Andolana originals

ಪ್ರಕೃತಿ ಜತೆ ಸಹಬಾಳ್ವೆಯ ಸಂದೇಶ ಸಾರಿದ ತಿಮ್ಮಕ್ಕ

ಪರಿಸರ ರಮೇಶ್, ಶ್ರೀರಂಗಪಟ್ಟಣ

ಅರಣ್ಯ ಸಂರಕ್ಷಣಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ಹೆಸರು 

ಸಾಲುಮರದ ತಿಮ್ಮಕ್ಕ ಅವರು ಕರ್ನಾಟಕದ ಪ್ರಖ್ಯಾತ ಪರಿಸರ ಪರಿಚಾರಕಿಯಾಗಿದ್ದು, ಮಕ್ಕಳಿಲ್ಲ ಎಂಬ ನೋವನ್ನು ಮರೆಯಲು ದಂಪತಿ, ೩೮೫ಕ್ಕೂ ಹೆಚ್ಚು ಆಲದ ಕೊನೆ (ಕೊಂಬೆ)ಗಳನ್ನು ನೆಟ್ಟು ನೀರುಣಿಸಿ ಬೆಳೆಸಿದರು. ತಿಮ್ಮಕ್ಕ – ಸಾಲುಮರದ ತಿಮ್ಮಕ್ಕ ಆಗಿ ಪ್ರಸಿದ್ಧಿ ಪಡೆದಿದ್ದು ಈಗ ಇತಿಹಾಸ.

ತಮ್ಮ ೪೦ನೇ ವಯಸ್ಸಿನಲ್ಲಿ ಗಂಡನೊಡನೆ ಸೇರಿ ಮರಗಳನ್ನು ಬೆಳೆಸಲು ಪ್ರಾರಂಭಿಸಿದ ತಿಮ್ಮಕ್ಕ, ಪತಿಯ ಅಕಾಲಿಕ ಮರಣದ ನಂತರವೂ ಛಲ ಬಿಡದೆ ಗಿಡಗಳನ್ನು ಪೋಷಿಸಿ ‘ವೃಕ್ಷಮಾತೆ’ ಎಂದೇ ಪ್ರಖ್ಯಾತಿ ಪಡೆದವರು.

ಸಾಲುಮರದ ತಿಮ್ಮಕ್ಕ ಎಂಬುದು ಕರ್ನಾಟಕದ ಅರಣ್ಯ ಸಂರಕ್ಷಣಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು. ಇವರು ತಮ್ಮ ಅಸಾಧಾರಣ ಪರಿಸರ ಪ್ರೀತಿ ಮತ್ತು ಸೇವೆ ಮೂಲಕ ಜಗತ್ತಿಗೆ ಮಾದರಿಯಾಗಿದ್ದಾರೆ. ಅನಕ್ಷರಸ್ಥರಾಗಿದ್ದರೂ, ತಮ್ಮ ಬದುಕು ಮತ್ತು ಸಾಧನೆಯ ಮೂಲಕ ಪ್ರಕೃತಿಯ ಮಹತ್ವವನ್ನು ಸಾರಿದ್ದಾರೆ.

ಮರಗಳ ಮಹಾದೇವತೆ: ತಿಮ್ಮಕ್ಕ ಅವರ ಸೇವೆಯು ಕೇವಲ ಮರಗಳನ್ನು ನೆಡುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ಪಕ್ಷಿಗಳಿಗೆ ಆಶ್ರಯ ನೀಡುವ ಮತ್ತು ಜನರಿಗೆ ಗಾಳಿ – ನೆರಳು ನೀಡುವ ಮಹತ್ವದ ಉದ್ದೇಶವೂ ಅವರಲ್ಲಿತ್ತು.

ಮಾತೃಸ್ಥಾನ: ತಿಮ್ಮಕ್ಕ ಅವರು ಬೆಳೆಸಿದ ಪ್ರತಿ ಸಸಿಯನ್ನೂ ತಮ್ಮ ಸ್ವಂತ ಮಕ್ಕಳಂತೆ ಕಾಳಜಿ ವಹಿಸಿ ಪ್ರಾರಂಭದಲ್ಲಿ ಮಣ್ಣಿನ ಮಡಿಕೆಗಳಲ್ಲಿ ನೀರನ್ನು ಹೊತ್ತೊಯ್ದು ಹಾಕಿದ್ದಾರೆ. ಮೇಕೆ – ಕುರಿಗಳ ದಾಳಿಯನ್ನು ತಪ್ಪಿಸಿ ಬಹಳ ಜತನದಿಂದ ಕಾಪಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಿಮ್ಮಕ್ಕ ಅವರನ್ನು ಭೇಟಿ ಮಾಡಿ ಗೌರವಿಸಿದ್ದಾರೆ.

ಸಾಲುಮರದ ತಿಮ್ಮಕ್ಕ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ, ಪ್ರಕೃತಿಯ ಜೊತೆ ಸಹಬಾಳ್ವೆಯ ಮಹತ್ವವನ್ನು ಸಾರಿದ್ದಾರೆ. ಇವರಸರಳತೆ, ದೃಢಸಂಕಲ್ಪ ಮತ್ತು ಸೇವಾ ಮನೋಭಾವವು ಸಮಾಜದ ಎಲ್ಲರಿಗೂ ಸ್ಛೂರ್ತಿಯಾಗಿದೆ. ಪ್ರಸ್ತುತ ಇಂದು ಇವರ ಮಾದರಿ ಕೆಲಸವನ್ನು ನೋಡಿ ಸ್ಛೂರ್ತಿ ಪಡೆದು ನೂರಾರು ಜನ ಗಿಡ ಬೆಳೆಸುತ್ತಿದ್ದಾರೆ. ತಿಮ್ಮಕ್ಕ ಅವರ ಜೀವಿತಾವಧಿಯು ಪರಿಸರ ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಒಂದು ಮಹಾಕಾವ್ಯವಾಗಿದೆ. ಸಮಾಜ ಸೇವೆ ಪರಿಸರ ಸೇವೆ ಮಾಡುವವರನ್ನು ಅಪಶಕುನದ ಬೆಕ್ಕಿನ ರೀತಿ ನೋಡುವ ಇಂದಿನ ಸಮಾಜದಲ್ಲಿ ತಿಮ್ಮಕ್ಕ ಅವರ ಬದುಕು ಹಾಗೂ ಸೇವೆ ಮುಂದಿನ ಪೀಳಿಗೆಗೆ ಎಂದಿಗೂ ಹಸಿರಾದ ದಾರಿ ದೀಪವಾಗಿರುತ್ತದೆ.

” ಸಾಲುಮರದ ತಿಮ್ಮಕ್ಕ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ, ಪ್ರಕೃತಿಯ ಜೊತೆ ಸಹಬಾಳ್ವೆಯ ಮಹತ್ವವನ್ನು ಸಾರಿದ್ದಾರೆ. ಇವರ ಸರಳತೆ, ದೃಢಸಂಕಲ್ಪಮತ್ತು ಸೇವಾ ಮನೋಭಾವವು ಸಮಾಜದ ಎಲ್ಲರಿಗೂ ಸ್ಛೂರ್ತಿಯಾಗಿದೆ.”

ಆಂದೋಲನ ಡೆಸ್ಕ್

Recent Posts

ಪ್ರಧಾನ್‌ ರಾಜೀನಾಮೆ : ವಾಂಗ್ಚುಕ್‌ ಫಸ್ಟ್‌ ರಿಯಾಕ್ಷನ್‌

ನವದೆಹಲಿ : ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಕುರಿತು ಹೋರಾಟಗಾರ ಸೋನಮ್‌ ವಾಂಗ್ಚುಕ್‌ ಮೊದಲ ಪ್ರತಿಕ್ರಿಯೆ…

2 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 25 ಶನಿವಾರ  

11 hours ago

ನೋಟ-ಪ್ರತಿನೋಟ | ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಸರಿಯೇ? ತಪ್ಪೇ?

ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಪ್ರಥಮವಾಗಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಂಬಳಕ್ಕಾಗಿ ಮೈಸೂರಿನಲ್ಲಿ ಸ್ಥಳ ನಿಗದಿಪಡಿಸಿದ್ದು, ಸಿದ್ಧತೆ…

11 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಗೆ ಅಜ್ಜಿ ಒಡವೆ ನೀಡಿದ ಪ್ರಸಂಗ…

ನನ್ನ ಅಜ್ಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಗಾಂಧಿ ಹಕ್ಕಿಯ ಹಾಗೆ ಇದ್ದರು ಮತ್ತು ನಿರುಪದ್ರವಿ ಎಂದು. ಗಾಂಽಯ ಕಾಲದಲ್ಲಿ…

11 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ಉಡುಪು ಯಾಕೆ ಬದಲಾಯಿತು?

  ಡಾ.ಪ್ರಮೀಳಾದೇವಿ ಬಿ.ಕೆ. ಮಹಾತ್ಮಗಾಂಧಿ ಇಂಗ್ಲೆಂಡಿನಲ್ಲಿದ್ದಾಗಲೂ, ಅಲ್ಲಿಂದ ಹಿಂತಿರುಗಿದಾಗ, ಮತ್ತು ಆರಂಭದ ದಿನಗಳಲ್ಲಿ ಅವರು ಎಲ್ಲಾ ವಿದ್ಯಾವಂತರಂತೆ ಬೆಲೆಬಾಳುವ ಸೂಟುಬೂಟು…

11 hours ago

ಗಾಂಧಿ ಅಭಿಯಾನ ಅರಿವಿನ ಯಾನ ; ಸಜ್ಜನನಾದ ಆಂಗ್ಲನಾಗುವ ಪ್ರಯತ್ನ

ಶಾಕಾಹಾರದಲ್ಲಿ ದಿನದಿನಕ್ಕೂ ನನ್ನ ನಂಬಿಕೆ ಹೆಚ್ಚುತ್ತಲೇ ಹೋಯಿತು. ಸಾಲ್ಟ್‌ರ ಗ್ರಂಥದ ವ್ಯಾಸಂಗದಿಂದ, ಆಹಾರದ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಭ್ಯಾಸ ಮಾಡಲು…

11 hours ago