ಚಿತ್ರಾ ವೆಂಕಟರಾಜು
ಪಿರಿಯಾಪಟ್ಟಣದಲ್ಲಿ ಅಷ್ಟು ಪ್ರಸಿದ್ಧಿ ಪಡೆಯದ ಹೊಯ್ಸಳರ ಕಾಲದ ಚನ್ನಕೇಶವ ದೇವಾಲಯವಿದೆ. ಹೊಯ್ಸಳರ ಶೈಲಿಯ ವಾಸ್ತುಶಿಲ್ಪ ದಲ್ಲಿರುವ ಈ ದೇವಾಲಯದ ಚನ್ನಕೇಶವ ಪಟ್ಟಣದ ಕರಿಬಸಪ್ಪ ಲೇಔಟಿನಲ್ಲಿ ಪೊದೆಗಳ ನಡುವೆ ಮರೆಯಾಗಿದ್ದಾನೆ. ಹೊಯ್ಸಳರ ಕಾಲದ ಕಂಬಗಳು, ವಿಶಾಲವಾದ ಪ್ರಾಂಗಣ, ಒಳಗೆ ಗರ್ಭಗುಡಿಯಲ್ಲಿ ಚನ್ನಕೇಶವ ಮಸಣಿಕಮ್ಮ, ಕನ್ನಂಬಾಡಮ್ಮನಿಂದ ಸ್ವಲ್ಪ ದೂರದಲ್ಲೇ ಊರಿಗೂ ತನಗೂ ಸಂಬಂಧವೇ ಇಲ್ಲ ವೇನೋ ಎಂಬಂತೆ ನಿಂತಿದ್ದಾನೆ. ಮೊದಲು ಪುರಾತತ್ವ ಇಲಾಖೆಗೆ ಸೇರಿದ್ದ ಈ ದೇವಾಲಯವನ್ನು ದೇವಾಲಯದ ಕಮಿಟಿಯ ವರು ಮುಜರಾಯಿ ಇಲಾಖೆಗೆ ಸೇರಿಸ ಬೇಕೆಂದು ಪತ್ರ ವ್ಯವಹಾರ ನಡೆಸುತ್ತಿದ್ದಾರೆ. ಕಳೆದ ೨೦ ವರ್ಷಗಳಿಂದಲೂ ಪ್ರತಿದಿನ ನಾಗರಾಜು ಅವರು ಈ ದೇವಾಲಯದಲ್ಲಿ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ಶನಿವಾರ ಚನ್ನಕೇಶವನಿಗೆ ಅಭಿಷೇಕ ನಡೆಯುತ್ತದೆ. ಅವರು ಹೇಳುವ ಪ್ರಕಾರ, ಬೇಲೂರಿನಲ್ಲಿರುವ ಚನ್ನಕೇಶವ ಇಲ್ಲಿಂದಲೇ ಅಲ್ಲಿಗೆ ಹೋದದ್ದು. ಮೈಸೂರು ಮಹಾರಾಜರಿಗೂ ಪಿರಿಯಾ ದೊರೆಗೂ ಯುದ್ಧ ನಡೆಯುತ್ತದೆ. ಇಲ್ಲಿನ ಗ್ರಾಮದೇವತೆ ಮಸಣಿಕಮ್ಮ, ಚಾಮುಂಡಿಯ ತಂಗಿ. ಎಲ್ಲಿಯತನಕ ಮಸಣಿಕಮ್ಮ ಈ ಊರಲ್ಲಿರುತ್ತಾಳೋ ಅಲ್ಲಿಯವರೆಗೆ ಇದನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದ ಮಹಾರಾಜರು ಚಾಮುಂಡಿಯ ಬಳಿ ಪ್ರಾರ್ಥಿಸಿಕೊಳ್ಳುತ್ತಾರೆ. ಆಗ ಚಾಮುಂಡಿ ಬೇರೆ ಏನೋ ಕಾರಣ ಹೇಳಿ ತಂಗಿ ಮಸಣಿ ಕಮ್ಮನನ್ನು ಮೈಸೂರಿಗೆ ಕರೆಸಿಕೊಳ್ಳುತ್ತಾಳೆ. ಆಗ ನಡೆದ ಯುದ್ಧದಲ್ಲಿ ಇಲ್ಲಿಯ ಪಿರಿಯಾ ದೊರೆ ಸೋಲುತ್ತಾನೆ.
ಆಗ ಸಿಟ್ಟಿಗೆದ್ದ ದೊರೆ ‘ನೀನಿದ್ದಾಗಲೂ ನಾನು ಸೋತೆನಲ್ಲಾ, ನೀನು ಇಲ್ಲಿದ್ದು ಏನು ಪ್ರಯೋ ಜನವಾಯಿತು?’ ಎಂದು ಚನ್ನಕೇಶವ ಮೂರ್ತಿಯನ್ನು ಹಳಿಯುತ್ತಾನೆ. ಆಗ ಚನ್ನಕೇಶವ ಇಲ್ಲಿಂದ ಹೊರಟು ಹೋದ ಎಂಬ ಕತೆಯನ್ನು ಹೇಳುತ್ತಾರೆ. ಆದರೂ ಅವನ ಭಕ್ತರು ನಿರಂತರವಾಗಿ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ ಮತ್ತು ಇದರ ಜೀರ್ಣೋದ್ಧಾರಕ್ಕಾಗಿ ಕಾಯುತ್ತಿದ್ದಾರೆ.
ಹನೂರು : ಅನೇಕ ದಿನಗಳಿಂದ ಸಾಕುಪ್ರಾಣಿಗಳನ್ನು ಕೊಂದು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವಾಗಿದ್ದ ಚಿರತೆಯನ್ನು ಕೊನೆಗೂ ಸೆರೆ…
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದ ಮಳೆ ಬಾರದೇ ಇದ್ದರೂ, ಮುಂದಿನ ಎರಡು ತಿಂಗಳ ಕಾಲ ಕುಡಿಯುವ ನೀರಿಗೆ…
ಬೈರುತ್: ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದ್ದು, ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಬ್ಜೊಲ್ಲಾ ನಡುವೆ ಕದನ ವಿರಾಮ ಜಾರಿಗೆ…
ಗಾಂಧೀಜಿಯವರ ಜೀವನವೇ ತೆರೆದ ಪುಸ್ತಕ: ಇಡೀ ವಿಶ್ವವೇ ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯಾಗ್ರಹಗಳನ್ನು ಗೌರವಿಸುತ್ತದೆ. ಗಾಂಧಿಯವರು ತಮ್ಮ ಶಾಲಾ ದಿನಗಳಲ್ಲಿಯೇ…
ಡಾ.ಟಿ.ಮಂಜು ಸತ್ತಿಗೆಹುಂಡಿ, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ, ಗಾಂಧಿ ಭವನ, ಮೈಸೂರು ವಿಶ್ವವಿದ್ಯಾಲಯ ಭಾರತದ ಸ್ವಾತಂತ್ರ್ಯ ಚಳವಳಿಗೆ ಕಾಲೇಜು ವಿದ್ಯಾರ್ಥಿಗಳು,…
ನನ್ನ ಆರು ಏಳನೆಯ ವಯಸ್ಸಿನಿಂದ ಹದಿನಾರನೆಯ ವಯಸ್ಸಿನವರೆಗೆ ಪಾಠಶಾಲೆಯಲ್ಲಿ ವಿದ್ಯೆಯನ್ನು ಕಲಿತೆ. ಆದರೆ ಸ್ಕೂಲಿನಲ್ಲಿ ನನಗೆ ಯಾವ ಧಾರ್ಮಿಕ ಶಿಕ್ಷಣವೂ…