ಹಾಡು ಪಾಡು

ಪೌರಕಾರ್ಮಿಕ ಶೋಭಾ ಹೇಳಿದ ಸಂಗತಿಗಳು…

ಮಧುಕರ ಮಳವಳ್ಳಿ

ಕೆಲದಿನಗಳ ಹಿಂದೆ ಪೌರಕಾರ್ಮಿಕರು ತಮ್ಮ ನೌಕರಿಯ ಖಾಯಂಗಾಗಿ ಮುಷ್ಕರ ನಡೆಸುತ್ತಿದ್ದರು.ಇದರಿಂದಾಗಿ ಇಡೀ ಯಳಂದೂರು ಪಟ್ಟಣವೂ ಕಸದಿಂದ ತುಂಬಿಹೋಗಿತ್ತು. ಆಗ ಬರೀ ನಗುವಿನಿಂದಲೇ ನಮಸ್ತೇ ಸಾ ಎಂಬ ನುಡಿಯಿಂದಲೇ ಪರಿಚಯವಿದ್ದ ಶೋಭಾಳನ್ನು ಏನು ಮೇಡಂ ನಿಮ್ಮ ಮುಷ್ಕರ ಮುಗಿತಾ ಅಂದೆ. ಆಗ ಶೋಭಾ ‘ಅದು ಬುಡಿ ಸಾ, ಈಗ ನಿಮ್ಮ ಜೊತೆಗೆ ಮಾತಾನಾಡ ಬಹುದಾ ಸಾ’ ಎಂದಳು. ಬನ್ನಿ ಏನ್ ಸಮಾಚಾರಯೆಂದೆ. ಸಾ ನಾವು ಎಡ್‌ಬಿಡಂಗಿಗಳು ಇತ್ತಾಗೆ ಓದು ಸರಿಯಾಗಿ ಇಲ್ಲ. ಅತ್ತಾಗೆ ಸರ್ಕಾರದವರು ನಮ್ಮ ಕೆಲಸಗಾರು ಅಂತ ಹೇಳಿ ಸಂಬಳಾನೂ ಸರಿಯಾಗಿ ಕೊಡುತ್ತಿಲ್ಲ. ನಮ್ಮ ಕತೆ ಹಿಂಗೇ ಎನ್ನುತಾ ಪಕ್ಕದಲ್ಲೇ ಕುಳಿತಳು.

ಯಾಕೆ ನೀವು ಶಾಲೆಗೆ ಹೋಗಿ ಎಸ್.ಎಸ್.ಎಲ್.ಸಿ ಪಾಸು ಮಾಡಿಲ್ಲವಾ ಎಂದೆ. ಅಯ್ಯೋ ಸಾ ಅದು ಒಂದು ಕರ್ಮದ ಕತೆ. ನಿಮಗೆ ಬೇಜಾರ್ ಆಗ್‌ಬಹುದು. ನಾನು ಸ್ಕೂಲ್ಗೆ ಹೋಗುತ್ತಾಯಿದ್ದೆ. ಲಾಂಗ್ ಜಂಪ್, ರನಿಂಗ್, ನಂಗೆ ಇಷ್ಟವಾದ ಆಟ. ಡ್ಯಾನ್ಸ್ ಕೂಡ ಚನ್ನಾಗಿ ಮಾಡುವೆ. ಅದರೆ ಆ ಹೆಡ್‌ಮೇಷ್ಟರು ಒಂದು ತಪ್ಪ ಮಾಡಿದ್ದರು. ನಾವು ಕೊನೆ ಬೆಂಚು, ಹೋಮ್‌ವರ್ಕ್ ಮಾಡ್‌ಕಂಡು ಹೋದರೆ. ಸರಿಯಾಗಿ ನೋಡುತ್ತಾ ಇರ್ಲಿಲ್ಲ. ಮತ್ತೆ ನಿಮಗೆ ಯಾಕೆ ಓದು? ತೊಳೆಯುವ ಕೆಲಸ ಇದಿಯಲ್ಲ ಎನ್ನುತ್ತಾ ಇದ್ದರು. ಆಗಾ ಮನಸ್ಸಿಗೆ ತುಂಬಾ ಬೇಸರ ಆಗ್ತಿತ್ತು. ಆವತ್ತು ಒಂದು ದಿನ ನಮ್ಮ ಮೇಷ್ಟರು ಯಾರೋ ಆಫೀಸ್ಸರ್ ಬರ‍್ತಾರೆ ಅಂತ ನನ್ನ ಕರೆದು ಪೊರಕೆ ಎಸದು. ನಿಮ್ಮ ಕಡೆ ಜನ ಬಂದಿಲ್ಲ ನೀನೆ ಆ ಟಾಯ್ಲೆಟ್ ತೊಳೆದು ಬಿಡು ಅಂದರು. ನಂಗೆ ಆಳು ಬಂದ್ಹಂಗೆ ಆಯಿತು. ಆದರೂ ಭಯದಿಂದ ತೊಳೆದೆ ಆವತ್ತೇ ಕೊನೆ ಸ್ಕೂಲ್ ಎಂದಳು.

ಮತ್ತೆ ಮುಂದುವರಿದು ‘ಸಾ ಯಾಕ್ ಸಾ ಮಕ್ಕಳು ಅಂತ ತಿಳಿದೇ ಮೇಷ್ಟರುಗಳು ಆ ಕೆಲಸ ಮಾಡುಸುತ್ತಾರೆ ಸಾ’ ಎಂದು ಕೇಳಿದಳು. ಒಂದು ಘಳಿಗೆ ಇಬ್ಬರೂ ಮೌನವಾದೆವು. ಈಗ ಹೇಗಿದೆ ಜೀವನಯೆಂದೆ. ಅದ್ ಬಿಡಿ ಸಾ ಗಂಡ ಹೊಡೆದಂಗಲ್ಲ, ಹೆಂಡತಿ ಅತ್ತಂಗಲ್ಲ ಆ ಪರಿಸ್ಥಿತಿ ನಮ್ಮದು. ನೀವು ಒಂದು ಸಹಾಯ ಮಾಡ್‌ಬೇಕು ಅಂದಳು . ಏನದು? ಅಂದೆ ‘ಸಾ ನಮ್ಮ ಬೀದಿಯಲ್ಲಿ ಮಕ್ಕಳು ಯಾವಾಗಲೂ ಕೇರಿಯ ಒಳಗೆ ಕುಣಿತಾ ಇರುತ್ತವೆ. ವಾರಕ್ಕೆ ಎರಡು ದಿನ ಸ್ಕೂಲ್ಗೆ ಹೋದರೆ ಹೆಚ್ಚು. ಸುಮಾರು ೧೦ರಿಂದ ೧೫ ಮಕ್ಕಳು ಅವೆ . ಏನಾದರೂ ಮಾಡಿ ಅವು ಸ್ಕೂಲ್ ಹೋಗೋ ಅಂಗೆ ಮಾಡ್ ಬೇಕ್ ಅಲ್ಲ’ ಎನ್ನುತ್ತಾ ನನ್ನ ಕಣ್ಣುಗಳನ್ನೇ ದಿಟ್ಟಿಸಿ ನೋಡಿದಳು.

ನಾನು ಪ್ರಯತ್ನ ಮಾಡುವೆಯೆಂದೆ. ಅವಳೇ ಮುಂದುವರಿದು ‘ಸಾ ನಿಮ್ಮ ಜೊತೆಗೆ ನಾ ಸಮನಾಗಿ ಕುಳಿತು ಮಾತಾನಾಡುದು ಬೇಜಾರು ಇಲ್ಲ ತಾನೆ’ ಎಂದು ಕೇಳಿದಳು. ಆಗ ನಂಗೆ ಈ ಸಮಾಜದ ಕೆಲವು ಮನಸ್ಸುಗಳು ತಳವರ್ಗದ ಜನರ ಮನಸ್ಸನ್ನು ಹೇಗೆ ರೂಪಿಸಿವೆ ಎಂದುಕೊಂಡೆ ಮುಂದುವರೆದು ಜೀವನ ಹೇಗಿದೆ ಎಂದು ಕೇಳಿದೆ.

‘ಅದಾ ಸಾ, ಬುದ್ಧ್ದಿ ಬರೋಕೆ ಮುಂಚೆ ಮದುವೆ ಆಯ್ತು ಕುಡುಕನೊಂದಿಗೆ, ಈಗ ವಿಧವೆ. ಎರಡು ಮಕ್ಕಳು, ಈಗ ಅವರ್ ಕತೆ ಅವರಿಗೆ ನನ್ನ ಕತೆ ನಂಗೆ. ಮಗ ನಮ್ಮ ಕೆಲಸನೇ ಮಾಡುತ್ತಾನೆ. ಮಗಳಿಗೆ ಮದುವೆ ಆಗಿದೆ’ ಎಂದು ನಗುತ್ತಾ ಹೇಳಿ, ಮತ್ತೆ ಹಿಂಗೆ ವಾರಕ್ಕೆ ಒಂದು ಸಾರಿ ಸಿಕ್ಕಿ ಸಾ ಖುಷಿಯಾಗಿ ಮಾತನಾಡುವ ಎನ್ನುತ್ತ ಲೋಟದಲ್ಲಿದ್ದ ಟೀ ಮುಗಿಸತೊಡಗಿದಳು.

ಆಕೆ ಮತ್ತೆ ಮುಂದುವರಿದು ಸಾ ಯಾಕ್ ಸಾ ಮಕ್ಕಳು ಅಂತ ತಿಳಿದೇ ಮೇಷ್ಟರುಗಳು ಆ ಕೆಲಸ ಮಾಡುಸುತ್ತಾರೆ ಸಾ ಎಂದು ಕೇಳಿದಳು

ಆಂದೋಲನ ಡೆಸ್ಕ್

Recent Posts

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

20 hours ago

ಓದುಗರ ಪತ್ರ: ಎಲ್‌ಇಡಿ ಪರದೆ ಮೂಲಕ ಚಾಮುಂಡಿ ದರ್ಶನ ಮಾಡಿಸಿ

ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ…

20 hours ago

ಓದುಗರ ಪತ್ರ: ಪಾಲಿಕೆ ಆಯುಕ್ತರಾದ ಎಂ.ಕೆ. ಸವಿತಾ ನಡೆ ಶ್ಲಾಘನೀಯ

ಈ ಬಾರಿಯ ಸ್ವಾತಂತ್ರೋತ್ಸವದ ಅಂಗವಾಗಿ ೮೦ ತ್ಯಾಜ್ಯ ಹಾಕುವ ತಾಣಗಳನ್ನು ಗುರುತಿಸಿ, ಸ್ವಾತಂತ್ರೋತ್ಸವ ಸ್ವಚ್ಛತಾ ಅಭಿಯಾನ ೨೦೨೬ರ ಪ್ರಯುಕ್ತ ೮೦…

20 hours ago

ಓದುಗರ ಪತ್ರ: ಏನೇ ಓದಿದ್ದರೂ ಬೇಕು ಪಿಸಿ ಹುದ್ದೆ !

ರಾಜ್ಯದಲ್ಲಿ ೩,೭೦೦ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುzಗಳಿಗೆ, ೩ ಲಕ್ಷದ ೭೭ ಸಾವಿರ ಅಭ್ಯರ್ಥಿಗಳು ಇದೇ ಭಾನುವಾರ ಲಿಖಿತ ಪರೀಕ್ಷೆ…

20 hours ago

ರವಿಯ ನೋಡ ಹೋಗಿ ಶಶಿಯ ಕಂಡುಬಂದೆ

ಭಾರತಿ ಬಿ ವಿ ವ್ಯಾಲಿ ಆಫ್ ಮಾನ್ಯುಮೆಂಟ್ಸ್‌ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ…

20 hours ago

ಕಾರ್ಗಿಲ್ ಕಾಲದ ಸುಬೇದಾರ್ ಹೈದರ್ ಮೈಸೂರಿನಲ್ಲಿದ್ದಾರೆ

ಅಕ್ಷತಾ ಹೈದರ್ ಅವರ ಮುತ್ತಾತ ಎಂ.ಬುಡಾನ್ ಬೇಗ್ ಮೈಸೂರಿನ ಮಹಾರಾಜರ ಪದಾತಿ ದಳದಲ್ಲಿ ಸುಬೇ ದಾರ್ ಮೇಜರ್ ಆಗಿ ಕರ್ತವ್ಯ…

20 hours ago