Andolana originals

ಗಾಂಧಿಯ ಸರಳತೆಯತ್ತ ನಡೆಯುತ್ತಿರುವ ಯುವಜನತೆ

ಮಹಾತ್ಮ ಗಾಂಧೀಜಿ ಅವರ ಆತ್ಮಕತೆಗೆ ನೂರು ವರ್ಷ ಸಂದಿರುವುದು ಸಂತಸದ ವಿಷಯ. ಇವತ್ತು ಗಾಂಧಿಜಿ ಅವರ ವಿಚಾರಕ್ಕೆ ಏನಾಗುತ್ತಿದೆ? ಆಚಾರಕ್ಕೆ ಏನಾಗುತ್ತಿದೆ? ತುಂಬಾ ಅಪಾಯದಲ್ಲಿರುವುದು ಗಾಂಧಿಜಿ ಅವರ ಪುಸ್ತಕವೂ ಅಲ್ಲ, ಗಾಂಧಿಜಿ ಅವರ ವಿಚಾರವೂ ಅಲ್ಲ. ಗಾಂಧಿಜಿ ಅವರ ಆತ್ಮಕತೆಯನ್ನು ದೇವಸ್ಥಾನದ ಲ್ಲಿಟ್ಟು ಪೂಜಿಸುವ ಕೆಲಸ ಆಗುತ್ತಿದೆ. ಹೇಗೆ ನಾವು ಬಸವಣ್ಣವರನ್ನು, ಇತರ ದೇವರುಗಳನ್ನು ಪೂಜಿಸುತ್ತಿದ್ದೇವೆಯೋ ಹಾಗೆ ಆಗುತ್ತಿದೆ.

ಗಾಂಧಿಜಿ ಶೂದ್ರತ್ವವನ್ನು ಎತ್ತಿಹಿಡಿಯುತ್ತ ಹಿಂದೂ ಧರ್ಮವನ್ನು ಹೇಳಿದರು. ಚರಕದಲ್ಲಿ ನೂಲು ತೆಗೆಯುತ್ತ ಕಾಯಕವನ್ನು ಎತ್ತಿಹಿಡಿಯುತ್ತ ಹಿಂದೂ ಧರ್ಮವನ್ನು ಹೇಳಿದರು. ರಾಜಕಾರಣವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಬೇಕು ಎಂದು ಗಾಂಧಿಜಿ ಹೇಳಿದರು. ಕಾರ್ಯಕರ್ತ ತನ್ನ ಸ್ವಂತ ದುಡಿಮೆ ಹಣದಿಂದ ರಾಜಕಾರಣ ಮಾಡಬೇಕು ಎಂದು ಹೇಳಿದ್ದರು ಮತ್ತು ಪಾಲಿಸಿದ್ದರು.

ಗಾಂಧಿಜಿ ಅವರ ಜೀವನ ಶೈಲಿಯನ್ನು, ಅವರ ಆರ್ಥಿಕ ಕಾರ್ಯಕ್ರಮಗಳನ್ನು, ಗ್ರಾಮೋದ್ಯೋಗ, ಗ್ರಾಮೋತ್ಪನ್ನ ಇವುಗಳನ್ನು ಎತ್ತಿಹಿಡಿಯದೇ ಸುಮ್ಮನೇ ಗಾಂಧಿ, ಗಾಂಧಿ ಎಂದು ಬಡಬಡಿಸುವುದರಿಂದ ಏನೂ ಸಾಧ್ಯವಾಗುವುದಿಲ್ಲ. ಗಾಂಧಿಜಿ ಅವರ ಸಿಮೆಂಟಿನ ಪ್ರತಿಮೆಗಳನ್ನು ಸ್ಥಾಪಿಸುವುದರಿಂದ ಯುವಕರು ಆ ಕಡೆ ಬರುವುದಿಲ್ಲ.

ಗಾಂಧಿಜಿ ಅವರು ಪ್ರತಿಪಾದಿಸಿದ ಆಚಾರ-ವಿಚಾರಗಳಲ್ಲಿ ಇವತ್ತು ಯುವಜನತೆಗೆ ಅಪಾರ ವಿಶ್ವಾಸವಿದೆ. ಇತ್ತೀಚೆಗೆ ಅಮೆರಿಕ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿಯಂತೂ ಗಾಂಧಿಜಿ ಅವರ ಸರಳ ಜೀವನ ಹೆಚ್ಚು ಪ್ರಸ್ತುತವಾಗುತ್ತಿದೆ. ತೈಲದ ಬೆಲೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಪ್ರಪಂಚದ ಎಲ್ಲ ದೇಶಗಳ ಯುವಕರು ಸರಳ ಜೀವನದತ್ತ ಆಕರ್ಷಿತರಾಗುತ್ತಿದ್ದಾರೆ.

ದುಂದುವೆಚ್ಚದತ್ತ ಗಮನಹರಿಸುತ್ತಿದ್ದ ಬಲಪಂಥೀಯರು ಕೂಡ ಇತ್ತೀಚೆಗೆ ಖರ್ಚು ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಚಿಸುತ್ತಿದ್ದಾರೆ.

-ಪ್ರಸನ್ನ ಹೆಗ್ಗೋಡು, ರಂಗಕರ್ಮಿ.

ಆಂದೋಲನ ಡೆಸ್ಕ್

Recent Posts

ಮಾರ್ಟಿನ್ ಲೂಥರ್ ಕಿಂಗ್ ಕಣ್ಣಲ್ಲಿ ಮಹಾತ್ಮ ಗಾಂಧಿ…

ಗೋವಿಂದರಾಜು ಲಕ್ಷ್ಮೀಪುರ, ಇಂಗ್ಲಿಷ್ ಸಹಪ್ರಾಧ್ಯಾಪಕ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮೈಸೂರು ಭಗವಂತ ಯೇಸು ನಮಗೆ ದಾರಿ ಅಂದರೆ, ಶಾಂತಿ…

5 mins ago

ಮಾಂಸಾಹಾರ ಬಿಟ್ಟರೂ ಮಿತ್ರನ ಗೆಳೆತನ ಬಿಡಲಾಗಲಿಲ್ಲ

ಗಾಂಧಿ ಅಭಿಯಾನ ಅರಿವಿನ ಯಾನ ಗೊತ್ತಾಗಿದ್ದ ದಿನ ಬಂತು. ನನ್ನ ಆಗಿನ ಸ್ಥಿತಿಯನ್ನು ವರ್ಣಿಸುವುದು ಕಷ್ಟ. ಒಂದು ಕಡೆ ಸುಧಾರಣೆಯ ಮಾರ್ಗದ…

10 mins ago

ಡಿಕೆಶಿ ಸಂಪುಟದಲ್ಲಿ ಯಾರ‍್ಯಾರಿಗೆ ಒಲಿಯಲಿದೆ ಮಂತ್ರಿ ಸ್ಥಾನ?

ಕೆ.ಬಿ.ರಮೇಶನಾಯಕ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್‌ಗೆ ಮಂತ್ರಿ ಸ್ಥಾನ ಸಾಧ್ಯತೆ ಎಚ್‌ಸಿಎಂಗೆ ಪ್ರಬಲ ಖಾತೆ ಕೊಡಿಸಲು ಹೈಕಮಾಂಡ್ ಮಟ್ಟದಲ್ಲಿ…

16 mins ago

ಈ ಬಾರಿ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ಸಿಗುವುದೇ?

ಮಂಜು ಕೋಟೆ ಕೋಟೆ: ಮೈಸೂರು ಪ್ರಾಂತ್ಯದ ನಾಯಕ ಸಮುದಾಯದ ಏಕೈಕ ಶಾಸಕರಾಗಿರುವುದು ಪ್ಲಸ್ ಪಾಯಿಂಟ್ ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ…

20 mins ago

ಕಂದಾಯ ದಾಖಲೆಯಲ್ಲಿ ೪ ವಾರ್ಡ್‌ಗಳೇ ನಾಪತ್ತೆ!

ಎಸ್.ಎಸ್.ಭಟ್ ನಂಜನಗೂಡು ನಗರಸಭೆಯಲ್ಲಿ ೩೧ ವಾರ್ಡ್‌ಗಳು, ಕಂದಾಯ ಇಲಾಖೆಯಲ್ಲಿ ೨೭ ವಾರ್ಡ್‌ಗಳು ನಂಜನಗೂಡು: ಪುರಸಭೆ ನಗರಸಭೆಯಾಗಿ ಬಡ್ತಿ ಹೊಂದಿ ೨೭…

25 mins ago