Andolana originals

ಗಾಂಧಿಯ ಸರಳತೆಯತ್ತ ನಡೆಯುತ್ತಿರುವ ಯುವಜನತೆ

ಮಹಾತ್ಮ ಗಾಂಧೀಜಿ ಅವರ ಆತ್ಮಕತೆಗೆ ನೂರು ವರ್ಷ ಸಂದಿರುವುದು ಸಂತಸದ ವಿಷಯ. ಇವತ್ತು ಗಾಂಧಿಜಿ ಅವರ ವಿಚಾರಕ್ಕೆ ಏನಾಗುತ್ತಿದೆ? ಆಚಾರಕ್ಕೆ ಏನಾಗುತ್ತಿದೆ? ತುಂಬಾ ಅಪಾಯದಲ್ಲಿರುವುದು ಗಾಂಧಿಜಿ ಅವರ ಪುಸ್ತಕವೂ ಅಲ್ಲ, ಗಾಂಧಿಜಿ ಅವರ ವಿಚಾರವೂ ಅಲ್ಲ. ಗಾಂಧಿಜಿ ಅವರ ಆತ್ಮಕತೆಯನ್ನು ದೇವಸ್ಥಾನದ ಲ್ಲಿಟ್ಟು ಪೂಜಿಸುವ ಕೆಲಸ ಆಗುತ್ತಿದೆ. ಹೇಗೆ ನಾವು ಬಸವಣ್ಣವರನ್ನು, ಇತರ ದೇವರುಗಳನ್ನು ಪೂಜಿಸುತ್ತಿದ್ದೇವೆಯೋ ಹಾಗೆ ಆಗುತ್ತಿದೆ.

ಗಾಂಧಿಜಿ ಶೂದ್ರತ್ವವನ್ನು ಎತ್ತಿಹಿಡಿಯುತ್ತ ಹಿಂದೂ ಧರ್ಮವನ್ನು ಹೇಳಿದರು. ಚರಕದಲ್ಲಿ ನೂಲು ತೆಗೆಯುತ್ತ ಕಾಯಕವನ್ನು ಎತ್ತಿಹಿಡಿಯುತ್ತ ಹಿಂದೂ ಧರ್ಮವನ್ನು ಹೇಳಿದರು. ರಾಜಕಾರಣವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಬೇಕು ಎಂದು ಗಾಂಧಿಜಿ ಹೇಳಿದರು. ಕಾರ್ಯಕರ್ತ ತನ್ನ ಸ್ವಂತ ದುಡಿಮೆ ಹಣದಿಂದ ರಾಜಕಾರಣ ಮಾಡಬೇಕು ಎಂದು ಹೇಳಿದ್ದರು ಮತ್ತು ಪಾಲಿಸಿದ್ದರು.

ಗಾಂಧಿಜಿ ಅವರ ಜೀವನ ಶೈಲಿಯನ್ನು, ಅವರ ಆರ್ಥಿಕ ಕಾರ್ಯಕ್ರಮಗಳನ್ನು, ಗ್ರಾಮೋದ್ಯೋಗ, ಗ್ರಾಮೋತ್ಪನ್ನ ಇವುಗಳನ್ನು ಎತ್ತಿಹಿಡಿಯದೇ ಸುಮ್ಮನೇ ಗಾಂಧಿ, ಗಾಂಧಿ ಎಂದು ಬಡಬಡಿಸುವುದರಿಂದ ಏನೂ ಸಾಧ್ಯವಾಗುವುದಿಲ್ಲ. ಗಾಂಧಿಜಿ ಅವರ ಸಿಮೆಂಟಿನ ಪ್ರತಿಮೆಗಳನ್ನು ಸ್ಥಾಪಿಸುವುದರಿಂದ ಯುವಕರು ಆ ಕಡೆ ಬರುವುದಿಲ್ಲ.

ಗಾಂಧಿಜಿ ಅವರು ಪ್ರತಿಪಾದಿಸಿದ ಆಚಾರ-ವಿಚಾರಗಳಲ್ಲಿ ಇವತ್ತು ಯುವಜನತೆಗೆ ಅಪಾರ ವಿಶ್ವಾಸವಿದೆ. ಇತ್ತೀಚೆಗೆ ಅಮೆರಿಕ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿಯಂತೂ ಗಾಂಧಿಜಿ ಅವರ ಸರಳ ಜೀವನ ಹೆಚ್ಚು ಪ್ರಸ್ತುತವಾಗುತ್ತಿದೆ. ತೈಲದ ಬೆಲೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಪ್ರಪಂಚದ ಎಲ್ಲ ದೇಶಗಳ ಯುವಕರು ಸರಳ ಜೀವನದತ್ತ ಆಕರ್ಷಿತರಾಗುತ್ತಿದ್ದಾರೆ.

ದುಂದುವೆಚ್ಚದತ್ತ ಗಮನಹರಿಸುತ್ತಿದ್ದ ಬಲಪಂಥೀಯರು ಕೂಡ ಇತ್ತೀಚೆಗೆ ಖರ್ಚು ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಚಿಸುತ್ತಿದ್ದಾರೆ.

-ಪ್ರಸನ್ನ ಹೆಗ್ಗೋಡು, ರಂಗಕರ್ಮಿ.

ಆಂದೋಲನ ಡೆಸ್ಕ್

Recent Posts

ರೈತರ ನಿದ್ದೆಗೆಡಿಸಿದ್ದ ಚಿರತೆ ಸೆರೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಕಿಕ್ಕೇರಿ: ಹೋಬಳಿಯ ಗೊಲ್ಲರಕೊಪ್ಪಲು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದ ರೈತರಿಗೆ ಆತಂಕ ಸೃಷ್ಟಿಸಿ ಜಾನುವಾರುಗಳು ಹಾಗೂ ಸಾಕು…

11 hours ago

ಶಿವಶಂಕರಪ್ಪ ಸಾಹುಕಾರ್‌ಗೆ ಹೊಸ ಕಾನೂನು ಸಂಕಷ್ಟ

ಬೆಂಗಳೂರು: ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿದ ಬೆನ್ನಲ್ಲೇ ಈ ಹೊಸ ಕಾನೂನು ಸಂಕಷ್ಟ ಎದುರಾಗಿದೆ.…

14 hours ago

ಗೋಪಾಲಸ್ವಾಮಿ ಬೆಟ್ಟ: ಕೊನೆಗೂ ಭಕ್ತರಿಗೆ ಸಿಕ್ಕಿತು ನೆರಳು!

ಬೆಟ್ಟದಲ್ಲಿ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸಿದ ಶಾಸಕ; ಸಮಸ್ಯೆ ಕುರಿತು ಬೆಳಕು ಚೆಲ್ಲಿದ್ದ ‘ಆಂದೋಲನ’ ಗುಂಡ್ಲುಪೇಟೆ: ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ…

18 hours ago

ಓದುಗರ ಪತ್ರ: ಅಧ್ಯಾತ್ಮ ದುರಂತ!

ಅಧ್ಯಾತ್ಮ ದುರಂತ! ಲೌಕಿಕ ಬದುಕಿನ ಆಶೆ ಆಮಿಷಗಳ ಸೆರೆಮನೆಯಿಂದ ಬಿಡಿಸಿಕೊಳುವ ಸನ್ಮಾರ್ಗವನು ಅಧ್ಯಾತ್ಮವೆನ್ನುವರು ಪ್ರಾಜ್ಞರು! ಆದರೀಗ ಲೌಕಿಕದ ಆಶೆ ಆಮಿಷಗಳ…

21 hours ago

ಓದುಗರ ಪತ್ರ: ರಸ್ತೆ, ಉದ್ಯಾನಕ್ಕೆ ಎಸ್. ಜಾನಕಿ ಅವರ ಹೆಸರಿಡಿ

ಭಾರತೀಯ ಚಿತ್ರರಂಗದ ಗಾನಕೋಗಿಲೆ ಎಸ್.ಜಾನಕಿ ಅವರ ಸಾಧನೆ ಎಂದೆಂದಿಗೂ ಅಜರಾಮರ. ಅವರ ಹೆಸರನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಮೂಲಕ ಚಿರಸ್ಥಾಯಿಯಾಗಿಸಲು…

21 hours ago

ಓದುಗರ ಪತ್ರ: ಚಾಮರಾಜಪುರಂನಲ್ಲಿ ರೈಲುಗಳ ನಿಲುಗಡೆಯಾಗಲಿ

ಮೈಸೂರಿನ ಅಶೋಕಪುರಂನಿಂದ ಚೆನ್ನೆ ಗೆ ತೆರಳುವ ಚೆನ್ನೆ ನಿಂದ - ಅಶೋಕಪುರಂಗೆ ಆಗಮಿಸುವ ೧೬೫೫೧ ಎಂಜಿಆರ್ ಚೆನ್ನೈಎಕ್ಸ್ ಪ್ರೆಸ್, ೨೦೬೨೪…

21 hours ago