• ಜಿ.ಕೃಷ್ಣ ಪ್ರಸಾದ್

ಇತ್ತೀಚಿನ ವರ್ಷಗಳಲ್ಲಿ ಒಂದು ವರ್ಷ ಬರಗಾಲವಿದ್ದರೆ ಮತ್ತೊಂದು ವರ್ಷ ಬಿಡದೇ ಸುರಿವ ಮಳೆ, ಈ ನಡುವೆ ಕಾಡು ಪ್ರಾಣಿ, ಕೂಲಿಕಾರರ ಸಮಸ್ಯೆಯಿಂದ ಕೃಷಿ ಮಾಡಲಾಗದ ಪರಿಸ್ಥಿತಿ.

ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಕೃಷಿ ಅರಣ್ಯ ಕಲ್ಪನೆಯನ್ನು ಸಾಕಾರಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಬಿದಿರು ರೈತರ ಆಶಾಕಿರಣವಾಗಿದೆ. ಒಮ್ಮೆ ನೆಟ್ಟು ಕಾಳಜಿ ಮಾಡಿದರೆ, ತನ್ನ ಪಾಡಿಗೆ ತಾನು ಬೆಳೆಯುತ್ತದೆ; ಆದಾಯ ತಂದು ಕೊಡುತ್ತದೆ.
ಸಾರವಿಲ್ಲದ ಮಣ್ಣಿನಲ್ಲೂ ಬಿದಿರು ಹುಲುಸಾಗಿ ಬೆಳೆಯುವುದರಿಂದ, ಪಾಳು ಬಿದ್ದ, ಕಲ್ಲು ಬಂಡೆ ಇರುವ ಜಾಗಗಳಲ್ಲೂ ಬಿದಿರನ್ನು ಸುಲಭವಾಗಿ ಬೆಳೆಯಬಹುದು. ನೆಟ್ಟ ಮೊದಲ ಮೂರು ವರ್ಷ ಆರೈಕೆ ಮಾಡಿದರೆ, ಮುಂದಿನ 30ರಿಂದ 100 ವರ್ಷಗಳವರೆಗೆ ನಮಗೆ ನಿರಂತರವಾಗಿ ಆದಾಯ ತರುತ್ತದೆ.

ಬಿದಿರಿನಲ್ಲಿ 1,500ಕ್ಕೂ ಹೆಚ್ಚು ತಳಿಗಳಿವೆ. ಬೇಲಿಗೆ ಬಳಕೆಯಾಗುವ ಸಣ್ಣ ಬಿದಿರಿನಿಂದ ಹಿಡಿದು ನೂರು ಅಡಿಮೀರಿ ಬೆಳೆಯುವ ಕೊಲಂಬಿಯಾ ಬಿದಿರಿನವರೆಗೆ ಇದರ ವೈವಿಧ್ಯ ಹಬ್ಬಿದೆ. ವಾಣಿಜ್ಯ ಉದ್ದೇಶಕ್ಕೆ ಸೂಕ್ತವಾದ ಹೆಬ್ಬಿದಿರು, ಶಮೆ ಬಿದಿರು, ಕಪ್ಪು ಬಿದಿರು, ಬರ್ಮಾ ಬಿದಿರು, ಗೋಲ್ಡನ್ ಬಿದಿರು, ಕೊಳಲು ಬಿದಿರು, ಒಂಟಿ ಬಿದಿರು ಜನಪ್ರಿಯ ತಳಿಗಳಾಗಿವೆ. ಅಲಂಕಾರಿಕ ಬಿದಿರಿನ ತಳಿಗಳಾದ ಹಳದಿ ಬಿದಿರು ಮತ್ತು ಬುದ್ದ ಬಿದಿರುಗಳನ್ನು ನಗರವಾಸಿಗಳೂ ಬೆಳೆಸಬಹುದು.

ಮಣ್ಣಿನ ಸವಕಳಿ ತಡೆಯಲು ಬಿದಿರು ಸಹಕಾರಿ. ನದಿ, ಹಳ್ಳ ಮತ್ತು ಕಾಲುವೆಗಳ ದಡದಲ್ಲಿ ನೆಲ ಕೊರೆತ ತಪ್ಪಿಸಬಹುದು. ಬಿದಿರನ್ನು ಸುಟ್ಟು ಬಯೋಚಾರ್ ಮಾಡಬಹುದು. ಮಾರುಕಟ್ಟೆಯಲ್ಲಿ ಇದ್ದಿಲಿಗೆ ಬೇಡಿಕೆ ಇದೆ. ಬಿದಿರು ಬಿದಿರು ಇಂಗಾಲವನ್ನು ಹೀರಿಕೊಂಡು, ವಾತಾವರಣದ ತಾಪಮಾನವನ್ನು ತಗ್ಗಿಸುತ್ತದೆ.

ಪರಿಸರ ಸ್ನೇಹಿ ಬಿದಿರಿನ ಮನೆಗಳು ಜನಪ್ರಿಯವಾಗುತ್ತಿವೆ. ಸಿಮೆಂಟ್ ಬದಲು ಬಿದಿರು ಬಳಸುವ ಪ್ರಯತ್ನಗಳೂ ಯಶಸ್ವಿಯಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ನ್ನು ಬಿದಿರಿನಿಂದ ಶೃಂಗರಿಸಿರುವುದು ವಿಶೇಷ.

ಬಿದಿರು ಕಳಲೆ ಸೇವನೆಯಿಂದ ರಕ್ತದೊತ್ತಡ, ಮಲಬದ್ಧತೆ, ಅಜೀರ್ಣ ಮತ್ತು ಹೃದಯ ಸಂಬಂಧಿ ರೋಗಗಳನ್ನೂ ತಹಬದಿಗೆ ತರುತ್ತದೆ. ಇನ್ನು ಪೆನ್‌ಸ್ಟಾಂಡ್, ಕೀ ಬಂಚ್, ಲ್ಯಾಂಪ್ ಶೆಡ್, ಬೆಡ್‌ ಲ್ಯಾಂಪ್, ಹಣ್ಣಿನ ಬುಟ್ಟಿ, ಬೀಸಣಿಗೆ ಮೊದಲಾದ ಅಲಂಕಾರಿಕ ವಸ್ತುಗಳನ್ನು ಮಾಡಬಹುದು. ಪೀಠೋಪಕರಣಗಳಂತೂ ಬಲು ಜನಪ್ರಿಯ.

ಇಡೀ ಹೊಲಕ್ಕೆ ಬಿದಿರು ಹಬ್ಬಿಸಬೇಕಿಲ್ಲ. ಬೇಲಿಗೆ ಮತ್ತು ಪಾಳು ಬಿದ್ದ ಜಾಗಗಳಲ್ಲಿ ಐದತ್ತು ಹಿಂಡು ನೆಟ್ಟರೆ ಮನೆಬಳಕೆಗೆ ಮತ್ತು ಸ್ಥಳೀಯ ಮಾರುಕಟ್ಟೆಗೆ ಸಾಕು. ಬಿದಿರಿನ ಗಳವೊಂದಕ್ಕೆ ನೂರರ ಆಸುಪಾಸಿನ ಬೆಲೆ ಇದೆ. ಇಡೀ ದೇಶದಲ್ಲಿ ಬಿದಿರಿನ ತೋಟಗಳು ಹೆಚ್ಚು ಇರುವುದು ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ. ಅಲ್ಲಿ ಸಾವಿರಾರು ರೈತರು ಬಿದಿರಿನ ಕೃಷಿ ಮಾಡುತ್ತಿದ್ದಾರೆ. ಬಿದಿರು ಮೂಲದ ಉದ್ದಿಮೆಗಳು ಅಲ್ಲಿ ತಲೆ ಎತ್ತಿವೆ.
ಮೈಸೂರು, ಚಾಮರಾಜನಗರ, ಕೊಡಗಿನ ರೈತರ ಹೊಲಗಳಲ್ಲಿ ಬಿದಿರು ನೆಲೆಯೂರಿದರೆ ರೈತರಿಗೆ ಆದಾಯದ ಮೂಲ ತೆರೆದುಕೊಳ್ಳುತ್ತದೆ. ಕಾಡುಪ್ರಾಣಿಗಳಿಗೆ ಆಹಾರವೂ ಸಿಗುತ್ತದೆ. ಕನ್ನಂಬಾಡಿ ಕಾಲುವೆಗಳ ಅಂಚಿನಲ್ಲಿ ಬಿದಿರು ಬೆಳೆಯುವ ಅವಕಾಶ ವಿಪುಲವಾಗಿದೆ. ಅರಣ್ಯ ಇಲಾಖೆ ಕೃಷಿ ಅರಣ್ಯ ಯೋಜನೆಯಡಿ ಬಿದಿರು ಬೆಳೆಯುವವರಿಗೆ ಪ್ರೋತ್ಸಾಹ ಧನ ನೀಡುತ್ತಿದೆ.

ರಾಷ್ಟ್ರೀಯ ಬಿದಿರು ಮಿಷನ್ ಕೂಡ ವಾಣಿಜ್ಯದ ಉದ್ದೇಶಕ್ಕೆ ಬಿದಿರು ಬೆಳೆಸುವವರಿಗೆ ಸಹಾಯಧನ ನೀಡುತ್ತದೆ. ರೈತರು ಇದರ ಸದುಪಯೋಗ ಪಡೆಯಬೇಕಿದೆ. ಬಿದಿರಿನ ತಳಿಗಳ ಪ್ರದರ್ಶನ ಮತ್ತು ಮಾರಾಟ ಏರ್ಪಾಡಾಗಿದೆ. ಆಸಕ್ತರು ಕೋಮಲ್ ಮೊ.ಸಂ. 98809 08608 ಸಂಪರ್ಕಿಸಬಹುದು.

“ಉದ್ಯಮಗಳ ಅಗತ್ಯವಿರುವ ಬಿದಿರು ಹೆಚ್ಚು ಪ್ರಚಾರ ಪಡೆಯುತ್ತಿದೆ. ಆಯಾ ಕೃಷಿ ವಲಯ ಮತ್ತು ಮಣ್ಣಿಗೆ ಸೂಕ್ತವಾದ ಬಿದಿರಿನ ತಳಿಗಳನ್ನು ಹುಡುಕಿಕೊಳ್ಳುವ ಮತ್ತು ತಮ್ಮದೇ ಮಾರುಕಟ್ಟೆಯನ್ನು ಹುಟ್ಟಿಹಾಕುವ ಜಾಣೆಯನ್ನು ರೈತರು ಬೆಳೆಸಿಕೊಳ್ಳಬೇಕು’
-ಶ್ರೀ ಪಡ್ರೆ, ಸಂಪಾದಕರು, ಅಡಕೆ ಪತ್ರಿಕೆ.

ಬನ್ನಿ! ಬಿದಿರು ಬೆಳೆಸೋಣ…
ವಾಣಿಜ್ಯ ಉದ್ದೇಶಕ್ಕೆ ಸೂಕ್ತವಾದ ಬಿದಿರಿನ ತಳಿಗಳ ಪರಿಚಯ ಮತ್ತು ಬಿದಿರಿನ ಕೃಷಿಯ ಪರಿಚಯ ಮಾಡಿಕೊಡುವ ಉದ್ದೇಶದಿಂದ ಸಹಜ ಸಮೃದ್ಧ-ಸಾವಯವ ಕೃಷಿಕರ ಬಳಗವು ದಿನಾಂಕ 10ನೇ ಆಗಸ್ಟ್ 2024ರಂದು ‘ಬಿದಿರಿನ ಬೇಸಾಯ’ ಕಾರ್ಯಕ್ರಮ ಏರ್ಪಡಿಸಿದೆ. ಮೈಸೂರಿನ ಮುಡಾ ಕಚೇರಿ ಪಕ್ಕದ ‘ದಿ ಇನ್‌ಸ್ಟಿಟೂಷನ್ ಆಫ್ ಇಂಜಿನಿಯರ್ ಸಭಾಂಗಣ’ದಲ್ಲಿ ಆಯೋಜಿಸಿರುವ ಈ ತರಬೇತಿ ಕಾರ್ಯಕ್ರಮದಲ್ಲಿ ಬಿದಿರು ತಜ್ಞರಾದ ಎ.ಸಿ.ಲಕ್ಷಣ, ಡಾ.ಸೀತಾಲಕ್ಷ್ಮೀ, ಡಾ.ರಾಮಕೃಷ್ಣ ಹೆಗಡೆ, ಪಿ.ದಯಾನಂದ ಮತ್ತು ಜಬೀವುಲ್ಲಾ ಬಿದಿರಿನ ತಳಿಗಳು ಮತ್ತು ಕೃಷಿ ಮಾಹಿತಿ ನೀಡಲಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ನಂಜನಗೂಡು | ಹಾಡಹಗಲೇ ಸ್ಕೂಟಿಯಲ್ಲಿದ್ದ ಹಣ ಕಳವು

ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…

5 hours ago

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಜಾಗತಿಕ ಸ್ಪರ್ಶ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…

7 hours ago

ಇಂದಿನಿಂದ ಮೂರು ದಿನ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು: ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ…

10 hours ago

ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ: ನಾಡದೇವಿಗೆ ಮಹಾಲಕ್ಷ್ಮೀ ಅಲಂಕಾರ

ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಹಾಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಇಡೀ…

14 hours ago

ಓದುಗರ ಪತ್ರ: ದಸರಾದಲ್ಲಿ ಕಂಬಳಕ್ಕೆ ಹಠವೇಕೆ?

ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ…

17 hours ago

ಓದುಗರ ಪತ್ರ: ದೇವಿಯ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು…

17 hours ago