ಆಂದೋಲನ ಪುರವಣಿ

ನಿರ್ಮಾಪಕಿಯಾಗಿ ಸ್ಯಾಂಡಲ್‌ವುಡ್‌ಗೆ ಬಂದ ರಮ್ಯಾ

ಅಭಿಮಾನಿಗಳ ನಿರೀಕ್ಷೆ ಹುಸಿ ಮಾಡದ ರಮ್ಯಾ; ವೆಲ್‌ಕಮ್ ಬ್ಯಾಕ್ ಹೇಳಿದ ಚಿತ್ರರಂಗ

ಮೊನ್ನೆ ಮೊನ್ನೆ ತಾನೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದ ರಮ್ಯಾ ಕುತೂಹಲ ಹೆಚ್ಚಿಸಿದ್ದರು. ರಮ್ಯಾ ಹೀಗೆ ಹೇಳಿದ್ದೇ ತಡ ಚಿತ್ರರಂಗದಲ್ಲಿ, ಅಭಿಮಾನಿಗಳಲ್ಲಿ ನಿರೀಕ್ಷೆಗಳು ಹೆಚ್ಚಿದ್ದವು. ಮತ್ತೆ ನಾಯಕಿಯಾಗಿ ರಮ್ಯಾ ಕಾಣಿಸಿಕೊಳ್ತಾರಾ? ಯಾರ ಜೊತೆ ನಟಿಸ್ತಾರೆ? ಹೊಸ ಚಿತ್ರ ಘೋಷಣೆ ಮಾಡ್ತಾರಾ? ಹೀಗೆಲ್ಲಾ ಚರ್ಚೆಗಳು ನಡೆದಿದ್ದವು. ಇದಕ್ಕೆ ರಮ್ಯಾ ಸ್ಪಷ್ಟನೆ ನೀಡಿದ್ದು, ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಎಂಟ್ರಿ ಕೊಡುತ್ತಿರುವುದಾಗಿ ತಿಳಿಸಿದ್ದಾರೆ. ‘ಆಪಲ್ ಬಾಕ್ಸ್ ಸ್ಟುಡಿಯೋಸ್’ ಎನ್ನುವ ನಿರ್ಮಾಣ ಸಂಸ್ಥೆಯನ್ನು ಮಾಡಲು ಮುಂದಾಗಿರುವ ರಮ್ಯಾ, ಪ್ರಾರಂಭದಲ್ಲಿಯೇ ಎರಡು ಚಿತ್ರಗಳನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಿಕೊಂಡಿದ್ದಾರೆ.

 

ನಿರ್ಮಾಪಕಿಯಾದ ತಾರೆಯರು
ತಾರೆಯರು ನಿರ್ಮಾಪಕಿಯಾಗುತ್ತಿರುವುದು ಹೊಸದೇನೂ ಅಲ್ಲ. ಅದರಲ್ಲೂ ಜನಪ್ರಿಯ ನಟಿಯರು. ನಲವತ್ತರ ದಶಕದಲ್ಲಿ ಬಹುದೊಡ್ಡ ಹೆಸರಾಗಿದ್ದ ತಾರೆ ಎಂ.ವಿ.ರಾಜಮ್ಮ, ? ರಾಧಾರಮಣ’ ಚಿತ್ರದ ಮೂಲಕ ಮೊದಲ ನಿರ್ಮಾಪಕಿ ಎನಿಸಿಕೊಂಡರು. ನಂತರ ಹರಿಣಿ, ಪಂಢರಿಬಾಯಿ, ಜಯಮಾಲ, ಪ್ರಮೀಳಾ ಜೋಷಾಯಿ ಮೊದಲಾದವರು ಈ ಸಾಲಿಗೆ ಸೇರಿಕೊಂಡರು.

ಹೊಸ ಸಹಸ್ರಮಾನದ ಆರಂಭದಲ್ಲಿ ಬಂದು ಜನಪ್ರಿಯರಾದ ತಾರೆಯರಲ್ಲಿ ರಕ್ಷಿತಾ, ರಾಧಿಕಾ ಮತ್ತು ರಮ್ಯಾ ಮುಂದಿನ ಸಾಲಿನಲ್ಲಿದ್ದಾರೆ. ಪುನೀತ್‌ರಾಜಕುಮಾರ್ ಯುವನಟರಾಗಿ ಬಂದ ಮೊದಲ ಚಿತ್ರ ‘ಅಪ್ಪು’ ಮೂಲಕ ರಕ್ಷಿತಾ ಬೆಳ್ಳಿತೆರೆಗೆ ಕಾಲಿಟ್ಟರೆ, ಎರಡನೇ ಚಿತ್ರ ‘ಅಭಿ’ಯೊಂದಿಗೆ ರಮ್ಯಾ ಆಗಮನ. ಅದೇ ವೇಳೆ ಸೃಜನ್ ಲೋಕೇಶ್ ಅವರೊಂದಿಗೆ ನಟಿಸಿದ ‘ನೀಲಮೇಘಶ್ಯಾಮ’ ಚಿತ್ರಕ್ಕಾಗಿ ಮೊದಲು ಬಣ್ಣ ಹಚ್ಚಿದ್ದರೂ, ತಾರೆ ರಾಧಿಕಾ ನಟಿಸಿ ತೆರೆಕಂಡ ಮೊದಲ ಚಿತ್ರ ವಿಜಯರಾಘವೇಂದ್ರ ಅವರೊಂದಿಗೆ ನಟಿಸಿದ ‘ನಿನಗಾಗಿ’.

ರಕ್ಷಿತಾ, ರಾಧಿಕಾ, ರಮ್ಯ

ಈ ಮೂವರೂ ಪೈಪೋಟಿಯಲ್ಲೆಂಬಂತೆ ನಟಿಸಿದರು. ಜನಪ್ರೀತಿ ಗಳಿಸಿದರು. ಕನ್ನಡ ಮಾತ್ರವಲ್ಲದೆ, ಇತರ ಸೋದರ ಭಾಷೆಗಳಲ್ಲೂ ನಟಿಸಿದ ಈ ಮೂವರ ಚಿತ್ರಗಳ ಸಂಖ್ಯೆ ಮೂವತ್ತರ ಆಚೆ ಇದೆ. ಚಿತ್ರೋದ್ಯಮದಲ್ಲಿ ಆರೋಗ್ಯಕರ ಸ್ಪರ್ಧೆಯೊಂದಿಗೆ ಸಾಗಿದ ಇವರಲ್ಲಿ ರಕ್ಷಿತಾ ಮತ್ತು ರಾಧಿಕಾ ವಿವಾಹಾನಂತರ ನಟನೆಯ ಜೊತೆಗೆ ನಿರ್ಮಾಣದತ್ತಲೂ ಹೊರಳಿದರು. ರಾಧಿಕಾ ಮತ್ತು ರಮ್ಯಾ, ಕವಿತಾ ಲಂಕೇಶ್ ಅವರ ‘ತನನಂ, ತನನಂ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದರು. ರಾಧಿಕಾ ನಿರ್ಮಿಸಿದ ‘ಲಕ್ಕಿ’ ಚಿತ್ರದಲ್ಲಿ ರಮ್ಯಾ ನಟಿಸಿದರು, ಯಶ್ ಜೋಡಿಯಾಗಿ.

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ರಮ್ಯಾ, ನಂತರ ಬಣ್ಣದ ಬದುಕಿನಿಂದ ದೂರವಿದ್ದರು. ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದರೂ, ಅವರ ಅಭಿಮಾನಿಗಳು ‘ಮತ್ತೆ ಚಿತ್ರರಂಗಕ್ಕೆ ಯಾವಾಗ ಮರಳುತ್ತೀರಿ’ ಎನ್ನುವ ಪ್ರಶ್ನೆಗೆ ಮೊನ್ನೆ ಗಣೇಶ ಚತುರ್ಥಿಯಂದು ಉತ್ತರಿಸಿದ್ದಾರೆ. ಮತ್ತೆ ತಾವು ಚಿತ್ರರಂಗಕ್ಕೆ ಹಿಂತಿರುಗುವುದನ್ನು ಖಚಿತಪಡಿಸಿದ್ದಾರೆ. ಅವರು ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಮರಳಿ ಬರುತ್ತಿದ್ದಾರೆ. ಅದು ಅವರ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಸ್ಟುಡಿಯೋಸ್ ಮೂಲಕ. ಚಿತ್ರಗಳ ಜೊತೆ, ಒಟಿಟಿ ತಾಣಗಳಿಗಾಗಿ, ಸಿನಿಮಾ ಹಾಗೂ ವೆಬ್ ಸರಣಿಗಳನ್ನೂ ಈ ಸಂಸ್ಥೆ ನಿರ್ಮಿಸಲಿದೆಯಂತೆ. ಆಪಲ್ ಬಾಕ್ಸ್‌ನ ಜಾಲತಾಣದ ಮೂಲಕ ಚಿತ್ರದ ವಿವರಗಳನ್ನು ಮುಂದೆ ತಿಳಿಸುವುದಾಗಿ ಅವರು ಹೇಳಿದ್ದಾರೆ.

andolana

Recent Posts

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

2 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

2 hours ago

ನೈಸ್ ಯೋಜನೆ ಸರ್ಕಾರದ ವಶಕ್ಕೆ ; ಮುಖ್ಯಮಂತ್ರಿ ಡಿಕೆಶಿಗೆ ಪತ್ರ ಬರೆದು ಒತ್ತಾಯಿಸಿದ ಹೆಚ್.ಡಿ.ಕುಮಾರಸ್ವಾಮಿ

ತಕ್ಷಣವೇ ನೈಸ್ ರಸ್ತೆ ಟೋಲ್ ಸಂಗ್ರಹಕ್ಕೆ ತಡೆ ಹಾಕಬೇಕು ಎಂದು ಕೇಂದ್ರ ಸಚಿವರ ಅಗ್ರಹ ಹೈಕೋರ್ಟ್ ಅಭಿಪ್ರಾಯದಂತೆ ನೈಸ್ ಯೋಜನೆಯನ್ನು…

3 hours ago

ಚಾಮರಾಜನಗರ ಶೂಟೌಟ್‌ ಪ್ರಕರಣ: ಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಕೊಡಗು: ಚಾಮರಾಜನಗರದ ಹನೂರಿನಲ್ಲಿ ನಡೆದ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಕೊಡಗಿನಲ್ಲಿ ಮಾಧ್ಯಮದವರು…

4 hours ago

ಸಿಎಂ ಆದ ಬಳಿಕ ಮೊದಲ ಬಾರಿಗೆ ಕೊಡಗಿಗೆ ಡಿಕೆಶಿ ಭೇಟಿ

ಕೊಡಗು: ಸಿಎಂ ಡಿ.ಕೆ.ಶಿವಕುಮಾರ್‌ ಅವರಿಂದು ಕೊಡಗಿಗೆ ಭೇಟಿ ನೀಡಿದ್ದಾರೆ. ಕೊಡಗಿಗೆ ಆಗಮಿಸುತ್ತಿದ್ದಂತೆ ಕೊಡವ ಸಂಪ್ರದಾಯದಂತೆ ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಕೊಡವತಿಯರು…

5 hours ago

ಕೊಲೆ ಆರೋಪಿ ಪವಿತ್ರಾಗೌಡ ಬೇರೆ ಸೆಲ್‌ಗೆ ಶಿಫ್ಟ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾಗೌಡರನ್ನು ಪರಪ್ಪನ ಅಗ್ರಹಾರದಲ್ಲಿ ಬೇರೆ ಸೆಲ್‌ಗೆ ಶಿಫ್ಟ್‌ ಮಾಡಲಾಗಿದೆ. ಇಬ್ಬರ ಬ್ಯಾರಕ್‌ನಲ್ಲಿದ್ದ…

5 hours ago