ಆಂದೋಲನ ಪುರವಣಿ

ನನ್ನ ಪ್ರೀತಿಯ ಮೇಷ್ಟ್ರು : ಗಣಿತ ಮೇಷ್ಟ್ರ ಹುಲಿ ಮುದ್ದು

ಗಣಿತ ಮೇಷ್ಟ್ರ ಹುಲಿ ಮುದ್ದು

ಬೀರಿಹುಂಡಿ ಶಾಲೆಯ ಶಿವಶಂಕರ್ ಸರ್ ಎಂದರೆ ಅಚ್ಚುಮೆಚ್ಚು ನನ್ನ ಪ್ರೀತಿಯ ಮೇಷ್ಟ್ರು

ಸಮಾಜ ಎಲ್ಲರನ್ನೂ ಗೌರವಿಸುತ್ತದೆ. ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವರು ಶಿಕ್ಷಕರು. ಅದರಲ್ಲಿಯೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಂತದಲ್ಲಿ ದೊರಕುವ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಪ್ರೀತಿ, ಗೌರವ. ನನ್ನ ಪಾಲಿಗೆ ಬೀರಿಹುಂಡಿಯ ಸರ್ಕಾರಿ ಪ್ರೌಢಶಾಲೆಯ ಲೆಕ್ಕದ ಮೇಷ್ಟ್ರಾಗಿದ್ದ ಶಿವಶಂಕರ್ (ಸಿಎಸ್) ಎಂದರೆ ಲೆಕ್ಕಕ್ಕೆ ಇಡಲಾಗದಷ್ಟು ಪ್ರೀತಿ, ಆದರ.

ಶಿವಶಂಕರ್ ಸರ್ ನಡಿಗೆಯಲ್ಲಿದ್ದ ಗಾಂಭೀರ್ಯ, ಮಾತಿನಲ್ಲಿದ್ದ ಗೈರತ್ತು ಯಾರನ್ನೂ ನಡುಗಿಸುವಂತದ್ದು. ವಿದ್ಯಾರ್ಥಿಗಳಾಗಿದ್ದ ನಮಗೆ ಅವರ ಬಗ್ಗೆ ಕೇಳಿಯೇ ಭಯ. ಮೊದಲೇ ಗಣಿತದ ಮೇಷ್ಟ್ರು, ಅರ್ಥವಾಗದ ವಿಚಾರದಲ್ಲಿ ಎಷ್ಟು ಪೆಟ್ಟು ತಿನ್ನಬೇಕೋ ಎನ್ನುವ ಭಯ.

ಕಲಿಯುವ ಆಸಕ್ತಿ ಇದ್ದ ಎಲ್ಲರಿಗೂ ಸಿಎಸ್ ಎಂದರೆ ಪ್ರೀತಿ. ಅವರು ಗದರುತ್ತಿದ್ದರು, ಬೆತ್ತದ ರುಚಿ ತೋರಿಸುತ್ತಿದ್ದರು. ಆದರೆ ಅದರ ಹಿಂದಿದ್ದ ಪ್ರೀತಿ ಇಂದಿಗೂ ನನ್ನ ಮತ್ತು ನಮ್ಮಂತವರ ಅಂತರಾಳದಲ್ಲಿ ಶಾಶ್ವತ ಸ್ಥಾನ ಪಡೆದಿದೆ.

ಹಿಂದೆಲ್ಲಾ ಸ್ಪರ್ಧೆಗಳಿಗೆ ಒಡ್ಡಿಕೊಳ್ಳದೇ ಇದ್ದ ನನ್ನನ್ನು ಒಮ್ಮೆ ಮೂರು ಕಾಲಿನ ಓಟದ ಸ್ಪರ್ಧೆಯಲ್ಲಿ ಭಾಗವಹಿಸು ಎಂದು ಸ್ನೇಹಿತನೊಂದಿಗೆ ಎಳೆದು ಮೈದಾನಕ್ಕೆ ಬಿಟ್ಟರು. ಸ್ಪರ್ಧೆಯಲ್ಲಿ ಗೆದ್ದೆ, ಬಹುಮಾನವನ್ನು ಪಡೆದೆ. ಅದೇ ನಾನು ಪಡೆದ ಮೊದಲ ಬಹುಮಾನ. ಅದು ಕೊಟ್ಟ ಸಂತೋಷಕ್ಕೆ ಮಿತಿ ಇಲ್ಲ.

ಪ್ರೌಢಶಾಲೆ ಮುಗಿಸಿ ಹೊರಬಿದ್ದ ಮೇಲೆ ಅವರೂ ಬೇರೆ ಬೇರೆ ಶಾಲೆಗಳಿಗೆ ವರ್ಗವಾದರು. ಹಲವಾರು ಬಾರಿ ಭೇಟಿಯಾಗಬೇಕು ಎಂದು ಅನ್ನಿಸಿದರೂ ನನ್ನ ವಯೋಮಿತಿ, ಪರಿಮಿತಿಗಳ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಇಂದಿನಂತೆ ಅಂದು ಸಂಪರ್ಕ ಸುಲಭ ಸಾಧ್ಯವಾಗಿರಲಿಲ್ಲವಲ್ಲಾ? ಹೀಗಿದ್ದರೂ ಒಂದೆರಡು ಬಾರಿ ಅವರ ಆಕಸ್ಮಿಕ ಭೇಟಿಯಾಗಿದೆ. ಅದೇ ಪ್ರೀತಿಯಿಂದ ನನ್ನನ್ನು ಮಾತನಾಡಿಸಿದ್ದಾರೆ. ಅವರ ಹುಲಿ ಮುದ್ದು ನನ್ನಲ್ಲಿ ಈಗಲೂ ಬೆಚ್ಚಗಿದೆ.

ಜಗತ್ತಿನಲ್ಲಿ ಇರುವ ದೊಡ್ಡ ಶಿಕ್ಷಕರ ಬಳಗದಲ್ಲಿ ನೀವೊಬ್ಬರ ಸಾಮಾನ್ಯ ಶಿಕ್ಷಕರು ಎನ್ನಿಸಿಕೊಂಡಿರಬಹುದು ಸಿಎಸ್ ಸರ್, ಆದರೆ ನನ್ನಂಥವರ ಪಾಲಿಗೆ ನೀವು ದೊಡ್ಡ ನಕ್ಷತ್ರ. ಬೆಲೆ ಕಟ್ಟಲಾಗದ ಮೇರು ಪರ್ವತ.

ಅವಿನಾಶ್ ಎಂ. ಜಿ.ಬಿ. ಸರಗೂರು

 

andolanait

Recent Posts

8 ಸಾವಿರ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ ; ವಾರದಲ್ಲಿ ಅಧಿಸೂಚನೆ : ಗೃಹ ಸಚಿವ ಪರಮೇಶ್ವರ

ಬೆಂಗಳೂರು : ಒಳಮೀಸಲಾತಿ ವಿವಾದ ಬಗೆಹರಿದಿರುವುದರಿಂದ ಒಂದು ವಾರದೊಳಗೆ 8 ಸಾವಿರ ಪೊಲೀಸ್ ಕಾನ್‌ಸ್ಟೆಬಲ್‌ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು…

3 hours ago

ಇರಾನ್‌ ಅಣ್ವಸ್ತ್ರ ಹೊಂದಲು ಬ್ರಿಟನ್‌ ರಾಜ ಚಾರ್ಲ್‌ ಬಯಸುವುದಿಲ್ಲ : ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್ : ಇರಾನ್ ಅಣ್ವಸ್ತ್ರ ಹೊಂದಲು ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಬಯಸುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್…

3 hours ago

ಜಾಮೀನಿಗಾಗಿ ಮತ್ತೆ ಸುಪ್ರೀಂ ಕದ ತಟ್ಟಿದ ನಟ ದರ್ಶನ್‌

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಈಗ ಎರಡನೇ ಬಾರಿ ಜಾಮೀನಿಗಾಗಿ…

6 hours ago

ಚಾ.ನಗರ | ಚಿನ್ನಾಭರಣಕ್ಕಾಗಿ ಮದುವೆ ಮನೆಯಲ್ಲಿ ಮಾರಮಾರಿ ; ಚಾಕು ಇರಿತ

ಚಾಮರಾಜನಗರ : ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಬೇಕಿದ್ದ ಹೊತ್ತಲ್ಲಿ ಚಿನ್ನಾಭರಣದ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ಹೋಗಿ, ಚಾಕು…

7 hours ago

ಕಾವೇರಿ ನದಿಯಲ್ಲಿ ನೀರಿನ ಹರಿವು ಇಳಿಮುಖ

ಬಿಸಿಲ ಝಳದಿಂದ ಕುಸಿಯುತ್ತಿರುವ ಅಂತರ್ಜಲ ಮಟ್ಟ ; ಮೇ ತಿಂಗಳಲ್ಲಿ ನೀರಿನ ಕೊರತೆ ಸಾಧ್ಯತೆ • ಕೆ.ಬಿ.ಶಂಶುದ್ದೀನ್ ಕುಶಾಲನಗರ :…

9 hours ago

ಅನಾಥ ಶವಗಳಿಗೆ ಗೌರವದ ವಿದಾಯ ಹೇಳುವ ಶರೀಫ್‌ ಚಾಚಾ

1992ರಲ್ಲಿ ಅಯೋಧ್ಯೆಯ ಬಾಬ್ರಿ ಮಸೀದಿ ಉರುಳಿಸಲ್ಪಟ್ಟ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆದ ಕೋಮು ಗಲಭೆಗಳಲ್ಲಿ 2,000ಕ್ಕೂ ಜನ ಸಾವಿಗೀಡಾದರು. ಅಯೋಧ್ಯೆಯಿಂದ 65ಕಿ.…

9 hours ago