ಚಿತ್ರ ಮಂಜರಿ

ಅದ್ದೂರಿ ಜೀ ಕುಟುಂಬ ಅವಾರ್ಡ್ಸ್‌: ಇಲ್ಲಿದೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಕಿರುತೆರೆ ವೀಕ್ಷಕರಿಗೆ ಸತತವಾಗಿ ವಿವಿಧ ಧಾರಾವಾಹಿ, ವಾರಾಂತ್ಯದಲ್ಲಿ ವಿಶೇಷ ಚಲನಚಿತ್ರಗಳು ಹಾಗೂ ರಿಯಾಲಿಟಿ ಶೋಗಳ ಮೂಲಕ ಮನರಂಜನೆ ನೀಡುತ್ತಾ ಬರುತ್ತಿರುವ ಕನ್ನಡದ ಅತಿ ಹೆಚ್ಚು ಟಿಆರ್‌ಪಿ ಗಳಿಸುವ ಮನರಂಜನಾ ವಾಹಿನಿ ಜೀ ಕನ್ನಡ ಇತ್ತೀಚೆಗಷ್ಟೆ ಜೀ ಕುಟುಂಬ ಅವಾರ್ಡ್ಸ್‌ ಕಾರ್ಯಕ್ರಮವನ್ನು ನಡೆಸಿದೆ.

ಈ ಕಾರ್ಯಕ್ರಮದಲ್ಲಿ ತಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಕಲಾವಿದರ ಹಾಗೂ ಧಾರಾವಾಹಿಗಳನ್ನು ಆರಿಸಿ ಪ್ರಶಸ್ತಿಯನ್ನು ನೀಡಿ ಪ್ರಶಂಸಿಸಲಾಗಿದೆ. ಇನ್ನು ಕಳೆದ ಕೆಲ ದಿನಗಳ ಹಿಂದೆ ವೀಕ್ಷಕರಿಗೆ ತಮ್ಮ ನೆಚ್ಚಿನ ಕಲಾವಿದರು ಹಾಗೂ ಕಾರ್ಯಕ್ರಮಗಳಿಗೆ ವೋಟ್‌ ಮಾಡಲು ಜೀ ವಾಹಿನಿ ವೋಟ್‌ ಪೋಲ್‌ ತೆರೆದಿತ್ತು.

ಹೀಗೆ ನಡೆದ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಯಾವ ಯಾವ ಕಲಾವಿದರು ಹಾಗೂ ಧಾರಾವಾಹಿಗಳಿಗೆ ಪ್ರಶಸ್ತಿ ದಕ್ಕಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ನೆಚ್ಚಿನ ನಾಯಕ ನಟ- ಗೌತಮ್.‌ ಅಮೃತಧಾರೆ
ಜೀ ಕನ್ನಡ ವರ್ಷದ ಉದಯೋನ್ಮುಖ ತಾರೆ- ಸಿಹಿ, ಸೀತಾ ರಾಮ ಧಾರಾವಾಹಿ
ಜನಪ್ರಿಯ ನಾಯಕ ನಟ- ಶ್ರೀರಾಮ, ಸೀತಾ ರಾಮ ಸೀರಿಯಲ್
ನೆಚ್ಚಿನ ಸೊಸೆ- ಲೀಲಾ, ಹಿಟ್ಲರ್‌ ಕಲ್ಯಾಣ ಸೀರಿಯಲ್
ನೆಚ್ಚಿನ ಹಾಸ್ಯ ಕಲಾವಿದ- ಆನಂದ್‌, ಅಮೃತಧಾರೆ ಸೀರಿಯಲ್
ನೆಚ್ಚಿನ ಸಹೋದರಿ- ಸುಮ, ಸ್ನೇಹಾ, ಸಹನಾ, ಪುಟ್ಟಕ್ಕನ ಮಕ್ಕಳು ಸೀರಿಯಲ್‌
ನೆಚ್ಚಿನ ಸ್ಟೈಲ್‌ ಐಕಾನ್‌ ಫೀಮೇಲ್‌- ಮಹಿಮಾ, ಅಮೃತಧಾರೆ ಸೀರಿಯಲ್
ಜನಪ್ರಿಯ ನಾಯಕ- ಕಂಠಿ, ಪುಟ್ಟಕ್ಕನ ಮಕ್ಕಳು ಸೀರಿಯಲ್
ನೆಚ್ಚಿನ ಸ್ನೇಹಿತ- ಅಶೋಕ, ಸೀತಾ ರಾಮ ಸೀರಿಯಲ್
ನೆಚ್ಚಿನ ರಿಯಾಲಿಟಿ ಶೋ- ಡಾನ್ಸ್‌ ಕರ್ನಾಟಕ ಡಾನ್ಸ್‌
ನೆಚ್ಚಿನ ನಾಯಕ ನಟ- ಶಿವಪ್ರಸಾದ್‌, ಭೂಮಿಗೆ ಬಂದ ಭಗವಂತ
ನೆಚ್ಚಿನ ಸಹೋದರ- ಜೀವನ್‌, ಅಮೃತಧಾರೆ
ನೆಚ್ಚಿನ ಅತ್ತೆ- ಸೀತಮ್ಮ, ಸತ್ಯ ಸೀರಿಯಲ್‌
ನೆಚ್ಚಿನ ಸೊಸೆ- ಸತ್ಯ, ಸತ್ಯ ಸೀರಿಯಲ್‌
ಜನಪ್ರಿಯ ಧಾರಾವಾಹಿ- ಸೀತಾರಾಮ
ನೆಚ್ಚಿನ ಆಂಕರ್-‌ ಕುರಿ ಪ್ರತಾಪ್
ನೆಚ್ಚಿನ ಜೋಡಿ- ಕಂಠಿ- ಸ್ನೇಹಾ, ಪುಟ್ಟಕ್ಕನ ಮಕ್ಕಳು
ನೆಚ್ಚಿನ ಮಾವ- ದತ್ತ, ಶ್ರೀರಸ್ತು ಶುಭಮಸ್ತು
ಜೀ ಕನ್ನಡದ ಹಿರಿಯ ಸದಸ್ಯ- ಆನಂದ ಗುರೂಜಿ, ಮಹರ್ಷಿವಾಣಿ
ಜನಪ್ರಿಯ ನಾಯಕ ನಟಿ- ಭೂಮಿಕಾ, ಅಮೃತಧಾರೆ
ನೆಚ್ಚಿನ ಅಳಿಯ- ಕಾರ್ತಿಕ್‌, ಸತ್ಯ
ಜೀ ಕನ್ನಡದ ಹೆಮ್ಮೆ- ಉಮಾಶ್ರೀ, ಪುಟ್ಟಕ್ಕನ ಮಕ್ಕಳು
ನೆಚ್ಚಿನ ಧಾರಾವಾಹಿ- ಪುಟ್ಟಕ್ಕನ ಮಕ್ಕಳು
ಜನಪ್ರಿಯ ನಾಯಕಿ ನಟಿ- ಸೀತಾ, ಸೀತಾ ರಾಮ
ನೆಚ್ಚಿನ ಆಂಕರ್-‌ ಶ್ವೇತಾ ಚೆಂಗಪ್ಪ
ಜನಪ್ರಿಯ ಆಂಕರ್‌- ಅನುಶ್ರೀ
ನೆಚ್ಚಿನ ನಾಯಕ ನಟಿ- ತುಳಸಿ, ಶ್ರೀರಸ್ತು ಶುಭಮಸ್ತು
ನೆಚ್ಚಿನ ನಾಯಕ ನಟಿ- ಗಿರಿಜಾ, ಭೂಮಿಗೆ ಬಂದ ಭಗವಂತ
ಜನಪ್ರಿಯ ಜೋಡಿ- ವೇದಾಂತ್‌ ಅಮೂಲ್ಯ, ಗಟ್ಟಿಮೇಳ

andolana

Recent Posts

3,705 ಕೋಟಿ ರೂ. ಪರಿಹಾರ ಕೋರಿ ಕೇಂದ್ರಕ್ಕೆ ಮೆಮೊರಾಂಡಂ ಸಲ್ಲಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…

3 hours ago

ಹನೂರು | ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಕಾರ್ಮಿಕ ಸಾವು

ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…

4 hours ago

ಗ್ರಾಮದ ಸ್ವಚ್ಛತೆ ನೋಡಿಕೊಳ್ಳುವವರೇ ಅನೈರ್ಮಲ್ಯಕ್ಕೆ ಕಾರಣ?

ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…

5 hours ago

ಮಹಾಪ್ರವಾಹಕ್ಕೆ ನೇಪಾಳ ತತ್ತರ: ನಾಪತ್ತೆಯಾದವರ ಸಂಖ್ಯೆ 6100ಕ್ಕೆ ಏರಿಕೆ

ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…

11 hours ago

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

17 hours ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

18 hours ago