ಜಿಲ್ಲೆಗಳು

ಚಾ.ನಗರ ಜಿಲ್ಲೆಯಲ್ಲಿ ಒಂದೇ ದಿನ 38.6 ಮಿಮೀ ಮಳೆ!

ಚಾ.ನಗರ ಜಿಲ್ಲೆಯಲ್ಲಿ ಒಂದೇ ದಿನ ೩೮.೬ ಮಿ.ಮೀ. ಮಳೆ!
ರಾತ್ರಿ ಇಡೀ ಸುರಿದು ಹೊಲಗದ್ದೆಗಳಲ್ಲಿ ಹರಿದಾಡಿದ ನೀರು…

ಚಾಮರಾಜನಗರ: ಜಿಲ್ಲೆಯಾದ್ಯಂತ ಹೊಲಗದ್ದೆಗಳಲ್ಲಿ ನೀರು ಹರಿದಾಡುವ ಮಟ್ಟಿಗೆ ಭಾನುವಾರ ರಾತ್ರಿ ಇಡೀ ಜೋರುಮಳೆಯಾಗಿದೆ.
ಭಾನುವಾರ ಬೆಳಿಗ್ಗೆ ೮.೩೦ರಿಂದ ಸೋಮವಾರ ಬೆಳಿಗ್ಗೆ ೮.೩೦ರವರೆಗಿನ ಕಳೆದ ೨೪ಗಂಟೆ ಅವಧಿಯಲ್ಲಿ ಜಿಲ್ಲೆಯಾದ್ಯಂತ ೩೮.೬ಮಿಮೀ ಮಳೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಧುಸೂದನ್ ವಾಹಿತಿ ನೀಡಿದ್ದಾರೆ.

ಈ ಒಂದು ದಿನದ ಅವಧಿಯಲ್ಲಿ ವಾಡಿಕೆ ಪ್ರಕಾರ ೫.೭ಮಿಮೀ ಮಳೆಯಾಗಬೇಕಿತ್ತು. ಅದಕ್ಕಿಂತ ೩೨ಮಿಮೀ(ಶೇ.೫೭೭) ಹೆಚ್ಚುಬಿದ್ದಿದೆ! ಅನೇಕ ಕಡೆ ರಾತ್ರಿ ಶುರುವಾದ ಮಳೆ ಸೋಮವಾರ ಬೆಳಿಗ್ಗೆವರೆಗೂ ಒಂದೇ ಸಮನೆ ಧಾರಾಕಾರವಾಗಿ ಸುರಿದಿದೆ.
ಹೀಗಾಗಿ ತಗ್ಗು ಪ್ರದೇಶದ ಜಮೀನು ಮತ್ತು ಬೆಳೆಗಳಲ್ಲಿ ಮಳೆನೀರು ನಿಲ್ಲಲ್ಪಟ್ಟಿದ್ದು ಬಸಿ ಕಾಲುವೆ ಮುಖಾಂತರ ನೀರನ್ನು ರೈತರು ಹೊರಹಾಕುತ್ತಿದ್ದಾರೆ. ಸೋಮವಾರವೂ ಮೋಡಕವಿದ ವಾತಾವರಣ ಆವರಿಸಿತ್ತು. ಮಧ್ಯೆ ಮಧ್ಯೆ ಮಳೆಯೂ ಜಿನುಗಿತು. ಇಡೀದಿನ ನೇಸರನ ದರ್ಶನ ಆಗಲಿಲ್ಲ.
ಈ ಮಳೆಯಿಂದ ಭತ್ತ, ರಾಗಿ, ಮುಸುಕಿನಜೋಳ, ಕಬ್ಬು, ಬೆಳೆಗಳಿಗಲ್ಲದೆ ತೋಟಗಾರಿಕಾ ಬೆಳೆಗಳಾದ ಅರಿಶಿನ, ಬಾಳೆಗೆ ಅನುಕೂಲವಾಗಿದ್ದು ಹಸಿಕಡಲೆ ಬಿತ್ತನೆಗೂ ನೆರವಾಗಿದೆ. ಸೆಪ್ಟೆಂಬರ್ ಮೊದಲವಾರ ಮಳೆ ಅಬ್ಬರಿಸಿ ಕೆರೆ-ಕಟ್ಟೆ ಹಾಗೂ ಜಲಾಶುಂಗಳು ತುಂಬಿಹರಿದಿದ್ದವು. ಆನಂತರ ಭಾನುವಾರ ರಾತ್ರಿ ಜೋರುಮಳೆಯಾಗಿದೆ ಎಂದು ಹವಾವಾನ ಇಲಾಖೆ ಮೂಲಗಳು ತಿಳಿಸಿವೆ. ಯಳಂದೂರು ತಾಲ್ಲೂಕಿನಲ್ಲಿ ಕಳೆದ ೨೪ಗಂಟೆಯಲ್ಲಿ ವಾಡಿಕೆಗಿಂತ(೫.೪ಮಿಮೀ) ಶೇ.೮೨೦ರಷ್ಟು ಹೆಚ್ಚು ಮಳೆಯಾಗಿದೆ.


ತಾಲ್ಲೂಕುವಾರು ಮಳೆ ಬಿದ್ದ ವಿವರ
(ಕಳೆದ ೨೪ಗಂಟೆ ಅವಧಿಯಲ್ಲಿ )
ಚಾ.ನಗರ ೪೫.೯ ಮಿಮೀ
ಗುಂಡ್ಲುಪೇಟೆ ೪೦.೧ ಮಿಮೀ
ಕೊಳ್ಳೇಗಾಲ ೨೩.೪ ಮಿಮೀ
ಯಳಂದೂರು ೪೯.೭ ಮಿಮೀ
ಹನೂರು ೩೫.೧ ಮಿಮೀ


ಇನ್ನೂ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಹಗುರದಿಂದ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಚಾ.ನಗರ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹವಾವಾನ ತಜ್ಞ ಹೆಚ್.ಕೆ.ರಜತ್ ತಿಳಿಸಿದ್ದಾರೆ.

 

andolanait

Recent Posts

ತಮಿಳುನಾಡಿನಲ್ಲಿ ಮದ್ಯ ಖರೀದಿ ಮತ್ತು ಸೇವನೆಗೆ 21 ವರ್ಷ ವಯಸ್ಸು ಕಡ್ಡಾಯ

ಚೆನ್ನೈ: ರಾಜ್ಯದಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚುತ್ತಿರುವ ಮದ್ಯ ಸೇವನೆಯನ್ನು ತಡೆಯಲು, ತಮಿಳುನಾಡು ಸರ್ಕಾರವು ಎಲ್ಲಾ ರೀತಿಯ ಮದ್ಯ ಖರೀದಿ ಮತ್ತು…

1 hour ago

ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೆ ಪೂರ್ವ ಮುಂಗಾರು ಆರ್ಭಟ ಮುಂದುವರಿದಿದೆ. ನಾಳೆ ಮತ್ತಷ್ಟು ತೀವ್ರತೆ…

2 hours ago

ಉತ್ತರ ಪ್ರದೇಶದಲ್ಲಿ ಮಳೆ ಅವಾಂತರ: ಸಾವಿನ ಸಂಖ್ಯೆ 104ಕ್ಕೆ ಏರಿಕೆ

ಲಕ್ನೋ: ಉತ್ತರ ಪ್ರದೇಶದಾದ್ಯಂತ ಭಾರೀ ಮಳೆ ಮತ್ತು ಬಿರುಗಾಳಿಗೆ ಈವರೆಗೆ 104 ಜನರು ಸಾವನ್ನಪ್ಪಿದ್ದಾರೆ. ಮಳೆ ಹೊಡೆತಕ್ಕೆ 53 ಜನರಿಗೆ…

2 hours ago

PGCET| MBA, MCA ಪ್ರವೇಶ ಪರೀಕ್ಷೆ ಜೂನ್.‌4ಕ್ಕೆ ಮುಂದೂಡಿದ ಕೆಇಎ

ಬೆಂಗಳೂರು: ಇದೇ ತಿಂಗಳ 24 ರಂದು ನಡೆಯಬೇಕಿದ್ದ ಎಂಬಿಎ, ಎಂಸಿಎ ಕೋರ್ಸ್‌ಗಳ ಪ್ರವೇಶ್‌ ಪರೀಕ್ಷೆಯನ್ನು ಜೂನ್.‌14ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು…

3 hours ago

ಹನೂರು| ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಮಿಳುನಾಡಿಗೆ ಭತ್ತ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ…

3 hours ago

ಮಾರ್ಟಳ್ಳಿಯಲ್ಲಿ ಮರೀಚಿಕೆಯಾದ ಸ್ವಚ್ಛತೆ: ಗ್ರಾಮಸ್ಥರ ಆಕ್ರೋಶ

ಹನೂರು: ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಹೊಂದಿರುವ ಮಾರ್ಟಳ್ಳಿಯಲ್ಲಿ ಸದ್ಯ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಗ್ರಾಮದ…

3 hours ago