ಹಾಡು ಪಾಡು

ಸೂಟುಬೂಟಿನ ಜಿರಳೆ ಪಡೆಯೊಂದು

ದಿಲೀಪ್ ಎನ್ಕೆ

ಊರ ಮಾರಿಹಬ್ಬಗಳಲ್ಲಿ ಕೇರಿಯಾಗಿನ ಕೇರಿಗಳಲ್ಲಿ ಮೊಳಗುವ ಚಿತ್ರಗೀತೆಗಳಂತೆ ಈಗ ದೇಶದ ತುಂಬೆಲ್ಲಾ ಬರೀ ಅವ್ಯವಸ್ಥೆಯ ವಿರುದ್ಧ ಸೆಟೆದು ನಿಂತ ಪ್ರಚಂಡ ಜಿರಳೆ ಪಡೆ

ಗಡತ್ತಾದ ನಿದ್ದೆ. ಹೊತ್ತು ಮೀರಿದ ಹೊತ್ತು. ಏನೋ ಗುರು ಗುರು ಅದೆಂತಹದೋ ತಿಮಿರ. ದಿನನಿತ್ಯದ ಮರ್ಮ ಸೀಳುವ ನಾವುಗಳು ಆಶೀರ್ವಾದ ಎಂದೇ ಹೇಳುವ ಮನೆಯಾಗಿನ ಮನೆಯ ಛೇಡಿಸುವ ಮಾತುಗಳು ಇಂದೇಕೋ ಕೇಳುತ್ತಲೇ ಇಲ್ಲವಲ್ಲ? ಹ್ಞಾಂ.. ಅದಕ್ಕೆ ಬದಲಾಗಿ ಲೆಕ್ಕವಿಲ್ಲದ ಆಕ್ರೋಶವು ನಿದ್ದೆಯ ಕೊರಳಪಟ್ಟಿ ಹಿಡಿದು ಹಿಗ್ಗಾಮುಗ್ಗ ತದುಕುತ್ತಿದೆ. ಬಹುತೇಕರು ನಿದ್ದೆಯಿಂದ ಎಚ್ಚರಗೊಳ್ಳೋದು ಈ ಆರ್ಕಿಮಿಡಿಸ್ ಯುರೇಕಾ ಎಂದು ಬೊಬ್ಬೆ ಹಾಕುತ್ತಾ ಸ್ನಾನದ ಮನೆಯಿಂದ ಏಕಾಏಕಿ ಅದೂ ನಗ್ನವಾಗಿ ಹೊರಬಂದಂತೇ ಎಂದು ಭಾವಿಸಿರುವುದುಂಟು. ಈ ತಲೆಮಾರಿಗಂತೂ ಅದರಲ್ಲೂ ಈ ಜೆನ್ ಝೀ ಗಳಿಗಂತೂ ಈ ತರಹದ ಸೀನುಗಳೆಲ್ಲಾ ಇಲ್ಲವೇ ಇಲ್ಲ ಬಿಡಿ.ಆಯ್ತು ಹೊದ್ದುಕೊಂಡಿದ್ದ ರಗ್ಗನ್ನು ಚಟಕ್ಕನೆ ಜಾಡಿಸಿ ಪಟಕ್ಕನೆ ಎದ್ದು ನೋಡಿದರೆ…! ಅಬ್ಬಾ… ಹೀಗೂ ಉಂಟೇ ? ಟಿವಿ೯ ನ ಕಾರ್ಯಕ್ರಮವೇ ಅಯ್ಯೋ ಎಂದು ಮೂಗು ಮುರಿಯಬೇಡಿ. ಇದು ನಿಜಕ್ಕೂ ದೇಸವಾಗಿನ ದೇಸವೇ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿದ ಜಿ ಜಿ ಜಿರಳೆಯ ಇಚಾರ.

ಯಾರೋ ಮಹಾಶಯರೊಬ್ಬರು ಸಮಾಜದ ಒಂದು ವರ್ಗವನ್ನು ಬೊಟ್ಟು ಮಾಡಿ ಹೇಳಿದ : ‘ಜಿರಳೆಗಳು’, ‘ಸಮಾಜದ ಪರಾವಲಂಬಿಗಳು’ ಎಂಬ ಸಾಮರ್ಥ್ಯಕ್ಕೆ ಸಾಣಿ ಹಿಡಿಯುವ ಮಾತುಗಳು, ಆ ಒಂದು ವರ್ಗವನ್ನು ಇಡೀ ಸಮಾಜದ ಮುಖ್ಯವಾದ ಮೂಲೆಗಲ್ಲೇ ಆಗುವಂತೆ, ಇಡೀ ಸಮಾಜವೇ ನಮ್ಮನ್ನು ಅವಲಂಬಿಸುವಂತಾಗಬೇಕು ಎಂಬ ಕೆಚ್ಚೆದೆಯನ್ನು ಪ್ರಚೋದಿಸುವುದಿದೆಯಲ್ಲಾ ಅದು ನಿಜಕ್ಕೂ ಮಾತಿನ ಮೌಲ್ಯವನ್ನು ಪ್ರಕಟಪಡಿಸುತ್ತದೆ.

ಅದರಲ್ಲಿ ಜೆನ್ ಎಕ್ಸ್, ಜೆನ್ ವೈ, ಜೆನ್ ಝೀ, ಆಲ್ಛಾ ಬೀಟ ಗಾಮ, ಹಿರಿಯ – ಕಿರಿಯರೆನ್ನದೆ ಎಲ್ಲರೂ ಸಮ್ಮಿಳಿತಗೊಂಡಿರುವಂತಹದ್ದು ನಿಜಕ್ಕೂ ಗರುಡಗಂಭದಂತೆ ನಮ್ಮ ಕಣ್ಣೆದುರಿಗಿದೆ. ಎದೆಗೆ ಬಿದ್ದ ಬೀಜ ಭೂಮಿಗೆ ಬಿದ್ದ ಬೀಜಕ್ಕಿಂತಲೂ ಬೇಗನೇ ಫಲ ಕೊಡುತ್ತದೆ.

ಸುತ್ತ ಎಲ್ಲೆಲ್ಲೂ ಮುಕ್ಕು- ಮೂಳುಗಳ ಆವಾಸಸ್ಥಾನವಾದ ಹಳ್ಳಿಗಳಿಂದ ಹಿಡಿದು ಠಾಕು ಠೀಕಿನ ದಿಲ್ಲಿಯ ಜಂತರ್ ಮಂಥರ್‌ನ ವರೆವಿಗೂ ಸೋಮಾರಿಗಳು,ನಿರುದ್ಯೋಗಿಗಳ ಧ್ವನಿಯೇ ಆದ ಪ್ರಚಂಡ ಜಿರಳೆ ಪಡೆಯದೇ ಸದ್ದು. ನೀಟ್, ಸಿಯುಇಟಿ ಪ್ರಶ್ನೆ ಪತ್ರಿಕೆಗಳ ಸೋರಿಕೆ,ಸಿಬಿಎಸ್‌ಇ ಮೌಲ್ಯಮಾಪನದ ತೊಡಕುಗಳು, ಉದ್ಯೋಗಾವಕಾಶಗಳ ಕೊರತೆ,ದೇಶದ ಬೆನ್ನೆಲುಬೇ ಆದ ಯುವಜನತೆಯ ಕಡೆಗಣನೆ, ಸರ್ಕಾರಿ ನೇಮಕಾತಿಗಳಿಗೆ ಹಿಂದೇಟು ಮತ್ತು ಅವುಗಳಲ್ಲಿ ಪಾರದರ್ಶಕತೆ ಇಲ್ಲದಿರುವುದು, ನಿರುದ್ಯೋಗ ಭತ್ಯೆ…ಹೀಗೆ ಒಂದೇ ಎರಡೇ

ಆಂದೋಲನ ಡೆಸ್ಕ್

Recent Posts

ಇತಿಹಾಸದ ಪುಟಗಳಲ್ಲಿ ಜಿರಳೆಗಳು

ರೇಣುಕಾ ನಿಡುಗುಂದಿ ಯಾವುದೇ ಒಬ್ಬ ಸರ್ವಾಧಿಕಾರಿ ಅಥವಾ ಭ್ರಷ್ಟ ರಾಜಕಾರಣಿ ಜನರಲ್ಲಿ ತನ್ನ ಬಗ್ಗೆ ಭಯ ಹುಟ್ಟಿಸಿ ಆಡಳಿತ ನಡೆಸುತ್ತಾನೆ.…

2 mins ago

ತಿರಸ್ಕಾರದ ವ್ಯಂಗ್ಯ ಪ್ರತಿಭಟನೆಯ ಸಂಕೇತವಾದಾಗ

ಶೇಷಾದ್ರಿ ಗಂಜೂರು ಸಂಕೇತವನ್ನೇ ಬ್ರಾಂಡ್ ಆಗಿಸಿಕೊಂಡ ದಿಢೀರ್ ಚಳವಳಿಯೊಂದು ಇದ್ದಕ್ಕಿದ್ದಂತೆ ಎದುರು ನಿಂತಾಗ ಅದರ ಬಗೆಗೆ ಒಂದು ಆರೋಗ್ಯಕರ ಸಂದೇಹದ…

12 mins ago

ಕುಕ್ಕರಿನ ಶೀಟಿ ತರಹದ ಜಿರಲೆ ಹೋರಾಟ

ಸುರೇಶ ಕಂಜರ್ಪಣೆ ಜಿರಲೆ ಪಕ್ಷದ ಹುಟ್ಟು ಮತ್ತು ಅದರ ಇತ್ತೀಚಿಗಿನ ಚಳವಳಿ ಕುರಿತು ವರ್ಣರಂಜಿತ ಊಹಾಪೋಹ, ವಿಶ್ಲೇಷಣೆಗಳು ನಡೆದಿವೆ. ಇವೆಲ್ಲಾ…

17 mins ago

ಕೊಡಗು ಜಿಲ್ಲೆಯಲ್ಲಿ ಅಣಬೆ ಕೃಷಿಗೆ ವಿಪುಲ ಅವಕಾಶ

ಕೃಷ್ಣ ಸಿದ್ದಾಪುರ ಅಣಬೆ ಕೃಷಿ ಗೃಹಿಣಿಯರಿಗೆ ಆದಾಯ ತರುವ ಉದ್ಯಮ ಸಿದ್ದಾಪುರ: ಕೊಡಗು ಜಿಲ್ಲೆಯಲ್ಲಿ ಅಣಬೆ ಕೃಷಿಗೆ ವಿಪುಲ ಅವಕಾಶಗಳಿದ್ದು,…

3 hours ago

ಮಹಾಭಾರತ: ಹೊಸ ಅರ್ಥ ಕಟ್ಟಲು ಯತ್ನಿಸಿದ ರಾಮು

ʼರಾಮು ಅವರ ‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿ ಬಿಡುಗಡೆ ಮಾಡಿದ ಚ.ಹ.ರಘುನಾಥ ಅಭಿಮತ ಮೈಸೂರು: ಸಾವಿರಾರು ವರ್ಷಗಳ ಹಿಂದಿನ ಮಹಾಭಾರತವನ್ನು ಸಮಕಾಲೀನ…

3 hours ago

ಹಾಡು-ಪಾಡುವಿನ ರಾಮು ರಾಜ್ಯ

ಓ.ಎಲ್.ನಾಗಭೂಷಣ ಸ್ವಾಮಿ ‘ಹಾಡು-ಪಾಡು ರಾಮು’ ಅಂತಲೇ ಪರಿಚಯವಾಗಿರುವ ರಾಮು ನೆನಪು ಮಾತ್ರವಾಗಿ ಉಳಿದು ಇವತ್ತಿಗೆ ಮೂರು ವರ್ಷ. ರಾಮು ಮಹಾ…

4 hours ago