Andolana originals

ಮೈಸೂರು ಸಂಸ್ಥಾನಕ್ಕೂ ಬಾಬುರಾಯನ ಕೊಪ್ಪಲಿಗೂ ಸಂಬಂಧವೇನು?

ಧರ್ಮೇಂದ್ರ ಕುಮಾರ್‌ ಮೈಸೂರು

ಮೈಸೂರು ಸಂಸ್ಥಾನಕ್ಕೂ ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನ ಕೊಪ್ಪಲು ಗ್ರಾಮಕ್ಕೂ ಅವಿನಾಭಾವ ಸಂಬಂಧ ಇದೆ. ಆ ಸಂಬಂಧದ ಮೂಲವನ್ನು ಹುಡುಕುತ್ತಾ ಹೋದರೆ ಟಿಪ್ಪು ಸುಲ್ತಾನ್ ಆಡಳಿತದ ಕಾಲಕ್ಕೆ ಕರೆದೊಯ್ಯುತ್ತದೆ.

ಸೈನಿಕನಾಗಿದ್ದು, ದಿವಾನ ಹುದ್ದೆಗೇರಿದವರೊಬ್ಬರ ಹೆಸರು ಮುಂಚೂಣಿಗೆ ಬರುತ್ತದೆ. ಮೈಸೂರು ಸಂಸ್ಥಾನ ಅನೇಕ ಶ್ರೇಷ್ಠ ದಿವಾನರುಗಳನ್ನು ಕಂಡಿದೆ. ಅದರಲ್ಲಿ ಕೆಲವರು ಅಗ್ರಗಣ್ಯ ಸ್ಥಾನ ಪಡೆದರೆ, ಇನ್ನೂ ಕೆಲವರು ಶ್ರೇಷ್ಠ ಆಡಳಿತ ನೀಡಿದ್ದರು. ಅಂತಹವರ ಪೈಕಿ ಬಾಬು ರಾವ್ ಕೂಡ ಒಬ್ಬರು. ಹೈದರ್ ಅಲಿ, ಟಿಪ್ಪು ಸುಲ್ತಾನ್ ಮತ್ತು ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ ಬಾಬುರಾವ್, ಶ್ರೀರಂಗಪಟ್ಟಣ ಚರಿತ್ರೆಯಲ್ಲಿ ಅಜರಾಮರ ಆಗಿದ್ದಾರೆ.

ಮೈಸೂರು-ಬೆಂಗಳೂರು ಹಳೇ ರಸ್ತೆಯಲ್ಲಿ ಬಾಬುರಾಯನ ಕೊಪ್ಪಲು ಎಂಬ ಗ್ರಾಮವಿದೆ. ಗ್ರಾಮಕ್ಕೆ ಶತಮಾನಗಳ ಇತಿಹಾಸವಿದ್ದು, ಬಾಬು ರಾವ್ ಅವರ ನೆನಪಿನಾರ್ಥ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ಟಿಪ್ಪು ಖಾಸಾ ಪಡೆಯ ಸೈನಿಕ ಈ ಬಾಬುರಾವ್: ಬಾಬು ರಾವ್ ಅವರು ಟಿಪ್ಪು ಸುಲ್ತಾನ್ ಅವರ ಖಾಸಾ ಪಡೆಯಲ್ಲಿದ್ದ ೧೦ ಸಾವಿರ ಮಂದಿ ಪೈಕಿ ಪ್ರಮುಖರಲ್ಲಿ ಒಬ್ಬರಾಗಿದ್ದರು. ಬಾಬು ರಾವ್ ದೃಢಕಾಯ ಹಾಗೂ ಅತ್ಯಂತ ಶಕ್ತಿಶಾಲಿ ಸೈನಿಕ ಆಗಿದ್ದರು. ಆಂಗ್ಲೋ-ಮೈಸೂರು ಯುದ್ಧ ನಡೆದಾಗ ಕರ್ನಲ್ ಬೈಲಿ ಡಂಜಿಯನ್ ಎಂಬ ಬ್ರಿಟಿಷ್ ಅಧಿಕಾರಿಯನ್ನು ಬಂಧಿಸಿ ಕರೆತಂದ ಸೈನಿಕ ತುಕಡಿಯಲ್ಲಿ ಬಾಬು ರಾವ್ ಕೂಡ ಒಬ್ಬರಾಗಿದ್ದರು. ಬಾಬು ರಾವ್ ಅವರು ಸೇನೆಯಷ್ಟೆ ಅಲ್ಲದೆ, ಆಡಳಿತಾತ್ಮಕ ವಿಚಾರದಲ್ಲೂ ಪರಿಣತರಾಗಿದ್ದರು. ಹಾಗಾಗಿ ಅವರನ್ನು ಮೈಸೂರು ಸಂಸ್ಥಾನದ ರಾಜರಾಗಿದ್ದ ಹೈದರ್ ಅಲಿ ಅವರು ದಿವಾನ್ಸ್ ಕಚೇರಿಗೆ ನೇಮಕ ಮಾಡಿದ್ದರು. ಆಗಿನಿಂದ ಬಾಬು ರಾವ್ ಮೈಸೂರು ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಗಮನಾರ್ಹ ಪಾತ್ರವಹಿಸಿದ್ದರು.

ನಾಲ್ಕು ಬಾರಿ ದಿವಾನರಾಗಿದ್ದ ಬಾಬುರಾವ್: ಆಡಳಿತದ ಚಾತುರ್ಯವನ್ನು ಅರಗಿಸಿಕೊಂಡಿದ್ದ ಬಾಬುರಾವ್, ೧೭೯೯ ರಿಂದ ೧೮೧೧ ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದ ದಿವಾನ್ ಪೂರ್ಣಯ್ಯರನ್ನು ಸದಾ ವಿರೋಽಸುತ್ತಿದ್ದರು. ದಿವಾನ್ ಪೂರ್ಣಯ್ಯ ಅವರ ಆಡಳಿತ ವಿಚಾರ ಹಾಗೂ ನಿರ್ಧಾರಗಳನ್ನೇ ಪ್ರಶ್ನಿಸುತ್ತಿದ್ದರು. ಮೈಸೂರು ಸಂಸ್ಥಾನದ ದಿವಾನ ಆಗಬೇಕು ಎಂದು ಬಾಬು ರಾವ್ ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಪೂರ್ಣಯ್ಯ ಅವರು ಇರುವವರೆಗೆ ಅದು ಸಾಧ್ಯವಾಗಲಿಲ್ಲ.

 

andolana

Recent Posts

ಓದುಗರ ಪತ್ರ: ಬಂಡಾಯದ ಹೊಳೆ

ಬಂಡಾಯದ ಹೊಳೆ ಮಿಂಚು ಹೂಮಳೆ ! ಅತಿವೃಷ್ಟಿ,ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ, ಕಾರಣ,…

8 hours ago

ಓದುಗರ ಪತ್ರ: ಆತಂಕಕಾರಿ ವಿಚಾರ

ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ…

8 hours ago

ಓದುಗರ ಪತ್ರ: ಜ್ಞಾಪಿಸಿಕೊಳ್ಳಬೇಕಿತ್ತು, ಕೃತಜ್ಞತೆ ಹೇಳಬೇಕಿತ್ತು…

ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು…

8 hours ago

ಮನುಕುಲದ ಏರಿಳಿತಗಳಿಗೆ ಸಾಕ್ಷಿದಾರರಾದ ಈ ಪೀಳಿಗೆಗಳು

ಶುಭಾ ಖಟಾವಕರ ಮ್ಹೆತ್ರಸ್ ಹೊಸ ಇತಿಹಾಸ ಸೃಷ್ಟಿಸಿದ ‘ಜೆನ್ ಝೀ’ ಪೀಳಿಗೆ ಸಂಪ್ರದಾಯಗಳನ್ನು ಪ್ರಶ್ನಿಸಿದ ‘ಬೂಮರ್ಸ್’ ಯುವಜನ ೧೯೦೦ ರಿಂದ…

8 hours ago

ನನೆಗುದಿಗೆ ಬಿದ್ದ ರಾಜ್‌ಘಾಟ್ ಮಾದರಿ ಗಾಂಧಿ ಸ್ಮಾರಕ

ಪುನೀತ್ ೩ ವರ್ಷ ಕಳೆದರೂ ಮುಗಿಯದ ಕಾಮಗಾರಿ: ಶೀಘ್ರ ಪೂರ್ಣಗೊಳಿಸಲು ಒತ್ತಾಯ ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದ…

8 hours ago

ಅನಿಲ್ ಚಿಕ್ಕಮಾದುಗೆ ಕೈತಪ್ಪಿದ ಸಚಿವ ಸ್ಥಾನ; ಕ್ಷೇತ್ರದ ಜನರಿಗೆ ನಿರಾಸೆ

ಮಂಜು ಕೋಟೆ ಕೋಟೆ: ಸಚಿವ ಸ್ಥಾನ ದೊರೆತಿದ್ದರೆ ಹಿಂದುಳಿದ ಕ್ಷೇತ್ರದ ಅಭಿವೃದ್ಧಿಯಾಗುತ್ತಿತ್ತು ಎಂಬ ನಿರೀಕ್ಷೆ ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ…

9 hours ago