ಅನ್ನದಾತರ ಅಂಗಳ

ತಂದೆಯ ಆಸೆಯಂತೆ ಸಾವಯವ ಪದ್ಧತಿಯಲ್ಲಿ ಭತ್ತ ಬೆಳೆದೆ

• ಜಿ.ಎಂ.ಪ್ರವೀಣ್ ಕುಮಾರ್

ನನ್ನ ತಂದೆ ರೈತರಾಗಿದ್ದರಿಂದ ನನಗೂ ಚಿಕ್ಕಂದಿ ನಿಂದಲೂ ವ್ಯವಸಾಯದ ನಂಟಿತ್ತು. ಅವರು ಮಧುಮೇಹ ಹಾಗೂ ಹೃದಯ ಕಾಯಿಲೆ ಯಿಂದ ಬಳಲುತ್ತಿದ್ದರು. ನಮ್ಮ ಮುಖ್ಯ ಆಹಾರ ಅನ್ನ ಆಗಿರುವುದರಿಂದ, ಸಾವಯವ ಮಾದರಿ ಯಲ್ಲಿ ಭತ್ತ ಬೆಳೆಯಬೇಕು ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು. ಆದರೆ ಅವರ ಈ ಆಸೆ ಈಡೇರಲೇ ಇಲ್ಲ, 2005ರಲ್ಲಿ ತೀರಿಕೊಂಡರು.

ಈಗಿನ ಪೀಳಿಗೆಯಲ್ಲಿ, ಎಲ್ಲರಿಗೂ ಒಂದಿ ಲ್ಲೊಂದು ಕಾಯಿಲೆ ಸರ್ವೇಸಾಮಾನ್ಯವಾಗಿದೆ. ನಮ್ಮ ಊರಿನಲ್ಲಿ, ನೆರೆ ಹೊರೆ ಹಳ್ಳಿಗಳಲ್ಲಿ, ಯಾರೂ ಸಾವಯವ ಮಾದರಿಯಲ್ಲಿ ಭತ್ತ ಬೆಳೆಯುತ್ತಿರಲಿಲ್ಲ. ನಮ್ಮ ತಂದೆಯ ಈ ಆಸೆ ಆಗಾಗ್ಗೆ ನನ್ನನ್ನು ಕಾಡುತ್ತಿತ್ತು. 2017ರಲ್ಲಿ ಈಶ್ವರನ್ ಪಿ.ತೀರ್ಥರವರ ಪರಿಚಯವಾಯಿತು. ನಾನು ಇನ್‌ಫೋಸಿಸ್‌ನಿಂದ 3 ತಿಂಗಳು ರಜೆ ಪಡೆದು, ಅವರ ಮಾರ್ಗದರ್ಶನದಿಂದ ಸಾವಯವ ಭತ್ತ ಬೆಳೆದೆ. ಕೆಲವು ಸ್ನೇಹಿತರಿಗೆ ಹಂಚಿದೆ, ಅವರು ದೊಡ್ಡ ಶಹಬ್ಬಾಸ್ ಗಿರಿಯನ್ನೇ ಕೊಟ್ಟರು. ಅಲ್ಲಿಂದ ಇಲ್ಲಿಯವರೆಗೆ ನನ್ನ ತಾಯಿಯ ಸಹಾಯದಿಂದ, 8 ಗುಂಟೆಯಲ್ಲಿ ಸಾವಯವ ಭತ್ತ ಬೆಳೆಯುವುದನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ‘ಸಿದ್ದ ಸಣ್ಣ’ ಎಂಬ ಭತ್ತದ ತಳಿಯನ್ನು ಬೆಳೆದಿದ್ದೇನೆ.

2017ರ ಜನವರಿ ತಿಂಗಳಿಂದ, ಎಂಟು ತಿಂಗಳ ಕಾಲ ಯಾವುದೇ ವಾಣಿಜ್ಯ ಬೆಳೆಗಳನ್ನು ಬೆಳೆಯದೆ, ಹಸಿರೆಲೆ ಗೊಬ್ಬರ ಬೆಳೆಗಳಾದ ಸೆಣಬು, ಹುರುಳಿ, ಎಳ್ಳನ್ನು ಬಿತ್ತನೆ ಮಾಡಿ, ಹೂವು ಬಿಡುವ ಸಂದರ್ಭದಲ್ಲಿ ಉತ್ತು ಭೂಮಿಗೆ ಸೇರಿಸಿದೆವು ಮತ್ತು ಸೆಣಬಿನಲ್ಲಿ ಎನ್.ಪಿ.ಎಚ್. ಹೇರಳವಾಗಿರುತ್ತದೆ. ಹೀಗೆ ಮಾಡುವುದರಿಂದ ಡಯಿಂಚಾ ಪ್ರಮಾಣ ಜಾಸ್ತಿಯಾಗುತ್ತದೆ.

ನಂತರ ಸೆಪ್ಟೆಂಬರ್‌ನಲ್ಲಿ, 6 ಗಾಡಿ ಕುರಿ ಗೊಬ್ಬರ ಹಾಕಿ ರಾಗಿ ಬೆಳೆದೆವು. ಬಳಿಕ ನವೆಂಬರ್ ನಲ್ಲಿ ಜೀವಾಮೃತವನ್ನು ಸಿಂಪಡಿಸಿದೆವು. ಬಳಿಕ ಡಿಸೆಂಬರ್‌ನಲ್ಲಿ ರಾಗಿ ಕಟಾವು ಮಾಡಿ, ಡಯಿಂಚಾ ಬಿತ್ತನೆ ಮಾಡಿದೆವು.

ಬಿಲ್ವ ಪತ್ರೆ ಕಷಾಯವನ್ನು ಡಿಸೆಂಬರ್‌ನಿಂದ, ಫೆಬ್ರವರಿವರೆಗೆ, ತಿಂಗಳಿಗೊಮ್ಮೆ ಮೂರು ಸಲ ಸಿಂಪಡಿಸಿದೆವು. ಇದರಿಂದ ಶತ್ರು ಕೀಟಗಳ ನಾಶವಾಗುತ್ತದೆ.

ನಂತರ ಜನವರಿ 15ರಂದು ಭತ್ತ ವಟ್ಟಲು ಹಾಕಿ, ಫೆಬ್ರವರಿ 10ರಂದು ನಾಟಿ ಮಾಡಿದೆವು. 10 ರಿಂದ 15 ದಿನಗಳಿಗೊಮ್ಮೆ, ಕಳೆ ತೆಗೆದೆವು. ಇದರಿಂದ ಗಿಡಗಳು ಚೆನ್ನಾಗಿ ಉಸಿರಾಡಲು ಸಹಾಯಕ. ಪೈರುಗಳಿಗೆ ತುಳಸಿ ಕಷಾಯವನ್ನು
ಮಾರ್ಚ್‌ನಿಂದ ಮೂರು ಸಲ, 15 ದಿನಗಳಿ ಗೊಮ್ಮೆ ಸಿಂಪಡಿಸಿದೆವು. ಇದರಿಂದ ಭತ್ತದ ಕಾಳುಗಳು ದಪ್ಪವಾಗುತ್ತವೆ. ಆಗಾಗ್ಗೆ ನಾಟಿ ಹಸುವಿನ ಸೆಗಣಿಯನ್ನು ನೀರಿನ ಜೊತೆ ಬಿಟ್ಟೆವು. ಇಷ್ಟೆಲ್ಲ ಸಾವಯವ ಬಳಕೆಯ ಬಳಿಕ ಆರೋಗ್ಯಕರ ಸಾವಯವ ಭತ್ತ ಬೆಳೆದೆವು. ಈ ಪದ್ಧತಿಯನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಲು ಆಸಕ್ತ ರೈತರು ಕೈಜೋಡಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

(ಲೇಖಕರು ಬಿ.ಇ.ಎಲೆಕ್ಟ್ರಾನಿಕ್ಸ್‌ನಲ್ಲಿ ಪದವೀಧರರಾಗಿದ್ದು, ಇನ್ಫೋಸಿಸ್‌ನಲ್ಲಿ 17 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.)

andolanait

Recent Posts

ಲಾರಿ ಹಾಗೂ ಕ್ರೂಸರ್‌ ವಾಹನದ ನಡುವೆ ಡಿಕ್ಕಿ: ಒಂದೇ ಕುಟುಂಬದ ಐವರು ಸಾವು

ಕಲಬುರ್ಗಿ: ಲಾರಿ ಹಾಗೂ ಕ್ರೂಸರ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐದು ಮಂದಿ ದಾರುಣವಾಗಿ ಮೃತಪಟ್ಟಿರುವ…

13 mins ago

ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ: ಸಚಿವ ದಿನೇಶ್‌ ಗುಂಡೂರಾವ್‌

ಬೆಂಗಳೂರು: ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌…

36 mins ago

ಚೀನಾದಲ್ಲಿ ಕಲ್ಲಿದ್ದಲು ಗಣಿ ಸ್ಫೋಟ: 82 ಜನರು ಸಾವು

ಬೀಜಿಂಗ್:‌ ಉತ್ತರ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ 82 ಜನರು ಸಾವನ್ನಪ್ಪಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ…

1 hour ago

ನಟ ದರ್ಶನ್‌ ಆತ್ಮಹತ್ಯೆಗೆ ಯತ್ನ ವದಂತಿ: ಸಚಿವ ಪರಮೇಶ್ವರ್‌ ಹೇಳಿದ್ದಿಷ್ಟು.!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್‌ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂಬ ವದಂತಿ ಕುರಿತು ಗೃಹ…

2 hours ago

ಓದುಗರ ಪತ್ರ: ಕೆಪಿಎಸ್ ಶಾಲೆ ಯೋಜನೆ ಸರ್ಕಾರದ ಜಾಣ ನಡೆ!

ಶಾಲಾ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೊಸದಾಗಿ ೮೦೦ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು…

5 hours ago

ಓದುಗರ ಪತ್ರ: ಸರ್ಕಾರಿ ಶಾಲೆ ದತ್ತು ಪಡೆಯುವ ಪ್ರಕ್ರಿಯೆ ಆರಂಭವಾಗಲಿ

ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಮೇ ೨೯ರಂದು ಪ್ರಾರಂಭವಾಗುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ರಾಜ್ಯ ಸರ್ಕಾರ ಪ್ರತೀ ವರ್ಷ ಮಕ್ಕಳಿಗೆ ಉಚಿತ ಪಠ್ಯಪುಸ್ತಕ,…

5 hours ago