ಇವರು ಮೈಸೂರು ಅರಮನೆಯ ಪ್ಯಾಲೇಸ್ ಇಂಗ್ಲಿಷ್ ಬ್ಯಾಂಡಿನ ನಿವೃತ್ತ ಕ್ಲಾರಿಯೋನೆಟ್ ವಾದಕರಾದ ಡಿ.ರಾಮು. ವಯಸ್ಸು ಈಗ ಸುಮಾರು ಎಂಬತ್ತೈದರ ಆಸುಪಾಸು. ತಮ್ಮ ಹತ್ತನೇ ವರ್ಷದಲ್ಲೇ ಅರಮನೆಯಲ್ಲಿ ತಿಂಗಳಿಗೆ ಹದಿನೆಂಟು ವರ್ಷದ ಪಗಾರಕ್ಕೆ ನುಡಿಸಲು ತೊಡಗಿದವರು. ಆನಂತರ ಮೈಸೂರು ಪೊಲೀಸ್ ಬ್ಯಾಂಡಾಗಿ ರೂಪಾಂತರಗೊಂಡ ಇಂಗ್ಲಿಷ್ ಬ್ಯಾಂಡಿನಲ್ಲಿ ದುಡಿದು ಮೂವತ್ತು ವರ್ಷಗಳ ಹಿಂದೆ ನಿವೃತ್ತಿಗೊಂಡವರು. ಇವರ ವಿಶೇಷವೇನೆಂದರೆ ಅದೇ ಸರಳ ಸಜ್ಜನಿಕೆ ಮತ್ತು ಈಗಲೂ ಅದೇ ಪರಿಶ್ರಮ. ತನ್ನದೇನಿಲ್ಲ ಈ ಸಾಧನೆಯಲ್ಲಿ. ಎಲ್ಲವೂ ಈ ವಿದ್ಯೆಯನ್ನು ಕಲಿಸಿದ ಗುರುಗಳ ಕೃಪೆ ಎನ್ನುವ ವಿನೀತ ಭಾವ. ಮೈಸೂರು ಮಹಾನಗರಿಯ ದಸರಾ ನವರಾತ್ರಿ ಸಡಗರ ತನ್ನ ಉತ್ತುಂಗದತ್ತ ಏರುತ್ತಿರುವ ಈ ಹೊತ್ತಲ್ಲಿ ಈ ಅರಮನೆಯ ಊರಿನ ಸಂದುಗೊಂದುಗಳಲ್ಲಿ ಅಜ್ಞಾತರಾಗಿ ಬದುಕುತ್ತಿರುವ ಡಿ.ರಾಮು ಅವರಂತಹ ಎಲ್ಲ ಅನುಪಮ ಕಲಾವಿದರಿಗೂ ನಮ್ಮೆಲ್ಲರ ನಮಸ್ಕಾರ.
ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…
೨೦೨೮ - ೨೯ ರ ಶೈಕ್ಷಣಿಕ ವರ್ಷದ ವೇಳೆಗೆ ದೇಶಾದ್ಯಂತ ಹೆಚ್ಚುವರಿಯಾಗಿ ೫,೦೦೦ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ…
ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟಿದ್ದು ಎಲ್ನಿನೋ ಪರಿಣಾಮ ಎಂದು ವರದಿಗಳು ಹೇಳಿವೆ. ಜೊತೆಗೆ ಹವಾಮಾನ ಇಲಾಖೆ ಅದನ್ನು ಪುಷ್ಟೀಕರಿಸಿದ್ದು, ಈ…
ವಸಂತಕುಮಾರ ಮೈಸೂರು ಮಠ, ತಂಬಾಕು ವಿರೋಧಿ ಹೋರಾಟಗಾರ ಗುಣಮಟ್ಟದ ತಂಬಾಕು ಬೆಳೆ ಸಂಬಂಧ ರಾಜಕೀಯ ಹಸ್ತಕ್ಷೇಪ ಸಲ್ಲದು ಯಾವುದೇ ರೀತಿಯ…
ನವೀನ್ ಡಿಸೋಜ ಸಾಂಕ್ರಾಮಿಕ ಕಾಯಿಲೆಯಲ್ಲಿ ಹಿನ್ನೆಲೆ ಹೋಟೆಲ್, ರೆಸ್ಟೋರೆಂಟ್ಗಳಿಗೆ ಆಹಾರ ಸುರಕ್ಷತೆ ಇಲಾಖೆ ಸೂಚನೆ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ…
ರಾಜೇಶ್ ಬೆಂಡರವಾಡಿ ಪಶುಸಂಗೋಪನೆ, ರೇಷ್ಮೆ ಖಾತೆ ಹಂಚಿಕೆ; ಉಭಯ ಕ್ಷೇತ್ರಗಳಲ್ಲಿ ಅನುಭವ ಇರುವ ಹಿನ್ನೆಲೆ ಚಾಮರಾಜನಗರ: ರಾಜ್ಯದಲ್ಲಿ ಎರಡನೇ ಹಂತದಲ್ಲಿ…