ಕೊಳ್ಳೇಗಾಲ: ನಗರಸಭೆ ಉಪ ಚುನಾವಣೆಗೆ ಕೊನೆಯ ದಿನವಾದ ಸೋಮವಾರ ಒಟ್ಟು ೨೫ ಮಂದಿ ನಾಮಪತ್ರಗಳು ಸಲ್ಲಿಕೆಾಂಗಿವೆ. ಕಾಂಗ್ರೆಸ್ನಿಂದ ಏಳು, ಬಿಜೆಪಿಯಿಂದ ಏಳು, ಬಿಎಸ್ಪಿಯಿಂದ ಮೂರು, ಜಾ.ದಳದಿಂದ ಎರಡು, ಕೆ.ಆರ್.ಎಸ್. ಪಕ್ಷದಿಂದ ಒಂದು , ಎಸ್.ಡಿ.ಪಿ.ಐ.ನಿಂದ ಒಂದು ಹಾಗೂ ನಾಲ್ವರು ಪಕ್ಷೇತರರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಅನರ್ಹಗೊಂಡಿದ್ದ ಏಳು ಮಂದಿ ಸದಸ್ಯರ ಪೈಕಿ ಆರು ಮಂದಿ ಕಣದಲ್ಲಿ ಇದ್ದಾರೆ. (೨ನೇ ವಾರ್ಡ್ನಿಂದ ನಾಗಮಣಿ ಗೋಪಾಲ್, ೭ನೇ ವಾರ್ಡ್ನಿಂದ ನಾಸಿರ್ ಷರೀಫ್, ೧೩ ನೇ ವಾರ್ಡ್ನಿಂದ ಪವಿತ್ರ ರಮೇಶ್, ೨೧ ನೇ ವಾರ್ಡ್ನಿಂದ ಪ್ರಕಾಶ್, ೨೫ನೇ ವಾರ್ಡ್ನಿಂದ ರಾಮಕೃಷ್ಣ, ೨೬ ನೇ ವಾರ್ಡ್ನಿಂದ ನಾಗಸುಂದ್ರಮ್ಮ ಜಗದೀಶ್, ೬ ನೇ ವಾರ್ಡಿನಲ್ಲಿ ವಾತ್ರ ಅನರ್ಹಗೊಂಡಿದ್ದ ಗಂಗಮ್ಮರ ಬದಲು ಅವರ ಸಂಬಂಧಿ ಮಾನಸ ಜಂಗು ನಾಮಪತ್ರ ಸಲ್ಲಿಸಿದ್ದಾರೆ.
೨೫ನೇ ವಾರ್ಡಿನಿಂದ ಕಾಂಗ್ರೆಸ್ ಪಕ್ಷದ ವಾಜಿ ನಗರಸಭೆ ಅಧ್ಯಕ್ಷ ಎಸ್.ರಮೇಶ್, ೨ ನೇ ವಾರ್ಡ್ನಿಂದ ಭಾಗ್ಯ, ೬ ನೇ ವಾರ್ಡ್ನಿಂದ ಸಂಪತ್ತು ಕುಮಾರಿ, ೭ ನೇ ವಾರ್ಡ್ನಿಂದ ಅಹಮದ್ ಕಿಜರ್, ೧೩ನೇ ವಾರ್ಡ್ ನಿಂದ ಹಾಲಿ ನಗರಸಭೆ ಸದಸ್ಯ ಮನೋಹರ್ ಪತ್ನಿ ಪಿ.ಎಲ್. ಸರಸ್ವತಿ ಮನೋಹರ್, ೨೧ನೇ ವಾರ್ಡ್ ಕೆ.ಕೆ.ಮೂರ್ತಿ, ೨೬ ನೇ ವಾರ್ಡ್ನಿಂದ ಸುನೀತಾ ಮಹದೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಬಿಎಸ್ಪಿ ಪಕ್ಷದಿಂದ ೨೫ನೇ ವಾರ್ಡಿನಿಂದ ರಂಗಸ್ವಾಮಿ, ೭ನೇ ವಾರ್ಡ್ ನಿಂದ ಇನಾುಂತ್ ಪಾಷ, ೨೧ನೇ ವಾರ್ಡ್ನಿಂದ ಲೋಕೇಶ್, ೨೬ ನೇ ವಾರ್ಡ್ನಿಂದ ಜಾ.ದಳ ಅಭ್ಯರ್ಥಿ ಮಂಗಳಮ್ಮ, ೭ ನೇ ವಾರ್ಡ್ನಿಂದ ಜಾ.ದಳ ಅಭ್ಯರ್ಥಿ ಇರ್ಫಾನ್, ೨ ನೇ ವಾರ್ಡ್ನಿಂದ ಎಸ್.ಡಿ.ಪಿ.ಐ ಅಭ್ಯರ್ಥಿ ಹೆಚ್.ಕೆ ಶಾಂತಲಕ್ಷ್ಮಿ, ೨೬ ನೇ ವಾರ್ಡ್ನಿಂದ ಕವಿತಾ ಶೇಖರ್, ಪಕ್ಷೇತರರಲ್ಲಿ ೭ ನೇ ವಾರ್ಡ್ನಿಂದ ಶಿವಶಂಕರ್ ನಾಮಪತ್ರ ಸಲ್ಲಿಸಿದ್ದಾರೆ. ೨೧ ನೇ ವಾರ್ಡ್ನಿಂದ ಕೆ.ಆರ್.ಎಸ್ ಪಕ್ಷದ ಜಗದೀಶ್, ೨೫ ನೇ ವಾರ್ಡ್ನಿಂದ ಪಕ್ಷೇತರ ಅಭ್ಯರ್ಥಿ ನಿವೃತ್ತ ಯೋಧ ಎಂ.ಮಹದೇವ, ೨೫ ನೇ ವಾರ್ಡ್ನಿಂದ ಶಿವಮಲ್ಲು ಪಕ್ಷೇತರರಾಗಿ ಸ್ಪರ್ಧೆಯಲ್ಲಿದ್ದಾರೆ.
ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ.…
15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಹಿಂದಿ ಶಿಕ್ಷಕರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಇದು ಸಂವಿಧಾನ ಬಾಹಿರ ನಡೆ. ಇದು ಹಿಂದಿ…
ಮಲ್ಟಿಪ್ಲೆಕ್ಸ್ಗಳಲ್ಲಿ ಕನ್ನಡದ ಚಲನಚಿತ್ರಗಳು ಪ್ರದರ್ಶಿತವಾಗುತ್ತವೆ. ಗ್ರಾಹಕರಿಗೆ ನೀಡುವ ಟಿಕೆಟಿನಲ್ಲಿ ಸಿನಿಮಾದ ಹೆಸರೂ ಅಚ್ಚಾಗಿರುತ್ತದೆ.ಆದರೆ... ಕನ್ನಡ ಚಿತ್ರಕ್ಕೆ ಖರೀದಿಸುವ ಟಿಕೆಟ್ನಲ್ಲಿ ಚಿತ್ರದ…
ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್-೨೬) ಕಾರ್ಯ ಮುಗಿದು ಇದೀಗ ಕರಡು ಪಟ್ಟಿ ಬಿಡುಗಡೆಯಾಗಿದೆ. ಎಸ್ಐಆರ್ ಬಗ್ಗೆ ಹಲವಾರು ಅನುಮಾನ…
ಕನ್ನಡ ಚಿತ್ರವೊಂದು ದೇಶ-ವಿದೇಶಗಳಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಸಂದರ್ಭ. ಕನ್ನಡ ಚಿತ್ರರಂಗದ ಕಡೆ ಭಾರತದ ಉಳಿದ ಚಿತ್ರೋದ್ಯಮಗಳು ತಿರುಗಿ ನೋಡುವ ಬೆಳವಣಿಗೆ.…