ಹಾಡು ಪಾಡು

ಸಂವಿಧಾನ ಮತ್ತು ಅಪ್ಪನ ಕಣ್ಣ ಬೆಳಕು

ರಮ್ಯ ಕೆ ಜಿ ಮೂರ್ನಾಡು

ನಾನು ಸಣ್ಣವಳಿದ್ದಾಗ ನಮ್ಮ ಮನೆಯಲ್ಲಿ ಟಿವಿ ಇಲ್ಲದ ಕಾರಣ ಭಾನುವಾರ ನಮ್ಮಪ್ಪ ಪಿಚ್ಚರ್ ನೋಡಲು ಅವರ ಪರಿಚಯವಿರುವ ಒಂದು ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಅವರ ಟಿವಿ, ಹಾಲ್‌ನಲ್ಲಿದ್ದ ಕಾರಣ ನಾವು ಮನೆಯಿಂದ ಆಚೆ ಅಂದ್ರೆ ಹೊರಗಡೆ ಕೂತು ಪಿಚ್ಚರ್ ನೋಡ್ತಿದ್ದೆವು. ಆಗೊಂದು ದಿನ ‘ಹೇಮಾವತಿ’ ಪಿಚ್ಚರ್ ಹಾಕಿದ್ರು. ಅದ್ರಲ್ಲಿ ಹೀರೋ ಶ್ರೀನಿವಾಸಮೂರ್ತಿಯವರಿಗೆ ಬ್ರಾಹ್ಮಣ್ರು ಕೆಲವ್ರು “ನಮ್ ಸಂಸ್ಕಾರ, ಸಂಸ್ಕ ತಿ ಹಾಳ್ಮಾಡ್ದೆ‘ ಅಂತೆಲ್ಲ ಬೈತಿದ್ರು. ಶ್ರೀನಿವಾಸಮೂರ್ತಿ ಅವರಿಗೆಲ್ಲ ಮಾನವೀಯತೆಯ ಪಾಠ ಹೇಳ್ತಿದ್ದ. ಆಗ ನನ್ನಪ್ಪನ ಮುಖದಲ್ಲಿ ಎಂಥದ್ದೋ ಮಿಂಚು ಹೊಳಿತಿತ್ತು. ಆ ಮಿಂಚಿಗೆ ಕಾರಣ ಏನು ಅನ್ನೋದು ಆಗ ಗೊತ್ತಾಗಿರ್ಲಿಲ್ಲ. ಇತ್ತೀಚೆಗೆ ಮತ್ತೆ ಆ ಸಿನಿಮಾನ ನೋಡ್ದಾಗ ನನ್ನಪ್ಪನೊಳಗಿನ ಮಿಂಚಿಗೆ ಕಾರಣ ಗೊತ್ತಾಯ್ತು. ಅದೇ ಆ ಮನೆಯವರು, ಇಂದು ನನ್ನನ್ನು ಮನೆಯೊಳಗೆ ಕರೆದು, ಸೋಫಾದಲ್ಲಿ ಕೂರಿಸಿ, ಕಾಫಿ ಕೊಡುತ್ತಾರಂದ್ರೆ ಇದು ಸಾಧ್ಯವಾದದ್ದು ಸಂವಿಧಾನದಿಂದ.

ನನ್ನೂರು ಕೊಡಗು. ನಾನು ದಲಿತ ಸಮುದಾಯಕ್ಕೆ ಸೇರಿದ ಹೆಣ್ಣು. ಇಲ್ಲಿನ ಮೂಲನಿವಾಸಿಗಳಾಗಿದ್ದೂ, ಇನ್ನೂ ಅಸ್ಪೃಶ್ಯರಾಗಿಯೇ ಉಳಿದಿರುವ ಅನೇಕ ಸಮುದಾಯಗಳೊಂದಿಗೆ ಶತಮಾನಗಳಾಚೆ ಕೊಡಗಿಗೆ ವಲಸೆ ಬಂದ ನಮ್ಮ ಸಮುದಾಯದ ಅನೇಕರಿಗೆ ಇಂದಿಗೂ ಮನೆಗಳಿಲ್ಲ.

ನನ್ನಮ್ಮನಂತೆ ಅನಕ್ಷರಸ್ಥರೂ, ಮತ್ತು ಅಕ್ಷರಸ್ಥರಾಗಿಯೂ ಶಿಕ್ಷಣ ವಂಚಿತರಾದ ಅನೇಕರು ಇಲ್ಲಿನ ತೋಟಗಳಲ್ಲಿ ಇಂದಿಗೂ ಕೂಲಿಯಾಳುಗಳಾಗಿಯೇ ಉಳಿದು ಹೋಗಿರುವುದಕ್ಕೆ ಕಾರಣ ಉಳ್ಳವರು ಹೇಳುವ ದುಶ್ಚಟಗಳೊಂದೇ ಅಲ್ಲವೆನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ನನ್ನಪ್ಪ ಹೇಳಿದ ಒಂದು ಸಂಗತಿ ನೆನಪಾಗುತ್ತದೆ. ಆ ಕಾಲಕ್ಕೆ ಮೂರ್ನಾಡಿನಲ್ಲಿದ್ದ ಇಂಗ್ಲಿಷ್ ಮೀಡಿಯಂ ಶಾಲೆಗೆ ನನ್ನನ್ನು ಸೇರಿಸುವ ಬಯಕೆಯಾದಾಗ, ಅಲ್ಲಿನ ಮ್ಯಾನೇಜ್ಮೆಂಟ್‌ಗೆ ಕೇಳಿ, ಸ್ವಲ್ಪ ಸ್ವಲ್ಪವೇ ಫೀಸ್ ಕಟ್ತೀನಿ ಅಂತ ನನ್ನಪ್ಪ ಕೋರಿಕೊಂಡಾಗ್ಯೂ, ಮ್ಯಾನೇಜ್ಮೆಂಟ್ ಒಪ್ಪದ ಕಾರಣ ನನ್ನನ್ನು ಸರ್ಕಾರಿ ಶಾಲೆಗೆ ಸೇರಿಸಬೇಕಾಯ್ತಂತೆ. ಈ ಸರ್ಕಾರಿ ಶಾಲೆಯೂ ಇಲ್ಲದೇ ಹೋಗಿದ್ದಿದ್ದರೆ! ಮತ್ತು ಶಿಕ್ಷಣ ಎಲ್ಲರಿಗೂ ಸಿಗಬೇಕೆಂದು ಸಂವಿಧಾನದಲ್ಲಿ ಇಲ್ಲದೇ ಹೋಗಿದ್ದಿದ್ದರೆ! ನೆನೆದರೇ ದಿಗಿಲು ನನಗೆ!

ಶಾಲೆಗಳಲ್ಲಿ ನನ್ನ ಕಲಿಕೆ ನೋಡಿ ನಮ್ಮಪ್ಪನಿಗೆ ಖುಷಿಯಾಗುತ್ತಿತ್ತು. ಆದರೆ ಯಾರ್ಯಾರೋ “ಹುಡುಗೀರ್ನ ಯಾಕೆ ಓದಿಸ್ತೀಯ?” ಅಂತ ಕೇಳ್ತಿದ್ರಂತೆ. ಆದ್ರೆ ನನ್ನೊಂದಿಗೆ ನನ್ನ ತಂಗಿ, ತಮ್ಮಂದಿರನ್ನೂ ಶಾಲೆಗೆ ಕಳಿಸಿದ ನನ್ನಪ್ಪ ಮತ್ತು ಅಮ್ಮನ ಪ್ರಜ್ಞೆಯ ಕಾರಣವಾಗಿ ನಾನೀಗ ಇಂದು ಸಂವಿಧಾನ ನೀಡಿದ ಮೀಸಲಾತಿಯ ಉಪಯೋಗದಿಂದ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದೇನೆ. ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇನೆ.

” ಮಾನವತೆಯ ಮಹಾಶಕ್ತಿಯಾಗಿರುವ ಸಂವಿಧಾನವೇ ನಮ್ಮ ಬದುಕಿನ ಬೆಳಕು ಎಂದು ನನ್ನೊಳಗನ್ನು ಮತ್ತೆ ಎಚ್ಚರಗೊಳಿಸಿ ಕೊಳ್ಳುತ್ತಿದ್ದೇನೆ…”

ಆಂದೋಲನ ಡೆಸ್ಕ್

Recent Posts

ಕೊಡಗು ಜಿಲ್ಲೆಯಲ್ಲಿ ಏಪ್ರಿಲ್.‌8ರಿಂದ ಪಾಸ್‌ಪೋರ್ಟ್‌ ಮೇಳ: ಸಂಸದ ಯದುವೀರ್‌ ಒಡೆಯರ್‌ ಮಾಹಿತಿ

ಕೊಡಗು: ಸಂಸದ ಯದುವೀರ್‌ ಕೃಷ್ಣದತತ ಚಾಮರಾಜ ಒಡೆಯರ್‌ ಅವರ ಪರಿಶ್ರಮದ ಫಲವಾಗಿ ಕೊಡಗಿನಲ್ಲಿ ಪಾಸ್‌ಪೋರ್ಟ್‌ ಮೇಳ ಆಯೋಜಿಸಲು ಬೆಂಗಳೂರು ವಿಭಾಗೀಯ…

55 seconds ago

ಇರಾನ್‌ ಸರ್ವೋಚ್ಛ ನಾಯಕನಾಗಿ ಅಯತೊಲ್ಲಾ ಅಲಿ ಖಮೇನಿ ಪುತ್ರ ಮೊಜ್ತಬಾ ಖಮೇನಿ ಆಯ್ಕೆ.?

ಟೆಹರಾನ್:‌ ಇರಾನ್‌ ಸರ್ವೋಚ್ಛ ನಾಯಕರಾಗಿದ್ದ ಅಯತೊಲ್ಲಾ ಅಲಿ ಖಮೇನಿಯವರು ಮಗ ಉತ್ತರಾಧಿಕಾಗಲು ಪ್ರಮುಖ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ಇರಾನ್‌ನ ಮುಂದಿನ ಸರ್ವೋಚ್ಛ…

19 mins ago

ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಿಗ್‌ ಬಜೆಟ್‌ ಸಿನಿಮಾ ಟಾಕ್ಸಿಕ್‌ ಇರಾನ್-‌ ಇಸ್ರೇಲ್‌ ಯುದ್ಧದ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಮಾರ್ಚ್.‌19ರಂದು ಬಿಡುಗಡೆಯಾಗಬೇಕಿದ್ದ…

39 mins ago

ಬೆಟ್ಟಳ್ಳಿ ಮಾರಮ್ಮ ಜಾತ್ರಾ ವಿಶೇಷ: ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಕಂಬ ಪ್ರತಿಷ್ಠಾಪನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ…

2 hours ago

ಹನೂರು| ಚಂಗಡಿ ಗ್ರಾಮದ ಸುತ್ತಮುತ್ತ ಪ್ರತಿನಿತ್ಯ ಹುಲಿ ಓಡಾಟ: ಆತಂಕದಲ್ಲಿ ಸ್ಥಳೀಯರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಚಂಗಡಿ ಗ್ರಾಮದ ಸಮೀಪ ಪ್ರತಿನಿತ್ಯ…

2 hours ago

ಓದುಗರ ಪತ್ರ: ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಾಲೇಜು ಬಸ್ ನಿಲ್ದಾಣದ ಮೂಲಕ ನಂಜನಗೂಡು ಹಾಗೂ ಚಾಮರಾಜನಗರ  ಸಂಜೆಯ ವೇಳೆ ಸಾಕಷ್ಟು ಬಸ್‌ಗಳಿಲ್ಲದೆ…

2 hours ago