ಜಿಲ್ಲೆಗಳು

ಕೊಳ್ಳೇಗಾಲ ನಗರಸಭೆ : 25 ನಾಮಪತ್ರಗಳ ಸಲ್ಲಿಕೆ

ಕೊಳ್ಳೇಗಾಲ: ನಗರಸಭೆ ಉಪ ಚುನಾವಣೆಗೆ ಕೊನೆಯ ದಿನವಾದ ಸೋಮವಾರ ಒಟ್ಟು ೨೫ ಮಂದಿ ನಾಮಪತ್ರಗಳು ಸಲ್ಲಿಕೆಾಂಗಿವೆ. ಕಾಂಗ್ರೆಸ್‌ನಿಂದ ಏಳು, ಬಿಜೆಪಿಯಿಂದ ಏಳು, ಬಿಎಸ್ಪಿಯಿಂದ ಮೂರು, ಜಾ.ದಳದಿಂದ ಎರಡು, ಕೆ.ಆರ್.ಎಸ್. ಪಕ್ಷದಿಂದ ಒಂದು , ಎಸ್.ಡಿ.ಪಿ.ಐ.ನಿಂದ ಒಂದು ಹಾಗೂ ನಾಲ್ವರು ಪಕ್ಷೇತರರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಅನರ್ಹಗೊಂಡಿದ್ದ ಏಳು ಮಂದಿ ಸದಸ್ಯರ ಪೈಕಿ ಆರು ಮಂದಿ ಕಣದಲ್ಲಿ ಇದ್ದಾರೆ. (೨ನೇ ವಾರ್ಡ್‌ನಿಂದ ನಾಗಮಣಿ ಗೋಪಾಲ್, ೭ನೇ ವಾರ್ಡ್‌ನಿಂದ ನಾಸಿರ್ ಷರೀಫ್, ೧೩ ನೇ ವಾರ್ಡ್‌ನಿಂದ ಪವಿತ್ರ ರಮೇಶ್, ೨೧ ನೇ ವಾರ್ಡ್‌ನಿಂದ ಪ್ರಕಾಶ್, ೨೫ನೇ ವಾರ್ಡ್‌ನಿಂದ ರಾಮಕೃಷ್ಣ, ೨೬ ನೇ ವಾರ್ಡ್‌ನಿಂದ ನಾಗಸುಂದ್ರಮ್ಮ ಜಗದೀಶ್, ೬ ನೇ ವಾರ್ಡಿನಲ್ಲಿ ವಾತ್ರ ಅನರ್ಹಗೊಂಡಿದ್ದ ಗಂಗಮ್ಮರ ಬದಲು ಅವರ ಸಂಬಂಧಿ ಮಾನಸ ಜಂಗು ನಾಮಪತ್ರ ಸಲ್ಲಿಸಿದ್ದಾರೆ.
೨೫ನೇ ವಾರ್ಡಿನಿಂದ ಕಾಂಗ್ರೆಸ್ ಪಕ್ಷದ ವಾಜಿ ನಗರಸಭೆ ಅಧ್ಯಕ್ಷ ಎಸ್.ರಮೇಶ್, ೨ ನೇ ವಾರ್ಡ್‌ನಿಂದ ಭಾಗ್ಯ, ೬ ನೇ ವಾರ್ಡ್‌ನಿಂದ ಸಂಪತ್ತು ಕುಮಾರಿ, ೭ ನೇ ವಾರ್ಡ್‌ನಿಂದ ಅಹಮದ್ ಕಿಜರ್, ೧೩ನೇ ವಾರ್ಡ್ ನಿಂದ ಹಾಲಿ ನಗರಸಭೆ ಸದಸ್ಯ ಮನೋಹರ್ ಪತ್ನಿ ಪಿ.ಎಲ್. ಸರಸ್ವತಿ ಮನೋಹರ್, ೨೧ನೇ ವಾರ್ಡ್ ಕೆ.ಕೆ.ಮೂರ್ತಿ, ೨೬ ನೇ ವಾರ್ಡ್‌ನಿಂದ ಸುನೀತಾ ಮಹದೇಶ್ ನಾಮಪತ್ರ ಸಲ್ಲಿಸಿದ್ದಾರೆ.

ಬಿಎಸ್ಪಿ ಪಕ್ಷದಿಂದ ೨೫ನೇ ವಾರ್ಡಿನಿಂದ ರಂಗಸ್ವಾಮಿ, ೭ನೇ ವಾರ್ಡ್ ನಿಂದ ಇನಾುಂತ್ ಪಾಷ, ೨೧ನೇ ವಾರ್ಡ್‌ನಿಂದ ಲೋಕೇಶ್, ೨೬ ನೇ ವಾರ್ಡ್‌ನಿಂದ ಜಾ.ದಳ ಅಭ್ಯರ್ಥಿ ಮಂಗಳಮ್ಮ, ೭ ನೇ ವಾರ್ಡ್‌ನಿಂದ ಜಾ.ದಳ ಅಭ್ಯರ್ಥಿ ಇರ್ಫಾನ್, ೨ ನೇ ವಾರ್ಡ್‌ನಿಂದ ಎಸ್.ಡಿ.ಪಿ.ಐ ಅಭ್ಯರ್ಥಿ ಹೆಚ್.ಕೆ ಶಾಂತಲಕ್ಷ್ಮಿ, ೨೬ ನೇ ವಾರ್ಡ್‌ನಿಂದ ಕವಿತಾ ಶೇಖರ್, ಪಕ್ಷೇತರರಲ್ಲಿ ೭ ನೇ ವಾರ್ಡ್‌ನಿಂದ ಶಿವಶಂಕರ್ ನಾಮಪತ್ರ ಸಲ್ಲಿಸಿದ್ದಾರೆ. ೨೧ ನೇ ವಾರ್ಡ್‌ನಿಂದ ಕೆ.ಆರ್.ಎಸ್ ಪಕ್ಷದ ಜಗದೀಶ್, ೨೫ ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿ ನಿವೃತ್ತ ಯೋಧ ಎಂ.ಮಹದೇವ, ೨೫ ನೇ ವಾರ್ಡ್‌ನಿಂದ ಶಿವಮಲ್ಲು ಪಕ್ಷೇತರರಾಗಿ ಸ್ಪರ್ಧೆಯಲ್ಲಿದ್ದಾರೆ.

andolanait

Recent Posts

ಓದುಗರ ಪತ್ರ: ಅಧ್ಯಾತ್ಮ ದುರಂತ!

ಅಧ್ಯಾತ್ಮ ದುರಂತ! ಲೌಕಿಕ ಬದುಕಿನ ಆಶೆ ಆಮಿಷಗಳ ಸೆರೆಮನೆಯಿಂದ ಬಿಡಿಸಿಕೊಳುವ ಸನ್ಮಾರ್ಗವನು ಅಧ್ಯಾತ್ಮವೆನ್ನುವರು ಪ್ರಾಜ್ಞರು! ಆದರೀಗ ಲೌಕಿಕದ ಆಶೆ ಆಮಿಷಗಳ…

1 hour ago

ಓದುಗರ ಪತ್ರ: ರಸ್ತೆ, ಉದ್ಯಾನಕ್ಕೆ ಎಸ್. ಜಾನಕಿ ಅವರ ಹೆಸರಿಡಿ

ಭಾರತೀಯ ಚಿತ್ರರಂಗದ ಗಾನಕೋಗಿಲೆ ಎಸ್.ಜಾನಕಿ ಅವರ ಸಾಧನೆ ಎಂದೆಂದಿಗೂ ಅಜರಾಮರ. ಅವರ ಹೆಸರನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಮೂಲಕ ಚಿರಸ್ಥಾಯಿಯಾಗಿಸಲು…

1 hour ago

ಓದುಗರ ಪತ್ರ: ಚಾಮರಾಜಪುರಂನಲ್ಲಿ ರೈಲುಗಳ ನಿಲುಗಡೆಯಾಗಲಿ

ಮೈಸೂರಿನ ಅಶೋಕಪುರಂನಿಂದ ಚೆನ್ನೆ ಗೆ ತೆರಳುವ ಚೆನ್ನೆ ನಿಂದ - ಅಶೋಕಪುರಂಗೆ ಆಗಮಿಸುವ ೧೬೫೫೧ ಎಂಜಿಆರ್ ಚೆನ್ನೈಎಕ್ಸ್ ಪ್ರೆಸ್, ೨೦೬೨೪…

1 hour ago

ಓದುಗರ ಪತ್ರ: ನಂಜನಗೂಡಿನಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಿಸಿ

ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡಿನಲ್ಲಿ ವಾಹನಗಳ ಸಂಚಾರದಟ್ಟಣೆ ವಿಪರೀತವಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆರ್.ಪಿ .ರಸ್ತೆಯಲ್ಲಿ ರೈಲು ಬರುವ ವೇಳೆ…

1 hour ago

114 ಪ್ರದೇಶಗಳಲ್ಲಿ ಪ್ರವಾಹ, ಭೂಕುಸಿತ ಅಪಾಯ

ನವೀನ್ ಡಿಸೋಜ ಮಳೆ ಕಡಿಮೆಯಿದ್ದರೂ ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕೆ; ಅಪಾಯಕಾರಿ ಪ್ರದೇಶಗಳ ಗುರುತು ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜುಲೈ ಆರಂಭದಿಂದ…

1 hour ago

ಟಿಎಪಿಸಿಎಂಎಸ್ ಚುನಾವಣೆಗೆ ಪಕ್ಷಗಳಿಂದ ಭರ್ಜರಿ ಸಿದ್ಧತೆ

ಭೇರ್ಯ ಮಹೇಶ್ ಕೆ.ಆರ್.ನಗರ: ಜು.೨೬ರಂದು ಚುನಾವಣೆ; ನಾಮಪತ್ರ ಸಲ್ಲಿಕೆ ಆರಂಭ  ಕೆ.ಆರ್.ನಗರ: ತಾಲ್ಲೂಕು ಕೃಷಿ ಉತ್ಪನ್ನಗಳ ಸಹಕಾರ ಮಾರಾಟ ಸಂಘದ…

1 hour ago