ಎನ್.ಕೇಶವಮೂರ್ತಿ

ಮೈಸೂರಿನ ಸಮೀಪ ದಲ್ಲಿ ವೀರನಗೆರೆ ಎಂಬ ಊರಿದೆ. ಅದು ಈಗ ಮೈಸೂರಿಗೇ ಸೇರಿ ಕೊಂಡಿದೆ. ಈ ಗ್ರಾಮ ದಲ್ಲಿ ಮಹಾರಾಜರ ಕಾಲದಿಂದಲೂ ಬದನೆಕಾಯಿ ಬೆಳೆಯುವ ಕುಟುಂಬವೊಂದಿತ್ತು. ವೀರನಗೆರೆ ಬದನೆ ಎಂದೇ ಖ್ಯಾತಿ ಪಡೆದಿದ್ದ ಜೊಂಪೆ ಜೊಂಪೆ ಯಾಗಿ ಬೆಳೆಯುವ ಅತ್ಯಂತ ರುಚಿಕರ ಬದನೆ ತಳಿಗಳನ್ನು ಈ ಗ್ರಾಮದಲ್ಲಿ ಬೆಳೆಯುತ್ತಿದ್ದರು. ಅಂದರೆ ಜನರ ಬಾಯಿಯಿಂದ ಬಾಯಿಗೆ ಹರಡಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಈರನಗೆರೆ ಬದನೆಯನ್ನು ಇಲ್ಲಿ ಬೆಳೆಯಲಾಗುತ್ತಿತ್ತು.

ಬದನೆ ಬೆಳೆಯುತ್ತಿದ್ದ ಈ ರೈತಾಪಿ ಕುಟುಂ ಬದ ಹಿರೀ ತಲೆಯ ಅಜ್ಜಿಗೆ ಈಗ ಎಂಬತ್ತು ವರ್ಷ ವಯಸ್ಸು. ಸದಾ ಎಲೆ ಅಡಕೆ ಜಗಿಯು ವುದು ಅಜ್ಜಿಯ ಅಭ್ಯಾಸ. ಈ ಅಭ್ಯಾಸ ದೊಂದಿಗೆ ಪ್ರತಿದಿನ ಬೆಳಿಗ್ಗೆ ಮನೆಯ ಹಿಂದಿನ ಬದನೆಕಾಯಿ ತೋಟಕ್ಕೆ ಹೋಗಿ, ಅಲ್ಲಿ ಚೆನ್ನಾ ಗಿರುವ ಬದನೆಕಾಯಿ ಮೇಲೆ ಎಲೆಅಡಕೆ ಉಗುಳುವುದುಂಟು. ಅಜ್ಜಿಯ ಈ ಕೆಲಸ ಮನೆಯ ಮಕ್ಕಳಿಗೆ ಇಷ್ಟವಾಗುತ್ತಿರಲಿಲ್ಲ. ಮೊದಲ ಮೊದಲು ಎಲ್ಲರೂ ಆ ಅಜ್ಜಿಗೆ ಅರಳುಮರಳು ಎಂದು ಸುಮ್ಮನಾದರು. ಆದರೆ ಆ ಅಜ್ಜಿ ಉಗುಳುವ ಚಾಳಿ ಮುಂದುವರಿಸಿ ದಾಗ, ಹಿರಿಯಮಗ ಅಜ್ಜಿಯನ್ನು ಕೇಳಿದ, ‘ಅಮ್ಮ ನೀನು ಏಕೆ ಹೀಗೆ ಮಾಡ್ತೀಯಾ? ನೀನು ಉಗುಳುವ ಬದನೆಕಾಯಿಗಳು ಮೊದಲು ತುಂಬಾ ಚೆನ್ನಾಗಿರುತ್ತವೆ. ಅವುಗಳನ್ನು ಕೊಯ್ದು ಮಾರೋಣ ಎನ್ನುವಷ್ಟರಲ್ಲಿ ನೀನು ತಾಂಬೂಲ ಉಗಿದು ಅಸಹ್ಯ ಮಾಡಿರುತ್ತೀಯ, ಅವುಗಳನ್ನು ನಾವು ಮಾರಲೂ ಸಾಧ್ಯವಾಗುತ್ತಿಲ್ಲ. ಇದರಿಂದ ನಮಗೆ ಆದಾಯವು ಸಿಗುತ್ತಿಲ್ಲ. ಏನು ನಿನ್ನ ಸಮಸ್ಯೆ? ’ ಎಂದ.

ಅದಕ್ಕೆ ಅಜ್ಜಿ ದವಡೆಗೆ ಒತ್ತರಿಸಿದ್ದ ತಾಂಬೂಲ ಉಗಿದು, ಮಗನ ಮುಖ ನೋಡಿ ನಿಧಾನವಾಗಿ, ‘ಸುಮ್ಕಿರ್ಲಾ ಕಂಡಿವ್ನಿ. ಮಹಾ ಬೆಳೀ ತಾನೆ ಬದನೆಕಾಯ್ನ, ಅಲ್ಲಾ ಎಕರೆಗಟ್ಲೆ ಬದನೆ ಹಾಕಿದ್ದೀಯಾ. ಎಲ್ಲೋ ಮೂಲೇಲಿ ಒಂದು ಬದನೆಗೆ ನಾನು ಉಗಿದ್ರೆ ದೇಸಾ ಹಾಳಾ ಯ್ತದಾ? ಹೋಗು ಹೋಗು ಕಂಡಿವ್ನಿ. ನೀನು ಏನೇ ಹೇಳಿದ್ರೂ ನಾನು ಹಂಗೆ ಮಾಡೋಳು ಎಂದಳು.

ಮಗ ತಲೆ ಹಚ್ಚಿಕೊಂಡ. ಎಷ್ಟಾದರೂ ಹೆತ್ತ ತಾಯಿ, ಅಮ್ಮ ಏನಾದ್ರೂ ಮಾಡಲಿ ಎಂದು ಉಳಿದವರಿಗೆ ಹೇಳಿದ, ಅಜ್ಜಿ ಉಗಿದಿರೋ ಕಾಯಿ ಹಂಗೇ ಬಿಡಿ ಉಳಿದದ್ದನ್ನು ಮಾರಿ ಎಂದು ಗೊಣಗಿಕೊಂಡು ಎಲ್ಲರೂ ಸುಮ್ಮನಾದ್ರೂ. ಆದರೆ ಅಜ್ಜಿಯ ಒಬ್ಬ ಮೊಮ್ಮಗ ಸುಮ್ಮ ನಾಗಲಿಲ್ಲ. ಅವನು ಅಜ್ಜಿಯ ಕೆಲಸವನ್ನು ಹತ್ತಿರದಿಂದ ಗಮನಿಸತೊಡಗಿದ. ಅಜ್ಜಿ ಅರಳುಮರಳಿಂದಲ್ಲ ಬೇಕೆಂದೇ ಹೀಗೆ ಮಾಡುತ್ತಿದ್ದಾರೆ ಎಂದು ಅವನಿಗೆ, ಅಜ್ಜಿ ಉಗಿಯೋಕೆ ಆಯ್ದುಕೊಂಡ ಉತ್ತಮ ಬದನೆ ಕಾಯಿ ನೋಡಿದಾಗ ಖಚಿತವಾಯಿತು. ಮೊಮ್ಮಗನಿಗೆ ಅನುಮಾನ ಬಂದು ಅಜ್ಜಿ ಯನ್ನು ಕೇಳಿಯೇ ಬಿಟ್ಟ. ಮೊಮ್ಮಗ ಅಲ್ವಾ ಎಂದು ಪ್ರೀತಿಯಿಂದ ಅವನನ್ನು ಹತ್ತಿರ ಕೂರಿಸಿಕೊಂಡು, ನೋಡು ಮಗಾ, ಈ ಮೂದೇವಿಗಳಿಗೆ ಎಲ್ಲಾ ಕೊಯ್ದು ಮಾರೋ ಆತುರ. ಆದರೆ ಮುಂದಿನ ಹಂಗಾಮಿಗೆ ಬೀಜಕ್ಕೇನು ಮಾಡ್ತಾವೆ? ಅಕ್ಕ ಪಕ್ಕದವರ ಬಳಿ ಗೋಗರೀತಾವೆ. ಅದಕ್ಕೆ ನಾನು ಉಪಾಯ ವಾಗಿ ಚೆನ್ನಾಗಿ ಬಲಿತಿರುವ ಬದನೆ ಕಾಯಿ ಆರಿಸಿ ಉಗೀತೀನಿ. ಅದನ್ನು ಇವರು ಮಾರಲ್ಲ. ನಂತರ ಅದನ್ನು ಖಟಾವು ಮಾಡಿ, ಮಧ್ಯದಲ್ಲಿ ಸೀಳಿ, ಬೆಂಬೂದಿ ಬೆರೆಸಿ ಜೋಪಾನ ಮಾಡಿ, ಇವರಿಗೇ ಅಕ್ಕಪಕ್ಕದಿಂದ ತಂದ ಬೀಜ ಅಂತಾ ಕೊಡ್ತೀನಿ. ಪ್ರತಿ ಬಾರಿನೂ ಬೆಳೆ ಚೆನ್ನಾಗಿ ಬರೋ ದ್ರಿಂದ ನನ್ನನ್ನೇ ಬೀಜ ಕೊಡು ಅಂತಾ ಗೋಗರಿ ತಾವೆ. ಕೆರೆಯ ನೀರನು ಕೆರೆಗೇ ಹಾಕ್ತಾ ಇದ್ದೀನಿ. ಇದನ್ನು ಯಾರಿಗೂ ಹೇಳಬೇಡ’ ಎಂದು ಅಜ್ಜಿ ಮೊಮ್ಮಗ ನಿಗೆ ಹೇಳಿದಳು. ಮೊಮ್ಮಗನಿಗೆ ಅಜ್ಜಿಯಿಂದ ಒಂದು ಕೃಷಿಯ ಪಾಠ ಸಿಕ್ಕಿತು.

ಅಜ್ಜಿಯ ಜಾಣ್ಮೆಗೆ ಮಗ ಬೆರಗಾದ. ಇಂತಹ ಬೀಜ ಮಾತೆಯರು ಇರುವುದ ರಿಂದಲೇ ಇವತ್ತೂ ಹಳ್ಳಿಗಳಲ್ಲಿ ನಾಟಿ ತಳಿಗಳು ಉಳಿದಿವೆ. ಅಂತಹ ಮಾತೆಯರಿಂದ ಕಲಿಯುವುದು ಬಹಳಷ್ಟಿದೆ.

ಆಂದೋಲನ ಡೆಸ್ಕ್

Recent Posts

ಸಾಲಬಾಧೆ; ರೈತ ಆತ್ಮಹತ್ಯೆ

ರಾವಂದೂರು: ರೈತರೊಬ್ಬರು ತಾವು ಬೆಳೆದ ತಂಬಾಕಿಗೆ ಸೂಕ್ತ ಬೆಲೆ ಸಿಗದೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.…

29 mins ago

ಹರಿಹರದಲ್ಲಿ ಶಂಕಿತ ಉಗ್ರನ ಬಂಧನ: ಪೊಲೀಸರಿಂದ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರ ಸುಹೈಲ್ ಉತ್ತರಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರವನ್ನು ಸ್ಫೋಟಿಸಲು ಸಂಚು ನಡೆಸಿದ್ದ…

37 mins ago

ಮುಂಗಾರು ಮಳೆ ಹಿನ್ನಡೆ ; ರಾಜ್ಯದ ಹಲವೆಡೆ ಕೃಷಿ ಕುಂಠಿತ

ಬೆಂಗಳೂರು : ಮುಂಗಾರು ಮಳೆ ಹಿನ್ನಡೆಯಿಂದ ರಾಜ್ಯದ ಹಲವು ಕಡೆ ಕೃಷಿ ಚಟುವಟಿಕೆಗಳು ಕುಂಟುತ್ತಾ ಸಾಗುತ್ತಿದ್ದು, ದಾವಣಗೆರೆ, ಕಲಬುರಗಿ, ಬೆಳಗಾವಿ, ಹಾವೇರಿ,…

1 hour ago

ಮುಂಬೈನಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಮುಂಬೈ: ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.…

2 hours ago

ಓದುಗರ ಪತ್ರ | ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಕಸವೋ ಕಸ!

ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದ ಅನಾರೋಗ್ಯಕ್ಕೊಳಗಾದವರು ಚಿಕಿತ್ಸೆ ಪಡೆಯಲು ಬರುತ್ತಾರೆ. ಆದರೆ…

5 hours ago

ಪಂಜು ಗಂಗೊಳ್ಳಿ ಅವರ ವಾರದ ಅಂಕಣ : ಪ್ರತೀ ವಾರಾಂತ್ಯ 100 ಜನರ ಹಸಿವು ತಣಿಸುವ ಸಂಡೇ ಬ್ರೇಕ್‌ಫಾಸ್ಟ್‌

2023ರಿಂದ "ಮಾತೋಶ್ರೀ ಫೌಂಡೇಶನ್‌"ಯಡಿ ಈ ಕಾರ್ಯಕ್ರಮಕ್ಕೆ ಚಾಲನೆ ಭಾನುವಾರ ಬಂತೆಂದರೆ ಸಾಮಾನ್ಯವಾಗಿ ಹೆಚ್ಚಿನ ಮಧ್ಯಮ ವರ್ಗದ ಮನೆಗಳಲ್ಲಿ ಅಡುಗೆ ಕೋಣೆಗಳು…

5 hours ago