ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು
ಹನೂರು: ಕಡು ಕಹಿ ಎಲೆ, ಕಾಂಡ, ಕಾಯಿ ನೀಡುವ ಬೇವಿನ ಮರದಲ್ಲಿ ಸಿಹಿ ದ್ರಾವಣ ಉತ್ಪತ್ತಿಯಾಗಿ ಹರಿಯುತ್ತಿರುವ ಘಟನೆ ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರಲ್ಲಿ ನಡೆದಿದೆ.
ಕುರಟ್ಟಿ ಹೊಸೂರಿನ ಮುನಿಸಿದ್ದ ಎಂಬವವರ ಜಮೀನಿನಲ್ಲಿ ಬೆಳೆದಿರುವ ಸುಮಾರು 15 ವರ್ಷದ ಬೇವಿನ ಮರದಲ್ಲಿ ಈ ವಿಸ್ಮಯ ಕಂಡುಬಂದಿದ್ದು, ಹಾಲಿನಂತೆ ಬಣ್ಣದ ನೀರು ಬೇವಿನ ಮರದ ಮೂರ್ನಾಲ್ಕು ಕಡೆಯಿಂದ ಜಿನಗುತ್ತಿದೆ. ಬಿಳಿ ಬಣ್ಣದ ದ್ರಾವಣವನ್ನ ಸೇವಿಸಿ ಸಿಹಿ ಜೇನಿನಂತೆ ರುಚಿ ಇರುವುದನ್ನು ತಿಳಿದು ಕುರಟ್ಟಿ ಹೊಸೂರು ಗ್ರಾಮಸ್ಥರು ಅಚ್ಚರಿಪಟ್ಟಿದ್ದಾರೆ.
ಬೇವಿನ ಮರ ಕಹಿ ಆದ್ರೆ ಆ ಮರದಿಂದ ಬರುತ್ತಿರುವ ದ್ರಾವಣ ಸಕ್ಕರೆಯಷ್ಟೇ ಸಿಹಿಯಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.
ಈ ಬೇವಿನ ಮರ ನಮ್ಮ ಜಮೀನಿನಲ್ಲಿ ಬೆಳೆದು ಸುಮಾರು 15 ವರ್ಷಗಳು ಕಳೆದಿದೆ. ಕಳೆದ ನಾಲ್ಕು ದಿನಗಳಿಂದ ಬಿಳಿ ಬಣ್ಣದ ದ್ರಾವಣ ಹರಿಯುತ್ತಿದ್ದು, ಇದನ್ನು ಸವಿದು ನೋಡಿದಾಗ ಸಿಹಿ ಇರುವುದು ಕಂಡು ಬಂದಿದೆ. ಬೇವಿನ ಮರ ಸಂಪೂರ್ಣ ಕಹಿಯಾಗಿದ್ದರೂ, ಬಿಳಿ ದ್ರಾವಣ ಸಿಹಿಯಾಗಿರುವುದು ಅಚ್ಚರಿ ಮೂಡಿಸಿದೆ ಎಂದು ಮಾಲೀಕ ಮುನಿಸಿದ್ದ ಶೆಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.
ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…
ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…
ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…
ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…
ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…