ಹಾಡು ಪಾಡು

ಅಂಬೇಡ್ಕರ್ ಜೀವಜಲವನ್ನು ಹರಿಯುವಂತೆ ಮಾಡುವುದು ನಮ್ಮ ಕೆಲಸವಾಗಿದೆ

ಕೋಟಿಗಾನಹಳ್ಳಿ ರಾಮಯ್ಯ

ಇದು ಕದಡಿದ ನೀರಿನಂತಹ ಕಾಲ. ಈ ಮಬ್ಬಿನ ವಾತಾವರಣದಲ್ಲಿ ಬಹುರೂಪಿ ರಂಗಾಯಣದಲ್ಲಿ ‘ಬಹುರೂಪಿ ಅಂಬೇಡ್ಕರ್’ ಎಂಬ ಆಶಯ ವಾಕ್ಯದಲ್ಲಿ ಅಂಬೇಡ್ಕರ್ ಸುತ್ತ ಇರುವಂತಹ ಹಲವು ಮಗ್ಗಲುಗಳು, ಆಯಾಮಗಳು ಇರುವಂತಹ ನಾಟಕಗಳ ಪ್ರದರ್ಶನವಿದೆ. ಅದರಲ್ಲಿ ಒಂದು, ನಾನು ಆರು ವರ್ಷಗಳ ಹಿಂದೆ ರಂಗಪ್ರಯೋಗ ಮಾಡಿದಂತಹ ‘ಅಂಬೇಡ್ಕರ್ ಕೊಲಾಜ್’ ಅನ್ನು ಮತ್ತೆ ಇಲ್ಲಿ ರಂಗಾಯಣ ರೆಪರ್ಟರಿಯಲ್ಲಿ ಚಿದಂಬರ ಜಂಬೆಯವರು ಮಾಡ್ತಾರೆ ಅನ್ನೋ ಕಾರಣಕ್ಕಾಗಿ ನನ್ನ ಅರಿವನ್ನು ವಿಸ್ತರಿಸಿಕೊಳ್ಳಲು ಬಂದಿದ್ದೇನೆ.

ram ಯಾಕೆ ನಾನು ಬಾಬಾ ಸಾಹೇಬ್ ಅಂಬೇಡ್ಕರ್ ನಾಟಕ ಬರೆದೆ ಎಂದು ನೋಡುವುದಾದರೆ, ಅಂಬೇಡ್ಕರರನ್ನು ವಿವಿಧ ಆಯಾಮಗಳಲ್ಲಿ ಹಲವು ರೂಪದಲ್ಲಿ ನೋಡಬಹುದು ಎಂದು ತೋರಿಸಿಕೊಡಲುಕೆಂದೇ ‘ಅಂಬೇಡ್ಕರ್ ಸುತ್ತ’ ನಾಟಕ ಕಟ್ಟಿಕೊಟ್ಟೆ. ಈ ಸಮಕಾಲೀನ ವರ್ತಮಾನದಲ್ಲಿ ಯಾಕೆ ಈ ನಾಟಕ ಆಯ್ಕೆ ಮಾಡಿಕೊಂಡಿದ್ದಾರೆಂದು ಗೊತ್ತಿಲ್ಲ. ನಾನು ನಾಟಕ ಕಟ್ಟಿದ ರೀತಿ ಹೇಗಿತ್ತೆಂದರೆ, ಕಳಪೆ ಬೌದ್ಧಿಕತೆ ಇರುವ, ಅರೆಬರೆ ಬೌದ್ಧಿಕತೆ ಹೊಂದಿದ ಮತ್ತು ಈಗಾಗಲೇ ಹಲವು ಚಿಂತನಾಶಾಲೆಗಳಲ್ಲಿ ಬೆಂದು ಬಂದಂತಹ ಇಟ್ಟಿಗೆಗಳಂತಿರುವ ವಾಹಕವಾದ ನಟರಿಗೆ ಅಂಬೇಡ್ಕರರನ್ನು ಅರ್ಥ ಮಾಡಿಸಬೇಕಿತ್ತು. ಅದಕ್ಕಾಗಿ ಎಲ್ಲರೂ ಸೇರಿ ಅಂಬೇಡ್ಕರರನ್ನು ಓದುವುದು ಒಳ್ಳೆಯದೆನಿಸಿತು. ಎಲ್ಲರೂ ಓದಿ, ಕಟ್ಟಿ, ಸಫಲರಾದರು.

ನಾನು ನೋಡಿದಷ್ಟು ಆ ನಾಟಕ ಒಪ್ಪತಕ್ಕದಾಗಿತ್ತು. ಚೊಕ್ಕವಾಗಿತ್ತು. ಆದರೆ ಅಂದಿನ ಕಾಲಕ್ಕೆ ಯಾರ ಕಣ್ಣಿಗೂ ಬೀಳದೆ ಕಾಡ ಕುಸುಮದಂತೆ ಮಣ್ಣಿಗೆ ಬಿತ್ತು. ಅದನ್ನು ಮತ್ತೆ ಈ ಸಂದರ್ಭದಲ್ಲಿ ತರುವುದು ಸವಾಲು ಎನ್ನಿಸಿತು. ಎಪ್ಪತ್ತು ವರ್ಷಗಳ ಕಾಲ ಅಂಬೇಡ್ಕರ್ ಸುತ್ತ ಕಟ್ಟಿದ ಕಥನಗಳು, ಕಟ್ಟು ಕಥನಗಳು, ಕಾದಂಬರಿಗಳು ಮಿಥ್ಯ ಕತೆಗಳು, ಜನಪದ ರೂಪದ ಸಣ್ಣಸಣ್ಣ ಝರಿಗಳನ್ನು ಪಕ್ಕಕ್ಕಿಟ್ಟ ಹುಸಿಯಾಗಿ ಕಟ್ಟಿದ್ದಾರೆ. ಮಟ್ಟಸವಾಗಿ ಕಟ್ಟಿ ಜುಳುಜುಳು ಹರಿಯುವ ಜ್ಞಾನಗಂಗೆಯನ್ನು ಮುಟ್ಟದಂತೆ ಮಾಡಿದ್ದಾರೆ. ಆದುದರಿಂದ ಅವನ್ನೆಲ್ಲ ಒಡೆದು ಹಾಕಿ, ನಿಜವಾದ ಅಂಬೇಡ್ಕರ್ ಜೀವಜಲವನ್ನು ಹರಿಯುವಂತೆ ಮಾಡುವುದು ನಮ್ಮ ಕೆಲಸವಾಗಿದೆ. ನನ್ನನ್ನು ಕೆಲವರು ಅಂಬೇಡ್ಕರ್ ಭಂಜಕನೆಂದು ನೋಡುವ ಸಾಧ್ಯತೆಯಿದೆ. ಉಳಿದವರು ಒಪ್ಪಲಿ ಬಿಡಲಿ, ನನ್ನ ಅಂಬೇಡ್ಕರರನ್ನು ನಾನು ಕಂಡುಕೊಳ್ಳುತ್ತೇನೆ. ಅದಕ್ಕಾಗಿ ನಾನು ಪ್ರಯೋಗಶೀಲನಾಗಿದ್ದೇನೆ. ಹಾಗಾಗಿ ನನ್ನ ಎಲ್ಲ ಯೋಚನೆಗಳನ್ನು ಕಾರ್ಯಗತಗೊಳಿಸಿದ್ದೇನೆ.

ಕದಡಿದ ನೀರಿನಲ್ಲಿ ಮೀನಿನ ಬೇಟೆ, ಮನುಷ್ಯನ ಡಾರ್ಕ್ ಸೈಡನ್ನು ತೆರೆದಿಡುತ್ತದೆ. ಹರಿಯುವ ನೀರಿನಲ್ಲಿ ಮೀನಿನ ಚಲನೆಯನ್ನು ಕಂಡುಹಿಡಿಯುವುದು ಒಂಟಿಕಾಲಿನಲ್ಲಿ ನಿಲ್ಲುವ ಕೊಕ್ಕರೆ ಮಾತ್ರ. ಅಂಬೇಡ್ಕರ್ ಅವರು ನೂರಾರು ಬಗೆಯ ಮೀನಿನ ರಾಶಿಯಿರುವ ಸರೋವರ ಎಂದುಕೊಳ್ಳಬಹುದು. ಈ ಎಪ್ಪತ್ತು ವರ್ಷಗಳಲ್ಲಿ ಆ ಸರೋವರವನ್ನು ಜನರು ಅವರಿಗೆ ಬೇಕಾದಂತೆ ಕಲುಷಿತಗೊಳಿಸಿದ್ದಾರೆ. ಕೆಲವು ಸುಂದರವಾದ ಕೆಲಸಗಳೂ ನಡೆದಿವೆಯೆಂಬುದನ್ನು ತಳ್ಳಿ ಹಾಕುವಂತಿಲ್ಲ. ಅಂಬೇಡ್ಕರ್ ಈಗ ಕದಡಿದ ನೀರಾಗಿದ್ದಾರೆ. ಜನರು ತಮ್ಮ ತಮ್ಮ ಬಲೆಗಳನ್ನು ಹಾಕಿ ಬೇಟೆಯಾಡುತ್ತಿದ್ದಾರೆ. ದೇಶ ಇನ್ನೂ ಸರಿಯಾಗಿ ಅಂಬೇಡ್ಕರರನ್ನು ಅರ್ಥ ಮಾಡಿಕೊಂಡಿಲ್ಲ. ಚಾಣಾಕ್ಷ ನಿರ್ಲಕ್ಷ್ಯವನ್ನು ತೋರಿಸಿದ್ದಾರೆ. ಅಂಬೇಡ್ಕರ್ ಕೊಲಾಜ್ಸೃ ಷ್ಟಿಯಾಗಿದ್ದೇ ಸಮೂಹ ಓದಿನ ಮೂಲಕ. ಇತಿಹಾಸದಲ್ಲಿ ಮುಚ್ಚಿಹೋದ ಅಧ್ಯಾಯವನ್ನು ಮತ್ತೆ ತೆರೆದಿಡುವ ಪ್ರಯತ್ನ ಮಾಡುತ್ತಿದ್ದೇವೆ. ರೆಪರ್ಟರಿಯಲ್ಲಿರುವವರು ಅಂಬೇಡ್ಕರರನ್ನು ಅರ್ಥಮಾಡಿಕೊಳ್ಳಲು ಸಿದ್ಧರಿದ್ದಾರೆ. ನನಗೆ ಹಾಡು ರಾಜಕೀಯ ತಿಳಿವಳಿಕೆಯನ್ನು ದಾಟಿಸುವ ಮಾಧ್ಯಮವಾಗಿದೆ. ಹಾಗಾಗಿ ಅಂತಹ ಹಾಡುಗಳನ್ನು ಇದರಲ್ಲಿ ಕಟ್ಟಿಕೊಟ್ಟಿದ್ದೇನೆ.

(ಕೋಟಿಗಾನಹಳ್ಳಿ ರಾಮಯ್ಯ ಬರೆದ ‘ಅಂಬೇಡ್ಕರ್ ಕೊಲಾಜ್’ ನಾಟಕ ಈ ಬಾರಿಯ ರಂಗಾಯಣ ಬಹುರೂಪಿಯ ಮುಖ್ಯ ಆಕರ್ಷಣೆ)

” ದೇಶ ಇನ್ನೂ ಸರಿಯಾಗಿ ಅಂಬೇಡ್ಕರರನ್ನು ಅರ್ಥ ಮಾಡಿಕೊಂಡಿಲ್ಲ. ಎಲ್ಲರೂ ಚಾಣಾಕ್ಷ ನಿರ್ಲಕ್ಷ್ಯವನ್ನು ತೋರಿಸಿದ್ದಾರೆ.”

ಆಂದೋಲನ ಡೆಸ್ಕ್

Recent Posts

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಅಂತ್ಯ

5,54,32,314 ಎನ್ಯುಮರೇಷನ್ ಫಾರಂ ಹಂಚಿಕೆ ; ಶೇ.100 ರಷ್ಟು ಡಿಜಿಟಲೀಕರಣ ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)…

9 hours ago

ಮೈಸೂರು | ದಸರಾ ವೇಳೆಗೆ ಫುಟ್‌ಪಾತ್‌ಗಳ ದುರಸ್ತಿಗೆ ಸೂಚನೆ

ಮೈಸೂರು‌ : ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ 6 ಕೋಟಿ ರೂ. ಬಿಡುಗಡೆ ಮಾಡಿದ್ದು,…

9 hours ago

ಪ.ಬಂಗಾಳ | ಬೆಂಕಿ ಅವಘಡದಲ್ಲಿ ಏಳು ಮಂದಿ ಸಾವು, ಹಲವರು ಗಂಭೀರ

ತಾರಾಪಿತ್ (ಪಶ್ಚಿಮ ಬಂಗಾಳ) : ಬೆಂಕಿ ಅವಘಡದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿರುವ ಘಟನೆ ಪಶ್ಚಿಮ…

10 hours ago

ಯಳಂದೂರು | ಚಿರತೆ ದಾಳಿಗೆ ಕರು ಬಲಿ

ಯಳಂದೂರು : ಚಿರತೆ ದಾಳಿಗೆ ಕರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಯರಗಂಬಳ್ಳಿ ಗ್ರಾಮದ ಶೋಭಾ ಕೋಂ…

11 hours ago

ಸಿಡಬ್ಲ್ಯುಎಂಎ ಆದೇಶ ಪಾಲಿಸಿ ; ಕರ್ನಾಟಕಕ್ಕೆ ಸುಪ್ರೀಂ ಸೂಚನೆ

ಹೊಸದಿಲ್ಲಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧದ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾವೇರಿ ನೀರು ನಿರ್ವಹಣಾ…

12 hours ago

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಎಚ್1ಎನ್1‌ ಸೋಂಕು ದೃಢ

ಬೆಂಗಳೂರು : ನಗರದ ಖಾಸಗಿ ಶಾಲೆಯೊಂದರ ಇಬ್ಬರು ಶಿಕ್ಷಕರಿಗೆ ಹೆಚ್1ಎನ್1 (H1N1) ದೃಢಪಟ್ಟಿದ್ದು ಆತಂಕ ಮೂಡಿಸಿದೆ. ಸದ್ಯಕ್ಕೆ ಹೈಸ್ಕೂಲ್ ಮಾತ್ರ…

12 hours ago