Andolana originals

ಜೀವವೂ ಉಳಿಯಬೇಕು, ಜೀವನೋಪಾಯವೂ ನಡೆಯಬೇಕು

ಸಫಾರಿ ಪುನಾರಂಭದ ಸಂಬಂಧ ‘ಆಂದೋಲನ’ ದಿನಪತ್ರಿಕೆಯು ನಡೆಸಿದ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಇದಕ್ಕೆ ಪೂರಕವಾಗಿ ಪತ್ರಿಕೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಆಡಳಿತಾತ್ಮಕ ನಿರ್ಧಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಆಂದೋಲನ: ಕಾಡಿನ ಮೇಲೆ ಒತ್ತಡ ಹೆಚ್ಚಾದರೆ ವನ್ಯಪ್ರಾಣಿಗಳು ಕಾಡಿನಿಂದ ಹೊರಬರುತ್ತವೆ ಅಲ್ಲವೇ? ಆದರೂ ಸಫಾರಿಗೆ ಮತ್ತೆ ಅನುಮತಿ ನೀಡಿದ್ದೀರಿ ಏಕೆ?

ಈಶ್ವರ ಖಂಡ್ರೆ: ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರು ವನ್ಯಜೀವಿ ಸಂರಕ್ಷಣಾ ಕಾಯಿದೆ ೧೯೭೨ ಜಾರಿಗೆ ತರುವವರೆಗೆ ಅರಣ್ಯಗಳು ಬೇಟೆ ಮತ್ತು ಮೋಜಿನ ತಾಣಗಳಾಗಿದ್ದವು. ೧೯೭೨ರ ಬಳಿಕ ವನ್ಯಜೀವಿಗಳ ಸಂರಕ್ಷಣೆ ಆಗುತ್ತಿದೆ. ನಾನು ಸಚಿವ ನಾದ ಮೇಲೆ ಸಫಾರಿಯನ್ನು ಆರಂಭ ಮಾಡಿಲ್ಲ ಎಂಬುದನ್ನು ಮೊದಲು ಸ್ಪಷ್ಟಪಡಿಸುತ್ತೇನೆ. ೧೯೮೦ರ ದಶಕದ ಆದಿಯಲ್ಲಿ ನಾಗರಹೊಳೆಯಲ್ಲಿ ಮೊದಲ ಬಾರಿಗೆ ಪರಿಸರ ಪ್ರವಾಸೋದ್ಯಮ ಆರಂಭವಾಯಿತು. ಜಂಗಲ್ ಲಾಡ್ಜ್ ನಿರ್ಮಾಣದೊಂದಿಗೆ ಸಫಾರಿ ನಡೆಯುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲೂ ಸಫಾರಿ ಇದೆ. ಹುಲಿ ದಾಳಿಯಿಂದ ಸರಣಿ ಸಾವುಗಳು ಸಂಭವಿಸಿ ದಾಗ ನಾನೇ ಸ್ವತಃ ನಿರ್ಣಯ ಕೈಗೊಂಡು ಮುಂದಿನ ಆದೇಶದವರೆಗೆ ಸಫಾರಿ ಸ್ಥಗಿತಗೊಳಿಸಲು ಆದೇಶ ನೀಡಿ, ಸಫಾರಿ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ಬಳಸಲು ಸೂಚಿಸಿದ್ದೆ. ಇದೇ ಮೊದಲ ಬಾರಿಗೆ ೨೨ಕ್ಕೂ ಹೆಚ್ಚು ಹುಲಿಗಳನ್ನು ಸೆರೆ ಹಿಡಿಯಲಾಗಿದೆ. ಈಗ ಪರಿಸ್ಥಿತಿ ಸುಧಾರಿಸಿದೆ. ಹುಲಿಗಳ ಸಂಚಾರವಿದ್ದ ಸ್ಥಳದಲ್ಲಿ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ನಂತರ ೧೦೦ ದಿನಗಳು ಕಳೆದ ಮೇಲೆ ತಜ್ಞರ ವರದಿ ಮತ್ತು ಇಲಾಖೆಗೆ ಬಂದ ಮನವಿಗಳನ್ನು ಆಧರಿಸಿ, ಮುಖ್ಯಮಂತ್ರಿಗಳ ನೇತೃತ್ವದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಎಲ್ಲರ ಸಹಮತದೊಂದಿಗೆ ಸಫಾರಿ ಪುನಾರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇ ಶನ, ಸುಪ್ರೀಂ ಕೋರ್ಟ್ ಆದೇಶ ಪಾಲನೆಯೊಂದಿಗೆ ಸಫಾರಿ ಪುನಾರಂಭಿಸಲು ಸೂಚಿಸಿದ್ದೇನೆ. ಇನ್ನು ಸಫಾರಿಯಿಂದ ವನ್ಯಜೀವಿಗಳು ಕಾಡಿನಿಂದ ಹೊರಬರುತ್ತಿವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಆಂದೋಲನ: ಸಫಾರಿಯನ್ನು ವಾರದಲ್ಲಿ ೨-೩ ದಿನಗಳು ಮಾತ್ರ ಮಾಡಬಹುದಲ್ಲವೇ?

ಈಶ್ವರ ಖಂಡ್ರೆ: ಜೀವನವೂ ಇರಬೇಕು, ಜೀವವೂ ಉಳಿಯಬೇಕು, ಜೀವನೋಪಾಯವೂ ನಡೆಯ ಬೇಕು. ಹೀಗಾಗಿ ನಿರ್ಬಂಽತ ಮತ್ತು ಷರತ್ತುಬದ್ಧವಾಗಿ ಸಫಾರಿ ಪುನಾರಂಭಿಸಲಾಗಿದೆ. ಸಫಾರಿ ವಾಹನಗಳ ಸಂಖ್ಯೆ ಮತ್ತು ಸಮಯವನ್ನೂ ಕಡಿತ ಮಾಡಲಾಗಿದೆ. ಮಿಗಿಲಾಗಿ ಪ್ರವಾಸೋದ್ಯಮದಿಂದ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಸ್ಥಳೀಯರಿಗೂ ಜೀವನೋಪಾಯ ಆಗುತ್ತದೆ. ರೈತರಿಗೆ ತಾವು ಬೆಳೆದ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲೂ ಅವಕಾಶ ಲಭಿಸುತ್ತದೆ. ರಸ್ತೆಯಲ್ಲಿ ಹಣ್ಣು, ತರಕಾರಿ, ಎಳನೀರು ಮಾರುವವರು, ಹೋಟೆಲ್ ಇತ್ಯಾದಿಗಳಿಗೂ ಅನುಕೂಲ ಆಗುತ್ತದೆ.

ಆಂದೋಲನ: ನಾಗರಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿಯ ಆದಾಯದಲ್ಲಿ ಎಷ್ಟು ಹಣವನ್ನು ಯಾವ್ಯಾವ ಕಾರ್ಯಗಳಿಗೆ ವೆಚ್ಚ ಮಾಡುತ್ತೀರಿ?

ಈಶ್ವರ ಖಂಡ್ರೆ: ಸಫಾರಿಯಿಂದ ಬರುವ ಆದಾಯದಲ್ಲಿ ಶೇ.೩೫ರಷ್ಟು ಹಣವನ್ನು ಸ್ಥಳೀಯ ಜನರು ಮತ್ತು ಕಾಡಿನಂಚಿನ ಗ್ರಾಮಗಳ ಕಲ್ಯಾಣಕ್ಕೆ ಬಳಸುವಂತೆ ನಾನು ಆದೇಶ ನೀಡಿದ್ದೇನೆ. ಈ ಹಣದಿಂದ ಮೇವು ಬೆಳೆಸಿ ರೈತರಿಗೆ ನೀಡಲು, ಕಾಡಿನಂಚಿನ ಗ್ರಾಮಗಳ ಮೂಲಸೌಕರ್ಯ ವರ್ಧನೆ, ಯುವಜನರಿಗೆ ಕೌಶಲ ತರಬೇತಿ ನೀಡಲು, ಕಾಡಿನಂಚಿನ ಗ್ರಾಮದ ಶಾಲೆಗಳ ಅಭಿವೃದ್ಧಿ ಇತ್ಯಾದಿಗೆ ಬಳಕೆ ಮಾಡಲಾಗುವುದು.

ಆಂದೋಲನ: ಅರಣ್ಯ ಇಲಾಖೆಯಲ್ಲಿ ಇತ್ತೀಚೆಗೆ ತಜ್ಞರ ಸಮಿತಿಗಳಲ್ಲಿ ಕನ್ನಡಿಗರನ್ನು ಕಡೆಗಣಿಸಿ, ಬೇರೆ ರಾಜ್ಯಗಳ ತಜ್ಞರನ್ನು ಸಮಿತಿಗಳಿಗೆ ನೇಮಿಸುವುದು ಹೆಚ್ಚಾಗಿದೆ ಏಕೆ?

ಈಶ್ವರ ಖಂಡ್ರೆ: ತಜ್ಞರ ಸಮಿತಿಯಲ್ಲಿ ರಾಜ್ಯದ ಉನ್ನತಾಧಿಕಾರಿಗಳೂ ಇದ್ದಾರೆ. ಅವರ ಜೊತೆಗೆ ಡೆಹರಾಡೂನ್ ನಲ್ಲಿರುವ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸ್ವಾಯತ್ತ ಸಂಸ್ಥೆಯಾದ ಭಾರತೀಯ ವನ್ಯಜೀವಿ ಸಂಸ್ಥೆ ಮತ್ತು ಭೋಪಾಲ್‌ನ ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆ ತಜ್ಞರ ನೆರವು ಪಡೆಯಲಾಗಿದೆ. ಈ ಸಂಸ್ಥೆಯ ತಜ್ಞರ ನೆರವನ್ನು ದೇಶದ ಎಲ್ಲ ರಾಜ್ಯಗಳೂ ಪಡೆಯುತ್ತವೆ. ಇಲ್ಲಿ ಕನ್ನಡಿಗರನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಆಂದೋಲನ: ಕಾಡಂಚಿನ ರೆಸಾರ್ಟ್‌ಗಳಲ್ಲಿ ಇತ್ತೀಚೆಗೆ ಮೋಜು, ಮಸ್ತಿ ಹೆಚ್ಚಾಗಿದೆ. ಗದ್ದಲ ಅಧಿಕವಾಗಿದೆ. ಇದರಿಂದ ವನ್ಯಜೀವಿಗಳಿಗೆ ತೊಂದರೆಯಲ್ಲವೇ? ಇದನ್ನು ತಡೆಯಲು ಕ್ರಮವೇನು?

ಈಶ್ವರ ಖಂಡ್ರೆ: ಕಾಡಿನಂಚಿನ ರೆಸಾರ್ಟ್‌ಗಳಿಗೆ ಅನುಮತಿ ನೀಡುವುದು ಪ್ರಾದೇಶಿಕ ಆಯುಕ್ತರೇ ಹೊರತು ಅರಣ್ಯ ಇಲಾಖೆ ಅಲ್ಲ. ಈ ರೆಸಾರ್ಟ್ಗಳಿಂದ ವನ್ಯಜೀವಿಗಳಿಗೆ ತೊಂದರೆ ಆಗುತ್ತಿದೆ ಎಂದು ಕಂಡುಬಂದರೆ ಈ ಬಗ್ಗೆ ಪರಿಶೀಲಿಸಿ, ಪ್ರಾದೇಶಿಕ ಆಯುಕ್ತರ ನೇತೃತ್ವದ ಸಮಿತಿಗೆ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲು ಸೂಚಿಸಲಾಗುವುದು.

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮುತ್ತತ್ತಿ ನದಿ ಬಳಿ ಪೊಲೀಸರನ್ನು ನಿಯೋಜಿಸಿ

ಮಂಡ್ಯ ಜಿಲ್ಲೆಯ ಮುತ್ತತ್ತಿಯಲ್ಲಿ ಕಾವೇರಿ ನದಿ ನೀರಿಗೆ ಇಳಿದು ಸೆಲ್ಛಿ ತೆಗೆದುಕೊಳ್ಳಲು ಹೋದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು…

3 hours ago

ಓದುಗರ ಪತ್ರ: ಚಪ್ಪಲಿ ಎಸೆತ ಪ್ರಕರಣ ಎಳೆದಾಡುವುದು ಬೇಡ

ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರ ಮೇಲೆ ಜಾ.ದಳ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಎಸೆದಿದ್ದು, ಈಗಾಗಲೇ ಆ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.…

3 hours ago

ಓದುಗರ ಪತ್ರ: ತರಬೇತಿಗೆ ಅರ್ಜಿ ಏಕೆ ಕರೆದಿಲ್ಲ?

ಸರ್ಕಾರದ ಯಾವುದೇ ಯೋಜನೆ, ಕಾರ್ಯಕ್ರಮ, ಸವಲತ್ತು ಮೊದಲು ದಲಿತ, ದಮನಿತ, ಶೋಷಿತ ವರ್ಗಕ್ಕೆ ತಲುಪಬೇಕು. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆ…

3 hours ago

ಓದುಗರ ಪತ್ರ: ಬಿಡದಿ ಟೌನ್ ಶಿಪ್: ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಬೇಕು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡುವ ಮೊದಲು ಮತ್ತೊಮ್ಮೆ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿ…

3 hours ago

‘ರಾಮ ರಾಜಕಾರಣಕ್ಕೆ ಅಗ್ನಿ ಪರೀಕ್ಷೆ..!

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಕ್ತರು ನೀಡಿದ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಹಣ, ಆಭರಣಗಳ ಕಳ್ಳತನ ಪ್ರಕರಣ ರಾಮಭಕ್ತರ ವಿಶ್ವಾಸವನ್ನು…

3 hours ago

ಇದು ಶೌಚಾಲಯ… ಈಗ ಅನುಪಯುಕ್ತ ವಸ್ತುಗಳ ಗೋದಾಮು!

ಎಚ್.ಎಸ್.ದಿನೇಶ್ ಕುಮಾರ್ ಮೈಸೂರಿನ ಶ್ರೀರಾಂಪುರದ ಉದ್ಯಾನದಲ್ಲಿರುವ ಶೌಚಾಲಯದ ದುಸ್ಥಿತಿ ಮೈಸೂರು: ಜನರ ಲಕ್ಷಾಂತರ ರೂ. ತೆರಿಗೆ ಹಣವನ್ನು ವ್ಯಯಿಸಿ ಕಟ್ಟಿಸಿರುವ…

3 hours ago