ಆಂದೋಲನ ಪುರವಣಿ

ವನಿತೆ ಮಮತೆ : ಹೊಸ ಲೇಖಕಿಯರಿಗೆ ಮಂದಾರ ಪುಷ್ಪ

೪೩ ವರ್ಷ ಇತಿಹಾಸದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪಾ ಸಂದರ್ಶನ

ಚಾರ್ವಿಕಾ ಸಾನ್ವಿ, ಮೈಸೂರು

ಕರ್ನಾಟಕ ಲೇಖಕಿಯರ ಸಂಘಕ್ಕೆ ೪೩ ವರ್ಷದ ಸುಧೀರ್ಘ ಇತಿಹಾಸವಿದೆ. ಹಲವಾರು ಮಹತ್ವದ ಲೇಖಕಿಯರು ಅಧ್ಯಕ್ಷರಾಗಿ ಸಂಘವನ್ನು ಗೌರವಯುತವಾಗಿ ಕಟ್ಟಿ ಬೆಳೆಸಿದ್ದಾರೆ. ಆಯಾ ಕಾಲಘಟ್ಟದ ಸ್ಪಂದನೆಗಳಿಗೆ ಪೂರಕವಾಗಿ ಲೇಖಕಿಯರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನನಗೆ ಈ ಸಂಘದ ಅಧ್ಯಕ್ಷರಾಗುವ ಅವಕಾಶ ದೊರೆತಿದೆ. ಗಟ್ಟಿ ಅಡಿಪಾಯವನ್ನು ಇನ್ನಷ್ಟು ಬಲಗೊಳಿಸಿ ಹೊಸ ತಲೆಮಾರಿನ ಲೇಖಕಿಯರ ತಲ್ಲಣ, ಸಂವೇದನೆ, ಸ್ಪಂದನೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಈಗಿನ ಕಾಲಘಟ್ಟದ ಚಿಂತನೆ ಹಾಗೂ ಚಿಂತಕರನ್ನೂ ಒಳಗೊಳ್ಳುವ ಕ್ರಿಯೆಗೆ ಒತ್ತು ನೀಡಲೇಬೇಕಿದೆ.
ಇದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಕಳೆದ ತಿಂಗಳು ಆಯ್ಕೆಯಾದ ಡಾ.ಎಚ್.ಎಲ್.ಪುಷ್ಪ ಅವರ ಖಚಿತ ಅಭಿಪ್ರಾಯ.

ತಮ್ಮದೇ ಆದ ಚಿಂತನೆ, ಬದ್ಧತೆಯ ಬದುಕು, ಓದು, ಬರವಣಿಗೆ, ಸಂಘಟನೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಡಾ.ಪುಷ್ಪ ಅವರು ಸಂಘದ ಅಧ್ಯಕ್ಷ ಸ್ಥಾನಕ್ಕೆ ತುರುಸಿನ ಸ್ಪರ್ಧೆ ಎದುರಿಸಿದವರು. ಸಾಮಾನ್ಯ ಚುನಾವಣೆಯಂತೆೆಯೇ ಆಗುತ್ತಿದೆಯಲ್ಲಾ ಎಂಬ ಆತಂಕದ ನಡುವೆಯೂ ಲೇಖಕಿಯರ ಬೆಂಬಲದಿಂದ ಗೆದ್ದು ಸದ್ದು ಗದ್ದಲದ ಬದಲು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ನಂಬಿದವರು. ಅದನ್ನೇ ‘ಆಂದೋಲನ’ಕ್ಕೆ ನೀಡಿದ ಸಂದರ್ಶನದಲ್ಲಿ ಪುಷ್ಪ ವಿವರಿಸಿದ್ದಾರೆ.

ಲೇಖಕಿಯರ ಸಂಘಕ್ಕೆ ನಾಗಮಣಿ ರಾವ್ ಅವರು ಅಧ್ಯಕ್ಷರಾದ ಅವಧಿಯಿಂದ ನನ್ನ ನಂಟು ಇದೆ. ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಅಧ್ಯಕ್ಷರಾಗಬೇಕು ಎನ್ನುವ ಉದ್ದೇಶವೇನೂ ಇರಲಿಲ್ಲ. ಆದರೆ ಹಿರಿಯರು ಕಟ್ಟಿ ಬೆಳೆಸಿದ ಸಂಘದ ಆಶಯಗಳನ್ನು ಗಟ್ಟಿಗೊಳಿಸಬೇಕು ಎನ್ನುವ ಒತ್ತಾಯ ಲೇಖಕಿಯರಲ್ಲಿ ಕೇಳಿ ಬಂದಾಗ ಅನಿವಾರ್ಯವಾಗಿ ಸ್ಪರ್ಧೆ ಮಾಡಿದೆ. ಹೊಸ ತಲೆಮಾರನ್ನು ಒಳಗೊಳ್ಳುವುದು ನಮ್ಮ ಉದ್ದೇಶ. ಹಿಂದೆಲ್ಲಾ ಲೇಖಕಿಯರು ಬರೆದದ್ದು ಅಡುಗೆ ಮನೆ ಸಾಹಿತ್ಯ ಎಂದು ಕೊಂಕು ಆಡುವ ಕಾಲವಿತ್ತು. ಮಹಿಳೆಯರೂ ಗಟ್ಟಿ ಸಾಹಿತ್ಯ ರಚಿಸಬಲ್ಲರು ಎನ್ನುವುದು ಕಾಲಕ್ರಮೇಣ ಸಾಬೀತಾಗುತ್ತಾ ಹೋಗಿ ಮಹಿಳಾ ಸಾಹಿತ್ಯವನ್ನು ನಿರ್ಲಕ್ಷಿಸಲಾಗದು ಎನ್ನುವ ಹಂತಕ್ಕೂ ಬಂದಿದೆ. ಲೇಖಕಿಯರನ್ನು ಸಂಘಟಿಸಿ ಅವರ ಸಂವೇದನೆಗಳು ಅಕ್ಷರ ರೂಪ ತಾಳುವಲ್ಲಿ ಸಂಘದ ಕೊಡುಗೆಯೂ ಅಪಾರವಾಗಿದೆ. ಇಂತಹ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಸವಾಲು ನನ್ನ ಮೇಲೆ ಇದೆ. ಕೊರೊನಾ ನಂತರ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಕುಟುಂಬ, ಸಂಬಂಧ, ಸಂವೇದನೆಗಳಲ್ಲಿನ ಆಗಿರುವ ಬದಲಾವಣೆಗಳು ಬರವಣಿಗೆ ಮೇಲೂ ಖಂಡಿತಾ ಆಗಿದೆ. ಹೊಸಬರು ಭಿನ್ನವಾಗಿ ಯೋಚಿಸುತ್ತಿದ್ದಾರೆ. ಅಷ್ಟೇ ವಿಭಿನ್ನವಾಗಿ ಬರೆಯುತ್ತಿದ್ದಾರೆ ಕೂಡ. ಅವರೆಲ್ಲರನ್ನೂ ಒಳಗೊಳ್ಳುವ ಕೆಲಸ ಮೊದಲ ಆದ್ಯತೆಯಾಗಿೆಯೇ ಆಗಲಿದೆ ಎನ್ನುವುದು ಪುಷ್ಪ ಅವರ ಖಚಿತ ನಿಲುವು.

ಸದ್ಯ ಒಂದು ಪುಟ್ಟ ಮನೆಯಲ್ಲಿಯೇ ಸಂಘ ನಡೆಯುತ್ತಿದೆ. ಸಂಘಕ್ಕೆ ವಿಶಾಲವಾದ ಕಟ್ಟಡ ಬೇಕಾಗಿದೆ. ಸಂಶೋಧನೆಗೆ ಪೂರಕವಾಗುವಂತಹ ಗ್ರಂಥಾಲಯ ಅದರಲ್ಲಿಯೇ ಇದೆ. ಇದನ್ನೂ ವಿಸ್ತರಿಸಬೇಕಾಗಿದೆ. ಸಂಘದಲ್ಲಿ ೧೭ ದತ್ತಿ ನಿಧಿಗಳಿದ್ದು, ಅದರಡಿ ಆರ್ಥಿಕ ಸಂಪನ್ಮೂಲ ಬಳಸಿಯೂ ದತ್ತಿ ಕಾರ್ಯಯಕ್ರಮ, ಪ್ರಶಸ್ತಿ ನೀಡುವುದು ನಡೆದಿದೆ. ಗ್ರಾಮೀಣ ಭಾಗದ ಜತೆಗೆ ಪ್ರಾದೇಶಿಕತೆ ನೆಲೆಯಲ್ಲೂ ಸಂಘವನ್ನು ವಿಸ್ತರಿಸಿ ಹೊಸ ಸದಸ್ಯರನ್ನು ಸೇರಿಸಿಕೊಳ್ಳುವ ಇರಾದೆಯೂ ಇದೆ. ಪ್ರಾದೇಶಿಕ ಲೇಖಕಿಯರ ಸಮ್ಮೇಳನಗಳನ್ನು ಆಯೋಜಿಸುವ ಯೋಚನೆಯೂ  ಇದೆ. ಈಗಾಗಲೇ ೧೭೪ ಲೇಖಕಿಯರ ಸಾಕ್ಷ್ಯಚಿತ್ರಗಳು ಹೊರ ಬಂದಿವೆ. ಇನ್ನಷ್ಟು ಕೆಲಸ ಆಗಬೇಕಿದೆ. ಲೇಖ ಲೋಕ ಎನ್ನುವ ಶೀರ್ಷಿಕೆಯಡಿ ಆತ್ಮಕಥನಗಳ ಪ್ರಕಟಣೆ ಆಗುತ್ತಿದೆ. ಇದನ್ನು ಇನ್ನಷ್ಟು ವಿಸ್ತರಿಸುವ ಯೋಜನೆಗಳನ್ನು ಹಾ ಕಿಕೊಂಡಿದ್ದೇನೆ? ಎನ್ನುತ್ತಾರೆ ಅವರು.

ಆರ್ಥಿಕ ಬೆಂಬಲ ಬೇಕು
ಲೇಖಕಿಯರ ಸಂಘಕ್ಕೆ ವಾರ್ಷಿಕವಾಗಿ ಬರಿ ೨ ಲಕ್ಷ ರೂ. ಅನುದಾನ ಸಿಗುತ್ತಿದೆ. ಇದನ್ನು ಕನಿಷ್ಠ ೧೦ ಲಕ್ಷ ರೂ.ಗಳಿಗಾದರೂ ಏರಿಸಬೇಕು ಎನ್ನುವ ಮನವಿಯನ್ನು ಸರ್ಕಾರಕ್ಕೆ ಸದ್ಯವೇ ಸಲ್ಲಿಸುತ್ತೇವೆ. ಆರ್ಥಿಕ ಬಲವಿಲ್ಲದೇ ಏನನ್ನೂ ಮಾಡಲಾಗದು. ಇದಕ್ಕಾಗಿ ಸರ್ಕಾರವನ್ನೇ ಮೊದಲು ಕೇಳುವುದು ನಮ್ಮ ಆದ್ಯತೆಯೂ ಹೌದು. ಲೇಖಕಿಯರ ಸಂಘದ ಬೆಳವಣಿಗೆಗೆ ಆರ್ಥಿಕವಾಗಿ ಸಹೋಂಗ ನೀಡುವವರು ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದು ಹೇಳುತ್ತಾರೆ.

ಡಿಜಿಟಲ್ ಸ್ಪರ್ಶ

ಹೊಸ ತಲೆಮಾರಿನ ಬಹಳಷ್ಟು ಲೇಖಕರು ಡಿಜಿಟಲ್ ವ್ಯವಸ್ಥೆಯಡಿ ಸಕ್ರಿಯರಾಗಿದ್ದಾರೆ. ಇದು ಈಗಿನ ಕಾಲಮಾನದ ಅಗತ್ಯವೂ ಹೌದು. ಇದಕ್ಕೆ ತಕ್ಕಂತೆ ಸಂಘದ ವೆಬ್‌ಸೈಟ್, ಯೂಟ್ಯೂಬ್ ರೂಪಿಸಿ ಆ ಮೂಲಕ ಸದಸ್ಯರ ಚಟುವಟಿಕೆಗೆ ವೇದಿಕೆ ರೂಪಿಸುವ ಯೋಜನೆಯೂ ಇದೆ ಎನ್ನುತ್ತಾರೆ.



ಪ್ರಮುಖ ಲೇಖಕಿ ಪುಷ್ಪ

ದೊಡ್ಡಬಳ್ಳಾಪುರದವರಾದ ಡಾ.ಎಚ್.ಎಲ್.ಪುಷ್ಪ ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯದಲ್ಲಿ ಸಕ್ರಿಯರು. ಸಾಹಿತ್ಯದ ವಿದ್ಯಾರ್ಥಿನಿಯಾಗಿ, ನಂತರ ಮೂರೂವರೆ ದಶಕಗಳ ಕಾಲ ಕನ್ನಡ ಉಪನ್ಯಾಸಕಿಯಾಗಿ, ನಂತರ ಪ್ರಾಂಶುಪಾಲರಾಗಿ ಆರು ತಿಂಗಳ ಹಿಂದೆಯಷ್ಟೇ ನಿವೃತ್ತರಾದವರು. ಕನ್ನಡ ರಂಗಭೂಮಿಯ ಕುರಿತಾಗಿ ಡಾ.ಸಿಜಿಕೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಪಿಎಚ್‌ಡಿ ಪಡೆದವರು. ೪ ಕವನ ಸಂಕಲನ ಸೇರಿ ೧೫ಕ್ಕೂ ಹೆಚ್ಚು ಕೃತಿಗಳನ್ನು ಪುಷ್ಪ ಪ್ರಕಟಿಸಿದ್ದಾರೆ. ೨೫ ವರ್ಷಗಳಿಂದಲೂ ಕರ್ನಾಟಕ ಲೇಖಕಿಯರ ಸಂಘದ ಒಡನಾಟ ಹೊಂದಿದ್ದವರು. ಇದೀಗ ಹಲವರು ಕಟ್ಟಿ ಬೆಳೆಸಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾರೆ.

andolanait

Recent Posts

ಸುಪ್ರೀಂಕೋರ್ಟ್‌ನಲ್ಲಿ ಪ್ರಜ್ವಲ್‌ ರೇವಣ್ಣಗೆ ಹಿನ್ನಡೆ

ನವದೆಹಲಿ: ಮನೆಗೆಲಸದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ…

22 mins ago

ರಾಜ್ಯದಲ್ಲಿ 1517 ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಕ್ರಮ: ಸಚಿವ ಕೆ.ಎಚ್.ಮುನಿಯಪ್ಪ

ಬೆಳಗಾವಿ: ರಾಜ್ಯದಲ್ಲಿ 1517 ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ…

43 mins ago

ಬೆಂಗಳೂರಿನಲ್ಲಿ ಸಾಕು ಪ್ರಾಣಿಗಳ ಮಾರಣಹೋಮ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಕು ಅಮಾನವೀಯ ಘಟನೆ ನಡೆದಿದ್ದು, ಸಾಕು ಪ್ರಾಣಿಗಳನ್ನು ಚಿತ್ರಹಿಂಸೆ ನೀಡಿ ಕೊಂದು ವಿಕೃತಿ ಮೆರೆದಿರುವ…

2 hours ago

ನಾಯಕತ್ವ ಬಗ್ಗೆ ಯತೀಂದ್ರ ಹೇಳಿಕೆ: ಇದಕ್ಕೆ ಸಿಎಂ ಉತ್ತರಿಸಲಿ ಎಂದ ಡಿ.ಕೆ.ಶಿವಕುಮಾರ್‌

ಬೆಳಗಾವಿ: ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್‌ ಕ್ಲಿಯರ್‌ ಆಗಿ ಹೇಳಿದೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ…

2 hours ago

ಜೀವಾವಧಿ ಶಿಕ್ಷೆಯಿಂದ ಪಾರಾಗಲು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಪ್ರಜ್ವಲ್‌ ರೇವಣ್ಣ

ಬೆಂಗಳೂರು: ಮನೆ ಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ…

3 hours ago

ಪೊಲೀಸ್‌ ಇಲಾಖೆಯಲ್ಲಿ 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ಪರಮೇಶ್ವರ್‌

ಬೆಳಗಾವಿ: ಪೊಲೀಸ್‌ ಇಲಾಖೆಯಲ್ಲಿ 14 ಸಾವಿರ ಹುದ್ದೆಗಳು ಖಾಲಿಯಿದ್ದು, ಈ ಪೈಕಿ 3 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ…

3 hours ago