ರಮೇಶ್ ಪಿ. ರಂಗಸಮುದ್ರ
ಕೃಷಿಯಲ್ಲಿ ಖರ್ಚು ಹೆಚ್ಚಾಗಿದ್ದು, ಆದಾಯ ಕಡಿಮೆಯಾಗಿದೆ. ಜತೆಗೆ ಕೃಷಿ ಕಾರ್ಮಿಕರ ಕೊರತೆ, ಹವಾಮಾನ ವೈಪರೀತ್ಯ, ಮಾರುಕಟ್ಟೆ ಕೊರತೆ ಇವೆಲ್ಲವೂ ಕೃಷಿಕರನ್ನು ಕಾಡುತ್ತಿರುವ ಸಮಸ್ಯೆಗಳಾಗಿವೆ.

ಇಂತಹ ಅನೇಕ ಸಮಸ್ಯೆಗಳ ನಡು ವೆಯೂ ಕೆಲ ಜಾಣ ಕೃಷಿಕರು ಕೃಷಿಯ ಆಗುಹೋಗುಗಳ ಬಗ್ಗೆ ನಿರಂತರ ಅಭ್ಯಾಸ ನಡೆಸಿ ಮಾರುಕಟ್ಟೆಗಳ ಬೇಡಿಕೆಗೆ ಅನು ಸಾರವಾಗಿ ಬೆಳೆ ಬೆಳೆಯುತ್ತಾರೆ. ಜೊತೆಗೆ ಕಡಿಮೆ ಖರ್ಚು ಮಾಡಿ ಹೆಚ್ಚು ಆದಾಯ ಗಳಿಸುವ ಮೂಲಕ ಕೃಷಿಯಲ್ಲಿಯೂ ನೆಮ್ಮದಿ ಕಾಣುತ್ತಾರೆ. ಅಂತಹ ಕಡಿಮೆ ಖರ್ಚು, ನಿರ್ವ ಹಣೆ ಮತ್ತು ನಿರಂತರ ಆದಾಯ ಹೊಂದಿದ ಬೆಳೆ ಗಳಲ್ಲಿ ನುಗ್ಗೆ ಬೆಳೆಯು ಪ್ರಮುಖವಾಗಿದೆ.

ನುಗ್ಗೆ ಬೆಳೆಯು ಬಹುವಾರ್ಷಿಕ ತರಕಾರಿ ಬೆಳೆ. ಭಾರತದಲ್ಲಿ ಹುಟ್ಟಿದ ನುಗ್ಗೆ ಇಂದು ಏಷ್ಯಾ, ಆಫ್ರಿಕಾ, ಅಮೆರಿಕ ದಲ್ಲಿಯೂ ಪ್ರಚಲಿತವಾಗಿದೆ.

ನುಗ್ಗೆಯ ಉಪಯೋಗಗಳು
೧. ನುಗ್ಗೆಯ ಸೊಪ್ಪು, ಹೂ, ಕಾಯಿಗಳನ್ನು ದ್ವಿದಳ ಧಾನ್ಯಗಳೊಂದಿಗೆ ಅಡುಗೆಗೆ ಬಳಸಬಹುದು.
೨. ನುಗ್ಗೆಯ ಬೇರುಗಳಲ್ಲಿನ ಆಲಾಯಿಡ್ ಗಳಾದ ಮೊರಿಂಜಿನ್‌ಗಳಿಂದ ಪರಿಮಳ ಯುಕ್ತ ಕಾರದಪುಡಿಯನ್ನು ತಯಾರಿಸಬಹುದು.
೩. ನುಗ್ಗೆಯ ಬೀಜಗಳಿಂದ ಎಣ್ಣೆಯನ್ನು ತೆಗೆದು ಸಂಧಿವಾತ, ಕೀಲು ನೋವುಗಳಿಗೆ ಔಷಧಿಯನ್ನಾಗಿ ಬಳಸಬಹುದು. ಜೊತೆಗೆ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿಯೂ ಬಳಸಬಹುದು.
೪. ನುಗ್ಗೆಯ ಕಾಂಡ ಮತ್ತು ರೆಂಬೆ ಕೊಂಬೆಗಳಿಂದ ಗುಣಮಟ್ಟದ ಪೇಪರ್ ತಯಾರಿಸಬಹುದು.
೫. ಪುರುಷರಲ್ಲಿ ವೀರ್ಯ ವೃದ್ಧಿ ಮತ್ತು ನಪುಂಸಕತ್ವ ನಿವಾರಿಸಲು, ಸ್ತ್ರೀಯರಲ್ಲಿ ಅಂಡಾಣುವರ್ಧಕವಾಗಿ ನುಗ್ಗೆ ಹೂ, ಬೀಜ, ಕಾಯಿಗಳನ್ನು ಬಳಸಲಾಗುತ್ತದೆ.

ಪೋಷಕಾಂಶಗಳು
ನುಗ್ಗೆಯ ಎಲೆಯಲ್ಲಿ ಶೇ. ೭೬ ನೀರಿನ ಅಂಶ, ಶೇ. ೧೨. ೫ ಶರ್ಕರ ಪಿಷ್ಟ, ೪೪೦ ಮಿಲಿ ಗ್ರಾಂ ಕ್ಯಾಲ್ಸಿಯಂ, ಶೇ. ೧. ೭ ಕೊಬ್ಬಿನಾಂಶ ಶೇ. ೬. ೭ ಪ್ರೋಟೀನ್, ಶೇ. ೨. ೩ ಖನಿಜಗಳು, ಶೇ. ೮. ೫ ಕಬ್ಬಿಣಾಂಶ ವಿಟಮಿನ್ ಸಿ, ವಿಟಮಿನ್ ಎ ಅಂಶಗಳು ಹೇರಳವಾಗಿವೆ.

ನುಗ್ಗೆ ಕಾಯಿಯಲ್ಲಿ ಶೇ. ೮೭ ನೀರಿನ ಅಂಶ, ಶೇ. ೩. ೭ ಶರ್ಕರ ಶೇ. ೪. ೮ ನಾರಿನಾಂಶ, ಶೇ. ೩೦ ಕ್ಯಾಲ್ಸಿಯಂ, ೧೧೦ ಮಿಲಿ ಗ್ರಾಂ ರಂಜಕ, ಶೇ. ೨. ೫ ಪ್ರೋಟಿನ್, ಶೇ. ೦. ೧ ಕೊಬ್ಬಿನಾಂಶ, ಶೇ. ೨. ೦ ಖನಿಜ ಗಳು, ಶೇ. ೫. ೦ ಕಬ್ಬಿಣಾಂಶ ಜೊತೆಗೆ ವಿಟ ಮಿನ್ ಸಿ, ವಿಟಮಿನ್ ಎ ಥಾಯಾ ಮೀನ್, ರೈಬೋಮಿನ್ ಅಂಶಗಳು ಹೇರಳವಾಗಿವೆ.

ಇನ್ನು ನುಗ್ಗೆಯ ಬೀಜದಲ್ಲಿ ಶೇ. ೯. ೫ ನೀರಿನ ಅಂಶ, ಶೇ. ೩೪. ೭ ಕೊಬ್ಬಿನಾಂಶ, ಶೇ. ೩೮. ೪ ಪ್ರೋಟಿನ್, ೩. ೩ ಮಿಲಿ ಗ್ರಾಂನಷ್ಟು ಕ್ಯಾಲ್ಸಿಯಂ ಇದ್ದು ಮಾನವ ಮತ್ತು ಸಾಕುಪ್ರಾಣಿಗಳಿಗೆ ಆರೋಗ್ಯದ ಭಂಡಾರವಾಗಿದೆ.

ಕರ್ನಾಟಕಕ್ಕೆ ಸರಿ ಹೊಂದುವ ನುಗ್ಗೆ ತಳಿಗಳು
ನುಗ್ಗೆಯಲ್ಲಿ ವಿವಿಧ ತಳಿಗಳಿದ್ದು, ಅವುಗಳಲ್ಲಿ ಚವಕಚೇರಿ ಮುರುಂಗ, ಜಿ. ಕೆ. ವಿ. ಕೆ-೨, ಧನರಾಜ ೬/೪ ಆರು ಸೆಲೆಕ್ಷನ್, ಭಾಗ್ಯ ನುಗ್ಗೆ ಈ ಪ್ರಮುಖ ತಳಿಗಳು ಮಾತ್ರ ಕರ್ನಾಟಕಕ್ಕೆ ಹೊಂದಿಕೊಳ್ಳಲಿದ್ದು, ರೈತರು ನಿರಂತರವಾಗಿ ಇಳುವರಿ ಪಡೆಯ ಬಹುದಾಗಿದೆ

ನೆಗ್ಗೆ ಬೆಳೆಯುವುದು ಹೇಗೆ?
ಮರಳು ಮಿಶ್ರಿತ ಕೆಂಪು ಮಣ್ಣು ಮತ್ತು ನೀರಿಲ್ಲದ ಕಪ್ಪುಮಣ್ಣು ನುಗ್ಗೆಗೆ ಸೂಕ್ತ. ಸಾವಯವ ಪದ್ಧತಿಯು ನುಗ್ಗೆಗೆ ಸೂಕ್ತವಾಗಿದ್ದು, ಸಿದ್ಧಪಡಿಸಿದ ಭೂಮಿಯಲ್ಲಿ ನೇರ ಬೀಜ ಬಿತ್ತನೆ, ಪಾಲಿಥಿನ್ ಕವರ್‌ಗಳಲ್ಲಿ ಬೆಳೆಸಿದ ಸಸಿಗಳ ನಾಟಿ, ಕಾಂಡದ ತುಂಡುಗಳ ಮೂಲಕ ನಾಟಿ ಮಾಡಬಹುದು. ಹೀಗೆ ಎತ್ತರದ ತಳಿಯಾದರೆ ೪೪ ಮೀಟರ್ ಅಂತರ, ೪೫೪೫ ಸೆಂ. ಮೀ. ಆಳದಲ್ಲಿ, ಗಿಡ್ಡ ತಳಿಗಳಾದರೆ ೨೨ ಮೀ. ಅಂತರ, ೪೫೪೫ ಸೆಂ. ಮೀ. ಆಳದ ಕುಣಿಯಲ್ಲಿ ನಾಟಿ ಮಾಡಬಹುದು. ಬೇವಿನ ಹಿಂಡಿ, ಎರೆಹುಳು ಗೊಬ್ಬರ, ಜೀವಾಮೃತ ಬಳಕೆ ಮಾಡಿ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಒಂದು ಎಕರೆಗೆ ಒಂದು ಗುಂಡಿಯಲ್ಲಿ ಎರಡು ಗಿಡದಂತೆ ೮೦ ರಿಂದ ೯೦ ಗಿಡಗಳನ್ನು ನೆಡಬಹುದು.

ಆಂದೋಲನ ಡೆಸ್ಕ್

Recent Posts

ಬಿಹಾರ | ಸಂಪುಟ ಸೇರಿದ ನಿತೀಶ್‌ ಪುತ್ರ ನಿಶಾಂತ್‌ ; ಸಚಿವರಾಗಿ 32 ಮಂದಿ ಪ್ರಮಾಣ

ಪಾಟ್ನಾ : ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಬಿಜೆಪಿ-ಎನ್‌ಡಿಎ ಸರ್ಕಾರವು ನೂತನ ಸಂಪುಟ ವಿಸ್ತರಿಸಿದ್ದು, 31 ಎನ್‌ಡಿಎ ನಾಯಕರು ಸಚಿವರಾಗಿ…

30 mins ago

ಬೆಂಗಳೂರು : ನೈರುತ್ಯ ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಮತ್ತೆ ಕಡೆಗಣಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ…

2 hours ago

ಚುನಾವಣಾ ರಾಜಕಾರಣಕ್ಕೆ ಎಚ್.ವಿಶ್ವನಾಥ್‌ ವಿದಾಯ

ಮೈಸೂರು : 50 ಕೋಟಿ ಖರ್ಚು ಮಾಡಿ ಇಂದಿನ ಚುನಾವಣೆ ಎದುರಿಸುವಷ್ಟು ಶಕ್ತಿ ನನ್ನಲ್ಲಿ ಇಲ್ಲ. ಹೀಗಾಗಿ ಮುಂದೆ ಯಾವ…

2 hours ago

ಯೋಗೇಶ್‌ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿ ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್‌ ಕುಲಕರ್ಣಿ ಅವರು ಶಿಕ್ಷೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ…

4 hours ago

ರಾಮಚಂದ್ರರಾವ್‌ ಮೇಲಿನ ಅಮಾನತು ಆದೇಶ ರದ್ದು: ಎಚ್.ವಿಶ್ವನಾಥ್‌ ಆಕ್ಷೇಪ

ಮೈಸೂರು: ಹಿರಿಯ ಪೊಲೀಸ್‌ ಅಧಿಕಾರಿ ರಾಮಚಂದ್ರರಾವ್‌ ಅವರ ಮೇಲಿನ ಅಮಾನತು ಆದೇಶ ರದ್ದುಗೊಳಿಸಿರುವ ರಾಜ್ಯ ಸರ್ಕಾರಕ್ಕೆ ಕ್ರಮಕ್ಕೆ ವಿಧಾನಪರಿಷತ್‌ ಎಚ್.ವಿಶ್ವನಾಥ್‌…

4 hours ago

ಮತ್ತೆ ರಾಜ್ಯಪಾಲರನ್ನು ಭೇಟಿಯಾದ ವಿಜಯ್:‌ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸಿ ಎಂದ ಗವರ್ನರ್‌

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ನಟ ವಿಜಯ್‌ ಅವರ ಟಿವಿಕೆ ಪಕ್ಷ…

5 hours ago