ಅನ್ನದಾತರ ಅಂಗಳ

ಕೃಷಿ ಪಂಡಿತ ಗೋಪಾಲೇಗೌಡರ ಕುರಿತು

ಭೇರ್ಯ ಮಹೇಶ್‌

ಮೈಸೂರು ಜಿಲ್ಲೆಯಲ್ಲಿ ಭತ್ತ, ರಾಗಿ, ಕಬ್ಬು, ತೆಂಗು, ವಿವಿಧ ಬಗೆಯ ಹೂವುಗಳು ಹೀಗೆ ಕೆಲವೇ ಕೆಲವು ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಇವುಗಳ ನಡುವೆ ಮಲೆನಾಡಿನಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳನ್ನೂ ಕೂಡ ಬೆಳೆಯಬಹುದು ಎಂಬುದನ್ನು ತಾಲ್ಲೂಕಿನ ಮಾಳನಾಯಕನಹಳ್ಳಿ ಗ್ರಾಮದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕ ತ ಹಾಗೂ ಪ್ರಗತಿಪರ ರೈತ ಗೋಪಾಲೇಗೌಡ ತೋರಿಸಿಕೊಟ್ಟಿದ್ದಾರೆ.

ಕೃಷಿಯೇ ಹಾಗೆ ಅದು ತನ್ನ ಕೈ ಹಿಡಿದವರನ್ನು ಯಾವತ್ತೂ ಬಿಡುವುದಿಲ್ಲ. ಅದನ್ನು ನಿಷ್ಠೆ ಶ್ರದ್ಧೆಯಿಂದ ಮಾಡಬೇಕಷ್ಟೆ. ಅದು ಬಂಡವಾಳ ಹಾಕಿ ಲಾಭ ತೆಗೆಯುವಂತಹದಲ್ಲ. ಅದನ್ನು ಪ್ರೀತಿಸುತ್ತಾ ಶ್ರಮ ಪಡಬೇಕು. ಆಗ ಅದು ಕೈಹಿಡಿಯುತ್ತದೆ. ಅದರ ಬಗ್ಗೆ ಆಸಕ್ತಿ, ಪ್ರೀತಿ ಇಲ್ಲದೆ ಹೋದರೆ ಅದರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಶ್ರಮಪಟ್ಟು ದುಡಿದವರನ್ನು ಕಾಪಾಡುತ್ತದೆ. ಇದಕ್ಕೆ ಸಾಕ್ಷಿ ರೈತ ಗೋಪಾಲೇಗೌಡರು ಎಂದರೆ ತಪ್ಪಾಗಲಾರದು. ಅವರು ಕೃಷಿಯನ್ನು ತಪ್ಪಸ್ಸಿನಂತೆ ಧ್ಯಾನಿಸಿದ ಫಲದಿಂದ ಅದರಲ್ಲಿ ಯಶಸ್ಸು ಕಂಡಿದ್ದಾರೆ.

ಮಾಳನಾಯಕನಹಳ್ಳಿ ಗ್ರಾಮದಲ್ಲಿ ತಮ್ಮಗಿರುವ ಮೂರೂವರೆ ಎಕರೆ ಪ್ರದೇಶದ ತೋಟಕ್ಕೆ ತೆರಳಿದ್ದೇ ಆದರೆ ಅಚ್ಚರಿ ಮೂಡುತ್ತದೆ. ಅಷ್ಟೇ ಅಲ್ಲ ಅದೊಂದು ಕೇವಲ ತೋಟವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಅದು ಹಚ್ಚ ಹಸಿರಿನ ಸ್ವರ್ಗದಂತೆ ಭಾಸವಾಗುತ್ತದೆ. ಕೃಷಿ ಮಾಡಬೇಕೆನ್ನುವವರಿಗೆ ಅದೊಂದು ಸಂಶೋ ಧನಾಲಯದ ಕೇಂದ್ರ ಮತ್ತು ಕಲಿಕೆಯ ಕ್ಷೇತ್ರ ವಾಗಿಯೂ ಕಂಗೊಳಿಸುತ್ತದೆ.

ಗೋಪಾಲೇಗೌಡರ ತೋಟದಲ್ಲಿ ಏನಿದೆ? ಏನಿಲ್ಲ? : ಇಲ್ಲಿ ಏನಿದೆ? ಏನಿಲ್ಲ ಎನ್ನುವುದನ್ನು ಹೇಳ ಲಾಗುವುದಿಲ್ಲ. ಮಲೆನಾಡಿನಲ್ಲಿ ಬೆಳೆಯುವ ಬೆಳೆ ಗಳಾದ ಕರಿಮೆಣಸು, ಏಲಕ್ಕಿ, ಚಕ್ಕೆ, ಜಾಯಿಕಾಯಿ, ಅರಿಶಿನ, ಶುಂಠಿ, ಪನ್ನೀರು, ಇಂಗು, ಕಾಫಿ, ತೆಂಗು, ಅಡಕೆ, ಕೋಕ್, ಸೀಬೆ, ಸಪೋಟ, ಪಪ್ಪಾಯ, ಅಂಜೂರಾ, ಸಿಲ್ವರ್, ತೇಗ ಹೀಗೆ ಒಂದೇ ಎರಡೇ ಹತ್ತಾರು ಬೆಳೆಗಳು ತೋಟದಲ್ಲಿ ಕಳೆಗಟ್ಟಿವೆ. ಈ ಬೆಳೆಯಿಂದ ಅವರು ವರ್ಷಕ್ಕೆ ೧೫ರಿಂದ ೧೮ ಲಕ್ಷ ರೂ. ಗಳಷ್ಟು ಆದಾಯವನ್ನು ಪಡೆಯುತ್ತಿದ್ದಾರೆ. ಇನ್ನು ಇವರು ಕಾಫಿ, ಏಲಕ್ಕಿ, ಚಕ್ಕೆ, ಜಾಕಾಯಿ, ಪತ್ರೆ, ಅಂಜೂರ, ಕಿತ್ತಳೆ, ಸಪೋಟ, ಮಾವು, ತೆಂಗು, ಅಡಕೆ, ಕೋಕ್, ಮೆಣಸು ಹೀಗೆ ಎಲ್ಲ ರೀತಿಯ ಸಾಂಬಾರ ಪದಾರ್ಥ ಗಳನೂ ನೈಸರ್ಗಿಕವಾಗಿ ಸಾವಯವ ಪದ್ಧತಿಯ ಲ್ಲಿಯೇ ಬೆಳೆಯುತ್ತಿರುವುದು ವಿಶೇಷವಾಗಿದೆ.

ಇವರ ಕೃಷಿ ಪದ್ಧತಿ ಹೇಗಿದೆ ಗೊತ್ತಾ: ಇವತ್ತು ಸಾವ ಯವ ಕೃಷಿ ಮಾಡಿ ಎಂದು ಹೇಳುವುದು ಸುಲಭ ಆದರೆ ಅದನ್ನು ಮಾಡಿ ತೋರಿಸುವುದು ಕಷ್ಟ. ಆದರೆ ಗೋಪಾಲೇಗೌಡರು ತಾವು ಸಾವಯವ ಕೃಷಿ ಮಾಡುವ ಮೂಲಕ ಇತರರನ್ನು ಪ್ರೇರೇಪಿಸುತ್ತಿ ರುವುದು ಶ್ಲಾಘನೀಯವಾದದು.

ಕೃಷಿ ಪಂಡಿತ ಪ್ರಶಸ್ತಿ: ಭೂಮಿಯನ್ನು ಗೌರವಿಸಿ ಶ್ರದ್ಧಾ ಭಕ್ತಿಯಿಂದ ಬೇಸಾಯ ಮಾಡಿ ವರ್ಷಕ್ಕೆ ಲಕ್ಷಾಂತರ ರೂ. ಗಳಿಗೂ ಹೆಚ್ಚಿನ ಆದಾಯ ಪಡೆದಿ ದ್ದಾರೆ. ಜತೆಗೆ ಇವತ್ತು ಕೃಷಿಯಿಂದ ವಿಮುಖರಾಗಿ ಬೇಸಾಯ ಚಟುವಟಿಕೆಗಳಿಂದ ದೂರ ಸರಿಯುತ್ತಿ ರುವ ಯುವ ಜನಾಂಗವನ್ನು ಮತ್ತೆ ಬೇಸಾಯಕ್ಕೆ ಕರೆ ತರುವ ಕೆಲಸವನ್ನು ಮಾಡಿದ್ದರಿಂದ ಇವರ ಸೇವೆಗೆ ೨೦೧೫-೧೬ ನೇ ಸಾಲಿನಲ್ಲಿ ಸರ್ಕಾರ ‘ಕೃಷಿ ಪಂಡಿತ’ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ.

ಆಂದೋಲನ ಡೆಸ್ಕ್

Recent Posts

ಗುಂಡ್ಲುಪೇಟೆ: ಗಾಳಿ ಮಳೆಗೆ ಜಗಲಿ ಕಟ್ಟೆಯ ಬುಗರಿ ಮರ ಬಿದ್ದು ಮನೆ ಜಖಂ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು  ಗುಂಡ್ಲುಪೇಟೆ: ಗಾಳಿ ಮಳೆಗೆ ಜಗಲಿ ಕಟ್ಟೆಯ ಬುಗರಿ ಮರ ಬಿದ್ದು ಮನೆ ಜಖಂಗೊಂಡಿರುವ…

34 mins ago

ಗುಂಡ್ಲುಪೇಟೆ: ಮದ್ದೂರು ವಲಯದಲ್ಲಿ ಮೃತ ಹುಲಿ ಕಳೇಬರ ಪತ್ತೆ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ‌ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಮಾರಿಗುಡಿ ಬೀಟ್…

41 mins ago

ಭಾರತದಲ್ಲಿ ಕಚ್ಚಾ ತೈಲ ಸಾಕಷ್ಟು ಲಭ್ಯವಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶದಲ್ಲಿ ಕಚ್ಚಾ ತೈಲ ಸಾಕಷ್ಟು ಲಭ್ಯವಿದೆ. ಭಾರತವು ಕಚ್ಚಾ ತೈಲಕ್ಕಾಗಿ ಸಾಕಷ್ಟು ಸಂಗ್ರಹಣಾ ಸೌಲಭ್ಯಗಳು ಮತ್ತು ವಿಶ್ವಾಸಾರ್ಹ ಪೂರೈಕೆ…

3 hours ago

ರಸ್ತೆ ಅಪಘಾತಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ

ಮೈಸೂರು: ರಸ್ತೆ ಅಪಘಾತದಿಂದ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ…

4 hours ago

ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಅನುದಾನ ಒದಗಿಸಿ: ಎಂಎಲ್‌ಸಿ ಕೆ.ಶಿವಕುಮಾರ್‌ ಆಗ್ರಹ

ಬೆಂಗಳೂರು: ಮೈಸೂರು ನಗರ ಸೇರಿದಂತೆ ರಾಜ್ಯದಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನ ಒದಗಿಸಬೇಕೆಂದು ಎಂಎಲ್‌ಸಿ ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ. ಈ…

4 hours ago

ಮಹೇಶ್‌ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ

ಬೆಂಗಳೂರು: ಮಹೇಶ್‌ ಶೆಟ್ಟಿ ತಿಮರೋಡಿ ಗಡಿಪಾರು ಮಾಡಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಿಮರೋಡಿ ಅವರನ್ನು ದಕ್ಷಿಣ…

4 hours ago