ಇವರು ಮೈಸೂರು ಅರಮನೆಯ ಪ್ಯಾಲೇಸ್ ಇಂಗ್ಲಿಷ್ ಬ್ಯಾಂಡಿನ ನಿವೃತ್ತ ಕ್ಲಾರಿಯೋನೆಟ್ ವಾದಕರಾದ ಡಿ.ರಾಮು. ವಯಸ್ಸು ಈಗ ಸುಮಾರು ಎಂಬತ್ತೈದರ ಆಸುಪಾಸು. ತಮ್ಮ ಹತ್ತನೇ ವರ್ಷದಲ್ಲೇ ಅರಮನೆಯಲ್ಲಿ ತಿಂಗಳಿಗೆ ಹದಿನೆಂಟು ವರ್ಷದ ಪಗಾರಕ್ಕೆ ನುಡಿಸಲು ತೊಡಗಿದವರು. ಆನಂತರ ಮೈಸೂರು ಪೊಲೀಸ್ ಬ್ಯಾಂಡಾಗಿ ರೂಪಾಂತರಗೊಂಡ ಇಂಗ್ಲಿಷ್ ಬ್ಯಾಂಡಿನಲ್ಲಿ ದುಡಿದು ಮೂವತ್ತು ವರ್ಷಗಳ ಹಿಂದೆ ನಿವೃತ್ತಿಗೊಂಡವರು. ಇವರ ವಿಶೇಷವೇನೆಂದರೆ ಅದೇ ಸರಳ ಸಜ್ಜನಿಕೆ ಮತ್ತು ಈಗಲೂ ಅದೇ ಪರಿಶ್ರಮ. ತನ್ನದೇನಿಲ್ಲ ಈ ಸಾಧನೆಯಲ್ಲಿ. ಎಲ್ಲವೂ ಈ ವಿದ್ಯೆಯನ್ನು ಕಲಿಸಿದ ಗುರುಗಳ ಕೃಪೆ ಎನ್ನುವ ವಿನೀತ ಭಾವ. ಮೈಸೂರು ಮಹಾನಗರಿಯ ದಸರಾ ನವರಾತ್ರಿ ಸಡಗರ ತನ್ನ ಉತ್ತುಂಗದತ್ತ ಏರುತ್ತಿರುವ ಈ ಹೊತ್ತಲ್ಲಿ ಈ ಅರಮನೆಯ ಊರಿನ ಸಂದುಗೊಂದುಗಳಲ್ಲಿ ಅಜ್ಞಾತರಾಗಿ ಬದುಕುತ್ತಿರುವ ಡಿ.ರಾಮು ಅವರಂತಹ ಎಲ್ಲ ಅನುಪಮ ಕಲಾವಿದರಿಗೂ ನಮ್ಮೆಲ್ಲರ ನಮಸ್ಕಾರ.

lokesh

Recent Posts

ದೂರ ಗ್ರಾಮಕ್ಕೆ ನಟ ಪ್ರಭುದೇವ ಭೇಟಿ

ದೂರ: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ದೂರ ಗ್ರಾಮಕ್ಕೆ ಖ್ಯಾತ ನಟ, ನಿರ್ದೇಶಕ ಪ್ರಭುದೇವ ಶನಿವಾರ ಆಗಮಿಸಿದ್ದರು. ಅವರು ಮೊದಲು…

7 hours ago

ಸೌದಿ ಅರಾಮ್ಕೊ ತೈಲ ಕಂಪನಿಯ ಹೆಲಿಕಾಪ್ಟರ್‌ ಪತನ: 14 ಮಂದಿ ದುರ್ಮರಣ

ರಿಯಾಧ್:‌ ಸೌದಿ ಅರಾಮ್ಕೊ ತೈಲ ಕಂಪನಿಗೆ ಸೇರಿದ ಹೆಲಿಕಾಪ್ಟರ್‌ ಅಪಘಾತಕ್ಕೀಡಾಗಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ. ಸೌದಿ ಅರೇಬಿಯಾದ ರಾಸ್‌…

8 hours ago

ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣ: ಕೆಂಪಯ್ಯನಹುಂಡಿ ಗ್ರಾಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

ಟಿ.ನರಸೀಪುರ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಕೆಂಪಯ್ಯನಹುಂಡಿ ಗ್ರಾಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ…

9 hours ago

ಮೈಸೂರಿನ ಎರಡು ಪ್ರಮುಖ ಹೋಟೆಲ್‌ಗಳಿಗೆ ಬಾಂಬ್‌ ಬೆದರಿಕೆ ಕರೆ: ಕೆಲಕಾಲ ಆತಂಕ ಸೃಷ್ಟಿ

ಮೈಸೂರು: ನಗರದ ಪ್ರಮುಖ ಎರಡು ಹೋಟೆಲ್‌ಗಳನ್ನು ಬಾಂಬ್ ಮೂಲಕ ಸ್ಛೋಟಿಸುವುದಾಗಿ ಇ-ಮೇಲ್ ಮೂಲಕ ವ್ಯಕ್ತಿಯೊಬ್ಬ ಬೆದರಿಕೆ ಒಡ್ಡಿದ್ದು, ಕೆಲಕಾಲ ಆತಂಕ…

10 hours ago

ಜಮೀನಿನಲ್ಲಿ ಯುವತಿಗೆ ಹಾವು ಕಡಿತ

ಹನೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯುವತಿಯೊಬ್ಬರಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಅಜ್ಜೀಪುರ ಗ್ರಾಮದಲ್ಲಿ ನಡೆದಿದೆ.…

10 hours ago

ಸರಗೂರು: ಹುಲಿ ದಾಳಿಗೆ ಕರು ಬಲಿ

ಸರಗೂರು: ಮೈಸೂರು ಜಿಲ್ಲೆಯಲ್ಲಿ ಮತ್ತೆ ಹುಲಿ ಉಪಟಳ ಹೆಚ್ಚಾಗಿದ್ದು, ಹುಲಿ ದಾಳಿಗೆ ಕರುವೊಂದು ಬಲಿಯಾಗಿರುವ ಘಟನೆ ಸರಗೂರು ತಾಲ್ಲೂಕಿನ ಹೆಗ್ಗನೂರು…

11 hours ago