ಹಾಡು ಪಾಡು

ಪೊದೆಗಳ ನಡುವೆ ಮರೆಯಾಗಿರುವ ಚನ್ನಕೇಶವ ದೇವಾಲಯ

ಚಿತ್ರಾ ವೆಂಕಟರಾಜು

ಪಿರಿಯಾಪಟ್ಟಣದಲ್ಲಿ ಅಷ್ಟು ಪ್ರಸಿದ್ಧಿ ಪಡೆಯದ ಹೊಯ್ಸಳರ ಕಾಲದ ಚನ್ನಕೇಶವ ದೇವಾಲಯವಿದೆ. ಹೊಯ್ಸಳರ ಶೈಲಿಯ ವಾಸ್ತುಶಿಲ್ಪ ದಲ್ಲಿರುವ ಈ ದೇವಾಲಯದ ಚನ್ನಕೇಶವ ಪಟ್ಟಣದ ಕರಿಬಸಪ್ಪ ಲೇಔಟಿನಲ್ಲಿ ಪೊದೆಗಳ ನಡುವೆ ಮರೆಯಾಗಿದ್ದಾನೆ. ಹೊಯ್ಸಳರ ಕಾಲದ ಕಂಬಗಳು, ವಿಶಾಲವಾದ ಪ್ರಾಂಗಣ, ಒಳಗೆ ಗರ್ಭಗುಡಿಯಲ್ಲಿ ಚನ್ನಕೇಶವ ಮಸಣಿಕಮ್ಮ, ಕನ್ನಂಬಾಡಮ್ಮನಿಂದ ಸ್ವಲ್ಪ ದೂರದಲ್ಲೇ ಊರಿಗೂ ತನಗೂ ಸಂಬಂಧವೇ ಇಲ್ಲ ವೇನೋ ಎಂಬಂತೆ ನಿಂತಿದ್ದಾನೆ. ಮೊದಲು ಪುರಾತತ್ವ ಇಲಾಖೆಗೆ ಸೇರಿದ್ದ ಈ ದೇವಾಲಯವನ್ನು ದೇವಾಲಯದ ಕಮಿಟಿಯ ವರು ಮುಜರಾಯಿ ಇಲಾಖೆಗೆ ಸೇರಿಸ ಬೇಕೆಂದು ಪತ್ರ ವ್ಯವಹಾರ ನಡೆಸುತ್ತಿದ್ದಾರೆ. ಕಳೆದ ೨೦ ವರ್ಷಗಳಿಂದಲೂ ಪ್ರತಿದಿನ ನಾಗರಾಜು ಅವರು ಈ ದೇವಾಲಯದಲ್ಲಿ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ಶನಿವಾರ ಚನ್ನಕೇಶವನಿಗೆ ಅಭಿಷೇಕ ನಡೆಯುತ್ತದೆ. ಅವರು ಹೇಳುವ ಪ್ರಕಾರ, ಬೇಲೂರಿನಲ್ಲಿರುವ ಚನ್ನಕೇಶವ ಇಲ್ಲಿಂದಲೇ ಅಲ್ಲಿಗೆ ಹೋದದ್ದು. ಮೈಸೂರು ಮಹಾರಾಜರಿಗೂ ಪಿರಿಯಾ ದೊರೆಗೂ ಯುದ್ಧ ನಡೆಯುತ್ತದೆ. ಇಲ್ಲಿನ ಗ್ರಾಮದೇವತೆ ಮಸಣಿಕಮ್ಮ, ಚಾಮುಂಡಿಯ ತಂಗಿ. ಎಲ್ಲಿಯತನಕ ಮಸಣಿಕಮ್ಮ ಈ ಊರಲ್ಲಿರುತ್ತಾಳೋ ಅಲ್ಲಿಯವರೆಗೆ ಇದನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದ ಮಹಾರಾಜರು ಚಾಮುಂಡಿಯ ಬಳಿ ಪ್ರಾರ್ಥಿಸಿಕೊಳ್ಳುತ್ತಾರೆ. ಆಗ ಚಾಮುಂಡಿ ಬೇರೆ ಏನೋ ಕಾರಣ ಹೇಳಿ ತಂಗಿ ಮಸಣಿ ಕಮ್ಮನನ್ನು ಮೈಸೂರಿಗೆ ಕರೆಸಿಕೊಳ್ಳುತ್ತಾಳೆ. ಆಗ ನಡೆದ ಯುದ್ಧದಲ್ಲಿ ಇಲ್ಲಿಯ ಪಿರಿಯಾ ದೊರೆ ಸೋಲುತ್ತಾನೆ.

ಆಗ ಸಿಟ್ಟಿಗೆದ್ದ ದೊರೆ ‘ನೀನಿದ್ದಾಗಲೂ ನಾನು ಸೋತೆನಲ್ಲಾ, ನೀನು ಇಲ್ಲಿದ್ದು ಏನು ಪ್ರಯೋ ಜನವಾಯಿತು?’ ಎಂದು ಚನ್ನಕೇಶವ ಮೂರ್ತಿಯನ್ನು ಹಳಿಯುತ್ತಾನೆ. ಆಗ ಚನ್ನಕೇಶವ ಇಲ್ಲಿಂದ ಹೊರಟು ಹೋದ ಎಂಬ ಕತೆಯನ್ನು ಹೇಳುತ್ತಾರೆ. ಆದರೂ ಅವನ ಭಕ್ತರು ನಿರಂತರವಾಗಿ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ ಮತ್ತು ಇದರ ಜೀರ್ಣೋದ್ಧಾರಕ್ಕಾಗಿ ಕಾಯುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

ಹಾರ್ಮುಜ್ ಮೇಲೆ ಅಮೆರಿಕ ಸಂಪೂರ್ಣ ಹಿಡಿತ ; ಟ್ರಂಪ್ ಹೇಳಿಕೆಯಿಂದ ವಾಸ್ತವ ಬದಲಾಗಲ್ಲ : ಇರಾನ್ ತಿರುಗೇಟು

ಷರತ್ತುಗಳ ಒಪ್ಪದ ಹೊರತು ಜಲಸಂಧಿ ತೆರೆಯಲ್ಲ; ಸ್ಪಷ್ಟನೆ ಟೆಹರಾನ್ : ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಸಾಧಿಸಿದೆ…

5 hours ago

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆ ಪ್ರಕರಣ : ಡಿಐಜಿ ನೇತೃತ್ವದಲ್ಲಿ ತನಿಖೆ

ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ…

7 hours ago

ಭಾಷಣ ಮಾಡಿದ ವೇದಿಕೆ ಸ್ಥಳದ ಶುದ್ಧೀಕರಣ : ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ ; ಖರ್ಗೆ ಕಿಡಿ

ಹೊಸದಿಲ್ಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯಲ್ಲಿ ‘ಶ್ರೀರಾಮ ಸೇನಾ’ ಸಂಘಟನೆಯು ಶುದ್ಧೀಕರಣ (ಹವನ) ನಡೆಸಿದ್ದಕ್ಕೆ…

8 hours ago

ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್ ; ಮೈಸೂರು, ಮಂಡ್ಯದಲ್ಲೂ ಹೋರಾಟಕ್ಕೆ ಸೀಮಿತ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ಹರಿಸಬೇಕು ಎಂಬ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ…

10 hours ago

ಮೈಸೂರು: ಹೊಸ ಮಠದ ಚಿದಾನಂದ ಸ್ವಾಮೀಜಿ ಲಿಂಗೈಕ್ಯ

ಮೈಸೂರು: ಮೈಸೂರಿನ ಶಂಕರ ಮಠದ ರಸ್ತಯಲ್ಲಿರುವ ಹೊಸ ಮಠದ ಚಿದಾನಂದ ಸ್ವಾಮೀಜಿ ಅವರು ಇಂದು ಲಿಂಗೈಕ್ಯರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ…

16 hours ago

ಓದುಗರ ಪತ್ರ: ಹೋಟೆಲ್‌ಗಳ ಆಹಾರ ಶುದ್ಧತೆ, ಪದಾರ್ಥಗಳ ತಪಾಸಣೆ ನಿಯಮಿತವಾಗಿ ನಡೆಯಲಿ

ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ…

22 hours ago