• ಜಿ.ಎಂ.ಪ್ರವೀಣ್ ಕುಮಾರ್
ನನ್ನ ತಂದೆ ರೈತರಾಗಿದ್ದರಿಂದ ನನಗೂ ಚಿಕ್ಕಂದಿ ನಿಂದಲೂ ವ್ಯವಸಾಯದ ನಂಟಿತ್ತು. ಅವರು ಮಧುಮೇಹ ಹಾಗೂ ಹೃದಯ ಕಾಯಿಲೆ ಯಿಂದ ಬಳಲುತ್ತಿದ್ದರು. ನಮ್ಮ ಮುಖ್ಯ ಆಹಾರ ಅನ್ನ ಆಗಿರುವುದರಿಂದ, ಸಾವಯವ ಮಾದರಿ ಯಲ್ಲಿ ಭತ್ತ ಬೆಳೆಯಬೇಕು ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು. ಆದರೆ ಅವರ ಈ ಆಸೆ ಈಡೇರಲೇ ಇಲ್ಲ, 2005ರಲ್ಲಿ ತೀರಿಕೊಂಡರು.
ಈಗಿನ ಪೀಳಿಗೆಯಲ್ಲಿ, ಎಲ್ಲರಿಗೂ ಒಂದಿ ಲ್ಲೊಂದು ಕಾಯಿಲೆ ಸರ್ವೇಸಾಮಾನ್ಯವಾಗಿದೆ. ನಮ್ಮ ಊರಿನಲ್ಲಿ, ನೆರೆ ಹೊರೆ ಹಳ್ಳಿಗಳಲ್ಲಿ, ಯಾರೂ ಸಾವಯವ ಮಾದರಿಯಲ್ಲಿ ಭತ್ತ ಬೆಳೆಯುತ್ತಿರಲಿಲ್ಲ. ನಮ್ಮ ತಂದೆಯ ಈ ಆಸೆ ಆಗಾಗ್ಗೆ ನನ್ನನ್ನು ಕಾಡುತ್ತಿತ್ತು. 2017ರಲ್ಲಿ ಈಶ್ವರನ್ ಪಿ.ತೀರ್ಥರವರ ಪರಿಚಯವಾಯಿತು. ನಾನು ಇನ್ಫೋಸಿಸ್ನಿಂದ 3 ತಿಂಗಳು ರಜೆ ಪಡೆದು, ಅವರ ಮಾರ್ಗದರ್ಶನದಿಂದ ಸಾವಯವ ಭತ್ತ ಬೆಳೆದೆ. ಕೆಲವು ಸ್ನೇಹಿತರಿಗೆ ಹಂಚಿದೆ, ಅವರು ದೊಡ್ಡ ಶಹಬ್ಬಾಸ್ ಗಿರಿಯನ್ನೇ ಕೊಟ್ಟರು. ಅಲ್ಲಿಂದ ಇಲ್ಲಿಯವರೆಗೆ ನನ್ನ ತಾಯಿಯ ಸಹಾಯದಿಂದ, 8 ಗುಂಟೆಯಲ್ಲಿ ಸಾವಯವ ಭತ್ತ ಬೆಳೆಯುವುದನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ‘ಸಿದ್ದ ಸಣ್ಣ’ ಎಂಬ ಭತ್ತದ ತಳಿಯನ್ನು ಬೆಳೆದಿದ್ದೇನೆ.
2017ರ ಜನವರಿ ತಿಂಗಳಿಂದ, ಎಂಟು ತಿಂಗಳ ಕಾಲ ಯಾವುದೇ ವಾಣಿಜ್ಯ ಬೆಳೆಗಳನ್ನು ಬೆಳೆಯದೆ, ಹಸಿರೆಲೆ ಗೊಬ್ಬರ ಬೆಳೆಗಳಾದ ಸೆಣಬು, ಹುರುಳಿ, ಎಳ್ಳನ್ನು ಬಿತ್ತನೆ ಮಾಡಿ, ಹೂವು ಬಿಡುವ ಸಂದರ್ಭದಲ್ಲಿ ಉತ್ತು ಭೂಮಿಗೆ ಸೇರಿಸಿದೆವು ಮತ್ತು ಸೆಣಬಿನಲ್ಲಿ ಎನ್.ಪಿ.ಎಚ್. ಹೇರಳವಾಗಿರುತ್ತದೆ. ಹೀಗೆ ಮಾಡುವುದರಿಂದ ಡಯಿಂಚಾ ಪ್ರಮಾಣ ಜಾಸ್ತಿಯಾಗುತ್ತದೆ.
ನಂತರ ಸೆಪ್ಟೆಂಬರ್ನಲ್ಲಿ, 6 ಗಾಡಿ ಕುರಿ ಗೊಬ್ಬರ ಹಾಕಿ ರಾಗಿ ಬೆಳೆದೆವು. ಬಳಿಕ ನವೆಂಬರ್ ನಲ್ಲಿ ಜೀವಾಮೃತವನ್ನು ಸಿಂಪಡಿಸಿದೆವು. ಬಳಿಕ ಡಿಸೆಂಬರ್ನಲ್ಲಿ ರಾಗಿ ಕಟಾವು ಮಾಡಿ, ಡಯಿಂಚಾ ಬಿತ್ತನೆ ಮಾಡಿದೆವು.
ಬಿಲ್ವ ಪತ್ರೆ ಕಷಾಯವನ್ನು ಡಿಸೆಂಬರ್ನಿಂದ, ಫೆಬ್ರವರಿವರೆಗೆ, ತಿಂಗಳಿಗೊಮ್ಮೆ ಮೂರು ಸಲ ಸಿಂಪಡಿಸಿದೆವು. ಇದರಿಂದ ಶತ್ರು ಕೀಟಗಳ ನಾಶವಾಗುತ್ತದೆ.
ನಂತರ ಜನವರಿ 15ರಂದು ಭತ್ತ ವಟ್ಟಲು ಹಾಕಿ, ಫೆಬ್ರವರಿ 10ರಂದು ನಾಟಿ ಮಾಡಿದೆವು. 10 ರಿಂದ 15 ದಿನಗಳಿಗೊಮ್ಮೆ, ಕಳೆ ತೆಗೆದೆವು. ಇದರಿಂದ ಗಿಡಗಳು ಚೆನ್ನಾಗಿ ಉಸಿರಾಡಲು ಸಹಾಯಕ. ಪೈರುಗಳಿಗೆ ತುಳಸಿ ಕಷಾಯವನ್ನು
ಮಾರ್ಚ್ನಿಂದ ಮೂರು ಸಲ, 15 ದಿನಗಳಿ ಗೊಮ್ಮೆ ಸಿಂಪಡಿಸಿದೆವು. ಇದರಿಂದ ಭತ್ತದ ಕಾಳುಗಳು ದಪ್ಪವಾಗುತ್ತವೆ. ಆಗಾಗ್ಗೆ ನಾಟಿ ಹಸುವಿನ ಸೆಗಣಿಯನ್ನು ನೀರಿನ ಜೊತೆ ಬಿಟ್ಟೆವು. ಇಷ್ಟೆಲ್ಲ ಸಾವಯವ ಬಳಕೆಯ ಬಳಿಕ ಆರೋಗ್ಯಕರ ಸಾವಯವ ಭತ್ತ ಬೆಳೆದೆವು. ಈ ಪದ್ಧತಿಯನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಲು ಆಸಕ್ತ ರೈತರು ಕೈಜೋಡಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.
(ಲೇಖಕರು ಬಿ.ಇ.ಎಲೆಕ್ಟ್ರಾನಿಕ್ಸ್ನಲ್ಲಿ ಪದವೀಧರರಾಗಿದ್ದು, ಇನ್ಫೋಸಿಸ್ನಲ್ಲಿ 17 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.)
ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ…
ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…
ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…
ಬೆಂಗಳೂರು: ಮುಡಾ ಕೇಸ್ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…
ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್ಐಟಿ…
ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…