ಅನ್ನದಾತರ ಅಂಗಳ

ತಂದೆಯ ಆಸೆಯಂತೆ ಸಾವಯವ ಪದ್ಧತಿಯಲ್ಲಿ ಭತ್ತ ಬೆಳೆದೆ

• ಜಿ.ಎಂ.ಪ್ರವೀಣ್ ಕುಮಾರ್

ನನ್ನ ತಂದೆ ರೈತರಾಗಿದ್ದರಿಂದ ನನಗೂ ಚಿಕ್ಕಂದಿ ನಿಂದಲೂ ವ್ಯವಸಾಯದ ನಂಟಿತ್ತು. ಅವರು ಮಧುಮೇಹ ಹಾಗೂ ಹೃದಯ ಕಾಯಿಲೆ ಯಿಂದ ಬಳಲುತ್ತಿದ್ದರು. ನಮ್ಮ ಮುಖ್ಯ ಆಹಾರ ಅನ್ನ ಆಗಿರುವುದರಿಂದ, ಸಾವಯವ ಮಾದರಿ ಯಲ್ಲಿ ಭತ್ತ ಬೆಳೆಯಬೇಕು ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು. ಆದರೆ ಅವರ ಈ ಆಸೆ ಈಡೇರಲೇ ಇಲ್ಲ, 2005ರಲ್ಲಿ ತೀರಿಕೊಂಡರು.

ಈಗಿನ ಪೀಳಿಗೆಯಲ್ಲಿ, ಎಲ್ಲರಿಗೂ ಒಂದಿ ಲ್ಲೊಂದು ಕಾಯಿಲೆ ಸರ್ವೇಸಾಮಾನ್ಯವಾಗಿದೆ. ನಮ್ಮ ಊರಿನಲ್ಲಿ, ನೆರೆ ಹೊರೆ ಹಳ್ಳಿಗಳಲ್ಲಿ, ಯಾರೂ ಸಾವಯವ ಮಾದರಿಯಲ್ಲಿ ಭತ್ತ ಬೆಳೆಯುತ್ತಿರಲಿಲ್ಲ. ನಮ್ಮ ತಂದೆಯ ಈ ಆಸೆ ಆಗಾಗ್ಗೆ ನನ್ನನ್ನು ಕಾಡುತ್ತಿತ್ತು. 2017ರಲ್ಲಿ ಈಶ್ವರನ್ ಪಿ.ತೀರ್ಥರವರ ಪರಿಚಯವಾಯಿತು. ನಾನು ಇನ್‌ಫೋಸಿಸ್‌ನಿಂದ 3 ತಿಂಗಳು ರಜೆ ಪಡೆದು, ಅವರ ಮಾರ್ಗದರ್ಶನದಿಂದ ಸಾವಯವ ಭತ್ತ ಬೆಳೆದೆ. ಕೆಲವು ಸ್ನೇಹಿತರಿಗೆ ಹಂಚಿದೆ, ಅವರು ದೊಡ್ಡ ಶಹಬ್ಬಾಸ್ ಗಿರಿಯನ್ನೇ ಕೊಟ್ಟರು. ಅಲ್ಲಿಂದ ಇಲ್ಲಿಯವರೆಗೆ ನನ್ನ ತಾಯಿಯ ಸಹಾಯದಿಂದ, 8 ಗುಂಟೆಯಲ್ಲಿ ಸಾವಯವ ಭತ್ತ ಬೆಳೆಯುವುದನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ‘ಸಿದ್ದ ಸಣ್ಣ’ ಎಂಬ ಭತ್ತದ ತಳಿಯನ್ನು ಬೆಳೆದಿದ್ದೇನೆ.

2017ರ ಜನವರಿ ತಿಂಗಳಿಂದ, ಎಂಟು ತಿಂಗಳ ಕಾಲ ಯಾವುದೇ ವಾಣಿಜ್ಯ ಬೆಳೆಗಳನ್ನು ಬೆಳೆಯದೆ, ಹಸಿರೆಲೆ ಗೊಬ್ಬರ ಬೆಳೆಗಳಾದ ಸೆಣಬು, ಹುರುಳಿ, ಎಳ್ಳನ್ನು ಬಿತ್ತನೆ ಮಾಡಿ, ಹೂವು ಬಿಡುವ ಸಂದರ್ಭದಲ್ಲಿ ಉತ್ತು ಭೂಮಿಗೆ ಸೇರಿಸಿದೆವು ಮತ್ತು ಸೆಣಬಿನಲ್ಲಿ ಎನ್.ಪಿ.ಎಚ್. ಹೇರಳವಾಗಿರುತ್ತದೆ. ಹೀಗೆ ಮಾಡುವುದರಿಂದ ಡಯಿಂಚಾ ಪ್ರಮಾಣ ಜಾಸ್ತಿಯಾಗುತ್ತದೆ.

ನಂತರ ಸೆಪ್ಟೆಂಬರ್‌ನಲ್ಲಿ, 6 ಗಾಡಿ ಕುರಿ ಗೊಬ್ಬರ ಹಾಕಿ ರಾಗಿ ಬೆಳೆದೆವು. ಬಳಿಕ ನವೆಂಬರ್ ನಲ್ಲಿ ಜೀವಾಮೃತವನ್ನು ಸಿಂಪಡಿಸಿದೆವು. ಬಳಿಕ ಡಿಸೆಂಬರ್‌ನಲ್ಲಿ ರಾಗಿ ಕಟಾವು ಮಾಡಿ, ಡಯಿಂಚಾ ಬಿತ್ತನೆ ಮಾಡಿದೆವು.

ಬಿಲ್ವ ಪತ್ರೆ ಕಷಾಯವನ್ನು ಡಿಸೆಂಬರ್‌ನಿಂದ, ಫೆಬ್ರವರಿವರೆಗೆ, ತಿಂಗಳಿಗೊಮ್ಮೆ ಮೂರು ಸಲ ಸಿಂಪಡಿಸಿದೆವು. ಇದರಿಂದ ಶತ್ರು ಕೀಟಗಳ ನಾಶವಾಗುತ್ತದೆ.

ನಂತರ ಜನವರಿ 15ರಂದು ಭತ್ತ ವಟ್ಟಲು ಹಾಕಿ, ಫೆಬ್ರವರಿ 10ರಂದು ನಾಟಿ ಮಾಡಿದೆವು. 10 ರಿಂದ 15 ದಿನಗಳಿಗೊಮ್ಮೆ, ಕಳೆ ತೆಗೆದೆವು. ಇದರಿಂದ ಗಿಡಗಳು ಚೆನ್ನಾಗಿ ಉಸಿರಾಡಲು ಸಹಾಯಕ. ಪೈರುಗಳಿಗೆ ತುಳಸಿ ಕಷಾಯವನ್ನು
ಮಾರ್ಚ್‌ನಿಂದ ಮೂರು ಸಲ, 15 ದಿನಗಳಿ ಗೊಮ್ಮೆ ಸಿಂಪಡಿಸಿದೆವು. ಇದರಿಂದ ಭತ್ತದ ಕಾಳುಗಳು ದಪ್ಪವಾಗುತ್ತವೆ. ಆಗಾಗ್ಗೆ ನಾಟಿ ಹಸುವಿನ ಸೆಗಣಿಯನ್ನು ನೀರಿನ ಜೊತೆ ಬಿಟ್ಟೆವು. ಇಷ್ಟೆಲ್ಲ ಸಾವಯವ ಬಳಕೆಯ ಬಳಿಕ ಆರೋಗ್ಯಕರ ಸಾವಯವ ಭತ್ತ ಬೆಳೆದೆವು. ಈ ಪದ್ಧತಿಯನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಲು ಆಸಕ್ತ ರೈತರು ಕೈಜೋಡಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

(ಲೇಖಕರು ಬಿ.ಇ.ಎಲೆಕ್ಟ್ರಾನಿಕ್ಸ್‌ನಲ್ಲಿ ಪದವೀಧರರಾಗಿದ್ದು, ಇನ್ಫೋಸಿಸ್‌ನಲ್ಲಿ 17 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.)

andolanait

Recent Posts

ಎಚ್.ಡಿ.ಕೋಟೆಯಲ್ಲಿ ಮತ್ತೆ ಶುರುವಾಯ್ತು ಹುಲಿ ಉಪಟಳ

ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…

9 hours ago

ಇನ್ಸ್ಟಾಗ್ರಾಮ್ ಪರಿಚಯ : ಪೊಲೀಸಪ್ಪನ ಜತೆ ಮೈಸೂರು ಮೂಲದ ಗೃಹಿಣಿ ಎಸ್ಕೇಪ್

ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…

9 hours ago

ಮೈಸೂರಲ್ಲಿ ಸಂಭ್ರಮದ ಹನುಮೋತ್ಸವ ; ಮೆರವಣಿಗೆಯಲ್ಲಿ ಸಾಗಿದ ಅತ್ಯಾಕರ್ಷಕ ಹನುಮಮೂರ್ತಿಗಳು

ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…

11 hours ago

ಫೇಸ್‌ಬುಕ್‌ ಕಹಾನಿ | ಪ್ರೀತಿ ಹರಸಿ ಬಂದವನಿಗೆ ಹನಿಟ್ರ್ಯಾಪ್‌ ಗಾಳದ ಶಂಕೆ ; ಹಣಕ್ಕೆ ಡಿಮ್ಯಾಂಡ್‌….

ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…

11 hours ago

ಯುನಿಟಿ ಮಾಲ್‌ ನಿರ್ಮಾಣಕ್ಕೆ ವಿರೋಧ ಇಲ್ಲ : ಸಂಸದ ಯದುವೀರ್‌

ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…

11 hours ago

ಮೈಸೂರಲ್ಲಿ ಎರಡು ದಿನ ಮಾಗಿ ಸಂಭ್ರಮ : ಅವರೆಕಾಯಿ ಸೊಗಡು ಜೋರು…

ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…

11 hours ago