ಚಾ.ನಗರ ಜಿಲ್ಲೆಯಲ್ಲಿ ಒಂದೇ ದಿನ ೩೮.೬ ಮಿ.ಮೀ. ಮಳೆ!
ರಾತ್ರಿ ಇಡೀ ಸುರಿದು ಹೊಲಗದ್ದೆಗಳಲ್ಲಿ ಹರಿದಾಡಿದ ನೀರು…
ಚಾಮರಾಜನಗರ: ಜಿಲ್ಲೆಯಾದ್ಯಂತ ಹೊಲಗದ್ದೆಗಳಲ್ಲಿ ನೀರು ಹರಿದಾಡುವ ಮಟ್ಟಿಗೆ ಭಾನುವಾರ ರಾತ್ರಿ ಇಡೀ ಜೋರುಮಳೆಯಾಗಿದೆ.
ಭಾನುವಾರ ಬೆಳಿಗ್ಗೆ ೮.೩೦ರಿಂದ ಸೋಮವಾರ ಬೆಳಿಗ್ಗೆ ೮.೩೦ರವರೆಗಿನ ಕಳೆದ ೨೪ಗಂಟೆ ಅವಧಿಯಲ್ಲಿ ಜಿಲ್ಲೆಯಾದ್ಯಂತ ೩೮.೬ಮಿಮೀ ಮಳೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಧುಸೂದನ್ ವಾಹಿತಿ ನೀಡಿದ್ದಾರೆ.
ಈ ಒಂದು ದಿನದ ಅವಧಿಯಲ್ಲಿ ವಾಡಿಕೆ ಪ್ರಕಾರ ೫.೭ಮಿಮೀ ಮಳೆಯಾಗಬೇಕಿತ್ತು. ಅದಕ್ಕಿಂತ ೩೨ಮಿಮೀ(ಶೇ.೫೭೭) ಹೆಚ್ಚುಬಿದ್ದಿದೆ! ಅನೇಕ ಕಡೆ ರಾತ್ರಿ ಶುರುವಾದ ಮಳೆ ಸೋಮವಾರ ಬೆಳಿಗ್ಗೆವರೆಗೂ ಒಂದೇ ಸಮನೆ ಧಾರಾಕಾರವಾಗಿ ಸುರಿದಿದೆ.
ಹೀಗಾಗಿ ತಗ್ಗು ಪ್ರದೇಶದ ಜಮೀನು ಮತ್ತು ಬೆಳೆಗಳಲ್ಲಿ ಮಳೆನೀರು ನಿಲ್ಲಲ್ಪಟ್ಟಿದ್ದು ಬಸಿ ಕಾಲುವೆ ಮುಖಾಂತರ ನೀರನ್ನು ರೈತರು ಹೊರಹಾಕುತ್ತಿದ್ದಾರೆ. ಸೋಮವಾರವೂ ಮೋಡಕವಿದ ವಾತಾವರಣ ಆವರಿಸಿತ್ತು. ಮಧ್ಯೆ ಮಧ್ಯೆ ಮಳೆಯೂ ಜಿನುಗಿತು. ಇಡೀದಿನ ನೇಸರನ ದರ್ಶನ ಆಗಲಿಲ್ಲ.
ಈ ಮಳೆಯಿಂದ ಭತ್ತ, ರಾಗಿ, ಮುಸುಕಿನಜೋಳ, ಕಬ್ಬು, ಬೆಳೆಗಳಿಗಲ್ಲದೆ ತೋಟಗಾರಿಕಾ ಬೆಳೆಗಳಾದ ಅರಿಶಿನ, ಬಾಳೆಗೆ ಅನುಕೂಲವಾಗಿದ್ದು ಹಸಿಕಡಲೆ ಬಿತ್ತನೆಗೂ ನೆರವಾಗಿದೆ. ಸೆಪ್ಟೆಂಬರ್ ಮೊದಲವಾರ ಮಳೆ ಅಬ್ಬರಿಸಿ ಕೆರೆ-ಕಟ್ಟೆ ಹಾಗೂ ಜಲಾಶುಂಗಳು ತುಂಬಿಹರಿದಿದ್ದವು. ಆನಂತರ ಭಾನುವಾರ ರಾತ್ರಿ ಜೋರುಮಳೆಯಾಗಿದೆ ಎಂದು ಹವಾವಾನ ಇಲಾಖೆ ಮೂಲಗಳು ತಿಳಿಸಿವೆ. ಯಳಂದೂರು ತಾಲ್ಲೂಕಿನಲ್ಲಿ ಕಳೆದ ೨೪ಗಂಟೆಯಲ್ಲಿ ವಾಡಿಕೆಗಿಂತ(೫.೪ಮಿಮೀ) ಶೇ.೮೨೦ರಷ್ಟು ಹೆಚ್ಚು ಮಳೆಯಾಗಿದೆ.
ತಾಲ್ಲೂಕುವಾರು ಮಳೆ ಬಿದ್ದ ವಿವರ
(ಕಳೆದ ೨೪ಗಂಟೆ ಅವಧಿಯಲ್ಲಿ )
ಚಾ.ನಗರ ೪೫.೯ ಮಿಮೀ
ಗುಂಡ್ಲುಪೇಟೆ ೪೦.೧ ಮಿಮೀ
ಕೊಳ್ಳೇಗಾಲ ೨೩.೪ ಮಿಮೀ
ಯಳಂದೂರು ೪೯.೭ ಮಿಮೀ
ಹನೂರು ೩೫.೧ ಮಿಮೀ
ಇನ್ನೂ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಹಗುರದಿಂದ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಚಾ.ನಗರ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹವಾವಾನ ತಜ್ಞ ಹೆಚ್.ಕೆ.ರಜತ್ ತಿಳಿಸಿದ್ದಾರೆ.
ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…
ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…
ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…
ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…
ತಕ್ಷಣವೇ ನೈಸ್ ರಸ್ತೆ ಟೋಲ್ ಸಂಗ್ರಹಕ್ಕೆ ತಡೆ ಹಾಕಬೇಕು ಎಂದು ಕೇಂದ್ರ ಸಚಿವರ ಅಗ್ರಹ ಹೈಕೋರ್ಟ್ ಅಭಿಪ್ರಾಯದಂತೆ ನೈಸ್ ಯೋಜನೆಯನ್ನು…
ಕೊಡಗು: ಚಾಮರಾಜನಗರದ ಹನೂರಿನಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಕೊಡಗಿನಲ್ಲಿ ಮಾಧ್ಯಮದವರು…