ಆಂದೋಲನ ಪುರವಣಿ

ವನಿತೆ ಮಮತೆ : ಹೊಸ ಲೇಖಕಿಯರಿಗೆ ಮಂದಾರ ಪುಷ್ಪ

೪೩ ವರ್ಷ ಇತಿಹಾಸದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಸಂದರ್ಶನ

ಚಾರ್ವಿಕಾ ಸಾನ್ವಿ, ಮೈಸೂರು

ಕರ್ನಾಟಕ ಲೇಖಕಿಯರ ಸಂಘಕ್ಕೆ ೪೩ ವರ್ಷದ ಸುಧೀರ್ಘ ಇತಿಹಾಸವಿದೆ. ಹಲವಾರು ಮಹತ್ವದ ಲೇಖಕಿಯರು ಅಧ್ಯಕ್ಷರಾಗಿ ಸಂಘವನ್ನು ಗೌರವಯುತವಾಗಿ ಕಟ್ಟಿ ಬೆಳೆಸಿದ್ದಾರೆ. ಆಯಾ ಕಾಲಘಟ್ಟದ ಸ್ಪಂದನೆಗಳಿಗೆ ಪೂರಕವಾಗಿ ಲೇಖಕಿಯರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನನಗೆ ಈ ಸಂಘದ ಅಧ್ಯಕ್ಷರಾಗುವ ಅವಕಾಶ ದೊರೆತಿದೆ. ಗಟ್ಟಿ ಅಡಿಪಾಯವನ್ನು ಇನ್ನಷ್ಟು ಬಲಗೊಳಿಸಿ ಹೊಸ ತಲೆಮಾರಿನ ಲೇಖಕಿಯರ ತಲ್ಲಣ, ಸಂವೇದನೆ, ಸ್ಪಂದನೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಈಗಿನ ಕಾಲಘಟ್ಟದ ಚಿಂತನೆ ಹಾಗೂ ಚಿಂತಕರನ್ನೂ ಒಳಗೊಳ್ಳುವ ಕ್ರಿಯೆಗೆ ಒತ್ತು ನೀಡಲೇಬೇಕಿದೆ.
ಇದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಕಳೆದ ತಿಂಗಳು ಆಯ್ಕೆಯಾದ ಡಾ.ಎಚ್.ಎಲ್.ಪುಷ್ಪ ಅವರ ಖಚಿತ ಅಭಿಪ್ರಾಯ.

ತಮ್ಮದೇ ಆದ ಚಿಂತನೆ, ಬದ್ಧತೆಯ ಬದುಕು, ಓದು, ಬರವಣಿಗೆ, ಸಂಘಟನೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಡಾ.ಪುಷ್ಪ ಅವರು ಸಂಘದ ಅಧ್ಯಕ್ಷ ಸ್ಥಾನಕ್ಕೆ ತುರುಸಿನ ಸ್ಪರ್ಧೆ ಎದುರಿಸಿದವರು. ಸಾಮಾನ್ಯ ಚುನಾವಣೆಯಂತೆೆಯೇ ಆಗುತ್ತಿದೆಯಲ್ಲಾ ಎಂಬ ಆತಂಕದ ನಡುವೆಯೂ ಲೇಖಕಿಯರ ಬೆಂಬಲದಿಂದ ಗೆದ್ದು ಸದ್ದು ಗದ್ದಲದ ಬದಲು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ನಂಬಿದವರು. ಅದನ್ನೇ ‘ಆಂದೋಲನ’ಕ್ಕೆ ನೀಡಿದ ಸಂದರ್ಶನದಲ್ಲಿ ಪುಷ್ಪ ವಿವರಿಸಿದ್ದಾರೆ.

ಲೇಖಕಿಯರ ಸಂಘಕ್ಕೆ ನಾಗಮಣಿ ರಾವ್ ಅವರು ಅಧ್ಯಕ್ಷರಾದ ಅವಧಿಯಿಂದ ನನ್ನ ನಂಟು ಇದೆ. ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಅಧ್ಯಕ್ಷರಾಗಬೇಕು ಎನ್ನುವ ಉದ್ದೇಶವೇನೂ ಇರಲಿಲ್ಲ. ಆದರೆ ಹಿರಿಯರು ಕಟ್ಟಿ ಬೆಳೆಸಿದ ಸಂಘದ ಆಶಯಗಳನ್ನು ಗಟ್ಟಿಗೊಳಿಸಬೇಕು ಎನ್ನುವ ಒತ್ತಾಯ ಲೇಖಕಿಯರಲ್ಲಿ ಕೇಳಿ ಬಂದಾಗ ಅನಿವಾರ್ಯವಾಗಿ ಸ್ಪರ್ಧೆ ಮಾಡಿದೆ. ಹೊಸ ತಲೆಮಾರನ್ನು ಒಳಗೊಳ್ಳುವುದು ನಮ್ಮ ಉದ್ದೇಶ. ಹಿಂದೆಲ್ಲಾ ಲೇಖಕಿಯರು ಬರೆದದ್ದು ಅಡುಗೆ ಮನೆ ಸಾಹಿತ್ಯ ಎಂದು ಕೊಂಕು ಆಡುವ ಕಾಲವಿತ್ತು. ಮಹಿಳೆಯರೂ ಗಟ್ಟಿ ಸಾಹಿತ್ಯ ರಚಿಸಬಲ್ಲರು ಎನ್ನುವುದು ಕಾಲಕ್ರಮೇಣ ಸಾಬೀತಾಗುತ್ತಾ ಹೋಗಿ ಮಹಿಳಾ ಸಾಹಿತ್ಯವನ್ನು ನಿರ್ಲಕ್ಷಿಸಲಾಗದು ಎನ್ನುವ ಹಂತಕ್ಕೂ ಬಂದಿದೆ. ಲೇಖಕಿಯರನ್ನು ಸಂಘಟಿಸಿ ಅವರ ಸಂವೇದನೆಗಳು ಅಕ್ಷರ ರೂಪ ತಾಳುವಲ್ಲಿ ಸಂಘದ ಕೊಡುಗೆಯೂ ಅಪಾರವಾಗಿದೆ. ಇಂತಹ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಸವಾಲು ನನ್ನ ಮೇಲೆ ಇದೆ. ಕೊರೊನಾ ನಂತರ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಕುಟುಂಬ, ಸಂಬಂಧ, ಸಂವೇದನೆಗಳಲ್ಲಿನ ಆಗಿರುವ ಬದಲಾವಣೆಗಳು ಬರವಣಿಗೆ ಮೇಲೂ ಖಂಡಿತಾ ಆಗಿದೆ. ಹೊಸಬರು ಭಿನ್ನವಾಗಿ ಯೋಚಿಸುತ್ತಿದ್ದಾರೆ. ಅಷ್ಟೇ ವಿಭಿನ್ನವಾಗಿ ಬರೆಯುತ್ತಿದ್ದಾರೆ ಕೂಡ. ಅವರೆಲ್ಲರನ್ನೂ ಒಳಗೊಳ್ಳುವ ಕೆಲಸ ಮೊದಲ ಆದ್ಯತೆಯಾಗಿೆಯೇ ಆಗಲಿದೆ ಎನ್ನುವುದು ಪುಷ್ಪ ಅವರ ಖಚಿತ ನಿಲುವು.

ಸದ್ಯ ಒಂದು ಪುಟ್ಟ ಮನೆಯಲ್ಲಿಯೇ ಸಂಘ ನಡೆಯುತ್ತಿದೆ. ಸಂಘಕ್ಕೆ ವಿಶಾಲವಾದ ಕಟ್ಟಡ ಬೇಕಾಗಿದೆ. ಸಂಶೋಧನೆಗೆ ಪೂರಕವಾಗುವಂತಹ ಗ್ರಂಥಾಲಯ ಅದರಲ್ಲಿಯೇ ಇದೆ. ಇದನ್ನೂ ವಿಸ್ತರಿಸಬೇಕಾಗಿದೆ. ಸಂಘದಲ್ಲಿ ೧೭ ದತ್ತಿ ನಿಧಿಗಳಿದ್ದು, ಅದರಡಿ ಆರ್ಥಿಕ ಸಂಪನ್ಮೂಲ ಬಳಸಿಯೂ ದತ್ತಿ ಕಾರ್ಯಯಕ್ರಮ, ಪ್ರಶಸ್ತಿ ನೀಡುವುದು ನಡೆದಿದೆ. ಗ್ರಾಮೀಣ ಭಾಗದ ಜತೆಗೆ ಪ್ರಾದೇಶಿಕತೆ ನೆಲೆಯಲ್ಲೂ ಸಂಘವನ್ನು ವಿಸ್ತರಿಸಿ ಹೊಸ ಸದಸ್ಯರನ್ನು ಸೇರಿಸಿಕೊಳ್ಳುವ ಇರಾದೆಯೂ ಇದೆ. ಪ್ರಾದೇಶಿಕ ಲೇಖಕಿಯರ ಸಮ್ಮೇಳನಗಳನ್ನು ಆಯೋಜಿಸುವ ಯೋಚನೆಯೂ  ಇದೆ. ಈಗಾಗಲೇ ೧೭೪ ಲೇಖಕಿಯರ ಸಾಕ್ಷ್ಯಚಿತ್ರಗಳು ಹೊರ ಬಂದಿವೆ. ಇನ್ನಷ್ಟು ಕೆಲಸ ಆಗಬೇಕಿದೆ. ಲೇಖ ಲೋಕ ಎನ್ನುವ ಶೀರ್ಷಿಕೆಯಡಿ ಆತ್ಮಕಥನಗಳ ಪ್ರಕಟಣೆ ಆಗುತ್ತಿದೆ. ಇದನ್ನು ಇನ್ನಷ್ಟು ವಿಸ್ತರಿಸುವ ಯೋಜನೆಗಳನ್ನು ಹಾ ಕಿಕೊಂಡಿದ್ದೇನೆ? ಎನ್ನುತ್ತಾರೆ ಅವರು.

ಆರ್ಥಿಕ ಬೆಂಬಲ ಬೇಕು
ಲೇಖಕಿಯರ ಸಂಘಕ್ಕೆ ವಾರ್ಷಿಕವಾಗಿ ಬರಿ ೨ ಲಕ್ಷ ರೂ. ಅನುದಾನ ಸಿಗುತ್ತಿದೆ. ಇದನ್ನು ಕನಿಷ್ಠ ೧೦ ಲಕ್ಷ ರೂ.ಗಳಿಗಾದರೂ ಏರಿಸಬೇಕು ಎನ್ನುವ ಮನವಿಯನ್ನು ಸರ್ಕಾರಕ್ಕೆ ಸದ್ಯವೇ ಸಲ್ಲಿಸುತ್ತೇವೆ. ಆರ್ಥಿಕ ಬಲವಿಲ್ಲದೇ ಏನನ್ನೂ ಮಾಡಲಾಗದು. ಇದಕ್ಕಾಗಿ ಸರ್ಕಾರವನ್ನೇ ಮೊದಲು ಕೇಳುವುದು ನಮ್ಮ ಆದ್ಯತೆಯೂ ಹೌದು. ಲೇಖಕಿಯರ ಸಂಘದ ಬೆಳವಣಿಗೆಗೆ ಆರ್ಥಿಕವಾಗಿ ಸಹೋಂಗ ನೀಡುವವರು ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದು ಹೇಳುತ್ತಾರೆ.

ಡಿಜಿಟಲ್ ಸ್ಪರ್ಶ

ಹೊಸ ತಲೆಮಾರಿನ ಬಹಳಷ್ಟು ಲೇಖಕರು ಡಿಜಿಟಲ್ ವ್ಯವಸ್ಥೆಯಡಿ ಸಕ್ರಿಯರಾಗಿದ್ದಾರೆ. ಇದು ಈಗಿನ ಕಾಲಮಾನದ ಅಗತ್ಯವೂ ಹೌದು. ಇದಕ್ಕೆ ತಕ್ಕಂತೆ ಸಂಘದ ವೆಬ್‌ಸೈಟ್, ಯೂಟ್ಯೂಬ್ ರೂಪಿಸಿ ಆ ಮೂಲಕ ಸದಸ್ಯರ ಚಟುವಟಿಕೆಗೆ ವೇದಿಕೆ ರೂಪಿಸುವ ಯೋಜನೆಯೂ ಇದೆ ಎನ್ನುತ್ತಾರೆ.



ಪ್ರಮುಖ ಲೇಖಕಿ ಪುಷ್ಪ

ದೊಡ್ಡಬಳ್ಳಾಪುರದವರಾದ ಡಾ.ಎಚ್.ಎಲ್.ಪುಷ್ಪ ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯದಲ್ಲಿ ಸಕ್ರಿಯರು. ಸಾಹಿತ್ಯದ ವಿದ್ಯಾರ್ಥಿನಿಯಾಗಿ, ನಂತರ ಮೂರೂವರೆ ದಶಕಗಳ ಕಾಲ ಕನ್ನಡ ಉಪನ್ಯಾಸಕಿಯಾಗಿ, ನಂತರ ಪ್ರಾಂಶುಪಾಲರಾಗಿ ಆರು ತಿಂಗಳ ಹಿಂದೆಯಷ್ಟೇ ನಿವೃತ್ತರಾದವರು. ಕನ್ನಡ ರಂಗಭೂಮಿಯ ಕುರಿತಾಗಿ ಡಾ.ಸಿಜಿಕೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಪಿಎಚ್‌ಡಿ ಪಡೆದವರು. ೪ ಕವನ ಸಂಕಲನ ಸೇರಿ ೧೫ಕ್ಕೂ ಹೆಚ್ಚು ಕೃತಿಗಳನ್ನು ಪುಷ್ಪ ಪ್ರಕಟಿಸಿದ್ದಾರೆ. ೨೫ ವರ್ಷಗಳಿಂದಲೂ ಕರ್ನಾಟಕ ಲೇಖಕಿಯರ ಸಂಘದ ಒಡನಾಟ ಹೊಂದಿದ್ದವರು. ಇದೀಗ ಹಲವರು ಕಟ್ಟಿ ಬೆಳೆಸಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾರೆ.

andolanait

Recent Posts

ಮಾದಕ ವಸ್ತು ಪತ್ತೆ ; ನಾಲ್ವರು ಸಿಸಿಬಿ ವಶಕ್ಕೆ

ಮೈಸೂರು : ಮಾದಕ ವ್ಯಸನ ಮುಕ್ತ ಮೈಸೂರು ವಿಮುಕ್ತಿ ಅಭಿಯಾನದ ಮುಂದುವರಿದ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ ಸುಮಾರು…

10 hours ago

ಏಳು ವಿದೇಶಿಯರ ಬಂಧಿಸಿದ ಎನ್‌ಐಎ

ಹೊಸದಿಲ್ಲಿ : ಭಾರತೀಯ ದಂಗೆಕೋರ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಜನಾಂಗೀಯ ಯುದ್ಧ ಗುಂಪುಗಳನ್ನು ಸಂಪರ್ಕಿಸಲು ಮತ್ತು ತರಬೇತಿ ನೀಡಲು ಅಕ್ರಮವಾಗಿ…

12 hours ago

ಮೈಸೂರು | ಆಕಸ್ಮಿಕ ಬೆಂಕಿಗೆ ವ್ಯಕ್ತಿ ಸಜೀವ ದಹನ

ಮೈಸೂರು : ಸ್ಥಗಿತಗೊಂಡಿದ್ದ ಚಿತ್ರಮಂದಿರದ ಆವರಣದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಅಲ್ಲಿನ ವಾಚ್‌ಮನ್ ಒಬ್ಬರು ಸಜೀವ ದಹನಗೊಂಡ ದಾರುಣ…

13 hours ago

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ವಿದ್ಯಾರ್ಥಿಗಳಿಗೆ ಶುಭಕೋರಿದ ಸಿಎಂ

ಬೆಂಗಳೂರು : 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.18ರಿಂದ ಪ್ರಾರಂಭವಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

13 hours ago

ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಸಂಭ್ರಮ : ಮಾದಪ್ಪನಿಗೆ ಎಣ್ಣೆಮಜ್ಜನ

ಹನೂರು : ರಾಜ್ಯದ ಪ್ರಸಿದ್ದ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಹಿನ್ನೆಲೆ ಮಂಗಳವಾರ…

13 hours ago

ಕುಡಿಯುವ ನೀರು ಸಮಸ್ಯೆಗೆ ಸರ್ಕಾರದ ಕ್ರಮವೇನು? : ಅಧಿವೇಶನದಲ್ಲಿ ಎಂಎಲ್‌ಎ ಮಂಜುನಾಥ್‌ ಪ್ರಶ್ನೆ

ಹನೂರು : ತಾಲೂಕು ವ್ಯಾಪ್ತಿಯ ಒಂಬತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಶಾಶ್ವತ ಪರಿಹಾರಕ್ಕೆ ಸರ್ಕಾರ…

13 hours ago