ಸದ್ಯ ಹತ್ತನೇ ಆವೃತ್ತಿಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಾರಿ ಸಾಲು ಸಾಲು ಜಗಳ, ಕಿತ್ತಾಟಗಳಿಂದಲೇ ಹೆಚ್ಚು ಸುದ್ದಿಗೀಡಾಗಿದೆ. ಕಳೆದ ಬಾರಿಯ ಸೀಸನ್ಗಳಲ್ಲಿ ಇಲ್ಲದೇ ಇದ್ದಷ್ಟು ಗುಂಪುಗಾರಿಕೆ, ಕುತಂತ್ರ ಈ ಬಾರಿ ಇರುವುದೇ ಬಿಗ್ ಬಾಸ್ ಇತಿಹಾಸದಲ್ಲಿಯೇ ಈ ಆವೃತ್ತಿ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿರುವುದಕ್ಕೆ ಕಾರಣವಾಗಿದೆ.
ಇನ್ನು ಈ ಬಾರಿ ವಿನಯ್ ಹಾಗೂ ಕಾರ್ತಿಕ್ ಈ ಇಬ್ಬರದ್ದೂ ಪ್ರತ್ಯೇಕ ಗುಂಪುಗಳಿದ್ದು, ವಿನಯ್ ಗುಂಪಿನಲ್ಲಿ ನಮ್ರತಾ ಗೌಡ ಹಾಗೂ ಸ್ನೇಹಿತ್ ಸೇರಿಕೊಂಡರೆ, ಕಾರ್ತಿಕ್ ಗುಂಪಿನಲ್ಲಿ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಗುರುತಿಸಿಕೊಂಡಿದ್ದರು. ಅಲ್ಲದೇ ಕಾರ್ತಿಕ್ ಹಾಗೂ ಸಂಗೀತಾ ಶೃಂಗೇರಿ ಇಬ್ಬರನ್ನು ಒಳ್ಳೆಯ ಜೋಡಿ ಎಂದೂ ಸಹ ವೀಕ್ಷಕರು ಹೊಗಳುತ್ತಿದ್ದರು.
ಆದರೆ ಇತ್ತೀಚಿನ ಎಪಿಸೋಡ್ ಒಂದರಲ್ಲಿ ಸಂಗೀತ ಶೃಂಗೇರಿ ಕಾರ್ತಿಕ್ ಗುಂಪನ್ನು ಬಿಟ್ಟು ವಿನಯ್ ಗುಂಪನ್ನು ಸೇರಿಕೊಂಡಿದ್ದಾರೆ. ಅಲ್ಲದೇ ಕಾರ್ತಿಕ್ ತಲೆ ಬೋಳಿಸಿಕೊಳ್ಳಲು ಸಹ ಕಾರಣರಾಗಿದ್ದಾರೆ. ಸಂಗೀತ ಶೃಂಗೇರಿ ಅವರ ಈ ನಡೆ ವೀಕ್ಷಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಪರಿಣಾಮ ಸಾಮಾಜಿಕ ಜಾಲತಾಣದ ತುಂಬಾ ಸಂಗೀತಾ ಶೃಂಗೇರಿ ವಿರುದ್ಧ ಭಾರೀ ಪ್ರಮಾಣದ ನೆಗೆಟಿವ್ ಕಾಮೆಂಟ್ ಹರಿದಾಡುತ್ತಿವೆ.
ಅಲ್ಲದೇ ಸಂಗೀತಾ ಶೃಂಗೇರಿ ಇನ್ಸ್ಟಾಗ್ರಾಮ್ ಖಾತೆಯನ್ನು ಬರೋಬ್ಬರಿ 10 ಸಾವಿರ ಜನ ಅನ್ ಫಾಲೋ ಮಾಡಿದ್ದಾರೆ. 449000 ಫಾಲೋವರ್ಸ್ ಹೊಂದಿದ್ದ ಸಂಗೀತ ಶೃಂಗೇರಿ ಈಗ 439000 ಫಾಲೋವರ್ಸ್ ಹೊಂದಿದ್ದಾರೆ.
ಮಂಡ್ಯ : ಕೈಯ್ಯಲ್ಲಿ ಬೇಡಿ ಹಾಕಿ ಕೊಂಡಿರುವಾಗಲೇ ಠಾಣೆಯಿಂದ ತಪ್ಪಿಸಿಕೊಂಡು ಬಂದ ಕಳ್ಳನೊಬ್ಬ ಜನರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಇಲ್ಲಿನ…
ಮೈಸೂರು: ಮೊನ್ನೆಯಷ್ಟೇ ಲಿಂಗಾಂಬುಧಿ ಉದ್ಯಾನ ಪ್ರವೇಶಕ್ಕೆ ಶುಲ್ಕ ನಿಗದಿಪಡಿಸಿ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಅರಮನೆ ಅಂಗಳದಲ್ಲಿ…
ಎಚ್ಚೆತ್ತ ಪೊಲೀಸ್ ಆಡಳಿತ ; ಇಬ್ಬರು ಆರೋಪಿಗಳ ಬಂಧನ ಕಠ್ಮಂಡು : ನೇಪಾಳದಲ್ಲಿ ಸಂಭವಿಸಿರುವ ಭೀಕರ ಮಹಾಪೂರ ಹಾಗೂ ಭೂಕುಸಿತದಿಂದಾಗಿ…
ಹೊಸದಿಲ್ಲಿ : ಯುಪಿಎ ಒಕ್ಕೂಟದ ಹಿರಿಯ ನಾಯಕಿ ಹಾಗೂ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ…
ಮೈಸೂರು: ಈ ಬಾರಿಯ ಮೈಸೂರು ದಸರಾ ಮೆರವಣಿಗೆಗೆ ಸೇನೆ ಹಾಗೂ ವಾಯುಸೇನೆಯನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್…
ಹುಣಸೂರು: ತಾಲೂಕಿನ ನಂಜಾಪುರ ಗ್ರಾಮದಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ನಂಜಾಪುರದಲ್ಲಿ…