ಜಿಲ್ಲೆಗಳು

ಕೊಳ್ಳೇಗಾಲ ನಗರಸಭೆ : 25 ನಾಮಪತ್ರಗಳ ಸಲ್ಲಿಕೆ

ಕೊಳ್ಳೇಗಾಲ: ನಗರಸಭೆ ಉಪ ಚುನಾವಣೆಗೆ ಕೊನೆಯ ದಿನವಾದ ಸೋಮವಾರ ಒಟ್ಟು ೨೫ ಮಂದಿ ನಾಮಪತ್ರಗಳು ಸಲ್ಲಿಕೆಾಂಗಿವೆ. ಕಾಂಗ್ರೆಸ್‌ನಿಂದ ಏಳು, ಬಿಜೆಪಿಯಿಂದ ಏಳು, ಬಿಎಸ್ಪಿಯಿಂದ ಮೂರು, ಜಾ.ದಳದಿಂದ ಎರಡು, ಕೆ.ಆರ್.ಎಸ್. ಪಕ್ಷದಿಂದ ಒಂದು , ಎಸ್.ಡಿ.ಪಿ.ಐ.ನಿಂದ ಒಂದು ಹಾಗೂ ನಾಲ್ವರು ಪಕ್ಷೇತರರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಅನರ್ಹಗೊಂಡಿದ್ದ ಏಳು ಮಂದಿ ಸದಸ್ಯರ ಪೈಕಿ ಆರು ಮಂದಿ ಕಣದಲ್ಲಿ ಇದ್ದಾರೆ. (೨ನೇ ವಾರ್ಡ್‌ನಿಂದ ನಾಗಮಣಿ ಗೋಪಾಲ್, ೭ನೇ ವಾರ್ಡ್‌ನಿಂದ ನಾಸಿರ್ ಷರೀಫ್, ೧೩ ನೇ ವಾರ್ಡ್‌ನಿಂದ ಪವಿತ್ರ ರಮೇಶ್, ೨೧ ನೇ ವಾರ್ಡ್‌ನಿಂದ ಪ್ರಕಾಶ್, ೨೫ನೇ ವಾರ್ಡ್‌ನಿಂದ ರಾಮಕೃಷ್ಣ, ೨೬ ನೇ ವಾರ್ಡ್‌ನಿಂದ ನಾಗಸುಂದ್ರಮ್ಮ ಜಗದೀಶ್, ೬ ನೇ ವಾರ್ಡಿನಲ್ಲಿ ವಾತ್ರ ಅನರ್ಹಗೊಂಡಿದ್ದ ಗಂಗಮ್ಮರ ಬದಲು ಅವರ ಸಂಬಂಧಿ ಮಾನಸ ಜಂಗು ನಾಮಪತ್ರ ಸಲ್ಲಿಸಿದ್ದಾರೆ.
೨೫ನೇ ವಾರ್ಡಿನಿಂದ ಕಾಂಗ್ರೆಸ್ ಪಕ್ಷದ ವಾಜಿ ನಗರಸಭೆ ಅಧ್ಯಕ್ಷ ಎಸ್.ರಮೇಶ್, ೨ ನೇ ವಾರ್ಡ್‌ನಿಂದ ಭಾಗ್ಯ, ೬ ನೇ ವಾರ್ಡ್‌ನಿಂದ ಸಂಪತ್ತು ಕುಮಾರಿ, ೭ ನೇ ವಾರ್ಡ್‌ನಿಂದ ಅಹಮದ್ ಕಿಜರ್, ೧೩ನೇ ವಾರ್ಡ್ ನಿಂದ ಹಾಲಿ ನಗರಸಭೆ ಸದಸ್ಯ ಮನೋಹರ್ ಪತ್ನಿ ಪಿ.ಎಲ್. ಸರಸ್ವತಿ ಮನೋಹರ್, ೨೧ನೇ ವಾರ್ಡ್ ಕೆ.ಕೆ.ಮೂರ್ತಿ, ೨೬ ನೇ ವಾರ್ಡ್‌ನಿಂದ ಸುನೀತಾ ಮಹದೇಶ್ ನಾಮಪತ್ರ ಸಲ್ಲಿಸಿದ್ದಾರೆ.

ಬಿಎಸ್ಪಿ ಪಕ್ಷದಿಂದ ೨೫ನೇ ವಾರ್ಡಿನಿಂದ ರಂಗಸ್ವಾಮಿ, ೭ನೇ ವಾರ್ಡ್ ನಿಂದ ಇನಾುಂತ್ ಪಾಷ, ೨೧ನೇ ವಾರ್ಡ್‌ನಿಂದ ಲೋಕೇಶ್, ೨೬ ನೇ ವಾರ್ಡ್‌ನಿಂದ ಜಾ.ದಳ ಅಭ್ಯರ್ಥಿ ಮಂಗಳಮ್ಮ, ೭ ನೇ ವಾರ್ಡ್‌ನಿಂದ ಜಾ.ದಳ ಅಭ್ಯರ್ಥಿ ಇರ್ಫಾನ್, ೨ ನೇ ವಾರ್ಡ್‌ನಿಂದ ಎಸ್.ಡಿ.ಪಿ.ಐ ಅಭ್ಯರ್ಥಿ ಹೆಚ್.ಕೆ ಶಾಂತಲಕ್ಷ್ಮಿ, ೨೬ ನೇ ವಾರ್ಡ್‌ನಿಂದ ಕವಿತಾ ಶೇಖರ್, ಪಕ್ಷೇತರರಲ್ಲಿ ೭ ನೇ ವಾರ್ಡ್‌ನಿಂದ ಶಿವಶಂಕರ್ ನಾಮಪತ್ರ ಸಲ್ಲಿಸಿದ್ದಾರೆ. ೨೧ ನೇ ವಾರ್ಡ್‌ನಿಂದ ಕೆ.ಆರ್.ಎಸ್ ಪಕ್ಷದ ಜಗದೀಶ್, ೨೫ ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿ ನಿವೃತ್ತ ಯೋಧ ಎಂ.ಮಹದೇವ, ೨೫ ನೇ ವಾರ್ಡ್‌ನಿಂದ ಶಿವಮಲ್ಲು ಪಕ್ಷೇತರರಾಗಿ ಸ್ಪರ್ಧೆಯಲ್ಲಿದ್ದಾರೆ.

andolanait

Recent Posts

ರಸ್ತೆಗಳ ದಾರುಣತೆ: ಬೇಕಿದೆ ಇಲಾಖೆಗಳ ಸಮನ್ವಯತೆ

ಶ್ರೇಯಸ್ ದೇವನೂರು ಮಾದರಿ ಮೈಸೂರು ಉಳಿವಿಗೆ ಒಂದು ಸಮಗ್ರ ಸಭೆ, ದೀರ್ಘಕಾಲಿಕ ಯೋಜನೆ ಅಗತ್ಯ ಮೈಸೂರು - ಅರಮನೆಗಳ ನಗರ,…

2 hours ago

ಕೊಡಗು ‘ಜಿಲ್ಲೆಯಲ್ಲಿ ಜಲ್‌ಜೀವನ್ ಮಿಷನ್ ಯೋಜನೆ ಪ್ರಗತಿ’

ಪುನೀತ್ ಮಡಿಕೇರಿ ೪೫೭ ಕಾಮಗಾರಿಗಳ ಪೈಕಿ ೩೬೯ ಕಾಮಗಾರಿಗಳು ಪೂರ್ಣ ಮಡಿಕೇರಿ: ಕುಡಿಯುವ ನೀರಿನ ಗೃಹ ನಳ ನೀರು ಸಂಪರ್ಕ…

2 hours ago

ಪ್ರವಾಸಿಗರ ಆಕರ್ಷಣೆಗೆ ವರುಣ ಕೆರೆಗೆ ನವಸ್ಪರ್ಶ

ಕೆ.ಬಿ.ರಮೇಶನಾಯಕ ೧೫ ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಸೌಂದರ್ಯೀಕರಣ  ಪ್ರವಾಸಿಗರ ಕಣ್ಮನ ಸೆಳೆಯಲು ಹತ್ತು ಹಲವು ಮನರಂಜನಾ ಚಟುವಟಿಕೆಗಳು ಮೈಸೂರಿನಿಂದ…

2 hours ago

ಮೈಸೂರು ಜಿಲ್ಲೆಯಲ್ಲಿ ಪಶು ಪಾಲನೆಗೆ ಪಶು ವೈದ್ಯರ ಬರ

ಹೆಚ್.ಎಸ್. ದಿನೇಶ್‌ಕುಮಾರ್ ಮೈಸೂರು ಜಿಲ್ಲೆಯಲ್ಲಿ ೨೭ ಮಂದಿ ಪಶು ವೈದ್ಯರ ಹುದ್ದೆ ಖಾಲಿ ಮೈಸೂರು: ಹಸು, ಎಮ್ಮೆ, ಕುರಿಗಳಂತಹ ಪ್ರಾಣಿಗಳು…

3 hours ago

ಸಿದ್ದಾಪುರ | ಕಾಡಾನೆ ದಾಳಿಗೆ ಓರ್ವ ಗಂಭೀರ

ಸಿದ್ದಾಪುರ : ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಾಲ್ಕೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್‌ಮಂಗಲ…

13 hours ago