ಅನ್ನದಾತರ ಅಂಗಳ

ಡಾ.ರಾಜ್‌ರಿಂದ ಸ್ಫೂರ್ತಿ; ರೈತರಾದ ಯಮುನಾ

ಸಾವಯವ ಕೃಷಿ ಪದ್ಧತಿಯ ಮೂಲಕ ಡ್ರಾಗನ್ ಫುಟ್ ಬೆಳೆದು ವಿಶೇಷ ರೈತರೆನಿಸಿಕೊಂಡಿದ್ದಾರೆ ಬನ್ನೂರು ಸಮೀಪದ ನೀರಿನಹಳ್ಳಿ ಗ್ರಾಮದ ರೈತರಾದ ಯಮುನಾ ಸೂರ್ಯನಾರಾಯಣ.

ಯಮುನಾ ಸೂರ್ಯನಾರಾಯಣರವರು ತಮ್ಮ 5 ಎಕರೆ ಜಮೀನಿನಲ್ಲಿ 2 ಎಕರೆ ಡ್ರಾಗನ್ ಫುಟ್ ಬೆಳೆದು ಸಾಧನೆ ಮಾಡಿದ್ದಾರೆ. ಒಟ್ಟಾರೆ ಸಮಗ್ರ ಕೃಷಿ ಮಾಡುತ್ತಿರುವ ಇವರು 2 ಎಕರೆಯಲ್ಲಿ ಡ್ರಾಗನ್ ಫುಟ್, ಉಳಿದ ಮೂರು ಎಕರೆಯಲ್ಲಿ ಮಾವು, ಆಮ್ಲ, ನೇರಳೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಸಂಪೂರ್ಣ ಸಾವಯವ ಕೃಷಿ ಪದ್ಧತಿ ಅನುಸರಿಸುವ ಇವರು, ಆರಂಭದಲ್ಲಿ ತಮ್ಮ ಜಮೀನಿನಲ್ಲಿ ಸರಿಯಾಗಿ ನೀರು ಸಿಗುತ್ತಿಲ್ಲದ ಪರಿಣಾಮ ಮತ್ತು ಜಮೀನು ಕಲ್ಲುಭೂಮಿಯಾಗಿದ್ದರಿಂದ ಪ್ರಾಯೋಗಿಕವಾಗಿ ಡ್ರಾಗನ್ ಫುಟ್ ಬೆಳೆಯಲು ಆರಂಭಿಸಿದರು. ನಂತರ ಮಳೆ ಉತ್ತಮವಾದ್ದರಿಂದ ಜಮೀನಿನಲ್ಲಿಯೂ ನೀರು ಸಿಗಲು ಆರಂಭಿಸಿತು. ಬಳಿಕ ಜಲ ಮರುಪೂರಣ ಮಾಡಿಕೊಂಡಿದ್ದು, ನೀರು ಲಭಿಸುತ್ತಿದೆ. ಈ ನೀರನ್ನು ಬಳಸಿಕೊಂಡು ಕೃಷಿ ಮಾಡುತ್ತಿದ್ದಾರೆ.

ಮೇ ತಿಂಗಳ ಕೊನೆಯ ವಾರದಿಂದ ಫಲ ನೀಡಲು ಆರಂಭವಾಗುವ ಡ್ರಾಗನ್ ಫುಟ್ ಅಕ್ಟೋಬರ್ ತಿಂಗಳವರೆಗೂ ಫಲ ನೀಡಲಿದೆ. ಒಟ್ಟಾರೆ ಈ ಕೃಷಿಯಿಂದ ಉತ್ತಮ ಆದಾಯ ಪಡೆಯುತ್ತಿರುವ ಯಮುನಾ ಸೂರ್ಯನಾರಾಯಣರವರು ಡಾ.ರಾಜ್ ಕುಮಾರ್ ರವರ ಬಂಗಾರದ ಮನುಷ್ಯ ಚಿತ್ರದಿಂದ ಸ್ಫೂರ್ತಿ ಪಡೆದು ರೈತರಾದೆವು ಎನ್ನುತ್ತಾರೆ.

andolanait

Recent Posts

ಇಂದು ಚಲೋ ಸಂಸದ್ ಮುಂದುವರಿಯಲಿದೆ: ಅಭಿಜಿತ್‌ ದೀಪ್ಕೆ ಘೋಷಣೆ

ನವದೆಹಲಿ: ಇಂದು ತಮ್ಮ ಪ್ರತಿಭಟನೆ ಹಾಗು ಚಲೋ ಸಂಸದ್‌ ಮುಂದುವರಿಯಲಿದೆ ಎಂದು ಕಾಕ್ರೋಚ್‌ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ…

31 mins ago

ಓದುಗರ ಪತ್ರ: ಮಾದಾಪುರ ಪ್ರೌಢಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನು ನೇಮಿಸಿ

ಹೆಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರು ಇಲ್ಲದೆ ವಿದ್ಯಾರ್ಥಿಗಳು ಈ ಪ್ರೌಢಶಾಲೆಗೆ ಸೇರಲು ಹಿಂದೇಟು ಹಾಕುತ್ತಿದ್ದಾರೆ.…

6 hours ago

ಓದುಗರ ಪತ್ರ: ದೇವೇಗೌಡರ ಹಿಂದಿನ ಶಕ್ತಿ ಚನ್ನಮ್ಮ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ ನವರು ಅವರ ರಾಜಕೀಯ ಜೀವನದಲ್ಲಿ ದೊಡ್ಡ ಶಕ್ತಿಯಾಗಿ ನಿಂತಿದ್ದರು. ಅಂದು ತಮ್ಮ…

6 hours ago

ಓದುಗರ ಪತ್ರ: ಆನ್‌ಲೈನ್ ಕಾರ್ಯಭಾರದಿಂದ ಶಿಕ್ಷಕರಿಗೆ ಮುಕ್ತಿ ನೀಡಿ

ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ವೈಯಕ್ತಿಕ ಮೊಬೈಲ್ ಹಾಗೂ ಇಂಟರ್ನೆಟ್ ಬಳಸಿ ಇಲಾಖೆಯ ಆನ್‌ಲೈನ್ ಕೆಲಸಗಳನ್ನು ನಿರ್ವಹಿಸುತ್ತಿರುವುದು ಮತ್ತು ಕಚೇರಿ…

6 hours ago

ಮಲ್ಲಳ್ಳಿ ಗ್ರಾಮಕ್ಕಿಲ್ಲ ಮೂಲ ಸೌಕರ್ಯ!

ಲಕ್ಷ್ಮೀಕಾಂತ್ ಕೊಮಾರಪ್ಪ ಮಳೆಗಾಲದಲ್ಲಿ ಕತ್ತಲೆಯ ಬದುಕು; ಬೇಸತ್ತು ಗ್ರಾಮವನ್ನೇ ತೊರೆಯುತ್ತಿರುವ ಕೃಷಿಕರು ಸೋಮವಾರಪೇಟೆ: ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ತಾಲ್ಲೂಕಿನ…

6 hours ago