ಮಹಿಳೆ ಸಬಲೆ

ಪರಸ್ಪರ ಅರಿತು ಬಾಳಿದರೆ ಸ್ವರ್ಗ ಸುಖ

ಗಂಡ-ಹೆಂಡತಿ ಸಂಬಂಧ ಏಳೇಳು ಜನುಮದ ಅನುಬಂಧ ಎಂದು ಹೇಳಲಾಗುತ್ತದೆ. ಆದರೆ, ಇತ್ತೀಚಿನದಿನಗಳಲ್ಲಿ ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ವಿಷಯಗಳಿಗೂ ಮನಸ್ತಾಪ, ಜಗಳ, ಹೊಡೆದಾಟ, ಕೆಲವೊಮ್ಮೆ ಜಗಳ ತೀರಾ ಅತಿರೇಕಕ್ಕೆ ತಲುಪಿ ಜೀವ ತೆಗೆಯುವ ಹಂತಕ್ಕೆ ತಲುಪುತ್ತಿರುವುದನ್ನು ಕಾಣುತ್ತಿದ್ದೇವೆ.

ಹಿಂದಿನ ಅವಿಭಕ್ತ ಕುಟುಂಬಗಳಿಗೆ ಬದಲಾಗಿ, ನಾವಿಬ್ಬರು – ನಮಗಿಬ್ಬರು ಅಥವಾ ಒಬ್ಬರು, ಇಲ್ಲವೇ ಮಕ್ಕಳಾದರೆ ಸ್ವಚ್ಛಂದವಾಗಿರಲು ಆಗುವುದಿಲ್ಲ ಎಂಬ ಕಾರಣಕ್ಕೆ ಫ್ಯಾಮಿಲಿ ಪ್ಲಾನಿಂಗ್ ಹೆಸರಲ್ಲಿ ಮಕ್ಕಳನ್ನು ಮಾಡಿಕೊಳ್ಳುವುದನ್ನೇ ಮುಂದೂಡಿಕೆ ಮಾಡಿಕೊಳ್ಳುತ್ತಿದ್ದಾರೆ. ಇಂದಿನ ದಂಪತಿಗಳು ನಗರದ ವಿಲಾಸಿ ಜೀವನದ ಬದುಕಿಗೆ ಹಾತೊರೆಯುತ್ತಾ, ಇಬ್ಬರೂ ದುಡಿಯಲು ಹೋಗುತ್ತಾ ಒತ್ತಡಕ್ಕೆ ಸಿಲುಕಿ ವೈವಾಹಿಕ ಜೀವನ ಹಾಳು ಮಾಡಿ ಕೊಳ್ಳುತ್ತಿರುವ ಸಂಗತಿಗಳು ಅಪರೂಪವೇನಲ್ಲ.

ಗಂಡ-ಹೆಂಡತಿ ಪರಸ್ಪರ ಅರಿತು ಮುನ್ನಡೆದರೆ ಜೀವನ ಹಾಲು- ಜೇನಿನಂತಿರುತ್ತದೆ. ಆದರೆ, ನಗರ ಜೀವನದಲ್ಲಿ ಇಬ್ಬರೂ ದುಡಿಯಲು ಹೋಗುವುದರಿಂದ ಇಗೊ ಬೆಳೆಸಿಕೊಂಡು ಸಣ್ಣಪುಟ್ಟ ವಿಷಯಗಳಿಗೂ ಕಾಲು ಕೆರೆದು ಜಗಳವಾಡುವ ದಂಪತಿ ಅನೇಕ ಅವಾಂತರಗಳನ್ನು ಸೃಷ್ಟಿಸಿಕೊಂಡು,ಡಿವೋರ್ಸ್ ಹಂತಕ್ಕೆ ತಲುಪಿ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ವೈವಾಹಿಕ ಸಂಬಂಧ ಗಟ್ಟಿಯಾಗಿರಬೇಕೆಂದರೆ ಗಂಡ-ಹೆಂಡತಿ ನಡುವೆ ಭಾವನಾತ್ಮಕ ಬಾಂಧವ್ಯ ಖಂಡಿತವಾಗಿ ಇರಲೇಬೇಕು.

ಪರಸ್ಪರ ಅರಿತುಕೊಂಡು ಹೊಂದಾಣಿಕೆಯಿಂದ ಮುನ್ನಡೆದರೆ ಸುಖೀ ಜೀವನ ಸಾಧ್ಯ. ವಿಶೇಷವಾಗಿ ದಂಪತಿಗಳ ನಡುವೆ ಸಂವಹನ ಉತ್ತಮವಾಗಿರಬೇಕು. ಆಗ ವೈವಾಹಿಕ ಸಂಬಂಧವೂ ಗಟ್ಟಿಯಾಗಿರುತ್ತದೆ. ಹೊಗಳಿಕೆಗೆ ಬರ ಬೇಡ ಗಂಡ-ಹೆಂಡತಿ ನಡುವೆ ಪರಸ್ಪರ ಸಣ್ಣಪುಟ್ಟ ವಿಷಯಗಳಿಗೆ ಹೊಗಳಿಕೆಯ ಮಾತುಗಳನ್ನಾಡುತ್ತಿರಬೇಕು. ಹೀಗೆ ಮಾಡುವುದರಿಂದ ದಾಂಪತ್ಯದ ಬಾಂಧವ್ಯ ಇನ್ನಷ್ಟು ಬಲಗೊಳ್ಳುತ್ತದೆ. ಹೀಗಾಗಿ ದಂಪತಿಯ ನಡುವೆ ಸಣ್ಣಪುಟ್ಟ ಹೊಗಳಿಕೆಯ ಮಾತುಗಳಿಗೆ ಬರ ಬಾರದಿರಲಿ.

ಹೊಗಳಿಕೆಯ ಭರದಲ್ಲಿ ಪರಸ್ಪರ ಒಬ್ಬರಿ ಗೊಬ್ಬರು ಕಾಲೆಳೆಯುವ ಪ್ರಯತ್ನ ಬೇಡ. ಗಂಡನ ಆಸೆಗಳಿಗೆ ಹೆಂಡತಿ, ಹೆಂಡತಿಯ ಆಸೆಗಳಿಗೆ ಗಂಡ ಬೆಂಬಲ ಕೊಡುವುದನ್ನು ಮಾಡುತ್ತಿರಬೇಕು. ಈ ರೀತಿಯ ಸಕಾರಾತ್ಮಕ ಅಂಶಗಳು, ದಾಂಪತ್ಯ ಜೀವನವನ್ನು ಗಟ್ಟಿಗೊಳಿಸುತ್ತವೆ. ಎಷ್ಟೇ ಅನ್ಯೋನ್ಯವಾಗಿದ್ದರೂ ಹೆಂಡತಿಯಾದವಳು ಕೆಲ ವಿಷಯಗಳನ್ನು ಗಂಡನಿಂದ ಮುಚ್ಚಿಡುತ್ತಾಳಂತೆ. ದೈಹಿಕ ಅನ್ಯೋನ್ಯತೆ ಎಂದರೆ ಕೇವಲ ದೈಹಿಕ ಸಂಪರ್ಕವಲ್ಲ.

ನಿಮ್ಮ ಸಂಗಾತಿಯೊಂದಿಗಿನ ರಸಘಳಿಗೆಗಳನ್ನು ಆಸ್ವಾದಿಸಿರಿ. ಒಟ್ಟಿಗೇ ಪುಸ್ತಕ ಓದುವುದು, ಒಟ್ಟಿಗೇ ಸಿನಿಮಾ ನೋಡುವುದು ಹೀಗೆಲ್ಲಾ ಒಟ್ಟಿಗೇ ಸಮಯ ಕಳೆಯುವುದರಿಂದ ಸಂಬಂಧ ಬಲಗೊಳ್ಳುತ್ತದೆ. ಗುಣಮಟ್ಟದ ಸಮಯ ಕಳೆಯಿರಿ ಇತ್ತೀಚಿನ ವರ್ಷಗಳಲ್ಲಿ ಕುಟುಂಬದ ಭವಿಷ್ಯದ ಬಗ್ಗೆ ಚಿಂತೆ ಮಾಡುವುದರಿಂದ ದುಡಿಮೆ, ಸಂಪಾದನೆಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಗಂಡ-ಹೆಂಡತಿ ಪರಸ್ಪರ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಇದು ದಾಂಪತ್ಯ ದಲ್ಲಿ ವಿರಸಕ್ಕೆ ಕಾರಣವಾಗುತ್ತಿದೆ.

ಹೀಗಾಗಿ ಕುಟುಂಬಕ್ಕೂ ಒಂದಷ್ಟು ಸಮಯವನ್ನು ಮೀಸಲಿಡಿ. ವಾರಾಂತ್ಯಗಳಲ್ಲಿ ಪ್ರವಾಸಕ್ಕೆ ತೆರಳುವ, ಹೊರಗೆ ಡಿನ್ನರ್‌ಗೆ ಹೋಗುವ ಮೂಲಕ ಗಂಡ-ಹೆಂಡತಿ ಸಾಧ್ಯವಾದಷ್ಟು ಒಟ್ಟಿಗೇ ಸಮಯ ಕಳೆಯುವುದನ್ನು ರೂಢಿಸಿ ಕೊಳ್ಳಬೇಕು. ದಾಂಪತ್ಯ ಜೀವನ ಸುಖಮಯ ವಾಗಿರಲು ಇವು ಅನಿವಾರ್ಯ ಕೂಡ. ಪರಸ್ಪರ ನಂಬಿಕೆ ಇರಲಿ ಯಾವುದೇ ಸಂಬಂಧಗಳಲ್ಲಿ ನಂಬಿಕೆ ಎನ್ನುವುದು ಬಹಳ ಮುಖ್ಯ.

ಗಂಡ-ಹೆಂಡತಿಯ ನಡುವೆ ನಂಬಿಕೆ-ವಿಶ್ವಾಸ ಗಟ್ಟಿಯಾಗಿರಬೇಕು. ಹೀಗಿದ್ದಾಗ ಮಾತ್ರ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ. ಕಷ್ಟ-ಸುಖವನ್ನು ಅರಿತು ಮುನ್ನಡೆದಾಗ ಡಿವೋರ್ಸ್‌ಗೆ ಅಲ್ಲಿ ಆಧ್ಯತೆ ಬರುವುದಿಲ್ಲ. ಕುಡಿಯಲು ಹಣ ನೀಡಲಿಲ್ಲ, ಅಡುಗೆ ಸರಿಯಾಗಿ ಮಾಡಲಿಲ್ಲ, ಬೇಡವೆಂದರೂ ತವರು ಮನೆಗೆ ಹೋದಳು ಎಂಬ ಕ್ಷುಲ್ಲಕ ಕಾರಣಗಳಿಗೆ ಪತ್ನಿಯನ್ನು ಹೊಡೆದು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗುವ ವಿಷಯಗಳು ಈಗೀಗ ಸಾಮಾನ್ಯವಾಗಿವೆ. ತನ್ನ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಯೋಚನೆಯನ್ನೇ ಮಾಡದೆ ಕ್ಷಣಿಕ ಸುಖಕ್ಕಾಗಿ ಬೆಳೆಸುವ ಅಕ್ರಮ ಸಂಬಂಧಗಳು ಜೀವಕ್ಕೆ ಎರವಾಗುವುದು ಮಾತ್ರವಲ್ಲ, ಜೀವನವನ್ನೇ ಬಲಿ ಪಡೆದುಕೊಳ್ಳುತ್ತಿವೆ. ಹೀಗಾಗಿ ಗಂಡ- ಹೆಂಡತಿ ಅರಿತು ಬಾಳಿದರೆ ಸ್ವರ್ಗ ಸುಖ ಎಂಬುದರಲ್ಲಿ ಎರಡು ಮಾತಿಲ್ಲ.

ಆಂದೋಲನ ಡೆಸ್ಕ್

Recent Posts

ನೀಟ್‌ ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ರದ್ದು: ಸೆ.5ರ ಪ್ರತಿಭಟನೆ ಹಿಂಪಡೆದ ಸಿಜೆಪಿ

ನವದೆಹಲಿ: ಸೆಪ್ಟೆಂಬರ್‌ 5ರಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯನ್ನು ಹಿಂಪಡೆಯಲಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸುಪ್ರೀಂ ಕೋರ್ಟ್‌ಗೆ…

3 hours ago

ನೀಟ್‌ ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ ರದ್ದು

ನವದೆಹಲಿ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದೆ. ಜುಲೈನಲ್ಲಿ…

3 hours ago

ನೇಪಾಳ ಪ್ರವಾಹ | ಮೃತರ ಸಂಖ್ಯೆ 939ಕ್ಕೆ ಏರಿಕೆ, ಇನ್ನೂ ಸುಮಾರು 4,000 ಜನ ಕಣ್ಮರೆ

ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ ಮುಂದುವರಿದಿದ್ದು, ಮೃತರ ಸಂಖ್ಯೆ 939ಕ್ಕೆ ಏರಿಕೆಯಾಗಿದೆ. ಇನ್ನೂ ಸುಮಾರು 4 ಸಾವಿರ ಜನರು…

5 hours ago

ಮಡಿಕೇರಿ: ಕೆರೆಗೆ ಹಾರಿ ತಾಯಿ ಮಗಳು ಆತ್ಮಹತ್ಯೆ

ಮಡಿಕೇರಿ: ತಲಕಾವೇರಿ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ತಾಯಿ ಮತ್ತು ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.…

5 hours ago

ಮಡಿಕೇರಿ: ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ!

ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ ಆತಂಕ ಮೂಡಿಸಿದೆ. ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾಮದ ಪೊಲಮಾನಿ…

5 hours ago

ಓದುಗರ ಪತ್ರ: ನೀರು ಸೋರಿಕೆ ತಡೆಗಟ್ಟಿ

ಮೈಸೂರಿನ ಚಾಮರಾಜ ಮೊಹದ ಸೋನಾರ್ ಬೀದಿಯಲ್ಲಿ ಸಾರ್ವಜನಿಕ ನಲ್ಲಿಗೆ ಸಂಪರ್ಕ ಕಲ್ಪಿಸುವ ಪೈಪ್ ಪಡೆದುಹೋಗಿದ್ದು, ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.…

13 hours ago