ಆಂದೋಲನ ಪುರವಣಿ

ನನ್ನ ಪ್ರೀತಿಯ ಮೇಷ್ಟ್ರು : ಗಣಿತ ಮೇಷ್ಟ್ರ ಹುಲಿ ಮುದ್ದು

ಗಣಿತ ಮೇಷ್ಟ್ರ ಹುಲಿ ಮುದ್ದು

ಬೀರಿಹುಂಡಿ ಶಾಲೆಯ ಶಿವಶಂಕರ್ ಸರ್ ಎಂದರೆ ಅಚ್ಚುಮೆಚ್ಚು ನನ್ನ ಪ್ರೀತಿಯ ಮೇಷ್ಟ್ರು

ಸಮಾಜ ಎಲ್ಲರನ್ನೂ ಗೌರವಿಸುತ್ತದೆ. ಅದರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವರು ಶಿಕ್ಷಕರು. ಅದರಲ್ಲಿಯೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಂತದಲ್ಲಿ ದೊರಕುವ ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಪ್ರೀತಿ, ಗೌರವ. ನನ್ನ ಪಾಲಿಗೆ ಬೀರಿಹುಂಡಿಯ ಸರ್ಕಾರಿ ಪ್ರೌಢಶಾಲೆಯ ಲೆಕ್ಕದ ಮೇಷ್ಟ್ರಾಗಿದ್ದ ಶಿವಶಂಕರ್ (ಸಿಎಸ್) ಎಂದರೆ ಲೆಕ್ಕಕ್ಕೆ ಇಡಲಾಗದಷ್ಟು ಪ್ರೀತಿ, ಆದರ.

ಶಿವಶಂಕರ್ ಸರ್ ನಡಿಗೆಯಲ್ಲಿದ್ದ ಗಾಂಭೀರ್ಯ, ಮಾತಿನಲ್ಲಿದ್ದ ಗೈರತ್ತು ಯಾರನ್ನೂ ನಡುಗಿಸುವಂತದ್ದು. ವಿದ್ಯಾರ್ಥಿಗಳಾಗಿದ್ದ ನಮಗೆ ಅವರ ಬಗ್ಗೆ ಕೇಳಿಯೇ ಭಯ. ಮೊದಲೇ ಗಣಿತದ ಮೇಷ್ಟ್ರು, ಅರ್ಥವಾಗದ ವಿಚಾರದಲ್ಲಿ ಎಷ್ಟು ಪೆಟ್ಟು ತಿನ್ನಬೇಕೋ ಎನ್ನುವ ಭಯ.

ಕಲಿಯುವ ಆಸಕ್ತಿ ಇದ್ದ ಎಲ್ಲರಿಗೂ ಸಿಎಸ್ ಎಂದರೆ ಪ್ರೀತಿ. ಅವರು ಗದರುತ್ತಿದ್ದರು, ಬೆತ್ತದ ರುಚಿ ತೋರಿಸುತ್ತಿದ್ದರು. ಆದರೆ ಅದರ ಹಿಂದಿದ್ದ ಪ್ರೀತಿ ಇಂದಿಗೂ ನನ್ನ ಮತ್ತು ನಮ್ಮಂತವರ ಅಂತರಾಳದಲ್ಲಿ ಶಾಶ್ವತ ಸ್ಥಾನ ಪಡೆದಿದೆ.

ಹಿಂದೆಲ್ಲಾ ಸ್ಪರ್ಧೆಗಳಿಗೆ ಒಡ್ಡಿಕೊಳ್ಳದೇ ಇದ್ದ ನನ್ನನ್ನು ಒಮ್ಮೆ ಮೂರು ಕಾಲಿನ ಓಟದ ಸ್ಪರ್ಧೆಯಲ್ಲಿ ಭಾಗವಹಿಸು ಎಂದು ಸ್ನೇಹಿತನೊಂದಿಗೆ ಎಳೆದು ಮೈದಾನಕ್ಕೆ ಬಿಟ್ಟರು. ಸ್ಪರ್ಧೆಯಲ್ಲಿ ಗೆದ್ದೆ, ಬಹುಮಾನವನ್ನು ಪಡೆದೆ. ಅದೇ ನಾನು ಪಡೆದ ಮೊದಲ ಬಹುಮಾನ. ಅದು ಕೊಟ್ಟ ಸಂತೋಷಕ್ಕೆ ಮಿತಿ ಇಲ್ಲ.

ಪ್ರೌಢಶಾಲೆ ಮುಗಿಸಿ ಹೊರಬಿದ್ದ ಮೇಲೆ ಅವರೂ ಬೇರೆ ಬೇರೆ ಶಾಲೆಗಳಿಗೆ ವರ್ಗವಾದರು. ಹಲವಾರು ಬಾರಿ ಭೇಟಿಯಾಗಬೇಕು ಎಂದು ಅನ್ನಿಸಿದರೂ ನನ್ನ ವಯೋಮಿತಿ, ಪರಿಮಿತಿಗಳ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಇಂದಿನಂತೆ ಅಂದು ಸಂಪರ್ಕ ಸುಲಭ ಸಾಧ್ಯವಾಗಿರಲಿಲ್ಲವಲ್ಲಾ? ಹೀಗಿದ್ದರೂ ಒಂದೆರಡು ಬಾರಿ ಅವರ ಆಕಸ್ಮಿಕ ಭೇಟಿಯಾಗಿದೆ. ಅದೇ ಪ್ರೀತಿಯಿಂದ ನನ್ನನ್ನು ಮಾತನಾಡಿಸಿದ್ದಾರೆ. ಅವರ ಹುಲಿ ಮುದ್ದು ನನ್ನಲ್ಲಿ ಈಗಲೂ ಬೆಚ್ಚಗಿದೆ.

ಜಗತ್ತಿನಲ್ಲಿ ಇರುವ ದೊಡ್ಡ ಶಿಕ್ಷಕರ ಬಳಗದಲ್ಲಿ ನೀವೊಬ್ಬರ ಸಾಮಾನ್ಯ ಶಿಕ್ಷಕರು ಎನ್ನಿಸಿಕೊಂಡಿರಬಹುದು ಸಿಎಸ್ ಸರ್, ಆದರೆ ನನ್ನಂಥವರ ಪಾಲಿಗೆ ನೀವು ದೊಡ್ಡ ನಕ್ಷತ್ರ. ಬೆಲೆ ಕಟ್ಟಲಾಗದ ಮೇರು ಪರ್ವತ.

ಅವಿನಾಶ್ ಎಂ. ಜಿ.ಬಿ. ಸರಗೂರು

 

andolanait

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

18 hours ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

18 hours ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

18 hours ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

18 hours ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

18 hours ago