಿಟ್ಟರೇ ಚಿನ್ನದಷ್ಟೇ ಗುಣಮಟ್ಟದ ಆಭರಣಕ್ಕಾಗಿ ವರ್ಮೈಲ್ ಆಭರಣಗಳನ್ನು ಧರಿಸಬಹುದು.

ಯಾವೆಲ್ಲ ಡಿಸೈನ್ಸ್ ಇವೆ?

ನೆಕ್ಲೆಸ್, ಶಾರ್ಟ್ ಚೈನ್, ಲಾಂಗ್ ನೆಕ್ಲೆಸ್, ಕುಂದನ್ ಜುವ್ಕಾ, ಮುತ್ತಿನ ವಿನ್ಯಾಸದ ನೆಕ್ಲೆಸ್, ಕೈ ಕಡಗ, ಬಳೆ, ಉಂಗುರು ಸೇರಿದಂತೆ ಚಿನ್ನದ ಆಭರಣದಲ್ಲಿ ದೊರಕುವಂತೆ ಎಲ್ಲ ವಿನ್ಯಾಸಗಳೂ ಲಭ್ಯ.

ಬೆಲೆ ಎಷ್ಟು ?
ಉಂಗುರಗಳು ೧,೧೦೦ ರೂ. ನಿಂದ ಆರಂಭವಾದರೆ, ಶಾರ್ಟ್ ಸಾದಾ ನೆಕ್ಲೆಸ್ ೫,೦೦೦ ರೂ. ನಲ್ಲೂ ಲಭ್ಯವಿದೆ. ಇನ್ನೂ ಪರ್ಲ್, ಕುಂದನ್ ವಿನ್ಯಾಸದ ನೆಕ್ಲೆಸ್‌ಗಳು ೨೦,೦೦೦ ರೂ. ವರೆಗೂ ದೊರೆಯುತ್ತವೆ. ಇವೆಲ್ಲವುಗಳ ಬೆಲೆ ನಿಮ್ಮ ಆಯ್ಕೆಯ ಮೇಲೆ ನಿರ್ಧಾರ ಆಗುತ್ತದೆ.

ಕಸ್ಟಮೈಸ್ ಮತ್ತು ರೆಡಿ ಆಭರಣಗಳು ಲಭ್ಯ
ನಿಮಗಿಷ್ಟ ಬಂದ ಡಿಸೈನ್‌ಗಳನ್ನೂ ಹೇಳಿ. ಕಸ್ಟಮೈಸ್ ವಾಡಿಸಿಕೊಳ್ಳಬಹುದು. ಇಲ್ಲವೇ ಜ್ಯುವೆಲ್ಲರಿ ಅಂಗಡಿ, ಆನ್‌ಲೈನ್ ವಾರುಕಟ್ಟೆಯಲ್ಲೂ ವರ್ಮೈಲ್ ಆಭರಣಗಳು ಲಭ್ಯವಿವೆ.

ದಿನ ನಿತ್ಯ ಧರಿಸಲು ಸೂಕ್ತವೇ?

ಹಬ್ಬ, ಫಂಕ್ಷನ್‌ಗಳಿಗೆ ವಾತ್ರ ಈ ಆಭರಣ ಹೊಂದುತ್ತವೆ. ಪ್ರತಿನಿತ್ಯ ಧರಿಸುವುದರಿಂದ ಚಿನ್ನದ ಲೇಪನ ಬಹು ಬೇಗನೇ ವಾಸುವ ಸಾಧ್ಯತೆ ಇದೆ.

ನಿರ್ವಹಣೆ ಹೇಗೆ?
ಅಪರೂಪಕ್ಕೆ ಒಮ್ಮೆ ಡಿಶ್ ವಾಷಿಂಗ್ ಡಿಟರ್ಜೆಂಟ್‌ನಲ್ಲಿ ಬೆಚ್ಚಗಿನ ನೀರಿನಲ್ಲಿ ತೊಳೆದು ಗಾಳಿಯಾಡುವ ಜಾಗದಲ್ಲಿ ಇಟ್ಟು ಒಣಗಿಸಿ, ಜೋಪಾನವಾಗಿ ಎತ್ತಿಟ್ಟುಕೊಳ್ಳಬೇಕು. ಸೋಪು, ಶ್ಯಾಂಪೂ ಕೆಮಿಕಲ್ ತಗುಲದಂತೆ ನೋಡಿಕೊಂಡರೆ ದೀರ್ಘಕಾಲ ಬಾಳಿಕೆ ಬರುತ್ತವೆ.

ರೀಸೇಲ್ ವ್ಯಾಲ್ಯೂ ಕಡಿಮೆ
ಈ ಆಭರಣಗಳನ್ನು ವಾರಾಟ ವಾಡಲು ಬಯಸಿದರೇ ಇದರ ಬೆಲೆ ಸಹಜವಾಗಿಯೇ ಕಡಿಮೆಯಾಗುತ್ತದೆ.

ಈ ದೀಪಾವಳಿಗೆ ಚಿನ್ನದಷ್ಟೇ ಮೆರುಗು ನೀಡುವ ಚಿನ್ನ ಲೇಪಿತ ಬೆಳ್ಳಿ ಆಭರಣಗಳನ್ನು ಧರಿಸಿ ಚಿನ್ನದ ಖುಷಿಯನ್ನು ಅನುಭವಿಸಬಹುದು. ನವ ವಧುವರರಿಗೆ ಅಮ್ಮನ ಮನೆಯ ದೀಪಾವಳಿ ಉಡುಗೊರೆಯೂ ಆಗಬಹುದು.

andolanait

Recent Posts

ಇಂದಿನಿಂದ ಕೊಡವ ಕೌಟುಂಬಿಕ ಕ್ರಿಕೆಟ್‌ ಉತ್ಸವ

24ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಗೆ ಬೇತ್ರಿ ಮುಕ್ಕಾಟೀರ ಕುಟುಂಬಸ್ಥರಿಂದ ಸಿದ್ದತೆ; 24 ದಿನಗಳ ಕಾಲ ಕ್ರಿಕೆಟ್ ಹಬ್ಬ ಪುನೀತ್ ಮಡಿಕೇರಿ…

1 hour ago

ಓದುಗರ ಪತ್ರ | ಕಠಿಣ ಕ್ರಮ ಕೈಗೊಳ್ಳಿ

ಮುರ್ಖರ ದಿನ ವಾದ ಏಪ್ರಿಲ್ ಒಂದರಂದು ( ಬುಧವಾರ), ಕೆಲವು ಜಾಲತಾಣಗಳಲ್ಲಿ ದೇಶದ ರಾಷ್ಟ್ರೀಯ ಲಾಂಛನದ ಅಡಿಯಲ್ಲಿ,(ಸಿಂಹ ಮತ್ತು ಅಶೋಕ…

1 hour ago

ಓದುಗರ ಪತ್ರ | ನಿ. . . ದರ್ಶನ !

ನಿ. . . ದರ್ಶನ ! ಟೇಪು ಕತ್ತರಿಸಿ, ಗುದ್ದಲಿ ಪೂಜೆ ನೆರವೇರಿಸಿ ಸರಸರನೆ ಪರದೆಯನು ಸರಿಸಿ ನೀಡುವರು ಫೋಟೋಗೆ…

1 hour ago

ಓದುಗರ ಪತ್ರ | ಮಕ್ಕಳ ಸುರಕ್ಷತೆಯ ಬಗ್ಗೆ ಗಮನ ಹರಿಸಿ

ಶಾಲೆಗಳಿಗೆ ಬೇಸಿಗೆ ರಜೆ ಆರಂಭವಾಗಿರುವ ಈ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಹೆಚ್ಚಿನ ನಿಗಾವಹಿಸುವುದು ಅಗತ್ಯವಾಗಿದೆ. ಮಕ್ಕಳು ಬಿಸಿಲಿನಬೇಗೆಯಿಂದ…

1 hour ago

ದ್ವೇಷ ರಾಜಕಾರಣದ ಚಹರೆಗಳು

ರೇಣುಕಾ ನಿಡುಗುಂದಿ ನಿನ್ನೆ (ಏಪ್ರಿಲ್ 2) ಹನುಮ ಜಯಂತಿ. ಒಮ್ಮೆ ಇದೇ ಹನುಮ ಜಯಂತಿಯಂದು ಯಾವುದೋ ಕಾರ್ಯಕ್ರಮಕ್ಕೆಂದು ಹೊರಟವಳು ಸರಿಯಾದ…

2 hours ago

ಬಾ.ನಾ.ಸುಬ್ರಹ್ಮಣ್ಯ ಅವರ ಅಂಕಣ ; ರಾಮಾಯಣದ ರಾವಣ, ಶ್ರೀ ಹನುಮಾನ್‌ ಹನುಮ

ಕನ್ನಡ ನಟರಿಬ್ಬರ ಸೀಮೋಲಂಘನ ನಿನ್ನೆ (ಶುಕ್ರವಾರ) ಹಿಂದಿಯಲ್ಲಿ ತಯಾರಾಗುತ್ತಿರುವ ‘ರಾಮಾಯಣ’ ಚಿತ್ರದ ಮೊದಲ ನೋಟ ಲೋಕಾರ್ಪಣೆ ಆಗಿದೆ. ಇತ್ತೀಚೆಗಷ್ಟೇ ‘ಶ್ರೀ…

2 hours ago