ಪರಿಸರ ರಮೇಶ್, ಶ್ರೀರಂಗಪಟ್ಟಣ
ಅರಣ್ಯ ಸಂರಕ್ಷಣಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ಹೆಸರು
ಸಾಲುಮರದ ತಿಮ್ಮಕ್ಕ ಅವರು ಕರ್ನಾಟಕದ ಪ್ರಖ್ಯಾತ ಪರಿಸರ ಪರಿಚಾರಕಿಯಾಗಿದ್ದು, ಮಕ್ಕಳಿಲ್ಲ ಎಂಬ ನೋವನ್ನು ಮರೆಯಲು ದಂಪತಿ, ೩೮೫ಕ್ಕೂ ಹೆಚ್ಚು ಆಲದ ಕೊನೆ (ಕೊಂಬೆ)ಗಳನ್ನು ನೆಟ್ಟು ನೀರುಣಿಸಿ ಬೆಳೆಸಿದರು. ತಿಮ್ಮಕ್ಕ – ಸಾಲುಮರದ ತಿಮ್ಮಕ್ಕ ಆಗಿ ಪ್ರಸಿದ್ಧಿ ಪಡೆದಿದ್ದು ಈಗ ಇತಿಹಾಸ.
ತಮ್ಮ ೪೦ನೇ ವಯಸ್ಸಿನಲ್ಲಿ ಗಂಡನೊಡನೆ ಸೇರಿ ಮರಗಳನ್ನು ಬೆಳೆಸಲು ಪ್ರಾರಂಭಿಸಿದ ತಿಮ್ಮಕ್ಕ, ಪತಿಯ ಅಕಾಲಿಕ ಮರಣದ ನಂತರವೂ ಛಲ ಬಿಡದೆ ಗಿಡಗಳನ್ನು ಪೋಷಿಸಿ ‘ವೃಕ್ಷಮಾತೆ’ ಎಂದೇ ಪ್ರಖ್ಯಾತಿ ಪಡೆದವರು.
ಸಾಲುಮರದ ತಿಮ್ಮಕ್ಕ ಎಂಬುದು ಕರ್ನಾಟಕದ ಅರಣ್ಯ ಸಂರಕ್ಷಣಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು. ಇವರು ತಮ್ಮ ಅಸಾಧಾರಣ ಪರಿಸರ ಪ್ರೀತಿ ಮತ್ತು ಸೇವೆ ಮೂಲಕ ಜಗತ್ತಿಗೆ ಮಾದರಿಯಾಗಿದ್ದಾರೆ. ಅನಕ್ಷರಸ್ಥರಾಗಿದ್ದರೂ, ತಮ್ಮ ಬದುಕು ಮತ್ತು ಸಾಧನೆಯ ಮೂಲಕ ಪ್ರಕೃತಿಯ ಮಹತ್ವವನ್ನು ಸಾರಿದ್ದಾರೆ.
ಮರಗಳ ಮಹಾದೇವತೆ: ತಿಮ್ಮಕ್ಕ ಅವರ ಸೇವೆಯು ಕೇವಲ ಮರಗಳನ್ನು ನೆಡುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ಪಕ್ಷಿಗಳಿಗೆ ಆಶ್ರಯ ನೀಡುವ ಮತ್ತು ಜನರಿಗೆ ಗಾಳಿ – ನೆರಳು ನೀಡುವ ಮಹತ್ವದ ಉದ್ದೇಶವೂ ಅವರಲ್ಲಿತ್ತು.
ಮಾತೃಸ್ಥಾನ: ತಿಮ್ಮಕ್ಕ ಅವರು ಬೆಳೆಸಿದ ಪ್ರತಿ ಸಸಿಯನ್ನೂ ತಮ್ಮ ಸ್ವಂತ ಮಕ್ಕಳಂತೆ ಕಾಳಜಿ ವಹಿಸಿ ಪ್ರಾರಂಭದಲ್ಲಿ ಮಣ್ಣಿನ ಮಡಿಕೆಗಳಲ್ಲಿ ನೀರನ್ನು ಹೊತ್ತೊಯ್ದು ಹಾಕಿದ್ದಾರೆ. ಮೇಕೆ – ಕುರಿಗಳ ದಾಳಿಯನ್ನು ತಪ್ಪಿಸಿ ಬಹಳ ಜತನದಿಂದ ಕಾಪಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಿಮ್ಮಕ್ಕ ಅವರನ್ನು ಭೇಟಿ ಮಾಡಿ ಗೌರವಿಸಿದ್ದಾರೆ.
ಸಾಲುಮರದ ತಿಮ್ಮಕ್ಕ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ, ಪ್ರಕೃತಿಯ ಜೊತೆ ಸಹಬಾಳ್ವೆಯ ಮಹತ್ವವನ್ನು ಸಾರಿದ್ದಾರೆ. ಇವರಸರಳತೆ, ದೃಢಸಂಕಲ್ಪ ಮತ್ತು ಸೇವಾ ಮನೋಭಾವವು ಸಮಾಜದ ಎಲ್ಲರಿಗೂ ಸ್ಛೂರ್ತಿಯಾಗಿದೆ. ಪ್ರಸ್ತುತ ಇಂದು ಇವರ ಮಾದರಿ ಕೆಲಸವನ್ನು ನೋಡಿ ಸ್ಛೂರ್ತಿ ಪಡೆದು ನೂರಾರು ಜನ ಗಿಡ ಬೆಳೆಸುತ್ತಿದ್ದಾರೆ. ತಿಮ್ಮಕ್ಕ ಅವರ ಜೀವಿತಾವಧಿಯು ಪರಿಸರ ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಒಂದು ಮಹಾಕಾವ್ಯವಾಗಿದೆ. ಸಮಾಜ ಸೇವೆ ಪರಿಸರ ಸೇವೆ ಮಾಡುವವರನ್ನು ಅಪಶಕುನದ ಬೆಕ್ಕಿನ ರೀತಿ ನೋಡುವ ಇಂದಿನ ಸಮಾಜದಲ್ಲಿ ತಿಮ್ಮಕ್ಕ ಅವರ ಬದುಕು ಹಾಗೂ ಸೇವೆ ಮುಂದಿನ ಪೀಳಿಗೆಗೆ ಎಂದಿಗೂ ಹಸಿರಾದ ದಾರಿ ದೀಪವಾಗಿರುತ್ತದೆ.
” ಸಾಲುಮರದ ತಿಮ್ಮಕ್ಕ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ, ಪ್ರಕೃತಿಯ ಜೊತೆ ಸಹಬಾಳ್ವೆಯ ಮಹತ್ವವನ್ನು ಸಾರಿದ್ದಾರೆ. ಇವರ ಸರಳತೆ, ದೃಢಸಂಕಲ್ಪಮತ್ತು ಸೇವಾ ಮನೋಭಾವವು ಸಮಾಜದ ಎಲ್ಲರಿಗೂ ಸ್ಛೂರ್ತಿಯಾಗಿದೆ.”
ಚೆನ್ನೈ: ರಾಜ್ಯದಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚುತ್ತಿರುವ ಮದ್ಯ ಸೇವನೆಯನ್ನು ತಡೆಯಲು, ತಮಿಳುನಾಡು ಸರ್ಕಾರವು ಎಲ್ಲಾ ರೀತಿಯ ಮದ್ಯ ಖರೀದಿ ಮತ್ತು…
ಬೆಂಗಳೂರು: ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೆ ಪೂರ್ವ ಮುಂಗಾರು ಆರ್ಭಟ ಮುಂದುವರಿದಿದೆ. ನಾಳೆ ಮತ್ತಷ್ಟು ತೀವ್ರತೆ…
ಲಕ್ನೋ: ಉತ್ತರ ಪ್ರದೇಶದಾದ್ಯಂತ ಭಾರೀ ಮಳೆ ಮತ್ತು ಬಿರುಗಾಳಿಗೆ ಈವರೆಗೆ 104 ಜನರು ಸಾವನ್ನಪ್ಪಿದ್ದಾರೆ. ಮಳೆ ಹೊಡೆತಕ್ಕೆ 53 ಜನರಿಗೆ…
ಬೆಂಗಳೂರು: ಇದೇ ತಿಂಗಳ 24 ರಂದು ನಡೆಯಬೇಕಿದ್ದ ಎಂಬಿಎ, ಎಂಸಿಎ ಕೋರ್ಸ್ಗಳ ಪ್ರವೇಶ್ ಪರೀಕ್ಷೆಯನ್ನು ಜೂನ್.14ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಮಿಳುನಾಡಿಗೆ ಭತ್ತ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ…
ಹನೂರು: ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಹೊಂದಿರುವ ಮಾರ್ಟಳ್ಳಿಯಲ್ಲಿ ಸದ್ಯ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಗ್ರಾಮದ…