ಆಂದೋಲನ ಪುರವಣಿ

ವನಿತೆ ಮಮತೆ:ದೀಪದ ಹಬ್ಬಕ್ಕೆ ಚಿನ್ನ ಲೇಪಿತ ಬೆಳ್ಳಿ ಆಭರಣದ ಬೆಳಕು !

ಚೈತ್ರಾ ಎನ್. ಭವಾನಿ

ಲೈಫ್ ಸ್ಟೈಲ್ ಜರ್ನಲಿಸ್ಟ್

ಎಲ್ಲೆಲ್ಲೂ ಸುರು ಸುರು ಬತ್ತಿ ಬೆಳಕು. ಕತ್ತಲಲ್ಲಿ ಕಾರ್ತೀಕ ನಿಸರ್ಗದ ಚೆಲುವನ್ನು ತೋರಲು ದೀಪಗಳ ಹಬ್ಬ ಸಜ್ಜಾಗುತ್ತಿದೆ. ಬಂಗಾರದ ಅಂಗಡಿಗಳಲ್ಲೂ ವಿವಿಧ ವಿನ್ಯಾಸದ ಆಭರಣಗಳು ಗ್ರಾಹಕರನ್ನು ಸೆಳೆಯುತ್ತಿವೆ. ಬಂಗಾರದೊಡವೆ ಕೊಳ್ಳಲು ಸಾಧ್ಯವಿಲ್ಲದವರಿಗೆ ಚಿನ್ನ ಲೇಪಿತ ವರ್ಮೈಲ್ ಬೆಳ್ಳಿ ಆಭರಣಗಳು ಕೈ ಬೀಸಿ ಕರೆಯುತ್ತಿವೆ. ಅಷ್ಟೇ ಅಲ್ಲ, ಚಿನ್ನ ಬೇಡ ಎನ್ನುವವರಿಗೆ ಚಿನ್ನದಷ್ಟೇ ಅಂದ ಹೆಚ್ಚಿಸುವ ಈ ಆಭರಣಗಳು ಸದ್ಯದ ಟ್ರೆಂಡ್.

ಏನಿದು ವರ್ಮೈಲ್ ಆಭರಣಗಳು?

ಬೆಳ್ಳಿಯನ್ನು ಚಿನ್ನದಿಂದ ಎಲೆಕ್ಟ್ರೋಪ್ಲೇಟಿಂಗ್ ವಾಡುವ ಮೂಲಕ ಈ ಆಭರಣಗಳನ್ನು ವಿನ್ಯಾಸ ವಾಡಲಾಗಿದೆ. ಮೂಲ ಬೆಳ್ಳಿಯ ಆಭರಣವೇ ಆಗಿದ್ದರೂ ಗೋಲ್ಡ್ ಪ್ಲೇಟಿಂಗ್ ಮೂಲಕ ಚಿನ್ನದ ಆಭರಣದಂತೆ ಕಂಗೊಳಿಸುತ್ತದೆ. ಚಿನ್ನವನ್ನು ಬಿಟ್ಟರೇ ಚಿನ್ನದಷ್ಟೇ ಗುಣಮಟ್ಟದ ಆಭರಣಕ್ಕಾಗಿ ವರ್ಮೈಲ್ ಆಭರಣಗಳನ್ನು ಧರಿಸಬಹುದು.

ಯಾವೆಲ್ಲ ಡಿಸೈನ್ಸ್ ಇವೆ?

ನೆಕ್ಲೆಸ್, ಶಾರ್ಟ್ ಚೈನ್, ಲಾಂಗ್ ನೆಕ್ಲೆಸ್, ಕುಂದನ್ ಜುವ್ಕಾ, ಮುತ್ತಿನ ವಿನ್ಯಾಸದ ನೆಕ್ಲೆಸ್, ಕೈ ಕಡಗ, ಬಳೆ, ಉಂಗುರು ಸೇರಿದಂತೆ ಚಿನ್ನದ ಆಭರಣದಲ್ಲಿ ದೊರಕುವಂತೆ ಎಲ್ಲ ವಿನ್ಯಾಸಗಳೂ ಲಭ್ಯ.

ಬೆಲೆ ಎಷ್ಟು ?
ಉಂಗುರಗಳು ೧,೧೦೦ ರೂ. ನಿಂದ ಆರಂಭವಾದರೆ, ಶಾರ್ಟ್ ಸಾದಾ ನೆಕ್ಲೆಸ್ ೫,೦೦೦ ರೂ. ನಲ್ಲೂ ಲಭ್ಯವಿದೆ. ಇನ್ನೂ ಪರ್ಲ್, ಕುಂದನ್ ವಿನ್ಯಾಸದ ನೆಕ್ಲೆಸ್‌ಗಳು ೨೦,೦೦೦ ರೂ. ವರೆಗೂ ದೊರೆಯುತ್ತವೆ. ಇವೆಲ್ಲವುಗಳ ಬೆಲೆ ನಿಮ್ಮ ಆಯ್ಕೆಯ ಮೇಲೆ ನಿರ್ಧಾರ ಆಗುತ್ತದೆ.

ಕಸ್ಟಮೈಸ್ ಮತ್ತು ರೆಡಿ ಆಭರಣಗಳು ಲಭ್ಯ
ನಿಮಗಿಷ್ಟ ಬಂದ ಡಿಸೈನ್‌ಗಳನ್ನೂ ಹೇಳಿ. ಕಸ್ಟಮೈಸ್ ವಾಡಿಸಿಕೊಳ್ಳಬಹುದು. ಇಲ್ಲವೇ ಜ್ಯುವೆಲ್ಲರಿ ಅಂಗಡಿ, ಆನ್‌ಲೈನ್ ವಾರುಕಟ್ಟೆಯಲ್ಲೂ ವರ್ಮೈಲ್ ಆಭರಣಗಳು ಲಭ್ಯವಿವೆ.

ದಿನ ನಿತ್ಯ ಧರಿಸಲು ಸೂಕ್ತವೇ?

ಹಬ್ಬ, ಫಂಕ್ಷನ್‌ಗಳಿಗೆ ವಾತ್ರ ಈ ಆಭರಣ ಹೊಂದುತ್ತವೆ. ಪ್ರತಿನಿತ್ಯ ಧರಿಸುವುದರಿಂದ ಚಿನ್ನದ ಲೇಪನ ಬಹು ಬೇಗನೇ ವಾಸುವ ಸಾಧ್ಯತೆ ಇದೆ.

ನಿರ್ವಹಣೆ ಹೇಗೆ?
ಅಪರೂಪಕ್ಕೆ ಒಮ್ಮೆ ಡಿಶ್ ವಾಷಿಂಗ್ ಡಿಟರ್ಜೆಂಟ್‌ನಲ್ಲಿ ಬೆಚ್ಚಗಿನ ನೀರಿನಲ್ಲಿ ತೊಳೆದು ಗಾಳಿಯಾಡುವ ಜಾಗದಲ್ಲಿ ಇಟ್ಟು ಒಣಗಿಸಿ, ಜೋಪಾನವಾಗಿ ಎತ್ತಿಟ್ಟುಕೊಳ್ಳಬೇಕು. ಸೋಪು, ಶ್ಯಾಂಪೂ ಕೆಮಿಕಲ್ ತಗುಲದಂತೆ ನೋಡಿಕೊಂಡರೆ ದೀರ್ಘಕಾಲ ಬಾಳಿಕೆ ಬರುತ್ತವೆ.

ರೀಸೇಲ್ ವ್ಯಾಲ್ಯೂ ಕಡಿಮೆ
ಈ ಆಭರಣಗಳನ್ನು ವಾರಾಟ ವಾಡಲು ಬಯಸಿದರೇ ಇದರ ಬೆಲೆ ಸಹಜವಾಗಿಯೇ ಕಡಿಮೆಯಾಗುತ್ತದೆ.

ಈ ದೀಪಾವಳಿಗೆ ಚಿನ್ನದಷ್ಟೇ ಮೆರುಗು ನೀಡುವ ಚಿನ್ನ ಲೇಪಿತ ಬೆಳ್ಳಿ ಆಭರಣಗಳನ್ನು ಧರಿಸಿ ಚಿನ್ನದ ಖುಷಿಯನ್ನು ಅನುಭವಿಸಬಹುದು. ನವ ವಧುವರರಿಗೆ ಅಮ್ಮನ ಮನೆಯ ದೀಪಾವಳಿ ಉಡುಗೊರೆಯೂ ಆಗಬಹುದು.

andolanait

Recent Posts

ಓದುಗರ ಪತ್ರ | ರಾಜ್ಯ ವಿಧಾನ ಮಂಡಲ ಅಧಿವೇಶನ ಸದ್ಬಳಕೆಗೆ ದಾರಿ ಯಾವುದಯ್ಯ!?

ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ.…

12 hours ago

ಓದುಗರ ಪತ್ರ | ಹಿಂದಿ ಶಿಕ್ಷಕರ ನೇಮಕಾತಿ ಏಕಿಲ್ಲ?

15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಹಿಂದಿ ಶಿಕ್ಷಕರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಇದು ಸಂವಿಧಾನ ಬಾಹಿರ ನಡೆ. ಇದು ಹಿಂದಿ…

12 hours ago

ಓದುಗರ ಪತ್ರ | ಕನ್ನಡ ಚಿತ್ರ; ಟಿಕೆಟ್‌ಗಳಲ್ಲಿ ಆಂಗ್ಲ ಹೆಸರು !

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡದ ಚಲನಚಿತ್ರಗಳು ಪ್ರದರ್ಶಿತವಾಗುತ್ತವೆ. ಗ್ರಾಹಕರಿಗೆ ನೀಡುವ ಟಿಕೆಟಿನಲ್ಲಿ ಸಿನಿಮಾದ ಹೆಸರೂ ಅಚ್ಚಾಗಿರುತ್ತದೆ.ಆದರೆ... ಕನ್ನಡ ಚಿತ್ರಕ್ಕೆ ಖರೀದಿಸುವ ಟಿಕೆಟ್‌ನಲ್ಲಿ ಚಿತ್ರದ…

12 hours ago

ಓದುಗರ ಪತ್ರ | ಮತದಾರರ ಕರಡು ಪಟ್ಟಿಯ ತಪ್ಪುಗಳನ್ನು ಸರಿಪಡಿಸಿ

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್-೨೬) ಕಾರ್ಯ ಮುಗಿದು ಇದೀಗ ಕರಡು ಪಟ್ಟಿ ಬಿಡುಗಡೆಯಾಗಿದೆ. ಎಸ್‌ಐಆರ್ ಬಗ್ಗೆ ಹಲವಾರು ಅನುಮಾನ…

12 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಕಳಚಿದ ಚಲನಚಿತ್ರ ಪತ್ರಿಕೋದ್ಯಮದ ಹಿರಿಯ ಕೊಂಡಿ ಶ್ರೀಕೃಪಾ

ಕನ್ನಡ ಚಿತ್ರವೊಂದು ದೇಶ-ವಿದೇಶಗಳಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಸಂದರ್ಭ. ಕನ್ನಡ ಚಿತ್ರರಂಗದ ಕಡೆ ಭಾರತದ ಉಳಿದ ಚಿತ್ರೋದ್ಯಮಗಳು ತಿರುಗಿ ನೋಡುವ ಬೆಳವಣಿಗೆ.…

13 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 28  ಶುಕ್ರವಾರ

13 hours ago