ಆಂದೋಲನ ಪುರವಣಿ

ನನ್ನ ಪ್ರೀತಿಯ ಮೇಷ್ಟು: ಪರಶುರಾಮ್ ಮತ್ತು ಸ್ಟ್ಯಾನ್ಲಿ ಎಂಬ ಅಣ್ಣಂದಿರ ಗರಡಿ

೧೮ ವರ್ಷಗಳಿಂದ ಒಡನಾಡಿಯ ಒಡನಾಟ ನನ್ನದು. ಅಲ್ಲಿ ಕಲಿದದ್ದು ಬೆಟ್ಟದಷ್ಟು. ಅಣ್ಣಂದಿರ ರೀತಿ, ಗುರುಗಳ ರೀತಿ ಇರುವ ಸ್ಟ್ಯಾನ್ಲಿ ಮತ್ತು ಪರಶುರಾಮ್ ಸರ್ ನನಗೆ ಮತ್ತು ನನ್ನಂಥವರಿಗೆ ಬೆಳಕು.

ಕಲೆ, ಸೇವೆ, ಕ್ರೀಡೆ, ಸಾಹಿತ್ಯ ಹೀಗೆ ಬದುಕಿನ ಎಲ್ಲ ಮಗ್ಗಲುಗಳನ್ನು ಒಡನಾಡಿಯಲ್ಲಿ ಕಲಿಯಲು ಅವಕಾಶ ಇದೆ. ಜೀವನವನ್ನು ಸಮಾಜಮುಖಿಯಾಗಿ ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ನನ್ನಿಬ್ಬರು ಗುರು ಸಮಾನರಾದ ಈ ಅಣ್ಣಂದಿರು ಪ್ರತಿ ಹಂತದಲ್ಲಿಯೂ ಹೇಳಿಕೊಡುತ್ತಿರುತ್ತಾರೆ.

ನಾನು ೫ನೇ ತರಗತಿಯಲ್ಲಿ ಇರಬೇಕಾದರೆ ಒಡನಾಡಿಯ ಒಡಲು ಸೇರಿದೆ. ಅದಾದ ಮೇಲೆ ಅಲ್ಲಿಂದಲೇ ಕಲಿತು ಈಗ ಅಲ್ಲಿಯೇ ಮಕ್ಕಳಿಗೆ ಕರಾಟೆ ಮತ್ತು ಯೋಗ ಕ್ಲಾಸ್ ಮಾಡುತ್ತಿದ್ದೇನೆ. ಇದಕ್ಕೆಲ್ಲವೂ ಈ ಇಬ್ಬರು ಅಣ್ಣಂದಿರೇ ಕಾರಣ.

ಒಡನಾಡಿಗೆ ಯಾರೇ ಹೊಸಬರು ಬಂದರೂ ಅವರನ್ನು ಮೋಟಿವೇಟ್ ಮಾಡುತ್ತಾರೆ. ಬದುಕು ಎಂದರೆ ಇಷ್ಟೆನಾ ಎಂದುಕೊಂಡವರಿಗೆ ಜೀವನ ಇಷ್ಟೊಂದು ಸುಂದರವಾಗಿದೆ ಎನ್ನುವಂತೆ ಮಾಡುತ್ತಾರೆ. ಅದು ಅವರ ಶಕ್ತಿ. ನಾನು ಅವರ ಕೆಲಸಗಳನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಮಾತುಗಳನ್ನು ಕೇಳಿ ಬೆಳೆದಿದ್ದೇನೆ. ಇದೀಗ ಅವರ ಹಾದಿಯನ್ನೇ ಹಿಡಿದಿದ್ದೇನೆ. ಇದು ನನ್ನ ಪಾಲಿನ ಅತಿ ದೊಡ್ಡ ಹೆಮ್ಮೆ.

ಪರಶುರಾಮ್, ಸ್ಟ್ಯಾನ್ಲಿ ಎನ್ನುವ ಹೆಸರುಗಳನ್ನು ನೆನೆದರೆ ನನಗೆ ಉತ್ಸಾಹ ಹೆಚ್ಚಾಗುತ್ತದೆ. ಸೋತು ನಿಂತೆ ಎನ್ನುವಾಗ ಅವರ ಹೆಸರನ್ನು, ಅವರ ಮಾತುಗಳನ್ನು ನೆನೆದುಕೊಂಡರೆ ಸಾಕು ಶಕ್ತಿ ಬಂದಂತಾಗುತ್ತದೆ. ಅಷ್ಟರ ಮಟ್ಟಿಗೆ ಅವರು ನನ್ನ ಪಾಲಿಗೆ ಯಶಸ್ವಿ ಗುರುಗಳು.

ಈಗ ನಾನು ಒಡನಾಡಿಯಲ್ಲಿ ಇಲ್ಲ. ಒಂದು ರೀತಿಯಲ್ಲಿ ಸಬಲೆಯಾಗಿ ನನ್ನ ತಾಯಿಯೊಂದಿಗೆ ಬದುಕುತ್ತಿದ್ದೇನೆ. ಈ ಸಬಲತೆಯ ಹಿಂದಿನ ಶಕ್ತಿ ನನ್ನ ಅಣ್ಣಂದಿರು.

ನನಗೆ ವಿಜ್ಞಾನದ ಬಗ್ಗೆ ಆಸಕ್ತಿ ಇತ್ತು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿಲ್ಲ ಎಂದು ನನಗೆ ಕಾಲೇಜಿನಲ್ಲಿ ಸೈನ್ಸ್‌ಗೆ ಸೀಟ್ ಸಿಗಲಿಲ್ಲ. ನಿರಾಶಳಾಗಿ ಕುಳಿತಿದ್ದಾಗ ನನಗೆ ಕಾಮರ್ಸ್ ತೆಗೆದುಕೋ ಎಂದು ಮಾರ್ಗದರ್ಶನ ಮಾಡಿ, ಅದರಲ್ಲಿಯೇ ಯಶ ಕಾಣುವಂತೆ ಮಾಡಿದವರು ಈ ಗುರು ದ್ವಯರು. ಅದೇ ರೀತಿ ಮಹಾಜನ ಕಾಲೇಜಿನಲ್ಲಿ ಸಿಕ್ಕ ನನ್ನ ಗುರು ಸುಮನಾ ಮೇಂಡ. ಅವರ ಸಲಹೆ, ಮಾರ್ಗದರ್ಶನವೂ ನನ್ನ ಪಾಲಿಗೆ ಅತಿ ಮುಖ್ಯವಾಗಿದೆ.

– ವರ್ಷ ಸರಸ್ವತಿ, ಚಾಮರಾಜನಗರ

andolana

Recent Posts

ಹೆಸರುಘಟ್ಟ ನೈಸರ್ಗಿಕ ಹುಲ್ಲುಗಾವಲು ಸಂರಕ್ಷಣೆಗೆ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಸರ್ಕಾರ ಕೆಲವು ತಿಂಗಳ ಹಿಂದೆ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿರುವ ಹೆಸರುಘಟ್ಟ ಕೆರೆ ಸೇರಿದಂತೆ 5678 ಎಕರೆ ಹುಲ್ಲುಗಾವಲು…

16 mins ago

ಕಾಸರಗೋಡು| ಹಳಿ ದಾಟುವಾಗ ರೈಲು ರಿಕ್ಕಿ: ಕೊಡಗು ಮೂಲದ ಯುವಕ ಸಾವು

ಕಾಸರಗೋಡು: ಹಳಿ ದಾಟುವಾಗ ಯುವಕ ಸಾವನ್ನಪ್ಪಿರುವ ಘಟನೆ ಕಾಸರಗೋಡು ನಿಲ್ದಾಣದಲ್ಲಿ ನಡೆದಿದೆ. ಕೊಡಗು ಜಿಲ್ಲೆ ಗೋಣಿಮಾಗೂರಿನ ಸೋಮವಾರಪುರದ ಚೆನ್ನಯ್ಯ ಅವರ…

25 mins ago

ಉತ್ತರ ಪ್ರದೇಶದಂತೆ ಬುಲ್ಡೋಜರ್‌ ಬಳಸಿ ಮುಸ್ಲಿಮರ ಮನೆ ಧ್ವಂಸ: ಕರ್ನಾಟಕದ ವಿರುದ್ಧ ಪಿಣರಾಯಿ ವಿಜಯನ್‌ ಆಕ್ರೋಶ

ಬೆಂಗಳೂರು: ಕರ್ನಾಟಕದಲ್ಲಿ ಬುಲ್ಡೋಜರ್‌ ಬಳಸಿ ಮುಸ್ಲಿಮರ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಕಾಂಗ್ರೆಸ್‌ ಸರ್ಕಾರದ…

34 mins ago

ಮೈಸೂರು | ಹೀಲಿಯಂ ಸ್ಫೋಟ ಪ್ರಕರಣ: ಶವಗಾರದಲ್ಲಿ ಮೃತ ಲಕ್ಷ್ಮಿಯ ಕುಟುಂಬಸ್ಥರ ಆಕ್ರಂದನ

ಮೈಸೂರು: ಅರಮನೆ ಮುಂಭಾಗ ಸಂಭವಿಸಿದ ಹೀಲಿಯಂ ಸ್ಫೋಟ ದುರಂತದಲ್ಲಿ ಮೃತಪಟ್ಟ ಬೆಂಗಳೂರಿನ ಲಕ್ಷ್ಮಿ ಅವರ ಮೃತದೇಹವನ್ನು ಶವಗಾರದಲ್ಲಿ ಇರಿಸಲಾಗಿದೆ. ಸುದ್ದಿ…

45 mins ago

ಮಂಡ್ಯ| ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಮಂಡ್ಯ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವಿಸ್‌ ರಸ್ತೆಯಲ್ಲಿ…

55 mins ago

ಕಥೆಗಾರ್ತಿ, ಖ್ಯಾತ ಅನುವಾದಕಿ ಸರಿತಾ ಜ್ಞಾನಾನಂದ ನಿಧನ

ಬೆಂಗಳೂರು: ಕನ್ನಡ ಕವಯತ್ರಿ, ಬರಹಗಾರ್ತಿ ಸರಿತಾ ಜ್ಞಾನಾನಂದ ಅವರು ಆರ್‌.ಆರ್.ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಲೇಖಕಿ, ಅನುವಾದಕಿಯಾಗಿದ್ದ ಸರಿತಾ ಅವರು…

1 hour ago