ಹಾಡು ಪಾಡು

ರೀಲ್ ಹುಚ್ಚಿಗೆ ಬಲಿಯಾದ ಒಂದು ಅಮಾಯಕ ಜೀವ

ಸೂರ್ಯ ಪುತ್ರ

ಆತನ ಹೆಸರು ದೀಪಕ್. ಮಲ್ಟಿ ನ್ಯಾಷನಲ್ ಕಂಪೆನಿ ಉದ್ಯೋಗಿ. ಕೇರಳದ ಕಣ್ಣೂರಿನ ರೈಲ್ವೇ ಸ್ಟೇಷನ್ ಪಕ್ಕದಿಂದ ಜನ ತುಂಬಿಕೊಂಡಿದ್ದ ಬಸ್ಸೊಂದನ್ನು ಹತ್ತುತ್ತಾನೆ. ಸರಿಯಾಗಿ ನಿಂತುಕೊಳ್ಳಲೂ ಜಾಗವಿಲ್ಲದ ಬಸ್ಸಿನಲ್ಲಿ ಹೇಗೋ ಅಡ್ಜಸ್ಟ್ ಮಾಡ್ಕೊಂಡು ನಿಂತಿದ್ದವನಿಗೆ ತನ್ನ ಬೆನ್ನ ಹಿಂದೆ ನಡೆಯುವ ಯಾವ ವಿಷಯವೂ ತಿಳಿದಿರಲಿಲ್ಲ. ಆತನಿಗೆ ತಾನು ಹೀಗೊಂದು ಅಪವಾದದಲ್ಲಿ ಸಿಲುಕಿದ್ದು ತಿಳಿದದ್ದೇ ವೈರಲ್ ಪೋಸ್ಟ್ ನೋಡಿದ ನಂತರ!

ದೀಪಕ್‌ನ ಹಿಂದೆ ನಿಂತಿದ್ದ ಶಿಂಜಿಯಾ ಮುಸ್ತಫ ಎನ್ನುವಾಕೆ ಆತನಿಗೆ ಅಂಟಿಕೊಂಡಂತೆ ನಿಂತು ೯೦ ಸೆಕೆಂಡಿನೊಳಗಿನ ವಿಡಿಯೋ ಒಂದನ್ನು ಮಾಡಿ ನಂತರ ಅದಕ್ಕೆ ‘ಲೈಂಗಿಕ ಕಿರುಕುಳದ ಕುರಿತು ಜಾಗೃತರಾಗಿ’ ಎಂದು ವಾಯ್ಸ್ ಓವರ್ ಕೊಟ್ಟು ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಳ್ಳುತ್ತಾಳೆ. ಅದು ಯಾವ ಪರಿಯಾಗಿ ವೈರಲ್ ಆಗುತ್ತದೆಯೆಂದರೆ ದೀಪಕ್‌ನ ಚಾರಿತ್ರ್ಯಹರಣ ಮಾಡುವಂತಹ ಕಮೆಂಟ್‌ಗಳು ಬರತೊಡಗುತ್ತವೆ. ಬಹಳಷ್ಟು ಜನರ ಜಾಲತಾಣದ ಖಾತೆಗಳಲ್ಲಿ ಹಂಚಿಕೆಯಾಗುತ್ತದೆ. ಈ ಅವಮಾನ ಸಹಿಸಿಕೊಳ್ಳಲಾಗದೆ ದೀಪಕ್ ನೇಣಿಗೆ ಶರಣಾಗುತ್ತಾನೆ.

ಕಾರಣ ತಿಳಿದಾಗ ಕೇರಳವನ್ನೂ ಸೇರಿಸಿಕೊಂಡಂತೆ ಇಡೀ ದೇಶದ ಜನತೆ ಶಿಂಜಿಯಾ ವಿರುದ್ಧ ತಿರುಗಿ ಬೀಳುತ್ತದೆ. ಆಕೆಯನ್ನು ಬಂಧಿಸುವಂತೆ ಸಾರ್ವಜನಿಕರು ಮನವಿ ಮಾಡುತ್ತಾರೆ. ಆಕೆಯನ್ನು ಬಂಽಸಿದ್ದೂ ಆಯಿತು. ಆದರೆ ‘ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಗಾದೆ ಮಾತಿನಂತೆ ಶಿಂಜಿಯಾಳ ಕ್ರೀಪ್ ವಿಡಿಯೋ ದಾಹಕ್ಕೆ ಬಲಿಯಾಗಿದ್ದು ಮಾತ್ರ ದೀಪಕ್ ಎಂಬ ಮುಗ್ಧ ಜೀವ. ಕೇವಲ ಒಂದು ಕ್ರೀಪ್ ವಿಡಿಯೋದಿಂದ ಇಷ್ಟೆಲ್ಲ ಆಯಿತೇ ಎಂದು ಕೇಳಿದರೆ ಖಂಡಿತಾ ಹೌದು.

ಯಾಕೆಂದರೆ ಕ್ರೀಪ್ ವಿಡಿಯೋ ಹುಟ್ಟಿಸುವ ಮಾನಸಿಕ ಒತ್ತಡ, ಭಯದ ಪರಿಣಾಮ ಸಣ್ಣದೇನಲ್ಲ. ‘ಕ್ರೀಪ್’ ಎಂಬುದಕ್ಕೆ ಹರಡುವುದು ಎಂದರ್ಥವಿದ್ದು, ವೈರಲ್ ಮಾಡುವುದಕ್ಕಾಗಿಯೇ ಸೃಷ್ಟಿಸುವ ವಿಡಿಯೋಗಳೂ ಕ್ರೀಪ್ ವಿಡಿಯೋ ಸಾಲಿಗೆ ಸೇರುತ್ತದೆ. ಇಲ್ಲಿ ಹೇಳುವ ವಿಷಯದಲ್ಲಿ ಸತ್ಯ ಇರಲೇಬೇಕೆಂಬ ಕಟ್ಟುಪಾಡಿಲ್ಲ. ವಿಡಿಯೋವನ್ನು ಅತೀ ಹೆಚ್ಚು ಜನರು ವೀಕ್ಷಿಸುವುದಷ್ಟೇ ಉದ್ದೇಶವಾಗಿರುತ್ತದೆ. ಒಮ್ಮೆ ಇಂತಹ ವಿಡಿಯೋ ಪೋಸ್ಟ್ ಮಾಡಿಬಿಟ್ಟರೆ ಅಲ್ಲಿಗೆ ಕೆಲಸ ಮುಗಿಯಿತು. ನಂತರ ಜಾಲತಾಣಗಳಲ್ಲಿ ವಿಡಿಯೋ ವೀಕ್ಷಿಸುವವರು ಲೈಕ್ಸ್, ಕಮೆಂಟ್ಸ್, ಶೇರ್ ಮಾಡಿದಷ್ಟು ಜನಪ್ರಿಯತೆ ಹೆಚ್ಚುತ್ತಾ ಹೋಗುತ್ತದೆ. ಇಲ್ಲಿ ಜನಪ್ರಿಯತೆಯೇ ಮಾನದಂಡ!

ಇಂತಹ ಕ್ರೀಪ್ ವಿಡಿಯೋಗಳಿಂದ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಅನಾಹುತಗಳ ಪಟ್ಟಿ ಸಣ್ಣದೇನಲ್ಲ. ಶಿಂಜಿಯಾ ಮುಸ್ತಫ ಪ್ರಕರಣವನ್ನೇ ನೋಡುವುದಾದರೆ, ಸ್ತ್ರೀಪರ ಕಾನೂನುಗಳನ್ನು ದಾಳವನ್ನಾಗಿಸಿ ಜಾಗೃತಿ ಮೂಡಿಸುವ ನೆಪದಲ್ಲಿ ಗಂಡಿನ ಮಾನ ಹರಾಜಾಗಿದೆ. ಹೆಣ್ಣು ಗಂಡು ಸಮಾನರು ಎಂಬ ಕಾಲಘಟ್ಟದಲ್ಲಿ ನಾವಿರುವಾಗ ಮಾನಕ್ಕೂ ಸಮಬೆಲೆಯಿದೆ ಎಂಬುದನ್ನು ಮರೆಯುವಂತಿಲ್ಲ. ಹೆಣ್ಣಾಗಲಿ, ಗಂಡಾಗಲಿ ತಪ್ಪು ಯಾರೇ ಮಾಡಿದ್ದರೂ ಒಪ್ಪಿಕೊಳ್ಳುವುದು ಮನುಷ್ಯ ಧರ್ಮವಾಗುತ್ತದೆ

” ರೀಲ್ ಹುಚ್ಚಾಟಕ್ಕೆ ಗಂಭೀರ ವಿಚಾರವೊಂದರ ಎಳೆಯನ್ನು ಉಪಯೋಗಿಸಿಕೊಂಡರೆ ಏನಾಗಬಹುದು ಎಂಬುದಕ್ಕೆ ಒಂದು ನಿದರ್ಶನ ಇತ್ತೀಚೆಗೆ ಕೇರಳದ ಕಣ್ಣೂರಿನಲ್ಲಿ ನಡೆದ ಪ್ರಕರಣ.”

 

 

ಆಂದೋಲನ ಡೆಸ್ಕ್

Recent Posts

ಎಸ್‌ಸಿಪಿ,ಟಿಎಸ್‌ಪಿ ಅನುದಾನ ಗ್ಯಾರಂಟಿಗೆ ಬಳಕೆ : ಕಾಂಗ್ರೆಸ್‌ನಲ್ಲೇ ಅಸಮಾಧಾನ

ಬೆಂಗಳೂರು : ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆ ಅನುದಾನವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದೆ…

20 mins ago

ರಾಜ್ಯಕ್ಕೆ ಇನ್ನೊಂದು ಹೈ ಸ್ಪೀಡ್ ರೈಲ್ವೆ ಕಾರಿಡಾರ್ : ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಜತೆ ಎಚ್‌ಡಿಕೆ ಚರ್ಚೆ

ಹೊಸದಿಲ್ಲಿ : ಬಜೆಟ್ ನಂತರ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ,…

50 mins ago

ಮ.ಬೆಟ್ಟದಲ್ಲಿ ಸ್ವಚ್ಛತಾ ನಡಿಗೆ : ಕಸ ಸಂಗ್ರಹಿಸಿದ ಕಾಲೇಜು ವಿದ್ಯಾರ್ಥಿಗಳು

ಹನೂರು : ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ಕೊಳ್ಳೇಗಾಲ ವಾಸವಿ ಪ್ರಥಮ ದರ್ಜೆ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು…

1 hour ago

ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆ ಶಾಕ್?

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆ ಶಾಕ್ ನೀಡುವ ಸಾಧ್ಯತೆ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ಮೆಟ್ರೊ…

2 hours ago

ಕಾಂಗ್ರೆಸ್‌ ಹೈಕಮಾಂಡ್‌ಗೆ ಕರ್ನಾಟಕ ರಾಜ್ಯವೇ ಎಟಿಎಂ: ವಿಜಯೇಂದ್ರ ಆಕ್ರೋಶ

ಬೆಂಗಳೂರು: ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿಗಳು ಅಬಕಾರಿ ವಿಚಾರದಲ್ಲಿ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂಬುದು ಬಿಜೆಪಿ ಹಾಗೂ ಜೆಡಿಎಸ್‌…

2 hours ago

ಫೆ.14ರಿಂದ 18ರವರೆಗೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ: ಸಿದ್ಧತೆ ಪರಿಶೀಲಿಸಿದ ಎಈ ರಘು

ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆಬ್ರವರಿ.14 ರಿಂದ 18ರವರೆಗೆ…

3 hours ago