ಮಹಿಳೆ ಸಬಲೆ

ಭೀಮ’ದ ಪೊಲೀಸ್ ಮೈಸೂರಿನ ಪ್ರಿಯಾ

 ಪ್ರಶಾಂತ್ ಎಸ್.

‘ಆಂದೋಲನ’ದೊಂದಿಗೆ ಸಿನಿಮಾಪಯಣದ ಅನುಭವ ಹಂಚಿಕೊಂಡ ಪ್ರಿಯಾ

‘ಸಲಗ’ ಚಿತ್ರದ ಯಶಸ್ಸಿನ ಬಳಿಕ ವಿಭಿನ್ನ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು, ನಟ ದುನಿಯಾ ವಿಜಯ್ ನಿರ್ದೇಶನ ಮಾಡಿದ ಚಿತ್ರ ‘ಭೀಮ’. ಯುವ ಸಮೂಹ ಹೇಗೆ ಡ್ರಗ್ಸ್ ಜಾಲಕ್ಕೆ ಸಿಲುಕಿ ನರಳುತ್ತಿದೆ ಎಂಬುದನ್ನು ಈ ಚಿತ್ರದಲ್ಲಿ ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಚಿತ್ರದ ಹಲವು ಪಾತ್ರಗಳು ಪ್ರೇಕ್ಷಕರ ಮನ ಗೆದ್ದಿವೆ. ಗಿಲಿಗಿಲಿ ಚಂದ್ರು, ಗಿರಿಜಾ, ಬ್ಲಾ ಕ್ ಡ್ರಾಗನ್, ಆಯಶ್ ಮೆಲೋ, ಶುಂಠಿ… ಹೀಗೆ ಹೊಸ ಹೊಸ ಪಾತ್ರಗಳನ್ನು, ನಟರನ್ನು ವಿಜಯ್ ಈ ಚಿತ್ರದಲ್ಲಿ ಪರಿಚಯಿಸಿದ್ದಾರೆ. ಇವುಗಳ ಪೈಕಿ ಹೆಚ್ಚು ಗಮನ ಸೆಳೆದಿದ್ದು, ರಂಗಭೂಮಿ ಕಲಾವಿದೆ ಪ್ರಿಯಾರವರು ಜೀವತುಂಬಿದ ಖಡಕ್ ಪೊಲೀಸ್ ಆಫೀಸರ್ ಪಾತ್ರ.

ಪ್ರಿಯಾ ಮೈಸೂರಿನವರು. ಮೂಲತಃ ರಂಗಭೂಮಿ ಕಲಾವಿದೆ. ೨೦೦೮ರಿಂದ ರಂಗಭೂಮಿ ಪಯಣ ಆರಂಭಿಸಿದ ಪ್ರಿಯಾ, ಮೈಸೂರಿನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಮಂಡ್ಯ ರಮೇಶ್‌ರವರ ಗರಡಿಯಲ್ಲಿ ‘ನಟನ’ದಲ್ಲಿ ರಂಗತರಬೇತಿ ಪಡೆದರು. ಬಳಿಕ ೨೦೧೫ರಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ ಪ್ರಿಯಾ ಸಿನಿಮಾಗಳಲ್ಲಿ ನಟಿಸತೊಡಗಿದರು.

ಚಿಕ್ಕಂದಿನಿಂದಲೂ ಚಿತ್ರಕಲೆ, ನೃತ್ಯ, ಕಥೆ ಹೇಳುವುದರಲ್ಲಿ ಆಸಕ್ತಿ ಹೊಂದಿದ್ದ ಪ್ರಿಯಾರನ್ನು ಅವರ ತಾಯಿ ‘ನಟನ’ ಆಯೋಜಿಸುತ್ತಿದ್ದ ‘ರಜಾಮಜಾ’ ಬೇಸಿಗೆ ಶಿಬಿರಕ್ಕೆ ಸೇರಿಸಿದರು. ನಂತರ ಸ್ವಯಂ ಸೇವಕಿಯಾಗಿ ‘ನಟನ’ ಸೇರಿದ ಬಳಿಕ ಅಲ್ಲಿ ನಡೆಯುತ್ತಿದ್ದ ನಾಟಕಗಳು ಅವರ ಮೇಲೆ ಹೆಚ್ಚಿನ ಪರಿಣಾಮ ಬೀರಿದವು. ತಮ್ಮೊಳಗೂ ನಟನಾ ಸಾಮರ್ಥ್ಯವಿದೆ. ಉತ್ತಮ ತರಬೇತಿ ಸಿಕ್ಕರೆ ತಾವೂ ಒಬ್ಬ ಅದ್ಭುತ ನಟಿಯಾಗಬಹುದು ಎಂಬುದನ್ನು ಅರಿತ ಪ್ರಿಯಾ ತಮ್ಮಲ್ಲಿದ್ದ ನಟನೆಯ ಕನಸನ್ನು ಮಂಡ್ಯ ರಮೇಶ್ ರವರ ಜೊತೆ ಹಂಚಿಕೊಂಡರು. ಬಳಿಕ ಅವರ ಬಳಿ ತರಬೇತಿ ಪಡೆದು ಕಲಾವಿದೆಯಾಗಿ ಹೊರಹೊಮ್ಮಿದರು.

ಕಳೆದ ೧೪ ವರ್ಷಗಳಿಂದಲೂ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪ್ರಿಯಾ ‘ಭೀಮಾ’ ಚಿತ್ರಕ್ಕೂ ಮೊದಲು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸತ್ಯಪ್ರಕಾಶ್ ನಿರ್ದೇಶನದ ‘ರಾಮಾ ರಾಮಾ ರೇ’, ಚೇಸ್’ ಹಾಗೂ ಮಂಸೋರೆಯವರ ‘೧೯-೨೦-೨೧’, ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ‘ಒಂದಲ್ಲಾ ಎರಡಲ್ಲಾ’ ಸಿನಿಮಾದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೆ ‘ಲಕ್ಷಣ’ ಎಂಬ ಧಾರಾವಾಹಿ ಯಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ರಂಗಭೂಮಿಯ ಬಗ್ಗೆ ಅಪಾರ ಒಲವು ಹೊಂದಿರುವ ಪ್ರಿಯಾ, ರಂಗಭೂಮಿಯಲ್ಲಿ ಕಲಿಯಲು ಅವಕಾಶಗಳು ಹೆಚ್ಚಿವೆ. ಒಂದು ನಾಟಕವನ್ನು ಮತ್ತೆ ಮತ್ತೆ ಪ್ರದರ್ಶಿಸು ವುದರಿಂದ, ಒಂದು ಪ್ರದರ್ಶನದಿಂದ ಮತ್ತೊಂದು ಪ್ರದರ್ಶನಕ್ಕೆ ನಟನಾ ಕೌಶಲವನ್ನು ಸುಧಾರಿಸಿಕೊಳ್ಳಬಹುದು. ಸಿನಿಮಾ ಮತ್ತು ಕಿರುತೆರೆ ಎರಡೂ ವಿಭಿನ್ನ ಅನುಭವ ನೀಡುತ್ತವೆ.

ರಂಗಭೂಮಿಯಲ್ಲಿ ಕಲಿತ ಕೌಶಲವನ್ನು ಸಿನಿಮಾ ಮತ್ತು ಕಿರುತೆರೆಯಲ್ಲಿ ಪ್ರದರ್ಶಿಸಬೇಕು. ಇಲ್ಲಿ ಒಮ್ಮೆ ದಾಖಲಾದ ನಟನೆ ಶಾಶ್ವತವಾಗಿರುತ್ತದೆ. ಹಾಗಾಗಿ ನಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಬೇಕು ಎನ್ನುವುದು ಪ್ರಿಯಾರ ಮಾತು. ‘ಭೀಮ’ ಪ್ರಿಯಾರಿಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟ ಚಿತ್ರ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿರುವುದರ ಕುರಿತು ಹೆಮ್ಮೆಪಡುವ ಅವರು, ‘ನನಗೆ ಚಿಕ್ಕಂದಿನಿಂದಲೂ ಪೊಲೀಸ್ ಆಗಬೇಕು ಎಂಬ ಬಯಕೆ ಇತ್ತು. ಆ ಆಸೆ ಸಿನಿಮಾ ಮೂಲಕ ಈಡೇರಿದೆ. ಖಡಕ್ ಪೊಲೀಸ್ ಇನ್‌ಸ್ಪೆಕ್ಟರ್ ಗಿರಿಜಾ ಪಾತ್ರದಲ್ಲಿ ನಟಿಸಿದ್ದು, ಬಹಳ ಸಂತೋಷ ತಂದಿದೆ. ಚಿತ್ರೀಕರಣ ಲೈವ್ ಲೊಕೇಷನ್‌ಗಳಲ್ಲಿ ಇರುತ್ತಿದ್ದ ಕಾರಣ ನಾನು ಮನೆಯಿಂದಲೇ ಪೊಲೀಸ್ ಯೂನಿಫಾರ್ಮ್ ಧರಿಸಿ ಹೊರಡುತ್ತಿದ್ದೆ. ಜನರ ನಡುವೆಯೇ, ಅವರಿಗೆ ಗೊತ್ತಾಗದಂತೆ ಹಲವೆಡೆ ಚಿತ್ರೀಕರಣ ಮಾಡಿದ್ದೇವೆ. ಈ ವೇಳೆ ಅನೇಕರು ನನ್ನನ್ನು ಪೊಲೀಸ್ ಅಂದುಕೊಂಡು ಸಲ್ಯೂಟ್ ಮಾಡಿದ್ದೂ ಇದೆ. ಟ್ರಾಫಿಕ್ ಜಾಮ್ ಆದಾಗ ದಾರಿ ಮಾಡಿಕೊಟ್ಟಿದ್ದೂ ಇದೆ. ಹಾಗಂತ ನಾನೆಲ್ಲೂ ಅದನ್ನು ದುರುಪಯೋಗ ಮಾಡಿಕೊಂಡಿಲ್ಲ. ಖಾಕಿ ಸಮವಸ್ತ್ರದ ಶಕ್ತಿ ಏನು? ಎಂಬುದರ ಅರಿವು ಈ ಅನುಭವ ಗಳಿಂದಾಗಿದೆ ಎನ್ನುತ್ತಾರೆ ಪ್ರಿಯಾ.

ರಂಗಭೂಮಿಯಲ್ಲಿ ಏಕವ್ಯಕ್ತಿ ನಾಟಕದಲ್ಲಿ ಅಭಿನಯಿಸಬೇಕು ಎಂದುಕೊಂಡಿರುವ ಪ್ರಿಯಾ ಮಹಿಳಾ ಪ್ರಧಾನ ಕಥೆಯನ್ನು ಹುಡುಕುತ್ತಿದ್ದು, ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಬಿಡುವು ಮಾಡಿಕೊಂಡು ಮತ್ತೆ ರಂಗಭೂಮಿಯಲ್ಲಿ ನಟಿಸುವ ಉತ್ಸಾಹ ವ್ಯಕ್ತಪಡಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಸಿಎಂ ಬದಲಾವಣೆ ವಿಚಾರ: ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಈ ವಿಷಯದಲ್ಲಿ ಹೈಕಮಾಂಡ್‌ ತೀರ್ಮಾನವೇ…

5 mins ago

ವಿಶ್ವ ರೈತ ಸಮಾವೇಶಕ್ಕೆ ತೆರಳುತ್ತಿದ್ದ ವಾಹನ ಪಲ್ಟಿ: 30 ಮಂದಿಗೆ ಗಾಯ

ಬೆಳಗಾವಿ: ಮೈಸೂರಿನಲ್ಲಿ ನಡೆಯುವ ವಿಶ್ವ ರೈತ ಸಮಾವೇಶಕ್ಕೆ ತೆರಳುತ್ತಿದ್ದ ವಾಹನ ಪಲ್ಟಿಯಾಗಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬೈಲಹೊಂಗಲ…

15 mins ago

ಅಯ್ಯಪ್ಪಸ್ವಾಮಿ ಭಕ್ತರಿಗೆ ಮುಖ್ಯ ಮಾಹಿತಿ: ಡಿಸೆಂಬರ್.‌27ರಂದು ಶಬರಿಮಲೆಯಲ್ಲಿ ಮಂಡಲ ಪೂಜೆ

ಕೇರಳ: ಶ್ರೀಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಡಿಸೆಂಬರ್.‌27ರಂದು ಅಯ್ಯಪ್ಪ ಸ್ವಾಮಿಗೆ ಮಂಡಲ ಪೂಜೆ ನೆರವೇರಿಸಲಾಗುವುದು. ಅಂದು ಬೆಳಿಗ್ಗೆ 10.10ರಿಂದ 11.30ರವರೆಗಿನ…

31 mins ago

ಕಿಚ್ಚ ಸುದೀಪ್‌ ಯುದ್ಧದ ಮಾತಿಗೆ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಟಾಂಗ್‌

ನಟ ಕಿಚ್ಚ ಸುದೀಪ್‌ ಅಭಿನಯದ ಮಾರ್ಕ್ ಡಿಸೆಂಬರ್.‌25ರಂದು ಬಿಡುಗಡೆಯಾಗಲಿದೆ. ಹುಬ್ಬಳ್ಳಿಯಲ್ಲಿ ನಡೆದ ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ ಕಾರ್ಯಕ್ರಮದಲ್ಲಿ ಸುದೀಪ್‌…

1 hour ago

ಸಮ ಸಮಾಜಕ್ಕಾಗಿ ಬಡಿದಾಡಿದ ಸಮಾಜವಾದಿಯ ಕತೆ

ಉಳ್ಳವರ ಕೈಯಿಂದ ಉಳುವವನ ಕೈಗೆ ಭೂಮಿ ಕೊಡಿಸಲು ನಡೆಸಿದ ಹೋರಾಟ ಸಣ್ಣದೇ? ಬಾನಂದೂರು ರಂಗಪ್ಪ ತಣ್ಣಗೆ ಕಿಟಕಿಯಾಚೆ ನೋಡಿದರು. ಮನೆಯೊಳಗೆ…

2 hours ago

ದ್ವೇಷ ಕಾರುವವರಿಗೆ ಬೀಳಲಿದೆಯೇ ಕಡಿವಾಣ?

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಪ್ರಬಲ ವಿರೋಧದ ನಡುವೆಯೂ ಕಾಂಗ್ರೆಸ್ ಸರ್ಕಾರ, ಕರ್ನಾಟಕ…

2 hours ago