ಎನ್.ಕೇಶವಮೂರ್ತಿ

ಮೈಸೂರಿನ ಸಮೀಪ ದಲ್ಲಿ ವೀರನಗೆರೆ ಎಂಬ ಊರಿದೆ. ಅದು ಈಗ ಮೈಸೂರಿಗೇ ಸೇರಿ ಕೊಂಡಿದೆ. ಈ ಗ್ರಾಮ ದಲ್ಲಿ ಮಹಾರಾಜರ ಕಾಲದಿಂದಲೂ ಬದನೆಕಾಯಿ ಬೆಳೆಯುವ ಕುಟುಂಬವೊಂದಿತ್ತು. ವೀರನಗೆರೆ ಬದನೆ ಎಂದೇ ಖ್ಯಾತಿ ಪಡೆದಿದ್ದ ಜೊಂಪೆ ಜೊಂಪೆ ಯಾಗಿ ಬೆಳೆಯುವ ಅತ್ಯಂತ ರುಚಿಕರ ಬದನೆ ತಳಿಗಳನ್ನು ಈ ಗ್ರಾಮದಲ್ಲಿ ಬೆಳೆಯುತ್ತಿದ್ದರು. ಅಂದರೆ ಜನರ ಬಾಯಿಯಿಂದ ಬಾಯಿಗೆ ಹರಡಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಈರನಗೆರೆ ಬದನೆಯನ್ನು ಇಲ್ಲಿ ಬೆಳೆಯಲಾಗುತ್ತಿತ್ತು.

ಬದನೆ ಬೆಳೆಯುತ್ತಿದ್ದ ಈ ರೈತಾಪಿ ಕುಟುಂ ಬದ ಹಿರೀ ತಲೆಯ ಅಜ್ಜಿಗೆ ಈಗ ಎಂಬತ್ತು ವರ್ಷ ವಯಸ್ಸು. ಸದಾ ಎಲೆ ಅಡಕೆ ಜಗಿಯು ವುದು ಅಜ್ಜಿಯ ಅಭ್ಯಾಸ. ಈ ಅಭ್ಯಾಸ ದೊಂದಿಗೆ ಪ್ರತಿದಿನ ಬೆಳಿಗ್ಗೆ ಮನೆಯ ಹಿಂದಿನ ಬದನೆಕಾಯಿ ತೋಟಕ್ಕೆ ಹೋಗಿ, ಅಲ್ಲಿ ಚೆನ್ನಾ ಗಿರುವ ಬದನೆಕಾಯಿ ಮೇಲೆ ಎಲೆಅಡಕೆ ಉಗುಳುವುದುಂಟು. ಅಜ್ಜಿಯ ಈ ಕೆಲಸ ಮನೆಯ ಮಕ್ಕಳಿಗೆ ಇಷ್ಟವಾಗುತ್ತಿರಲಿಲ್ಲ. ಮೊದಲ ಮೊದಲು ಎಲ್ಲರೂ ಆ ಅಜ್ಜಿಗೆ ಅರಳುಮರಳು ಎಂದು ಸುಮ್ಮನಾದರು. ಆದರೆ ಆ ಅಜ್ಜಿ ಉಗುಳುವ ಚಾಳಿ ಮುಂದುವರಿಸಿ ದಾಗ, ಹಿರಿಯಮಗ ಅಜ್ಜಿಯನ್ನು ಕೇಳಿದ, ‘ಅಮ್ಮ ನೀನು ಏಕೆ ಹೀಗೆ ಮಾಡ್ತೀಯಾ? ನೀನು ಉಗುಳುವ ಬದನೆಕಾಯಿಗಳು ಮೊದಲು ತುಂಬಾ ಚೆನ್ನಾಗಿರುತ್ತವೆ. ಅವುಗಳನ್ನು ಕೊಯ್ದು ಮಾರೋಣ ಎನ್ನುವಷ್ಟರಲ್ಲಿ ನೀನು ತಾಂಬೂಲ ಉಗಿದು ಅಸಹ್ಯ ಮಾಡಿರುತ್ತೀಯ, ಅವುಗಳನ್ನು ನಾವು ಮಾರಲೂ ಸಾಧ್ಯವಾಗುತ್ತಿಲ್ಲ. ಇದರಿಂದ ನಮಗೆ ಆದಾಯವು ಸಿಗುತ್ತಿಲ್ಲ. ಏನು ನಿನ್ನ ಸಮಸ್ಯೆ? ’ ಎಂದ.

ಅದಕ್ಕೆ ಅಜ್ಜಿ ದವಡೆಗೆ ಒತ್ತರಿಸಿದ್ದ ತಾಂಬೂಲ ಉಗಿದು, ಮಗನ ಮುಖ ನೋಡಿ ನಿಧಾನವಾಗಿ, ‘ಸುಮ್ಕಿರ್ಲಾ ಕಂಡಿವ್ನಿ. ಮಹಾ ಬೆಳೀ ತಾನೆ ಬದನೆಕಾಯ್ನ, ಅಲ್ಲಾ ಎಕರೆಗಟ್ಲೆ ಬದನೆ ಹಾಕಿದ್ದೀಯಾ. ಎಲ್ಲೋ ಮೂಲೇಲಿ ಒಂದು ಬದನೆಗೆ ನಾನು ಉಗಿದ್ರೆ ದೇಸಾ ಹಾಳಾ ಯ್ತದಾ? ಹೋಗು ಹೋಗು ಕಂಡಿವ್ನಿ. ನೀನು ಏನೇ ಹೇಳಿದ್ರೂ ನಾನು ಹಂಗೆ ಮಾಡೋಳು ಎಂದಳು.

ಮಗ ತಲೆ ಹಚ್ಚಿಕೊಂಡ. ಎಷ್ಟಾದರೂ ಹೆತ್ತ ತಾಯಿ, ಅಮ್ಮ ಏನಾದ್ರೂ ಮಾಡಲಿ ಎಂದು ಉಳಿದವರಿಗೆ ಹೇಳಿದ, ಅಜ್ಜಿ ಉಗಿದಿರೋ ಕಾಯಿ ಹಂಗೇ ಬಿಡಿ ಉಳಿದದ್ದನ್ನು ಮಾರಿ ಎಂದು ಗೊಣಗಿಕೊಂಡು ಎಲ್ಲರೂ ಸುಮ್ಮನಾದ್ರೂ. ಆದರೆ ಅಜ್ಜಿಯ ಒಬ್ಬ ಮೊಮ್ಮಗ ಸುಮ್ಮ ನಾಗಲಿಲ್ಲ. ಅವನು ಅಜ್ಜಿಯ ಕೆಲಸವನ್ನು ಹತ್ತಿರದಿಂದ ಗಮನಿಸತೊಡಗಿದ. ಅಜ್ಜಿ ಅರಳುಮರಳಿಂದಲ್ಲ ಬೇಕೆಂದೇ ಹೀಗೆ ಮಾಡುತ್ತಿದ್ದಾರೆ ಎಂದು ಅವನಿಗೆ, ಅಜ್ಜಿ ಉಗಿಯೋಕೆ ಆಯ್ದುಕೊಂಡ ಉತ್ತಮ ಬದನೆ ಕಾಯಿ ನೋಡಿದಾಗ ಖಚಿತವಾಯಿತು. ಮೊಮ್ಮಗನಿಗೆ ಅನುಮಾನ ಬಂದು ಅಜ್ಜಿ ಯನ್ನು ಕೇಳಿಯೇ ಬಿಟ್ಟ. ಮೊಮ್ಮಗ ಅಲ್ವಾ ಎಂದು ಪ್ರೀತಿಯಿಂದ ಅವನನ್ನು ಹತ್ತಿರ ಕೂರಿಸಿಕೊಂಡು, ನೋಡು ಮಗಾ, ಈ ಮೂದೇವಿಗಳಿಗೆ ಎಲ್ಲಾ ಕೊಯ್ದು ಮಾರೋ ಆತುರ. ಆದರೆ ಮುಂದಿನ ಹಂಗಾಮಿಗೆ ಬೀಜಕ್ಕೇನು ಮಾಡ್ತಾವೆ? ಅಕ್ಕ ಪಕ್ಕದವರ ಬಳಿ ಗೋಗರೀತಾವೆ. ಅದಕ್ಕೆ ನಾನು ಉಪಾಯ ವಾಗಿ ಚೆನ್ನಾಗಿ ಬಲಿತಿರುವ ಬದನೆ ಕಾಯಿ ಆರಿಸಿ ಉಗೀತೀನಿ. ಅದನ್ನು ಇವರು ಮಾರಲ್ಲ. ನಂತರ ಅದನ್ನು ಖಟಾವು ಮಾಡಿ, ಮಧ್ಯದಲ್ಲಿ ಸೀಳಿ, ಬೆಂಬೂದಿ ಬೆರೆಸಿ ಜೋಪಾನ ಮಾಡಿ, ಇವರಿಗೇ ಅಕ್ಕಪಕ್ಕದಿಂದ ತಂದ ಬೀಜ ಅಂತಾ ಕೊಡ್ತೀನಿ. ಪ್ರತಿ ಬಾರಿನೂ ಬೆಳೆ ಚೆನ್ನಾಗಿ ಬರೋ ದ್ರಿಂದ ನನ್ನನ್ನೇ ಬೀಜ ಕೊಡು ಅಂತಾ ಗೋಗರಿ ತಾವೆ. ಕೆರೆಯ ನೀರನು ಕೆರೆಗೇ ಹಾಕ್ತಾ ಇದ್ದೀನಿ. ಇದನ್ನು ಯಾರಿಗೂ ಹೇಳಬೇಡ’ ಎಂದು ಅಜ್ಜಿ ಮೊಮ್ಮಗ ನಿಗೆ ಹೇಳಿದಳು. ಮೊಮ್ಮಗನಿಗೆ ಅಜ್ಜಿಯಿಂದ ಒಂದು ಕೃಷಿಯ ಪಾಠ ಸಿಕ್ಕಿತು.

ಅಜ್ಜಿಯ ಜಾಣ್ಮೆಗೆ ಮಗ ಬೆರಗಾದ. ಇಂತಹ ಬೀಜ ಮಾತೆಯರು ಇರುವುದ ರಿಂದಲೇ ಇವತ್ತೂ ಹಳ್ಳಿಗಳಲ್ಲಿ ನಾಟಿ ತಳಿಗಳು ಉಳಿದಿವೆ. ಅಂತಹ ಮಾತೆಯರಿಂದ ಕಲಿಯುವುದು ಬಹಳಷ್ಟಿದೆ.

ಆಂದೋಲನ ಡೆಸ್ಕ್

Recent Posts

ಗ್ಯಾಸ್ ಬೆಲೆ ಗಗನಕ್ಕೆ : ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು : ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 993 ರೂ. ಏಕಾಏಕಿ ಹೆಚ್ಚಿಸಿರುವ ಕೇಂದ್ರ ಸರ್ಕಾರದ…

10 hours ago

ಸಮೀಕ್ಷೆ ಭವಿಷ್ಯ : ದ್ರಾವಿಡ ಕೋಟೆ ಅಲುಗಾಟ ; ಕಿಂಗ್‌ ಮೇಕರ್‌ ಆಗ್ತಾರಾ ದಳಪತಿ ವಿಜಯ್?‌

ಚೆನ್ನೈ : ತಮಿಳುನಾಡಿನ ದಶಕಗಳ ದ್ರಾವಿಡ ರಾಜಕಾರಣಕ್ಕೆ ಸವಾಲು ಹಾಕಿ ಅಖಾಡಕ್ಕಿಳಿದಿರುವ ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’…

10 hours ago

ಕಾರ್ಮಿಕರು ದೇಶದ ಆರ್ಥಿಕ, ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಕೆಪಿಸಿಸಿ ಕಚೇರಿಯಲ್ಲಿ…

12 hours ago

ಹೊರ್ಮುಜ್‌ ಅನ್ನು ʼಟ್ರಂಪ್‌ ಜಲಸಂಧಿʼ ಎಂಬ ಹೆಸರಿನ ನಕ್ಷೆ ಹಂಚಿಕೊಂಡ ಟ್ರಂಪ್‌

ವಾಷಿಂಗ್ಟನ್‌ : ಮಧ್ಯಪ್ರಾಚ್ಯದಲ್ಲಿ ಅಮೆರಿಕಾ-ಇರಾನ್‌ ನಡುವಿನ ಸಂಘರ್ಷದಲ್ಲಿ ಹೊರ್ಮುಜ್‌ ಜಲಸಂಧಿ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಈಗಾಗಲೇ ಅಮೆರಿಕ ನೌಕಾಪಡೆ ಈ ಜಲಸಂಧಿಯಲ್ಲಿ…

14 hours ago

ಮೈಸೂರು | ಮರುಮೌಲ್ಯಮಾಪನ ; ರಾಜ್ಯಕ್ಕೆ 10ನೇ ಸ್ಥಾನ ಪಡೆದ ಮಹಾರಾಣಿ ಪಿಯು ಕಾಲೇಜಿನ ವಿದ್ಯಾರ್ಥಿನಿ

ರಾಜ್ಯಕ್ಕೆ 10ನೇ ಸ್ಥಾನ ಪಡೆದ ಮಹಾರಾಣಿ ಪಿಯು ಕಾಲೇಜಿನ ವಿದ್ಯಾರ್ಥಿನಿ  ಮೈಸೂರು : ಬಡತನದ ಬೇಗೆಯ ನಡುವೆಯೂ ಸಾಧನೆಯ ಛಲ…

14 hours ago

ಜಾತ್ರೆ, ಧಾರ್ಮಿಕ ಆಚರಣೆಯಿಂದ ಸಂಸ್ಕೃತಿ, ಪರಂಪರೆಯ ಪುನರುತ್ಥಾನ : ಈಶ್ವರ ಖಂಡ್ರೆ

ಮಳವಳ್ಳಿ : ಜಾತ್ರೆ, ಉತ್ಸವ, ರಾಜಗೋಪುರ ಲೋಕಾರ್ಪಣೆಯಂತಹ ಧಾರ್ಮಿಕ ಆಚರಣೆಗಳಿಂದ ನಮ್ಮಲ್ಲಿ ಹೊಸ ಚೈತನ್ಯ ಮೂಡುವುದರ ಜೊತೆಗೆ ನಮ್ಮ ಸಂಸ್ಕೃತಿ,…

15 hours ago