ಹಾಡು ಪಾಡು

ಸ್ಥಿರತೆಯೇ ಇಲ್ಲದ ಅತಂತ್ರ ಬದುಕು ಇವರದು

ಅಮಿತಾ ರವಿಕಿರಣ್, ಬೆಲ್ಛಾಸ್ಟ್

‘ದೇವರ ಮನೆಯಿದು ಈ ಜಗವೆಲ್ಲ ಬಾಡಿಗೆ ದಾರರು ಜೀವಿಗಳೆಲ್ಲ’ ಎಂಬ ಹಾಡನ್ನು ಕೇಳಿದಾಗಲೆಲ್ಲ, ನನಗೆ ನಾವೆಲ್ಲ ನಿರಾಶ್ರಿತರೇ ಎಂದೆನಿಸುತ್ತದೆ. ಆದರೆ ನಾವು ಮನುಷ್ಯರು ನಿರಾಶ್ರಿತ ನಿರ್ಗತಿಕರೆಂದು ಗುರುತಿಸುವ ಮಂದಿಯೇ ಬೇರೆ. ಅವರನ್ನು ನೋಡುವ ದೃಷ್ಟಿ ಕೋನವೂ!

ಆದರೂ ತಾವು ಹುಟ್ಟಿದ ಭೂ ಭಾಗವನ್ನುಬಿಟ್ಟು, ಬದುಕಬೇಕು, ಸಾಮಾನ್ಯ ಮನುಷ್ಯ ಜೀವನ ನಡೆಸಬೇಕು ಎಂಬ ಕಿಂಚಿತ್ ಆಸೆಯೊಂದಿಗೆ, ತಮ್ಮ ಭಾಷೆ ಮಾತಾಡದ, ಪರಿಚಿತರೇ ಇಲ್ಲದ ಮತ್ತೊಂದು ನಾಡಿಗೆ ರಾತ್ರೋರಾತ್ರಿ ಹೊರಟು ಬರುವುದು ಸಾಮಾನ್ಯ ನಿರ್ಧಾರವಲ್ಲ. ಅಂಥಾ ಧೈರ್ಯವಂತರನ್ನೇ ನಮ್ಮ ಸಮಾಜ ನಿರಾಶ್ರಿತರು ಎಂದು ಕರೆಯುತ್ತದೆ.

ಮುಂಡಗೋಡದಲ್ಲಿ ಹುಟ್ಟಿ ಬೆಳೆದ ನನಗೆ ನಿರಾಶ್ರಿತ ಪದ ಕೇಳುವುದು, ಅಥವಾಜನರನ್ನು ನೋಡುವುದು ಹೊಸದೇನಲ್ಲ. ಆದರೆ ಯುಕೆಗೆ ಬಂದಮೇಲೆಯೇ ಆ ಪದವಿ ಹೊತ್ತ ಸಾಮಾನ್ಯ ಜನರ ಅಸಾಮಾನ್ಯ ಪಯಣದ ಕಥೆಯನ್ನು ಕೇಳಲು ಸಿಕ್ಕಿದ್ದು. ಅವರ ಜೀವನವನ್ನು ಹತ್ತಿರದಿಂದ ನೋಡಲು, ಜೊತೆಗೆ ಕೆಲಸ ಮಾಡಲು ಸಿಕ್ಕಿದ್ದು. ಹುಟ್ಟಿದ ನೆಲದಲ್ಲಿ ಆದ ರಾಜಕೀಯ ಸ್ಥಿತ್ಯಂತರಗಳು ಮತ್ತು ಅವು ತಂದೊಡ್ಡಿದ ಯುದ್ಧ ಭೀತಿ ಒಂದಷ್ಟು ಜನರನ್ನು ಈ ನಾಡಿಗೆ ಪುಟ್ಟ ದೋಣಿಗಳಲ್ಲಿ ತುಂಬಿ ತಂದರೆ, ಓದುವ, ಬರೆಯುವ, ಚಿತ್ರ ಬಿಡಿಸುವ, ಹಾಡುವ, ನುಡಿಸುವ ಎಲ್ಲಾ ಸೃಜನಶೀಲ ಕೆಲಸಗಳನ್ನು ಹರಾಮ್ ಎಂದ ದೇಶದಿಂದ ಬರೀ ಓದುವ, ಕಲಿಯುವ ಆಸೆ ಹೊತ್ತು ಈ  ನಾಡಿಗೆ ಬಂದ ಯುವಜನರು ಅದೆಷ್ಟೋ.

ಸಂಗೀತ ಕಲಾವಿದೆ ಆದ್ದರಿಂದ, workshop, ಗಾಯನ ಕಾರ್ಯಕ್ರಮ ಅಂತೆಲ್ಲ ಇವರನ್ನೆಲ್ಲ ಪದೇ ಪದೇ ಭೇಟಿ ಆಗಿದ್ದೇನೆ. ಒಮ್ಮೆ ಭೇಟಿ ಆದವರು ಇನ್ನೆಂದೂ ಸಿಗದೇ ಬೇರೆ ಊರಿಗೆ ಹೋಗಿಬಿಡುವ ಸಾಧ್ಯತೆಯೂ ಬಹಳಷ್ಟು. Home office ಕಟ್ಟಡವನ್ನು ಕಂಡು ಕೈಮುಗಿದವರನ್ನು ನೋಡಿ ವಿಸ್ಮಯಗೊಂಡಿದ್ದೇನೆ. ಯಾವಾಗ ಇಲ್ಲಿಂದ ಎತ್ತಂಗಡಿ ಮಾಡುತ್ತಾರೋ ಎಂದು ಗೊತ್ತಿಲ್ಲದೆ ನಲುಗುವ, ಬಿಕ್ಕುವ ಜನರಿಗೆ ಸಾಂತ್ವನ ಹೇಳಲೂ ಪದಗಳಿಲ್ಲದೆ ಮೌನವಾಗಿ ನಿಂತು ಅವರನ್ನು ದಿಟ್ಟಿಸಿದ್ದೇನೆ.

ತನ್ನ ೧೧ ವರ್ಷದ ಮಗಳೊಂದಿಗೆ ಅದ್ಯಾವುದೋ ಹಳ್ಳಿಯ ಪುಟ್ಟ ರೂಮ್‌ನಲ್ಲಿ ಉಳಿದುಕೊಂಡಿರುವ ಮುಜ್ಗಾನ್ ತನ್ನ ದೇಶದಲ್ಲಿ ಒಳ್ಳೆಯ ಹೆಸರುಗಳಿಸಿದ್ದ ಇಂಟೀರಿಯರ್ ಡಿಸೈನರ್. ಸಿತಾರ್ ಎಂಬ ಇರಾನಿಯನ್ ವಾದ್ಯ ನುಡಿಸುವ ಒನಿಡ್, ೪ ವರ್ಷ ಒಂದು ದೇಶದಲ್ಲಿದ್ದು, ಅಲ್ಲೇ ತನ್ನ ಭವಿಷ್ಯವನ್ನು ಕಲ್ಪಿಸಿಕೊಳ್ಳುತ್ತಿದ್ದ.ಮರುದಿನವೇ ಆತನಿಗೆ ಅಲ್ಲಿಂದ ತೆರಳಬೇಕು ಎಂಬ ಆದೇಶ ಬಂತು.

ಸಾಝ್ ನುಡಿಸಿ ಹಾಡುವ ಮೂರು ಮಕ್ಕಳ ತಂದೆ ಸಮ್ಹಾರ್ ಇರಬಹುದು. ತನ್ನ ತಾಯಿಯನ್ನು ಅಲ್ಲೇ ಬಿಟ್ಟು ಬಂದಿರುವ ವಾಹ್ಲಾಲ ಇರಬಹುದು. ಎಲ್ಲರ ಬದುಕು ksph ಆಫೀಸಿನಿಂದ ಬರುವ ಒಂದು ಹಾಳೆಯ ಮೇಲೆ ಅವಲಂಬಿತವಾಗಿದೆ. ಎಷ್ಟೋ ಸಂಘಟನೆಗಳು ಈ ನಿಟ್ಟಿನಲ್ಲಿ, refugeeಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದರೂ ಸ್ಥಿರತೆ ಇರದೆ ಯಾವ ಮನಸ್ಸು ತಾನೇ ನೆಮ್ಮದಿಯಲ್ಲಿದ್ದೀತು?

” ಯಾವಾಗ ಇಲ್ಲಿಂದ ಎತ್ತಂಗಡಿ ಮಾಡುತ್ತಾರೋ ಎಂದು ಗೊತ್ತಿಲ್ಲದೆ ನಲುಗುವ, ಬಿಕ್ಕುವ ಜನರಿಗೆ ಸಾಂತ್ವನ ಹೇಳಲೂ ಪದಗಳಿಲ್ಲದೆ ಮೌನವಾಗಿ ನಿಂತು ಅವರನ್ನು ದಿಟ್ಟಿಸಿದ್ದೇನೆ.”

ಆಂದೋಲನ ಡೆಸ್ಕ್

Recent Posts

‘ಅಂಕಲ್ ಚೋಕ್’ ಕಟ್ಟಿದ ಬಿದಿರಿನ ಮಾಯಾಲೋಕ

ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…

1 hour ago

ಮುಚ್ಚುತ್ತಿರುವ ಚಿತ್ರಮಂದಿರ

ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…

1 hour ago

ಅಳಿಯ ಅಲ್ಲ, ಮಗಳ ಗಂಡ!

ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…

1 hour ago

ವಿರಾಜಪೇಟೆ: ರಸ್ತೆಯುದ್ದಕ್ಕೂ ಗುಂಡಿಗಳದ್ದೇ ಪಾರಮ್ಯ

ಕಾಂಗೀರ ಬೋಪಣ್ಣ ವಿರಾಜಪೇಟೆ: ತಾಲ್ಲೂಕಿನಲ್ಲಿನ ಮುಖ್ಯರಸ್ತೆಗಳು ವಾಹನಗಳು ಸಂಚರಿಸಲಾರದಷ್ಟು ಹಾಳಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈ…

1 hour ago

ಇದು ಅಂತ್ಯವಲ್ಲ-ಹೊಸ ಆರಂಭ

ರೇಣುಕಾ ನಿಡುಗುಂದಿ ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದು ತಾತ್ಕಾಲಿಕ ನೈತಿಕ ಗೆಲುವು ದೊರೆತಿದೆ. ಕೇಂದ್ರ ಶಿಕ್ಷಣ ಸಚಿವ…

1 hour ago

ಎಸ್‌ಐಆರ್ ಅರ್ಜಿ; ಅನಿವಾರ್ಯ ಮರ್ಜಿ

ಚಿರಂಜೀವಿ ಸಿ ಹುಲ್ಲಹಳ್ಳಿ ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಹಲವು ಗ್ರಾಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಸಮರ್ಪಕ ಜಾಗೃತಿಯೇ…

1 hour ago