ಆಂದೋಲನ ಪುರವಣಿ

ನನ್ನ ಪ್ರೀತಿಯ ಮೇಷ್ಟು: ಪರಶುರಾಮ್ ಮತ್ತು ಸ್ಟ್ಯಾನ್ಲಿ ಎಂಬ ಅಣ್ಣಂದಿರ ಗರಡಿ

೧೮ ವರ್ಷಗಳಿಂದ ಒಡನಾಡಿಯ ಒಡನಾಟ ನನ್ನದು. ಅಲ್ಲಿ ಕಲಿದದ್ದು ಬೆಟ್ಟದಷ್ಟು. ಅಣ್ಣಂದಿರ ರೀತಿ, ಗುರುಗಳ ರೀತಿ ಇರುವ ಸ್ಟ್ಯಾನ್ಲಿ ಮತ್ತು ಪರಶುರಾಮ್ ಸರ್ ನನಗೆ ಮತ್ತು ನನ್ನಂಥವರಿಗೆ ಬೆಳಕು.

ಕಲೆ, ಸೇವೆ, ಕ್ರೀಡೆ, ಸಾಹಿತ್ಯ ಹೀಗೆ ಬದುಕಿನ ಎಲ್ಲ ಮಗ್ಗಲುಗಳನ್ನು ಒಡನಾಡಿಯಲ್ಲಿ ಕಲಿಯಲು ಅವಕಾಶ ಇದೆ. ಜೀವನವನ್ನು ಸಮಾಜಮುಖಿಯಾಗಿ ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ನನ್ನಿಬ್ಬರು ಗುರು ಸಮಾನರಾದ ಈ ಅಣ್ಣಂದಿರು ಪ್ರತಿ ಹಂತದಲ್ಲಿಯೂ ಹೇಳಿಕೊಡುತ್ತಿರುತ್ತಾರೆ.

ನಾನು ೫ನೇ ತರಗತಿಯಲ್ಲಿ ಇರಬೇಕಾದರೆ ಒಡನಾಡಿಯ ಒಡಲು ಸೇರಿದೆ. ಅದಾದ ಮೇಲೆ ಅಲ್ಲಿಂದಲೇ ಕಲಿತು ಈಗ ಅಲ್ಲಿಯೇ ಮಕ್ಕಳಿಗೆ ಕರಾಟೆ ಮತ್ತು ಯೋಗ ಕ್ಲಾಸ್ ಮಾಡುತ್ತಿದ್ದೇನೆ. ಇದಕ್ಕೆಲ್ಲವೂ ಈ ಇಬ್ಬರು ಅಣ್ಣಂದಿರೇ ಕಾರಣ.

ಒಡನಾಡಿಗೆ ಯಾರೇ ಹೊಸಬರು ಬಂದರೂ ಅವರನ್ನು ಮೋಟಿವೇಟ್ ಮಾಡುತ್ತಾರೆ. ಬದುಕು ಎಂದರೆ ಇಷ್ಟೆನಾ ಎಂದುಕೊಂಡವರಿಗೆ ಜೀವನ ಇಷ್ಟೊಂದು ಸುಂದರವಾಗಿದೆ ಎನ್ನುವಂತೆ ಮಾಡುತ್ತಾರೆ. ಅದು ಅವರ ಶಕ್ತಿ. ನಾನು ಅವರ ಕೆಲಸಗಳನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಮಾತುಗಳನ್ನು ಕೇಳಿ ಬೆಳೆದಿದ್ದೇನೆ. ಇದೀಗ ಅವರ ಹಾದಿಯನ್ನೇ ಹಿಡಿದಿದ್ದೇನೆ. ಇದು ನನ್ನ ಪಾಲಿನ ಅತಿ ದೊಡ್ಡ ಹೆಮ್ಮೆ.

ಪರಶುರಾಮ್, ಸ್ಟ್ಯಾನ್ಲಿ ಎನ್ನುವ ಹೆಸರುಗಳನ್ನು ನೆನೆದರೆ ನನಗೆ ಉತ್ಸಾಹ ಹೆಚ್ಚಾಗುತ್ತದೆ. ಸೋತು ನಿಂತೆ ಎನ್ನುವಾಗ ಅವರ ಹೆಸರನ್ನು, ಅವರ ಮಾತುಗಳನ್ನು ನೆನೆದುಕೊಂಡರೆ ಸಾಕು ಶಕ್ತಿ ಬಂದಂತಾಗುತ್ತದೆ. ಅಷ್ಟರ ಮಟ್ಟಿಗೆ ಅವರು ನನ್ನ ಪಾಲಿಗೆ ಯಶಸ್ವಿ ಗುರುಗಳು.

ಈಗ ನಾನು ಒಡನಾಡಿಯಲ್ಲಿ ಇಲ್ಲ. ಒಂದು ರೀತಿಯಲ್ಲಿ ಸಬಲೆಯಾಗಿ ನನ್ನ ತಾಯಿಯೊಂದಿಗೆ ಬದುಕುತ್ತಿದ್ದೇನೆ. ಈ ಸಬಲತೆಯ ಹಿಂದಿನ ಶಕ್ತಿ ನನ್ನ ಅಣ್ಣಂದಿರು.

ನನಗೆ ವಿಜ್ಞಾನದ ಬಗ್ಗೆ ಆಸಕ್ತಿ ಇತ್ತು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿಲ್ಲ ಎಂದು ನನಗೆ ಕಾಲೇಜಿನಲ್ಲಿ ಸೈನ್ಸ್‌ಗೆ ಸೀಟ್ ಸಿಗಲಿಲ್ಲ. ನಿರಾಶಳಾಗಿ ಕುಳಿತಿದ್ದಾಗ ನನಗೆ ಕಾಮರ್ಸ್ ತೆಗೆದುಕೋ ಎಂದು ಮಾರ್ಗದರ್ಶನ ಮಾಡಿ, ಅದರಲ್ಲಿಯೇ ಯಶ ಕಾಣುವಂತೆ ಮಾಡಿದವರು ಈ ಗುರು ದ್ವಯರು. ಅದೇ ರೀತಿ ಮಹಾಜನ ಕಾಲೇಜಿನಲ್ಲಿ ಸಿಕ್ಕ ನನ್ನ ಗುರು ಸುಮನಾ ಮೇಂಡ. ಅವರ ಸಲಹೆ, ಮಾರ್ಗದರ್ಶನವೂ ನನ್ನ ಪಾಲಿಗೆ ಅತಿ ಮುಖ್ಯವಾಗಿದೆ.

– ವರ್ಷ ಸರಸ್ವತಿ, ಚಾಮರಾಜನಗರ

andolana

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

18 hours ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

18 hours ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

18 hours ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

18 hours ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

18 hours ago