ಹಾಡು ಪಾಡು

ಮೌನಕ್ಕೆ ಶರಣಾಗಿರುವ ಮರದೂರಿನ ಈ ದೇಗುಲ

ಡಾ.ರಾಧಾಮಣಿ ಎಂ.ಎ.

ನಾನು ಹುಟ್ಟಿ ಬೆಳೆದದ್ದು ಹುಣಸೂರಿನ ಬಳಿಯ ಅಜ್ಜನ ಊರು ಬನ್ನಿಕುಪ್ಪೆಯಲ್ಲಿ. ಬನ್ನಿಕುಪ್ಪೆಯಿಂದ ಸುಮಾರು ೨ ಕಿಮೀ ದೂರದಲ್ಲಿ ಮರದೂರು ಎಂಬ ಪುಟ್ಟ ಹಳ್ಳಿಯಿದೆ.

ಬನ್ನಿಕುಪ್ಪೆಗೂ ಅಗ್ರಹಾರಕ್ಕೂ ಮಧ್ಯೆ ಲಕ್ಷ್ಮಣತೀರ್ಥ ನದಿ ಹರಿಯುತ್ತದೆ. ಇದರ ಸಮೀಪದಲ್ಲಿ ಮರದೂರಿನ ವ್ಯಾಪ್ತಿಯಲ್ಲಿ ವೇಣುಗೋಪಾಲಸ್ವಾಮಿ ದೇವಾಲಯವಿದೆ. ಇದು ಹೊಯ್ಸಳ ಶೈಲಿಯಲ್ಲಿ ರಚನೆಯಾಗಿದೆ. ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಈ ದೇಗುಲವನ್ನು ಎದುರುಗೊಂಡೇ ಪಯಣ ಮಾಡುತ್ತಿದ್ದವು. ಅದರ ಯಾವುದೇ ವಿಚಾರಗಳು ಗೊತ್ತಿಲ್ಲದಿದ್ದರೂ ದೊಡ್ಡವರ ಮಾತಿನಂತೆ ನಮಸ್ಕಾರ ಮಾಡಿ ಮುಂದುವರಿಯುತ್ತಿದ್ದವು.

ಇತ್ತೀಚೆಗೆ ಮತ್ತೆ ಆ ದಾರಿಯಲ್ಲಿ ಹೋಗುವಾಗ ಆ ದೇವಾಲಯವನ್ನು ನೋಡಿ ಮನಸ್ಸಿಗೆ ಒಂದು ಬಗೆಯ ಸಂಕಟವಾಯಿತು. ಹೊಯ್ಸಳರ ಕಾಲದ ಈ ದೇಗುಲವನ್ನು ಮೈಸೂರು ಅರಸರ ಕಾಲದಲ್ಲಿ ಜೀರ್ಣೋದ್ಧಾರ ಮಾಡಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಗರ್ಭಗುಡಿಯ ಮೇಲ್ಭಾಗವು ಗಾರೆ ಮತ್ತು ಇಟ್ಟಿಗೆಯನ್ನು ಬಳಸಿ ಕಟ್ಟಿದ ಗೋಪುರವಿದೆ. ಮೊದಲಿಗೆ ದೇವಾಲಯದ ಎದುರುಗಡೆ ಎರಡು ಕಂಬಗಳ ಮುಖಮಂಟಪವಿದೆ, ಇದರ ಮುಂಭಾಗದಲ್ಲಿ ವಿಜಯನಗರದ ಅರಸರ ಕಾಲದಲ್ಲಿ ಕಟ್ಟಿದ ಪ್ರವೇಶ ಮಂಟಪವಿದೆ.

ಪ್ರವೇಶ ದ್ವಾರದಲ್ಲಿ ಪದ್ಮಮಂಡಲದ ರಚನೆಯಿದೆ. ಒಳಭಾಗದಲ್ಲಿ ನವರಂಗವಿದೆ, ನವರಂಗದ ಕಂಬಗಳು ರುದ್ರಕಾಂತ ಶೈಲಿಯ ವಿವಿಧ ವಿನ್ಯಾಸದಲ್ಲಿ ರಂಗೋಲಿ ರೀತಿಯ ಚಿತ್ರಗಳನ್ನು ಕೆತ್ತಲಾಗಿದೆ. ನವರಂಗದ ಮೇಲ್ಭಾಗದಲ್ಲಿ ‘ವಿತ್ಥಾನ’ ಅಂದರೆ ಭುವನೇಶ್ವರಿಯ ಕೆತ್ತನೆಯು ಕೊಳೆ ತುಂಬಿಕೊಂಡು ಕಪ್ಪಾಗಿದೆ. ದೇವಸ್ಥಾನದ ಮುಖ್ಯ ಭಾಗ ಗರ್ಭಗೃಹ ಮತ್ತು ನವರಂಗದ ಮಧ್ಯಭಾಗ ವನ್ನು ‘ಸುಖನಾಸಿ’ ಎಂದು ಕರೆಯುತ್ತಾರೆ.

ಈ ಸುಖನಾಸಿಯು ಗರುಡಪೀಠದ ಶೈಲಿಯಲ್ಲಿ ರಚನೆಯಾಗಿದೆ. ಇದರಮೇಲೆಯೇ ವೇಣುಗೋಪಾಲಸ್ವಾಮಿಯ ಮೂರ್ತಿಯನ್ನು ಇಡಲಾಗಿತ್ತು ಎಂಬುದಕ್ಕೆ ಅದರ ಮೇಲೆ ಮೂರ್ತಿಯನ್ನು ಇಡಲು ಇರುವ ಒಂದು ಕುಳಿಯಿದೆ. ಇದರಲ್ಲಿದೇವರಿಗೆ ಸಂಬಂಧಪಟ್ಟಂತಹ ಆಭರಣ ಹಾಗೂ ವಸ್ತ್ರಗಳನ್ನು ಇಡುವುದಕ್ಕೆ ಬಳಸಲಾಗುತ್ತದೆ. ದೇವಾಲಯದ ಬಲಭಾಗದಲ್ಲಿ ಸಣ್ಣಗುಡಿಯ ರಚನೆಯಿದೆ ಮತ್ತು ಅದು ದುರಸ್ತಿಯಾಗದೆ ಚಾವಣಿ, ಕಂಬಗಳು ಎಲ್ಲವೂ ಕುಸಿದು ಬೀಳುತ್ತಿವೆ. ಇಲ್ಲಿ ಸಿಕ್ಕಿರುವ ಒಂದು ಶಾಸನದ ಪ್ರಕಾರ ೧೫ನೆಯ ಶತಮಾನದಲ್ಲಿ ಪಟ್ಟಣಸ್ವಾಮಿನಾಗಿಶೆಟ್ಟಿಯ ಮಗ ಗೋಪಿಶೆಟ್ಟಿಯು, ಗೋಪಿನಾಥ ದೇವಾಲಯಕ್ಕೆ ಗಂಧಗೋಟಿಯನ್ನು ಕಾಣಿಕೆ ನೀಡಿದ ವಿಷಯ ದಾಖಲಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ವೇಣುಗೋಪಾಲಸ್ವಾಮಿಯ ವಿಗ್ರಹ ಇಂದು ನಮಗೆ ನೋಡಲು ಸಿಗುವುದಿಲ್ಲ. ಹುಣಸೂರಿನ ಶ್ರೀ ನರಸಿಂಹಸ್ವಾಮಿ ದೇವಾಲಯ ದಲ್ಲಿ ವೇಣುಗೋಪಾಲಸ್ವಾಮಿ ಮೂರ್ತಿಯನ್ನು ಸಂರಕ್ಷಣೆ ಮಾಡಲಾಗಿದೆ. ೧೯೭೫ರಲ್ಲಿ ಭೂಸುಧಾರಣೆ ಕಾಯ್ದೆ ಜಾರಿಯಾದ ಸಂದರ್ಭದಲ್ಲಿ ಮರದೂರಿನಲ್ಲಿರುವ ದೇವಾಲಯದ ಜಾಗವನ್ನು ವಶಪಡಿಸಿಕೊಳ್ಳುವ ಸಲುವಾಗಿ ವೇಣುಗೋಪಾಲ ಮೂರ್ತಿಯನ್ನು ಕಿತ್ತು ಹೊರರಾಷ್ಟ್ರಕ್ಕೆ ಸಾಗಿಸುವ ಪ್ರಯತ್ನ ಮಾಡಲಾಗಿತ್ತು. ಆಗ ಅಂದಿನ ಮುಖ್ಯಮಂತ್ರಿಗಳಾದ ದೇವರಾಜ ಅರಸು ಅವರಿಗೆ ವಿಷಯ ತಲುಪಿದಾಗ ಬನ್ನಿಕುಪ್ಪೆಯ ಬಳಿ ಅವರನ್ನು ಹಿಡಿದು ತಹಸಿಲ್ದಾರ್ ಅವರ ಸುಪರ್ದಿಗೆ ಕೊಡು ತ್ತಾರೆ. ತಹಸಿಲ್ದಾರರು ಈ ವಿಗ್ರಹವನ್ನು ಶ್ರೀ ನರಸಿಂಹಸ್ವಾಮಿ ದೇವಾಲಯಕ್ಕೆ ಕೊಟ್ಟು ಸಂರಕ್ಷಣೆ ಮಾಡುವಂತೆ ಆದೇಶ ಮಾಡುತ್ತಾರೆ.

ನನ್ನ ಬಾಲ್ಯದದಿನದ ಕುತೂಹಲಕ್ಕೆ ಸಾಕ್ಷಿಯಾಗಿದ್ದ ದೇವಾಲಯ ಅನಾಥವಾಗಿ ನಿಂತಿದೆ. ಅಂದು ನಾನು ಮುಗ್ಧಭಕ್ತಿಯಿಂದ ಕಂಡ ದೇವಾಲಯವನ್ನು ಈಗ ನೋಡಿದರೆ ಯಾಕೋ ಒಂದು ಬಗೆಯ ಯಾತನೆಯಾಗುತ್ತದೆ. ಈ ಜಗತ್ತು ಎಷ್ಟು ವೇಗವಾಗಿ ಓಡುತ್ತಿದೆ. ಜನ, ಪರಿಸರ, ವ್ಯವಸ್ಥೆ ಎಲ್ಲವೂ ಶರವೇಗದಲ್ಲಿ ಓಡುತ್ತಿದೆಯಾದರೂ ಈ ದೇವಾಲಯ ಮಾತ್ರ ಯಾವ ಬದಲಾವಣೆಯನ್ನೂ ಕಾಣದೇ ತನ್ನ ಅಸ್ತಿತ್ವವನ್ನು ಮರೆತು, ನಿರ್ಲಿಪ್ತವಾಗಿ ಪ್ರಕೃತ್ತಿಯ ವಿಕೋಪಗಳಿಗೆ ಮೈಯೊಡ್ಡಿ ಮೌನವಾಗಿ ನಿಂತಿದೆ.

ಆಂದೋಲನ ಡೆಸ್ಕ್

Recent Posts

ಪ್ರಧಾನ್‌ ರಾಜೀನಾಮೆ : ವಾಂಗ್ಚುಕ್‌ ಫಸ್ಟ್‌ ರಿಯಾಕ್ಷನ್‌

ನವದೆಹಲಿ : ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಕುರಿತು ಹೋರಾಟಗಾರ ಸೋನಮ್‌ ವಾಂಗ್ಚುಕ್‌ ಮೊದಲ ಪ್ರತಿಕ್ರಿಯೆ…

13 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 25 ಶನಿವಾರ  

21 hours ago

ನೋಟ-ಪ್ರತಿನೋಟ | ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಸರಿಯೇ? ತಪ್ಪೇ?

ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಪ್ರಥಮವಾಗಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಂಬಳಕ್ಕಾಗಿ ಮೈಸೂರಿನಲ್ಲಿ ಸ್ಥಳ ನಿಗದಿಪಡಿಸಿದ್ದು, ಸಿದ್ಧತೆ…

21 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಗೆ ಅಜ್ಜಿ ಒಡವೆ ನೀಡಿದ ಪ್ರಸಂಗ…

ನನ್ನ ಅಜ್ಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಗಾಂಧಿ ಹಕ್ಕಿಯ ಹಾಗೆ ಇದ್ದರು ಮತ್ತು ನಿರುಪದ್ರವಿ ಎಂದು. ಗಾಂಽಯ ಕಾಲದಲ್ಲಿ…

21 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ಉಡುಪು ಯಾಕೆ ಬದಲಾಯಿತು?

  ಡಾ.ಪ್ರಮೀಳಾದೇವಿ ಬಿ.ಕೆ. ಮಹಾತ್ಮಗಾಂಧಿ ಇಂಗ್ಲೆಂಡಿನಲ್ಲಿದ್ದಾಗಲೂ, ಅಲ್ಲಿಂದ ಹಿಂತಿರುಗಿದಾಗ, ಮತ್ತು ಆರಂಭದ ದಿನಗಳಲ್ಲಿ ಅವರು ಎಲ್ಲಾ ವಿದ್ಯಾವಂತರಂತೆ ಬೆಲೆಬಾಳುವ ಸೂಟುಬೂಟು…

21 hours ago

ಗಾಂಧಿ ಅಭಿಯಾನ ಅರಿವಿನ ಯಾನ ; ಸಜ್ಜನನಾದ ಆಂಗ್ಲನಾಗುವ ಪ್ರಯತ್ನ

ಶಾಕಾಹಾರದಲ್ಲಿ ದಿನದಿನಕ್ಕೂ ನನ್ನ ನಂಬಿಕೆ ಹೆಚ್ಚುತ್ತಲೇ ಹೋಯಿತು. ಸಾಲ್ಟ್‌ರ ಗ್ರಂಥದ ವ್ಯಾಸಂಗದಿಂದ, ಆಹಾರದ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಭ್ಯಾಸ ಮಾಡಲು…

22 hours ago