ಡಾ.ಚೈತ್ರ ಸುಖೇಶ್

ಧ್ಯಾನ ಎಂದರೇನು?

ಧ್ಯಾನ ಎಂದರೆ ನಮ್ಮ ಜೀವಶಕ್ತಿಯಾದ ಕುಂಡಲಿನಿ ಶಕ್ತಿಯ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವುದು. ಇದು ಮಾನಸಿಕ ಏಕಾಗ್ರತೆಯ ಅಡೆತಡೆಯಿಲ್ಲದ ಸ್ಥಿತಿ.

ಉಪಯೋಗಗಳು

■ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ.

■ಮನಸ್ಸು ಶಾಂತಗೊಳ್ಳುತ್ತದೆ.

■ಮನಸ್ಸು ಸಂತೋಷ ಮತ್ತು ಉಲ್ಲಾಸ/ ಉತ್ಸಾಹ ಭರಿತವಾಗುತ್ತದೆ.

■ಆಂತರಿಕ ಶಕ್ತಿ-ಸಾಮರ್ಥ್ಯ ಹೆಚ್ಚುತ್ತದೆ.

■ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

■ದೀರ್ಘಕಾಲದ ನೋವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

■ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

■ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

■ಆತಂಕ, ಒತ್ತಡ, ಖಿನ್ನತೆ ((Anxiel, Depressicen)ಯನ್ನು ಕಡಿಮೆ ಮಾಡುತ್ತದೆ.

■ ದೇಹದಲ್ಲಿರುವ ಅಧಿಕ ಕೊಬ್ಬನ್ನು ಕಡಿಮೆಗೊಳಿಸುತ್ತದೆ ಹಾಗೂ ದೇಹದ ತೂಕದ ನಿರ್ವಹಣೆಗೂ ಸಹಾಯಕಾರಿ.

ಧ್ಯಾನದ ಹಾದಿಯು ೩ ಹಂತಗಳು: 

■ ಧಾರಣ (ಏಕಾಗ್ರತೆ)

■ಧ್ಯಾನ (ಧ್ಯಾನ)

■ಸಮಾಧಿ (ಜ್ಞಾನೋದಯ)

ದೀರ್ಘ ವಾದ ಧ್ಯಾನವು ಸಮಾಧಿ ಅಥವಾ ಜ್ಞಾನೋದಯಕ್ಕೆ ಕಾರಣವಾಗುತ್ತದೆ. ಆಯುರ್ವೇದ, ಯೋಗ ಮತ್ತು ಧ್ಯಾನದ ಮೂಲಕ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಪಡೆಯಬಹುದು. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ನಿರಂತರ ಧ್ಯಾನ ಅಭ್ಯಾಸದಿಂದ ನಮ್ಮ ದೇಹದಲ್ಲಿರುವ ೭ ಚಕ್ರಗಳನ್ನು ನಾವು ಸುಸ್ಥಿತಿಯಲ್ಲಿಡಬಹುದು. ಧ್ಯಾನದಲ್ಲಿ ಮುಖ್ಯವಾದ ಪ್ರಕಾರ ಚಕ್ರಧ್ಯಾನ. ಚಕ್ರ ಎಂದರೆ ಬೆನ್ನುಹುರಿ (Dire) ಮಾನವ ದೇಹದ ೭ ಪ್ರಮುಖ ಚಕ್ರಗಳು

೧. ಮೂಲಾಧಾರ ಚಕ್ರ-ಇದು ನಮ್ಮ ಬೆನ್ನು ಮೂಳೆಯ ಬುಡದಲ್ಲಿದೆ. ಇದು ಮಾನಸಿಕ ಶಕ್ತಿ, ವ್ಯಕ್ತಿತ್ವ, ಧೈರ್ಯ ಪ್ರವೃತ್ತಿಗಳನ್ನು ಹೆಚ್ಚಿಸುತ್ತದೆ.

೨. ಸಾದಿಸ್ಥಾನ ಚಕ್ರ-ಇದು ನಮ್ಮ ಹೊಕ್ಕಳಿನ ಕೆಳಗೆ ಇದೆ. ಇದು ಸಂತಾನೋತ್ಪತ್ತಿ ಅಂಗಗಳನ್ನು ನಿಯಂತ್ರಿಸುತ್ತದೆ.

೩. ಮಣಿಪುರ ಚಕ್ರ- ಇದು ಹೊಕ್ಕುಳ ಜಾಗದ ಮೇಲೆ ಇರುತ್ತದೆ. ಇದು ಮನುಷ್ಯನ ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ.

೪. ಹೃದಯ ಚಕ್ರ- ಇದು ಎದೆಯ ಮಧ್ಯ ಭಾಗದಲ್ಲಿದೆ. ಇದು ಹೃದಯ, ಶ್ವಾಸಕೋಶಗಳ ಆರೋಗ್ಯವನ್ನು ನಿಯಂತ್ರಿಸುತ್ತದೆ. ಈ ಚಕ್ರವು ನಿರ್ಬಂಧಿಸಲ್ಪಡಲು ಹಲವಾರು ಕಾರಣಗಳಿವೆ. ನಕಾರಾತ್ಮಕ ಭಾವನೆಗಳು, ಭಯ, ಕೆಟ್ಟ ಜೀವನ ಶೈಲಿ, ಕೆಟ್ಟ ಅಭ್ಯಾಸಗಳು.

೫. ವಿಶುದ್ಧ ಚಕ್ರ-ಇದು ಗಂಟಲಿನ ಚಕ್ರ.

೬. ಆಜ್ಞಾ ಚಕ್ರ- ಇದು ಹಣೆ/ಹುಬ್ಬುಗಳ ನಡುವೆ ಇದೆ. ಇದು ನಮ್ಮ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳುತ್ತದೆ.

೭.ಕಿರೀಟಿ ಚಕ್ರ- ಇದು ತಲೆಯ ಮೇಲ್ಭಾಗ/ನೆತ್ತಿಯ ಮೇಲಿದೆ. ಇದು ಉಳಿದೆಲ್ಲಾ ಚಕ್ರಗಳ ಸಮತೋಲನವನ್ನು ನಿಯಂತ್ರಿಸುತ್ತದೆ.

ಈ ಚಕ್ರಗಳ ನಿರಂತರ ಅಭ್ಯಾಸದಿಂದ ನಮ್ಮ ದೇಹದಲ್ಲಿ ಚಲನೆಯಲ್ಲಿರುವ ಶಕ್ತಿಗಳನ್ನು ನಿಭಾಯಿಸಬಹುದು. ಅಂದರೆ ಈ ಶಕ್ತಿ ವ್ಯವಸ್ಥೆಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉಂಟಾಗುವ ಅಡೆತಡೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ದೇಹದ ಮೂಲಕ ಶಕ್ತಿಯ ಹರಿವನ್ನು ನಿಭಾಯಿಸುತ್ತದೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಿ

ಬಂಡೀಪುರ ಉಷ್ಟ್ರೀಯ ಉದ್ಯಾನದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧವನ್ನು ರಾಜಕೀಯ ಮುಖಂಡರ ಒತ್ತಡಕ್ಕೆ…

1 hour ago

IPL 2025: 159ಕ್ಕೆ ರಾಜಸ್ಥಾನ್‌ ಆಲೌಟ್: ಗುಜರಾತ್‌ಗೆ 58 ರನ್‌ಗಳ ಭರ್ಜರಿ ಗೆಲುವು

ಅಹಮದಾಬಾದ್‌: ಸಂಘಟಿತ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಸಹಾಯದಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮಣಿಸಿದ ಗುಜರಾತ್‌ ಟೈಟನ್ಸ್‌ 2025ರ 18 ಆವೃತ್ತಿಯ…

2 hours ago

ಯಡಿಯೂರಪ್ಪ ಸರ್ಕಾರವಿದ್ದರೆ ನೆಟ್ಟಾರು ಹಂತಕನಿಗೆ ಮುತ್ತಿಕ್ಕಿದವನಿಗೆ ಗುಂಡಿಕ್ಕುತ್ತಿದ್ದೆವು: ಬಿ.ವೈ.ವಿಜಯೇಂದ್ರ

ಮಂಗಳೂರು: ಪ್ರವೀಣ್ ನೆಟ್ಟಾರು ಹಂತಕ ದೇಶದ್ರೋಹಿಗೆ ಮತ್ತೊಬ್ಬ ದೇಶದ್ರೋಹಿ ಮುತ್ತಿಡುತ್ತಾನೆ. ನಮ್ಮ ಸರ್ಕಾರ, ಯಡಿಯೂರಪ್ಪ ಸರ್ಕಾರವಿದ್ದಿದ್ದರೆ ಆ ದೇಶದ್ರೋಹಿಗೆ ಅಲ್ಲೇ…

3 hours ago

ಮಂಡ್ಯ ಮೈಶುಗರ್ ಕಾರ್ಖಾನೆಗೆ ನೂತನ‌ ಎಂ‌ಡಿ ಆಗಿ ಮಂಗಲ್‌ ದಾಸ್‌ ನೇಮಕ

ಮಂಡ್ಯ: ಮಂಡ್ಯ ಮೈಶುಗರ್ ಕಾರ್ಖಾನೆಗೆ ನೂತನ ಎಂಡಿಯಾಗಿ ಮಂಗಲ್‌ ದಾಸ್‌ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.…

4 hours ago

ಏಪ್ರಿಲ್‍.16ರಿಂದ ಶುರುವಾಗಲಿದೆ ಸುದೀಪ್‍ ಅಭಿನಯದ ‘ಬಿಲ್ಲ ರಂಗ ಭಾಷಾ’

‘ಏಪ್ರಿಲ್‍ 16’ ಎಂದಷ್ಟೇ ಬರೆದು ಕಿಚ್ಚ ಸುದೀಪ್‌ ಮೂರು ಫೋಟೋಗಳನ್ನು ಕೆಲವು ದಿನಗಳ ಹಿಂದೆ ಸೋಷಿಯಲ್‍ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಏಪ್ರಿಲ್‍.16ರಂದು…

4 hours ago

ಇದು ‘ಪ್ರೀತಿಯ ಹುಚ್ಚ’ನ ಕಥೆ: ನೈಜ ಘಟನೆ ಆಧರಿಸಿದ ಚಿತ್ರ ಏಪ್ರಿಲ್.18ಕ್ಕೆ ತೆರೆಗೆ

‘ಪ್ರೀತಿಯ ಹುಚ್ಚ’ ಎಂದರೆ ಮೊದಲಿಗೆ ನೆನಪಿಗೆ ಬರುವುದು ‘ಹುಚ್ಚ’ ಚಿತ್ರದ ಸುದೀಪ್‍ ಪಾತ್ರ. ಆ ನಂತರ ‘ಚೆಲುವಿನ ಚಿತ್ತಾರ’ ಚಿತ್ರದ…

4 hours ago