ದಸರಾ ಹತ್ತಿರವಾಗುತ್ತಿದ್ದಂತೆ ಮೈಸೂರು ಗರಿ ಬಿಚ್ಚಿಕೊಳ್ಳುತ್ತಿದೆ. ಎಲ್ಲ ಬಗೆಯ ಚಟುವಟಿಕೆಗಳು ಆರಂಭವಾಗುತ್ತಿದ್ದು, ಕಲಾ ರಸಿಕರು, ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ. ಇದರ ಭಾಗವಾಗಿ ನಜರ್ಬಾದ್ನ ಆಮ್ರಪಾಲಿ ಮಳಿಗೆಯ ಮೇಲಿರುವ ರಾಮ್ಸನ್ಸ್ ಬೊಂಬೆ ಮನೆಯಲ್ಲಿ ದಸರಾ ಬೊಂಬೆ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದ್ದು, ವರ್ಷ ಪೂರ್ತಿ ವೈವಿಧ್ಯಮಯ ಬೊಂಬೆಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.
ಶರನ್ನವರಾತ್ರಿ ಆರಂಭಕ್ಕೆ ೧೮ ದಿನಗಳು ಇರುವಂತೆಯೇ ೧೮ನೇ ವರ್ಷದ ಬೊಂಬೆ ಪ್ರದರ್ಶನಕ್ಕೆ ಗುರುವಾರ ಚಾಲನೆ ಸಿಕ್ಕಿದ್ದು, ಕಲಾ ವೈವಿಧ್ಯವೇ ಇಲ್ಲಿ ಅನಾವರಣಗೊಳ್ಳಲಿದೆ. ಬೊಂಬೆಗಳ ನಗರಿ ಚೆನ್ನಪಟ್ಟಣ, ಕಿನ್ಹಾಳ, ಬೆಂಗಳೂರು, ಪಾಲಿಮಾರುಗಳಲ್ಲಿ ತಯಾರಾದ ಬೊಂಬೆಗಳ ಜೊತೆಗೆ ತಮಿಳುನಾಡು, ತೆಲಂಗಾಣ, ರಾಜಸ್ಥಾನ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ ದೇಶಾದ್ಯಂತ ತಯಾರಾದ ಬೊಂಬೆಗಳಿಗೂ ಇಲ್ಲಿ ಸ್ಥಾನ ಇದ್ದು, ೫೦ ರೂ. ನಿಂದ ಆರಂಭವಾಗಿ ಲಕ್ಷ ರೂ. ವರೆಗೂ ಬೆಲೆ ಇರುವ ಬೊಂಬೆಗಳು ಇಲ್ಲಿರಲಿವೆ.
ರಾಮಾಯಣ ದರ್ಶನ
ಈ ಬಾರಿ ೨೪ ಅಂಶಗಳನ್ನು ಆಧರಿಸಿದ ಬೊಂಬೆಗಳ ವಿಶೇಷತೆ ಇದ್ದು, ರಾಮಾಯಣ, ಮಹಾಭಾರತದ ವಿವಿಧ ಘಟ್ಟಗಳ ಕಥೆಗಳನ್ನು ಬೊಂಬೆಗಳ ಮೂಲಕವೇ ಹೇಳಲಾಗಿದೆ. ಪುತ್ರಕಾಮೇಷ್ಠಿ ಯಾಗ, ರಾಮ ಜನನ, ತಾಟಕಾ ಸಂಹಾರ, ಮಾರೀಚ-ಸುಬಾಹು ಪಲಾಯನ, ಅಹಲ್ಯ ಉದ್ಧಾರ, ಸೀತಾ ಸ್ವಯಂವರ, ಭರತನಿಗೆ ಪಾದುಕಾ ಪ್ರದಾನ, ವನವಾಸ, ಸೀತಾ ಅಗ್ನಿ ಪ್ರವೇಶ ಹೀಗೆ ೨೪ ವರ್ಗಗಳಲ್ಲಿ ಸಂಪೂರ್ಣ ರಾಮಾಯಣ ತಿಳಿಸುವ ಗೊಂಬೆಗಳು ಪ್ರಮುಖ ಆಕರ್ಷಣೆಯ ಕೇಂದ್ರವಾಗಿವೆ.
ದಸರಾ ದರ್ಶನ
ಬೊಂಬೆಗಳ ಮೂಲಕವೇ ದಸರಾ ಸಂದರ್ಭದಲ್ಲಿ ಮೈಸೂರಿನ ಅಂದವನ್ನು ಹೆಚ್ಚಿಸುವ ಚೆಂದದ ನೋಟಗಳು, ರಾಜ ಮನೆತನದ ಸೊಬಗು, ಅಂಬಾರಿ ಆನೆ, ಅರಮನೆ ಅಂದ ಹೀಗೆ ಎಲ್ಲ ಬಗೆಯ ನೋಟಗಳನ್ನು ಗೊಂಬೆಗಳ ಮೂಲಕವೇ ಒದಗಿಸಿಕೊಡುವ ಪ್ರಯತ್ನವನ್ನೂ ಇಲ್ಲಿ ಕಾಣಬಹುದಾಗಿದೆ.
ಇದರೊಂದಿಗೆ ಚಾಮುಂಡಿಯ ಉತ್ಸವ ಮೂರ್ತಿ, ಕೇರಳದ ಚಂಡೆಮೇಳ, ನಾಟ್ಯ ಮಯೂರಿ, ವಾದಿ ರಾಜ ತೀರ್ಥರು, ಶಿರಸಿ ಮಾರಿಕಾಂಬಾ, ಗುರುರಾಯ, ಸಾಯಿ ಬಾಬಾ ಅವರ ಜೀವನ ಚರಿತ್ರೆ, ಆನೆ, ಕುದುರೆ, ಸಿಂಹ, ಹುಲಿಗಳ ಬೊಂಬೆಗಳು ಆಕರ್ಷಣೆಯ ಕೇಂದ್ರವಾಗಿವೆ.
ಸೆ. 8ರಂದು ಉದ್ಘಾಟನೆಯಾಗಿರುವ ರಾಮ್ಸನ್ಸ್ ಬೊಂಬೆಗಳ ಪ್ರದರ್ಶನವು ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯ ವರೆಗೆ ವರ್ಷ ಪೂರ್ತಿ ಇರಲಿದೆ.
ಹೆಚ್ಚಿನ ಮಾಹಿತಿಗಾಗಿ ರಘು ಧಮೇಂದ್ರ ದೂ. ಸಂ. 9880111625 ಅನ್ನು ಸಂಪರ್ಕಿಸಬಹುದು.
ಹನೂರು : ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30 ಕ್ವಿಂಟಾಲ್…
ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರು ಆದ ಕಾರಣ, ಇಂದು (ಡಿಸೆಂಬರ್ 17) ವಿಧಾನಸಭೆ ಅಧಿವೇಶನದಲ್ಲಿ…
ನಂಜನಗೂಡು : ದಕ್ಷಿಣ ಕಾಶಿ ಎಂದೇ ಹೆಸರಾಗಿರುವ, ಆದಾಯದಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಯದಲ್ಲಿ ಲಕ್ಷಾಂತರ ರೂ.…
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’…
ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೆ ಒಳಗಾದ ಚಿನ್ನಯ್ಯ ಕೊನೆಗೂ…
ಮಂಡ್ಯ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ಕೈಗಾರಿಕೆಯನ್ನು ತರುವರೋ ತರಲಿ. ಮಳವಳ್ಳಿ ಕ್ಷೇತ್ರದಲ್ಲಿ 400ರಿಂದ 500 ಎಕರೆ…