ಹಾಡು ಪಾಡು

ಬದುಕ ಕಲಿಸಿದ ಇಬ್ಬರು ತಾಯಂದಿರು

ಡಾ.ಎನ್.ಜಗದೀಶ್ ಕೊಪ್ಪ

ಅದು ೧೯೭೨ರ ಕಾಲಘಟ್ಟ. ಎಸ್.ಎಸ್.ಎಲ್.ಸಿ. ಪಾಸಾದ ನಂತರ, ಕುಟುಂಬದ ಬಡತನದ ಕಾರಣ, ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ಒಂದು ಹಸು ಮತ್ತು ಎರಡು ಕುರಿಗಳನ್ನು ಮೇಯಿಸುತ್ತಾ, ಕುವೆಂಪು, ಕಾರಂತ, ತ್ರಿವೇಣಿ ಕಾದಂಬರಿಗಳನ್ನು ಓದುತ್ತಾ, ತೋಟದಲ್ಲಿ ಕಾಲ ಕಳೆಯುತ್ತಿದ್ದೆ. ೧೯೭೫ರಲ್ಲಿ ಬೆಸಗರಹಳ್ಳಿಯಲ್ಲಿ ಸರ್ಕಾರಿ ಪಿ.ಯು. ಕಾಲೇಜು ಪ್ರಾರಂಭವಾದಾಗ, ಕೊಪ್ಪದಿಂದ ಎಂಟು ಕಿಲೋಮೀಟರ್ ದೂರದ ಕಾಲೇಜಿಗೆ ಸೇರ್ಪಡೆಯಾದೆ. ಶನಿವಾರ ಮತ್ತು ಭಾನುವಾರ ತೋಟದಲ್ಲಿ ಹೆಣೆದ ತೆಂಗಿನಗರಿಗಳನ್ನು ಸಂತೆಯಲ್ಲಿ ಮಾರಾಟ ಮಾಡಿ, ವಾರಕ್ಕೆ ಸಿಗುತ್ತಿದ್ದ ಎಂಟ್ಹತ್ತು ರೂಪಾಯಿಗಳಲ್ಲಿ ಶಿಕ್ಷಣ ಮುಂದುವರಿಸಿದೆ. ಜೊತೆಗೆ ಪ್ರತಿ ವರ್ಷ ಐನೂರು ರೂಪಾಯಿಗಳ ವಿದ್ಯಾರ್ಥಿ ವೇತನ ಪಡೆಯುತ್ತಿದ್ದೆ.

ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ನಾನು ಪಿ.ಯು.ಸಿ.ಯಲ್ಲಿ ಶೇಕಡಾ ೮೭ ಅಂಕ ತೆಗೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದೆ. ಬೆಂಗಳೂರಿನ ಸಂಬಂಧಿಕರ ನೆರವಿನಿಂದ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಾ, ವಿ.ವಿ.ಪುರಂ. ಸಂಜೆ ಕಾಲೇಜಿಗೆ ೧೯೭೮ರಲ್ಲಿ ಸೇರ್ಪಡೆಯಾದೆ. ನನಗೆ ಇಂಗ್ಲೀಷ್ ಎಂ.ಎ. ಓದಿ ಉಪನ್ಯಾಸಕನಾಗುವ ಕನಸಿತ್ತು. ಆದರೆ, ಇಂಗ್ಲೀಷ್ ಭಾಷೆ ನನ್ನ ಪಾಲಿಗೆ ಕ್ಲಿಷ್ಟಕರವಾಗಿತ್ತು.

ಈ ಸಂದರ್ಭದಲ್ಲಿ ನನಗೆ ಪಿ.ಯು.ಸಿ. ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿದ್ದ ಅನ್ನಪೂರ್ಣ ಮೇಡಂ ಬೆಂಗಳೂರು ಅಕ್ಕಿಪೇಟೆಯಲ್ಲಿದ್ದ ತಮ್ಮ ಮನೆಗೆ ಕರೆಸಿಕೊಂಡರು. ಊಟ ಹಾಕುತ್ತಾ, “ಜಗದೀಶ್, ನೀನು ಅರ್ಥಶಾಸ್ತ್ರವನ್ನು ಆಯ್ಕೆ ಮಾಡಿಕೊ. ನಿನಗೆ ಉತ್ತಮ ಭವಿಷ್ಯ ಇದೆ ಎಂದು ನುಡಿದರು. ಬ್ರಾಹ್ಮಣ ಹೆಣ್ಣುಮಗಳಾದ ಅವರು ಬಡತನವನ್ನು ಮೀರಿದ ಕಥೆಯನ್ನು ನನಗೆ ವಿವರಿಸಿದ್ದರು. ವೃದ್ಧ ತಂದೆ ತಾಯಿಗಳನ್ನು ನೋಡಿಕೊಳ್ಳುವ ಉದ್ದೇಶದಿಂದ ಏಕೈಕ ಪುತ್ರಿಯಾಗಿದ್ದ ಅವರು ಅವಿವಾಹಿತರಾಗಿ ಉಳಿದಿದ್ದರು.

ಅವರ ಮಾರ್ಗದರ್ಶನದಂತೆ ಅರ್ಥಶಾಸ್ತ್ರವನ್ನು ಪದವಿಯಲ್ಲಿ ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಪದವಿ ಮುಗಿಸಿ, ನಂತರ ಮೈಸೂರು ವಿ.ವಿ.ಯಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಮೇಡಂ ಹೇಳಿದಂತೆ ಬದುಕಿನ ಎಲ್ಲಾ ಆಯಾಮಗಳು ಪರಿಚಯವಾದವು ಜೊತೆಗೆ, ಪತ್ರಿಕೋದ್ಯಮದಲ್ಲಿ ಶಾಶ್ವತವಾಗಿ ನೆಲೆ ನಿಂತೆ. ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ. ಮಾಡಲು ಹೊರಟಾಗ, ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರು ಜಾಗತೀಕರಣ ಮತ್ತು ಗ್ರಾಮಭಾರತ ಕುರಿತು ಅಧ್ಯಯನ ಮಾಡಲು ತಿಳಿಸಿದರು. ಈ ವಿಷಯ ಕುರಿತು ಮಾಹಿತಿಗಳನ್ನು ನೀಡಿ, ಮಾರ್ಗದರ್ಶಕರಾದರು.

ಹಂಪಿ ಕನ್ನಡ ವಿ.ವಿ.ಯಲ್ಲಿ ಜಾಗತೀಕರಣದ ವಿಷಯವಾಗಿ ಮಾರ್ಗದರ್ಶನ ನೀಡಲು ಯಾರೂ ಇಲ್ಲದ ಕಾರಣ ಸ್ವತಂತ್ರವಾಗಿ ಡಿ.ಲಿಟ್. ಅಧ್ಯಯನ ಮಾಡಿದೆ. ಪ್ರೊಫೆಸರ್ ಅವರು ಮಾರ್ಗದರ್ಶನದ ಜೊತೆಗೆ ಬೌದ್ಧಿಕ ಆಸ್ತಿಗಳ ಹಕ್ಕುಗಳ ಕುರಿತಂತೆ ಹೆಚ್ಚಿನ ಅಧ್ಯಯನಕ್ಕಾಗಿ ನನ್ನನ್ನು ಡೆಹರಾಡೂನ್ ನಗರದಲ್ಲಿದ್ದ ಡಾ.ವಂದನಾ ಶಿವ ಅವರ ಬಳಿ ಕಳಿಸಿಕೊಟ್ಟರು. ಮೂರು ವಾರ ಕಾಲ ವಂದನಾ ಶಿವ ಮೇಡಂ ಅವರ ಬಳಿ ಕಲಿತ ಪಾಠವು ನನ್ನ ಬದುಕಿನ ಆಲೋಚನಾ ಕ್ರಮವನ್ನು ಬದಲಾಯಿಸಿತು. (ವಂದನಾ ಶಿವ ಮೇಡಂ ಅವರು ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಹೋರಾಡಿ, ಭಾರತದ ಬಸುಮತಿ ಅಕ್ಕಿ ಮತ್ತು ಬೇವಿನ ಪಾರಂಪರಿಕ ಹಕ್ಕನ್ನು ಉಳಿಸಿದ್ದರು. ಅವರ ಬಹುತೇಕ ಕೃತಿಗಳು ಕೇಂಬ್ರಿಡ್ಜ್. ವಿಶ್ವವಿದ್ಯಾನಿಲಯದಿಂದ ಪ್ರಕಟವಾಗಿವೆ) ಭಾರತದ ಬೇಸಾಯದ ಬಗ್ಗೆ ವಿವರಿಸುತ್ತಾ, “ತಮ್ಮಾ, ಮಹಿಳೆಯರ ಕೈಯಿಂದ ಮತ್ತು ಮಡಿಲಿನಿಂದ ಬಿತ್ತನೆ ಬೀಜಗಳು ಜಾರಿ ಹೋದ ಕ್ಷಣದಿಂದ ಭಾರತದಲ್ಲಿ ಕೃಷಿರಂಗದ ಅವನತಿಯು ಪ್ರಾರಂಭವಾಯಿತು” ಎಂದ ಮಾತನ್ನು ನಾನೆಂದೂ ಮರೆಯಲಾರೆ.

ಗಣಿತ ಮತ್ತು ವಿಜ್ಞಾನ ಎರಡು ವಿಷಯಗಳನ್ನು ಹೊರತುಪಡಿಸಿ, ಇಂದು ಯಾವುದೇ ವಿಷಯ ಕುರಿತು ಅಧಿಕೃತವಾಗಿ ಮಾತನಾಡಲು ಮತ್ತು ಬರೆಯಲು ನನಗೆ ಶಕ್ತಿ ತುಂಬಿದ ಈ ಇಬ್ಬರು ತಾಯಂದಿರನ್ನು ನಾನು ತಿನ್ನುವ ಅನ್ನ ಮತ್ತು ಉಸಿರಾಡುವ ಗಾಳಿಯ ಜೊತೆ ಕೃತಜ್ಞತೆಯಿಂದ ಇಂದಿಗೂ ಸ್ಮರಿಸುತ್ತೇನೆ

ಆಂದೋಲನ ಡೆಸ್ಕ್

Recent Posts

ಕೆನಡಾದಲ್ಲಿ ಕನ್ನಡಿಗನ ಹತ್ಯೆ ಪ್ರಕರಣ: ಆರೋಪಿ ಭಾವಚಿತ್ರ ಬಿಡುಗಡೆ

ನೆಲಮಂಗಲ: ಕೆನಡಾ ದೇಶದಲ್ಲಿ ಕನ್ನಡಿಗನನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣದಲ್ಲಿ ಕೊಲೆ ಮಾಡಿರುವ ಆರೋಪಿ ಭಾವಚಿತ್ರವನ್ನು ಕೆನಡಾದ ಟೊರಂಟೊ ಪೊಲೀಸರು…

39 seconds ago

ಕೊಡಗು ಜಿಲ್ಲೆಯಲ್ಲಿ ಏಪ್ರಿಲ್.‌8ರಿಂದ ಪಾಸ್‌ಪೋರ್ಟ್‌ ಮೇಳ: ಸಂಸದ ಯದುವೀರ್‌ ಒಡೆಯರ್‌ ಮಾಹಿತಿ

ಕೊಡಗು: ಸಂಸದ ಯದುವೀರ್‌ ಕೃಷ್ಣದತತ ಚಾಮರಾಜ ಒಡೆಯರ್‌ ಅವರ ಪರಿಶ್ರಮದ ಫಲವಾಗಿ ಕೊಡಗಿನಲ್ಲಿ ಪಾಸ್‌ಪೋರ್ಟ್‌ ಮೇಳ ಆಯೋಜಿಸಲು ಬೆಂಗಳೂರು ವಿಭಾಗೀಯ…

16 mins ago

ಇರಾನ್‌ ಸರ್ವೋಚ್ಛ ನಾಯಕನಾಗಿ ಅಯತೊಲ್ಲಾ ಅಲಿ ಖಮೇನಿ ಪುತ್ರ ಮೊಜ್ತಬಾ ಖಮೇನಿ ಆಯ್ಕೆ.?

ಟೆಹರಾನ್:‌ ಇರಾನ್‌ ಸರ್ವೋಚ್ಛ ನಾಯಕರಾಗಿದ್ದ ಅಯತೊಲ್ಲಾ ಅಲಿ ಖಮೇನಿಯವರು ಮಗ ಉತ್ತರಾಧಿಕಾಗಲು ಪ್ರಮುಖ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ಇರಾನ್‌ನ ಮುಂದಿನ ಸರ್ವೋಚ್ಛ…

34 mins ago

ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಿಗ್‌ ಬಜೆಟ್‌ ಸಿನಿಮಾ ಟಾಕ್ಸಿಕ್‌ ಇರಾನ್-‌ ಇಸ್ರೇಲ್‌ ಯುದ್ಧದ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಮಾರ್ಚ್.‌19ರಂದು ಬಿಡುಗಡೆಯಾಗಬೇಕಿದ್ದ…

54 mins ago

ಬೆಟ್ಟಳ್ಳಿ ಮಾರಮ್ಮ ಜಾತ್ರಾ ವಿಶೇಷ: ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಕಂಬ ಪ್ರತಿಷ್ಠಾಪನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ…

2 hours ago

ಹನೂರು| ಚಂಗಡಿ ಗ್ರಾಮದ ಸುತ್ತಮುತ್ತ ಪ್ರತಿನಿತ್ಯ ಹುಲಿ ಓಡಾಟ: ಆತಂಕದಲ್ಲಿ ಸ್ಥಳೀಯರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಚಂಗಡಿ ಗ್ರಾಮದ ಸಮೀಪ ಪ್ರತಿನಿತ್ಯ…

2 hours ago