ಅನ್ನದಾತರ ಅಂಗಳ

ಕೃಷಿ ಪಂಡಿತ ಗೋಪಾಲೇಗೌಡರ ಕುರಿತು

ಭೇರ್ಯ ಮಹೇಶ್‌

ಮೈಸೂರು ಜಿಲ್ಲೆಯಲ್ಲಿ ಭತ್ತ, ರಾಗಿ, ಕಬ್ಬು, ತೆಂಗು, ವಿವಿಧ ಬಗೆಯ ಹೂವುಗಳು ಹೀಗೆ ಕೆಲವೇ ಕೆಲವು ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಇವುಗಳ ನಡುವೆ ಮಲೆನಾಡಿನಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳನ್ನೂ ಕೂಡ ಬೆಳೆಯಬಹುದು ಎಂಬುದನ್ನು ತಾಲ್ಲೂಕಿನ ಮಾಳನಾಯಕನಹಳ್ಳಿ ಗ್ರಾಮದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕ ತ ಹಾಗೂ ಪ್ರಗತಿಪರ ರೈತ ಗೋಪಾಲೇಗೌಡ ತೋರಿಸಿಕೊಟ್ಟಿದ್ದಾರೆ.

ಕೃಷಿಯೇ ಹಾಗೆ ಅದು ತನ್ನ ಕೈ ಹಿಡಿದವರನ್ನು ಯಾವತ್ತೂ ಬಿಡುವುದಿಲ್ಲ. ಅದನ್ನು ನಿಷ್ಠೆ ಶ್ರದ್ಧೆಯಿಂದ ಮಾಡಬೇಕಷ್ಟೆ. ಅದು ಬಂಡವಾಳ ಹಾಕಿ ಲಾಭ ತೆಗೆಯುವಂತಹದಲ್ಲ. ಅದನ್ನು ಪ್ರೀತಿಸುತ್ತಾ ಶ್ರಮ ಪಡಬೇಕು. ಆಗ ಅದು ಕೈಹಿಡಿಯುತ್ತದೆ. ಅದರ ಬಗ್ಗೆ ಆಸಕ್ತಿ, ಪ್ರೀತಿ ಇಲ್ಲದೆ ಹೋದರೆ ಅದರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಶ್ರಮಪಟ್ಟು ದುಡಿದವರನ್ನು ಕಾಪಾಡುತ್ತದೆ. ಇದಕ್ಕೆ ಸಾಕ್ಷಿ ರೈತ ಗೋಪಾಲೇಗೌಡರು ಎಂದರೆ ತಪ್ಪಾಗಲಾರದು. ಅವರು ಕೃಷಿಯನ್ನು ತಪ್ಪಸ್ಸಿನಂತೆ ಧ್ಯಾನಿಸಿದ ಫಲದಿಂದ ಅದರಲ್ಲಿ ಯಶಸ್ಸು ಕಂಡಿದ್ದಾರೆ.

ಮಾಳನಾಯಕನಹಳ್ಳಿ ಗ್ರಾಮದಲ್ಲಿ ತಮ್ಮಗಿರುವ ಮೂರೂವರೆ ಎಕರೆ ಪ್ರದೇಶದ ತೋಟಕ್ಕೆ ತೆರಳಿದ್ದೇ ಆದರೆ ಅಚ್ಚರಿ ಮೂಡುತ್ತದೆ. ಅಷ್ಟೇ ಅಲ್ಲ ಅದೊಂದು ಕೇವಲ ತೋಟವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಅದು ಹಚ್ಚ ಹಸಿರಿನ ಸ್ವರ್ಗದಂತೆ ಭಾಸವಾಗುತ್ತದೆ. ಕೃಷಿ ಮಾಡಬೇಕೆನ್ನುವವರಿಗೆ ಅದೊಂದು ಸಂಶೋ ಧನಾಲಯದ ಕೇಂದ್ರ ಮತ್ತು ಕಲಿಕೆಯ ಕ್ಷೇತ್ರ ವಾಗಿಯೂ ಕಂಗೊಳಿಸುತ್ತದೆ.

ಗೋಪಾಲೇಗೌಡರ ತೋಟದಲ್ಲಿ ಏನಿದೆ? ಏನಿಲ್ಲ? : ಇಲ್ಲಿ ಏನಿದೆ? ಏನಿಲ್ಲ ಎನ್ನುವುದನ್ನು ಹೇಳ ಲಾಗುವುದಿಲ್ಲ. ಮಲೆನಾಡಿನಲ್ಲಿ ಬೆಳೆಯುವ ಬೆಳೆ ಗಳಾದ ಕರಿಮೆಣಸು, ಏಲಕ್ಕಿ, ಚಕ್ಕೆ, ಜಾಯಿಕಾಯಿ, ಅರಿಶಿನ, ಶುಂಠಿ, ಪನ್ನೀರು, ಇಂಗು, ಕಾಫಿ, ತೆಂಗು, ಅಡಕೆ, ಕೋಕ್, ಸೀಬೆ, ಸಪೋಟ, ಪಪ್ಪಾಯ, ಅಂಜೂರಾ, ಸಿಲ್ವರ್, ತೇಗ ಹೀಗೆ ಒಂದೇ ಎರಡೇ ಹತ್ತಾರು ಬೆಳೆಗಳು ತೋಟದಲ್ಲಿ ಕಳೆಗಟ್ಟಿವೆ. ಈ ಬೆಳೆಯಿಂದ ಅವರು ವರ್ಷಕ್ಕೆ ೧೫ರಿಂದ ೧೮ ಲಕ್ಷ ರೂ. ಗಳಷ್ಟು ಆದಾಯವನ್ನು ಪಡೆಯುತ್ತಿದ್ದಾರೆ. ಇನ್ನು ಇವರು ಕಾಫಿ, ಏಲಕ್ಕಿ, ಚಕ್ಕೆ, ಜಾಕಾಯಿ, ಪತ್ರೆ, ಅಂಜೂರ, ಕಿತ್ತಳೆ, ಸಪೋಟ, ಮಾವು, ತೆಂಗು, ಅಡಕೆ, ಕೋಕ್, ಮೆಣಸು ಹೀಗೆ ಎಲ್ಲ ರೀತಿಯ ಸಾಂಬಾರ ಪದಾರ್ಥ ಗಳನೂ ನೈಸರ್ಗಿಕವಾಗಿ ಸಾವಯವ ಪದ್ಧತಿಯ ಲ್ಲಿಯೇ ಬೆಳೆಯುತ್ತಿರುವುದು ವಿಶೇಷವಾಗಿದೆ.

ಇವರ ಕೃಷಿ ಪದ್ಧತಿ ಹೇಗಿದೆ ಗೊತ್ತಾ: ಇವತ್ತು ಸಾವ ಯವ ಕೃಷಿ ಮಾಡಿ ಎಂದು ಹೇಳುವುದು ಸುಲಭ ಆದರೆ ಅದನ್ನು ಮಾಡಿ ತೋರಿಸುವುದು ಕಷ್ಟ. ಆದರೆ ಗೋಪಾಲೇಗೌಡರು ತಾವು ಸಾವಯವ ಕೃಷಿ ಮಾಡುವ ಮೂಲಕ ಇತರರನ್ನು ಪ್ರೇರೇಪಿಸುತ್ತಿ ರುವುದು ಶ್ಲಾಘನೀಯವಾದದು.

ಕೃಷಿ ಪಂಡಿತ ಪ್ರಶಸ್ತಿ: ಭೂಮಿಯನ್ನು ಗೌರವಿಸಿ ಶ್ರದ್ಧಾ ಭಕ್ತಿಯಿಂದ ಬೇಸಾಯ ಮಾಡಿ ವರ್ಷಕ್ಕೆ ಲಕ್ಷಾಂತರ ರೂ. ಗಳಿಗೂ ಹೆಚ್ಚಿನ ಆದಾಯ ಪಡೆದಿ ದ್ದಾರೆ. ಜತೆಗೆ ಇವತ್ತು ಕೃಷಿಯಿಂದ ವಿಮುಖರಾಗಿ ಬೇಸಾಯ ಚಟುವಟಿಕೆಗಳಿಂದ ದೂರ ಸರಿಯುತ್ತಿ ರುವ ಯುವ ಜನಾಂಗವನ್ನು ಮತ್ತೆ ಬೇಸಾಯಕ್ಕೆ ಕರೆ ತರುವ ಕೆಲಸವನ್ನು ಮಾಡಿದ್ದರಿಂದ ಇವರ ಸೇವೆಗೆ ೨೦೧೫-೧೬ ನೇ ಸಾಲಿನಲ್ಲಿ ಸರ್ಕಾರ ‘ಕೃಷಿ ಪಂಡಿತ’ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ.

ಆಂದೋಲನ ಡೆಸ್ಕ್

Recent Posts

ಚಂಡೀಗಢ: ಅಪರಿಚಿತ ವ್ಯಕ್ತಿಗಳಿಂದ ಶಿವಸೇನಾ ನಾಯಕನ ಹತ್ಯೆ

ಚಂಡೀಗಢ: ಬೈಕ್‌ನಲ್ಲಿ ಬೆನ್ನಟ್ಟಿ ಶಿವಸೇನಾ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ ಮೊಗಾದಲ್ಲಿ ನಡೆದಿದೆ. ದಾಳಿಯಲ್ಲಿ ಓರ್ವ ಬಾಲಕ…

49 seconds ago

ಅಪ್ಪು ಸಿನಿಮಾ ರಿ-ರಿಲೀಸ್‌: ಅಭಿಮಾನಿಗಳೊಂದಿಗೆ ತನ್ನದೇ ಚಿತ್ರ ವೀಕ್ಷಿಸಿದ ರಕ್ಷಿತಾ

ಬೆಂಗಳೂರು: ದಿವಂಗತ ನಟ ಪುನೀತ್‌ ರಾಜ್‌ ಕುಮಾರ್‌ ಅವರ 50 ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಅಪ್ಪು ಸಿನಿಮಾ ರಿ-ರಿಲೀಸ್‌…

2 mins ago

ಡಿಸಿಎಂ ಡಿ.ಕೆ.ಶಿವಕುಮಾರ್‌ ಡಿನ್ನರ್‌ ಪಾರ್ಟಿ: ಸಿಎಂ ಬಣದ ಇಬ್ಬರು ಸಚಿವರು ಗೈರು, ಬಿಜೆಪಿಯ ಇಬ್ಬರು ಶಾಸಕರು ಭಾಗಿ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಗುರುವಾರ ರಾತ್ರಿ ಆಯೋಜಿಸಿದ್ದ ಡಿನ್ನರ್‌ ಪಾರ್ಟಿ ಸಿಎಂ ಬಣದ ಇಬ್ಬರು ಸಚಿವರು ಗೈರರಾಗಿದ್ದರೆ, ಬಿಜೆಪಿಯ…

48 mins ago

ಎಂಪಿ ಟಿಕೆಟ್‌ ಕಳೆದುಕೊಂಡು ಒಂದು ವರ್ಷವಾಯಿತು: ಮಾಜಿ ಸಂಸದ ಪ್ರತಾಪ್‌ ಸಿಂಹ ಟ್ವೀಟ್‌

ಮೈಸೂರು: ಎಂಪಿ ಟಿಕೆಟ್ ಕಳೆದುಕೊಂಡು ಒಂದು ವರ್ಷವಾಯಿತು. ಆದರೆ ಕಾರ್ಯಕರ್ತರ ಪ್ರೀತಿ ಹಾಗೂ ಜನರ ಆಶೀರ್ವಾದ ಇವತ್ತಿಗೂ ಹಾಗೆಯೇ ಇದೆ…

52 mins ago

ಅಮೆರಿಕಾದ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದ ರಷ್ಯಾ: ಹಲವು ಬೇಡಿಕೆಯಿಟ್ಟ ವ್ಲಾಡಿಮಿರ್‌ ಪುಟಿನ್‌

ಮಾಸ್ಕೋ: ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾವು ಅಮೆರಿಕಾದ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.…

1 hour ago

ಮದುವೆಗೆ ನಿರಾಕರಿಸಿದ ಪ್ರಿಯಕರ: ಯುವತಿ ಸೂಸೈಡ್: ಪುತ್ರಿ ಸಾವಿನ ಬಳಿಕ ತಾಯಿ ಆತ್ಮಹತ್ಯೆ

ಮಂಡ್ಯ: ಮದುವೆಯಾಗಲು ಪ್ರಿಯಕರ ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆಗೆ ಶರಣಾಗಿದ್ದು, ಮಗಳು ಸಾವನ್ನಪ್ಪಿದ್ದ 20 ದಿನಗಳ ಬಳಿಕ ತಾಯಿಯೂ ನೇಣಿಗೆ ಶರಣಾಗಿರುವ…

2 hours ago