ಇವರು ಮೈಸೂರು ಅರಮನೆಯ ಪ್ಯಾಲೇಸ್ ಇಂಗ್ಲಿಷ್ ಬ್ಯಾಂಡಿನ ನಿವೃತ್ತ ಕ್ಲಾರಿಯೋನೆಟ್ ವಾದಕರಾದ ಡಿ.ರಾಮು. ವಯಸ್ಸು ಈಗ ಸುಮಾರು ಎಂಬತ್ತೈದರ ಆಸುಪಾಸು. ತಮ್ಮ ಹತ್ತನೇ ವರ್ಷದಲ್ಲೇ ಅರಮನೆಯಲ್ಲಿ ತಿಂಗಳಿಗೆ ಹದಿನೆಂಟು ವರ್ಷದ ಪಗಾರಕ್ಕೆ ನುಡಿಸಲು ತೊಡಗಿದವರು. ಆನಂತರ ಮೈಸೂರು ಪೊಲೀಸ್ ಬ್ಯಾಂಡಾಗಿ ರೂಪಾಂತರಗೊಂಡ ಇಂಗ್ಲಿಷ್ ಬ್ಯಾಂಡಿನಲ್ಲಿ ದುಡಿದು ಮೂವತ್ತು ವರ್ಷಗಳ ಹಿಂದೆ ನಿವೃತ್ತಿಗೊಂಡವರು. ಇವರ ವಿಶೇಷವೇನೆಂದರೆ ಅದೇ ಸರಳ ಸಜ್ಜನಿಕೆ ಮತ್ತು ಈಗಲೂ ಅದೇ ಪರಿಶ್ರಮ. ತನ್ನದೇನಿಲ್ಲ ಈ ಸಾಧನೆಯಲ್ಲಿ. ಎಲ್ಲವೂ ಈ ವಿದ್ಯೆಯನ್ನು ಕಲಿಸಿದ ಗುರುಗಳ ಕೃಪೆ ಎನ್ನುವ ವಿನೀತ ಭಾವ. ಮೈಸೂರು ಮಹಾನಗರಿಯ ದಸರಾ ನವರಾತ್ರಿ ಸಡಗರ ತನ್ನ ಉತ್ತುಂಗದತ್ತ ಏರುತ್ತಿರುವ ಈ ಹೊತ್ತಲ್ಲಿ ಈ ಅರಮನೆಯ ಊರಿನ ಸಂದುಗೊಂದುಗಳಲ್ಲಿ ಅಜ್ಞಾತರಾಗಿ ಬದುಕುತ್ತಿರುವ ಡಿ.ರಾಮು ಅವರಂತಹ ಎಲ್ಲ ಅನುಪಮ ಕಲಾವಿದರಿಗೂ ನಮ್ಮೆಲ್ಲರ ನಮಸ್ಕಾರ.
ಚಾಮರಾಜನಗರ ತಾಲ್ಲೂಕಿನ ಮುಕ್ಕಡಹಳ್ಳಿಯ ಬಸ್ ತಂಗುದಾಣವು ರಾತ್ರಿಯ ವೇಳೆಯಲ್ಲಿ ಮದ್ಯಪಾನದಂತಹ ಅನೈತಿಕ ಚಟುವಟಿಕೆಗೆ ವೇದಿಕೆಯಾಗಿದೆ. ಕುಡಿದು ಬಾಟಲಿಗಳು, ಮದ್ಯದ ಪೌಚ್ಗಳು,…
ಹಾವನೂರು ಆಯೋಗದ ವರದಿಯನ್ನು ಅಂದಿನ ಮುಖ್ಯಮಂತ್ರಿ ಅರಸು ಅವರು 'ಹಿಂದುಳಿದ ವರ್ಗಗಳ ಬೈಬಲ್' ಎಂದು ಬಣ್ಣಿಸಿದರೆ, ಸರ್ವೋಚ್ಚ ನ್ಯಾಯಾಲಯವು 'ಹಿಂದುಳಿದ…
ಕೇವಲ 3 ಗಂಟೆಗಳಲ್ಲಿ ಸತ್ಯಾಸತ್ಯತೆ ಪರಿಶೀಲನೆ ಸಾಧ್ಯವೇ? • ಶೇಷಾದ್ರಿ ಗಂಜೂರು, ಮಾಧ್ಯಮ ತಜ್ಞ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ, ಅದರಲ್ಲೂ…
ರಾತ್ರಿ ಪಾಳಿಯಲ್ಲಿ ನರ್ಸ್ಗಳು, ವೈದ್ಯರ ನಿಯೋಜನೆಗೆ ಜನತೆ ಒತ್ತಾಯ • ಸಿದ್ದೇಗೌಡ ಕೊಡಿಯಾಲ ಶ್ರೀರಂಗಪಟ್ಟಣ : ಕ್ಷೇತ್ರದ ಶಾಸಕ ರಮೇಶ್…
ಸ್ಥಳೀಯರಿಗೆ ಸಮಸ್ಯೆ; ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು • ಕಾಂಗೀರ ಬೋಪಣ್ಣ ವಿರಾಜಪೇಟೆ : ಸ್ಥಳೀಯರಿಗೆ ಎಲ್ಲ ರೀತಿಯಲ್ಲೂ ಸಮಸ್ಯೆಯನ್ನು…
ಮೋರಿ ವಾಸನೆಯಿಂದ ಕುರುಬಾರಹಳ್ಳಿ ವಾಸಿಗಳ ಪರಿತಾಪ ಕೆ.ಎಸ್.ಚಂದ್ರಶೇಖರ್ ಮೂರ್ತಿ ಮೈಸೂರು : ರಸ್ತೆಯಲ್ಲಿ ಕಿರಿದಾದ ಮೋರಿಗಳು, ಒಳಚರಂಡಿ ನೀರು ಮೋರಿಗಳಲ್ಲಿ…