Andolana originals

ಗಾಂಧಿಯ ಸರಳತೆಯತ್ತ ನಡೆಯುತ್ತಿರುವ ಯುವಜನತೆ

ಮಹಾತ್ಮ ಗಾಂಧೀಜಿ ಅವರ ಆತ್ಮಕತೆಗೆ ನೂರು ವರ್ಷ ಸಂದಿರುವುದು ಸಂತಸದ ವಿಷಯ. ಇವತ್ತು ಗಾಂಧಿಜಿ ಅವರ ವಿಚಾರಕ್ಕೆ ಏನಾಗುತ್ತಿದೆ? ಆಚಾರಕ್ಕೆ ಏನಾಗುತ್ತಿದೆ? ತುಂಬಾ ಅಪಾಯದಲ್ಲಿರುವುದು ಗಾಂಧಿಜಿ ಅವರ ಪುಸ್ತಕವೂ ಅಲ್ಲ, ಗಾಂಧಿಜಿ ಅವರ ವಿಚಾರವೂ ಅಲ್ಲ. ಗಾಂಧಿಜಿ ಅವರ ಆತ್ಮಕತೆಯನ್ನು ದೇವಸ್ಥಾನದ ಲ್ಲಿಟ್ಟು ಪೂಜಿಸುವ ಕೆಲಸ ಆಗುತ್ತಿದೆ. ಹೇಗೆ ನಾವು ಬಸವಣ್ಣವರನ್ನು, ಇತರ ದೇವರುಗಳನ್ನು ಪೂಜಿಸುತ್ತಿದ್ದೇವೆಯೋ ಹಾಗೆ ಆಗುತ್ತಿದೆ.

ಗಾಂಧಿಜಿ ಶೂದ್ರತ್ವವನ್ನು ಎತ್ತಿಹಿಡಿಯುತ್ತ ಹಿಂದೂ ಧರ್ಮವನ್ನು ಹೇಳಿದರು. ಚರಕದಲ್ಲಿ ನೂಲು ತೆಗೆಯುತ್ತ ಕಾಯಕವನ್ನು ಎತ್ತಿಹಿಡಿಯುತ್ತ ಹಿಂದೂ ಧರ್ಮವನ್ನು ಹೇಳಿದರು. ರಾಜಕಾರಣವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಬೇಕು ಎಂದು ಗಾಂಧಿಜಿ ಹೇಳಿದರು. ಕಾರ್ಯಕರ್ತ ತನ್ನ ಸ್ವಂತ ದುಡಿಮೆ ಹಣದಿಂದ ರಾಜಕಾರಣ ಮಾಡಬೇಕು ಎಂದು ಹೇಳಿದ್ದರು ಮತ್ತು ಪಾಲಿಸಿದ್ದರು.

ಗಾಂಧಿಜಿ ಅವರ ಜೀವನ ಶೈಲಿಯನ್ನು, ಅವರ ಆರ್ಥಿಕ ಕಾರ್ಯಕ್ರಮಗಳನ್ನು, ಗ್ರಾಮೋದ್ಯೋಗ, ಗ್ರಾಮೋತ್ಪನ್ನ ಇವುಗಳನ್ನು ಎತ್ತಿಹಿಡಿಯದೇ ಸುಮ್ಮನೇ ಗಾಂಧಿ, ಗಾಂಧಿ ಎಂದು ಬಡಬಡಿಸುವುದರಿಂದ ಏನೂ ಸಾಧ್ಯವಾಗುವುದಿಲ್ಲ. ಗಾಂಧಿಜಿ ಅವರ ಸಿಮೆಂಟಿನ ಪ್ರತಿಮೆಗಳನ್ನು ಸ್ಥಾಪಿಸುವುದರಿಂದ ಯುವಕರು ಆ ಕಡೆ ಬರುವುದಿಲ್ಲ.

ಗಾಂಧಿಜಿ ಅವರು ಪ್ರತಿಪಾದಿಸಿದ ಆಚಾರ-ವಿಚಾರಗಳಲ್ಲಿ ಇವತ್ತು ಯುವಜನತೆಗೆ ಅಪಾರ ವಿಶ್ವಾಸವಿದೆ. ಇತ್ತೀಚೆಗೆ ಅಮೆರಿಕ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿಯಂತೂ ಗಾಂಧಿಜಿ ಅವರ ಸರಳ ಜೀವನ ಹೆಚ್ಚು ಪ್ರಸ್ತುತವಾಗುತ್ತಿದೆ. ತೈಲದ ಬೆಲೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಪ್ರಪಂಚದ ಎಲ್ಲ ದೇಶಗಳ ಯುವಕರು ಸರಳ ಜೀವನದತ್ತ ಆಕರ್ಷಿತರಾಗುತ್ತಿದ್ದಾರೆ.

ದುಂದುವೆಚ್ಚದತ್ತ ಗಮನಹರಿಸುತ್ತಿದ್ದ ಬಲಪಂಥೀಯರು ಕೂಡ ಇತ್ತೀಚೆಗೆ ಖರ್ಚು ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಚಿಸುತ್ತಿದ್ದಾರೆ.

-ಪ್ರಸನ್ನ ಹೆಗ್ಗೋಡು, ರಂಗಕರ್ಮಿ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಉಳುವ ‘ಯೋಗಿ’ ಕೂಗಿಗೆ ಸರ್ಕಾರ ತರ್ತಾಗಿ ಸ್ಪಂದಿಸಲಿ

ರಾಜ್ಯದ ೧೭೫ ತಾಲ್ಲೂಕುಗಳು ಭೀಕರ ಬರಕ್ಕೆ ತತ್ತರಿಸಿ, ಶೇಕಡಾ ೮೦ ಕ್ಕೂ ಹೆಚ್ಚು ಬೆಳೆ ನಷ್ಟದಿಂದ ಅನ್ನದಾತರು ಸಂಪೂರ್ಣ ಕಂಗಾಲಾಗಿದ್ದರೂ…

39 mins ago

ಓದುಗರ ಪತ್ರ: ರಾಷ್ಟ್ರಕವಿ ಶ್ಲಾಘನೆಯ ಸ್ಮರಣೆ

೧೯೮೬ರ ಆಗಸ್ಟ್ ೨೯ರಂದು (ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ ಮಠದ ೨೩ ನೇ ಮಠಾಧಿಪತಿ) ಶಿವರಾತ್ರಿ ರಾಜೇಂದ್ರ ಶ್ರೀಗಳ ಅಮೃತ ಮಹೋತ್ಸವದ…

41 mins ago

ಓದುಗರ ಪತ್ರ: ಸೈಬರ್ ವಂಚನೆ: ಜಾಗೃತಿಯೂ ಫಲ ನೀಡುತ್ತಿಲ್ಲವಲ್ಲ…

ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಏಳು ತಿಂಗಳ ಅವಧಿಯಲ್ಲಿ ಸುಮಾರು ರೂ.೬೦೦ ಕೋಟಿಯಷ್ಟು ಹಣ ಸೈಬರ್ ವಂಚಕರ…

43 mins ago

ಸೇವೆ, ಶಿಕ್ಷಣ, ಸಂಸ್ಕಾರದ ಸಂಗಮವಾಗಿದ್ದ ರಾಜೇಂದ್ರ ಶ್ರೀ

ಡಾ.ಕೆ.ಪಿ.ಸಿದ್ಧಲಿಂಗಸ್ವಾಮಿ ಇಂದು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೧೧ನೇ ಜಯಂತಿ ಕೆಲವರು ತಮ್ಮ ಕಾಲದಲ್ಲಿ ಬದುಕುತ್ತಾರೆ; ಕೆಲವರು ತಮ್ಮ ಕಾಲವನ್ನೇ…

4 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಆತ್ಮಬಲ ಅಸ್ತ್ರದಿಂದ ಬ್ರಿಟಿಷರ ಮಣಿಸಿದ ಗಾಂಧಿ ಗಾಂಧಿಜಿ ಕಲ್ಪನೆಯ ಸರ್ವೋದಯ ಸಮಾಜದಲ್ಲಿ ಎಲ್ಲರೂ ಸ್ವತಂತ್ರವಾಗಿರುತ್ತಾರೆ. ಇಲ್ಲಿ ಜಾತಿ, ವರ್ಗ, ಶೋಷಣೆ…

4 hours ago

ಗಾಂಧಿವಾದಕ್ಕೆ ಮರುಳಾಗಿದ್ದ ಮೈಸೂರಿನ ಯಶೋಧರಾ ದಾಸಪ್ಪ

ರೋಹಿಣಿ ಸಂಗಪ್ಪ ದಳವಾಯಿ ಮೈಸೂರು ರಾಜ್ಯ ಕಂಡ ಅಪ್ರತಿಮ ಹೋರಾಟಗಾರ್ತಿ ಮತ್ತು ಜನಸೇವಕಿ ಯಶೋಧರಾ ದಾಸಪ್ಪ. ತಮ್ಮ ದಿಟ್ಟ ನಿಲುವು,…

4 hours ago