Andolana originals

ಹುಲಿ, ಚಿರತೆ ಸೆರೆಗೆ ಪಶುವೈದ್ಯರ ಕೊರತೆ!

ಪ್ರಶಾಂತ್ ಎಸ್.

ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಇಬ್ಬರೇ ವೈದ್ಯರು

ವನ್ಯಜೀವಿ ವೈದ್ಯರಿಲ್ಲದೆ ಹುಲಿ ಚಿರತೆ ಕಾರ್ಯಾಚರಣೆ ವಿಳಂಬ

೨೨ ದಿನಗಳಿಂದ ಮಾನವ ಹುಲಿ ಸಂಘರ್ಷ ಹೆಚ್ಚಳ

ಮೈಸೂರು: ಮಾನವ-ವನ್ಯಜೀವಿ ಸಂಘರ್ಷ ದಿನೇದಿನೇ ಹೆಚ್ಚುತ್ತಿದ್ದು, ಒಂದೆಡೆ ಇದಕ್ಕೆ ಶಾಶ್ವತ ಪರಿಹಾರ ನೀಡಲಾಗದೆ ಅರಣ್ಯ ಇಲಾಖೆ ಹಿನ್ನೆಡೆ ಅನುಭವಿಸುತ್ತಿದೆ. ಮತ್ತೊಂದೆಡೆ ಕಾಡಂಚಿನ ಪ್ರದೇಶಗಳಲ್ಲಿ ಉಪಟಳ ನೀಡುತ್ತಿರುವ ಚಿರತೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಶುವೈದ್ಯರ (ವನ್ಯಜೀವಿ) ಕೊರತೆ ಎದ್ದು ಕಾಣುತ್ತಿದೆ.

ನಾಗರಹೊಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನಗಳಲ್ಲಿ ೮ರಿಂದ ೧೦ ಮಂದಿ ಪಶು ವೈದ್ಯರ ಅಗತ್ಯವಿದೆ. ಆದರೆ ಇಬ್ಬರೇ ಇಬ್ಬರು ವನ್ಯ ಜೀವಿ ಪಶುವೈದ್ಯರಿದ್ದಾರೆ. ಕಳೆದ ೨೨ ದಿನ ಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸರಗೂರು ಹಾಗೂ ಹೆಡಿಯಾಲ ವ್ಯಾಪ್ತಿಯಲ್ಲಿ ಹುಲಿ-ಮಾನವ ಸಂಘರ್ಷ ತಾರಕಕ್ಕೇರಿದೆ.

ಆದರೆ, ಕಾಡಂಚಿನಲ್ಲಿ ಜನತೆಗೆ ಉಪಟಳ ನೀಡುತ್ತಿರುವ ಆನೆ, ಹುಲಿ, ಚಿರತೆಗಳ ಸೆರೆ ಕಾರ್ಯಾಚರಣೆಗೆ ಅಗತ್ಯವಿರುವಷ್ಟು ವನ್ಯ ಜೀವಿ ವೈದ್ಯರಿಲ್ಲದ ಪರಿಣಾಮ ಕಾರ್ಯಾಚರಣೆ ವಾರಗಟ್ಟಲೆ ನಡೆಯುವಂತಾಗಿದೆ. ಸರಗೂರು ವ್ಯಾಪ್ತಿಯಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿದ್ದು, ಇದಕ್ಕೆ ಬಂಡೀಪುರ, ನಾಗರಹೊಳೆಯ ಪಶುವೈದ್ಯರನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದೇ ವೇಳೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಯಾವುದಾದರೂ ವನ್ಯಜೀವಿ ಗಾಯಗೊಂಡಲ್ಲಿ ಅಥವಾ ಬೇರೆ ಪ್ರದೇಶದಲ್ಲಿ ಆನೆ ದಾಂದಲೆ ನಡೆಸಿದ್ದಲ್ಲಿ ಈ ವೈದ್ಯರನ್ನೇ ಅಲ್ಲಿಗೆ ನಿಯೋಜಿಸಲಾಗುತ್ತದೆ. ಹಾಗಾಗಿ ಉಪಟಳ ನೀಡುವ ಪ್ರಾಣಿಗಳ ಸೆರೆ ಕಾರ್ಯಾಚರಣೆ ಯಾವುದೇ ಪರಿಣಾಮ ಬೀರುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಪ್ರತಿ ವಲಯಕ್ಕೂ ಬೇಕು ವನ್ಯಜೀವಿ ವೈದ್ಯರು: ಮೈಸೂರು ಜಿಲ್ಲೆಯು ಬಂಡೀಪುರ, ನಾಗರಹೊಳೆ ಅರಣ್ಯ ಪ್ರದೇಶವನ್ನು ಒಳ ಗೊಂಡಿದ್ದು ಇಲ್ಲಿ ಆಗಾಗ್ಗೆ ಸಂಭವಿಸುವ ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಅರಣ್ಯ ಸಿಬ್ಬಂದಿ ಜೊತೆಗೆ ಪ್ರತಿ ವಲಯಕ್ಕೂ ನುರಿತ ಪಶುವೈದ್ಯರ ಅಗತ್ಯವಿದೆ. ನಂಜನಗೂಡು, ಸರಗೂರು, ಎಚ್.ಡಿ.ಕೋಟೆ, ಮೈಸೂರು ವಲಯಗಳಿಗೆ ಪಶುವೈದ್ಯರನ್ನು ನೇಮಿಸಿದಲ್ಲಿ ಈಗಿರುವ ವೈದ್ಯರ ಮೇಲಿನ ಒತ್ತಡ ತಗ್ಗಲಿದೆ.

ವೈದ್ಯರಿಗೂ ಪ್ರತ್ಯೇಕ ಕೇಡರ್ ಅಗತ್ಯ: ಅರಣ್ಯ ಇಲಾಖೆಯಲ್ಲಿ ಪಶುವೈದ್ಯರನ್ನು ಅವರ ಶ್ರೇಣಿಗೆ ಅನುಸಾರ ನಡೆಸಿಕೊಳ್ಳದೇ, ಡಿ ಗ್ರೂಪ್ ನೌಕರರಂತೆ ನಡೆಸಿಕೊಳ್ಳಲಾಗುತ್ತದೆ ಎಂಬ ಆರೋಪ ಇದೆ. ಹಾಗಾಗಿ ಇಲಾಖೆಯ ವಶುವೈದ್ಯರಾಗಿ ಬರಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ.

ಸರ್ಕಾರ ತಜ್ಞ ವನ್ಯಜೀವಿ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಪ್ರತ್ಯೇಕ ಕೇಡರ್ ಮಾಡಬೇಕಿದೆ. ಜತೆಗೆ ಪ್ರತ್ಯೇಕ ಕಚೇರಿ, ವಾಹನ ವ್ಯವಸ್ಥೆಯಂತಹ ಮೂಲ ಸೌಲಭ್ಯ ಕಲ್ಪಿಸ ಬೇಕು ಎಂಬ ಕೂಗು ಕೇಳಿಬರುತ್ತಿದೆ.

” ವನ್ಯಜೀವಿ ಪಶು ವೈದ್ಯರ ಕೊರತೆ ಕುರಿತು ನಮ್ಮಇಲಾಖೆಯ ಮೇಲಧಿಕಾರಿಗಳು ಹಾಗೂ ಅರಣ್ಯ ಸಚಿವರ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಲಾಗುವುದು, ಸದ್ಯದಲ್ಲೇ ಸೂಕ್ತ ಕ್ರಮಕೈಗೊಳ್ಳುವ ಭರವಸೆ ಇದೆ.”

-ಪರಮೇಶ್, ಎಸಿಎಫ್‌ 

” ಹುಲಿ ಮನುಷ್ಯನ ಮೇಲೆ ದಾಳಿ ಮಾಡಿದಾಗ ಅರಿವಳಿಕೆ ಚುಚ್ಚುಮದ್ದು ನೀಡಿ ಅದನ್ನು ಸೆರೆಹಿಡಿಯಲು ವನ್ಯಜೀವಿ ಪಶು ವೈದ್ಯರ ಅಗತ್ಯವಿದ್ದು ನಾಗರಹೊಳೆ ಹಾಗೂ ಬಂಡೀಪುರವ್ಯಾಪ್ತಿಯಲ್ಲಿ ಎಲ್ಲೆ ಈ ಸಮಸ್ಯೆಗಳಾದ್ದರೂ ಇಬ್ಬರೇ ವೈದ್ಯರಿದ್ದಾರೆ. ಹಾಗಾಗಿ ಹುಲಿ ಕಾರ್ಯಚರಣೆ ನಿಧಾನವಾಗುತ್ತಿದೆ.”

-ಲಿಖಿತ್ ರಾಜೇ ಅರಸ್, ವನ್ಯ ಜೀವಿ ತಜ್ಞ 

ಆಂದೋಲನ ಡೆಸ್ಕ್

Recent Posts

27ನೇ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕೆ ಅಜ್ಜಿಕುಟ್ಟಿರ ನೇತೃತ್ವ

ಪುನೀತ್ ಮಡಿಕೇರಿ ೨೦೨೭ರ ಏಪ್ರಿಲ್-ಮೇನಲ್ಲಿ ನಡೆಯಲಿರುವ ಹಾಕಿ ಉತ್ಸವಕ್ಕೆ ಸಿದ್ಧತೆ; ಟರ್ಫ್, ಹೊನಲು ಬೆಳಕಿನ ಪಂದ್ಯಾವಳಿಗೆ ಚಿಂತನೆ ಮಡಿಕೇರಿ: ೨೬ನೇ…

2 hours ago

ಕಬಿನಿ ಹಿನ್ನೀರಿಗೆ ಹಿಂಡು ಹಿಂಡಾಗಿ ವನ್ಯಪ್ರಾಣಿಗಳ ಲಗ್ಗೆ

ಮಂಜು ಕೋಟೆ ಮೇವು, ಕುಡಿಯುವ ನೀರಿಗಾಗಿ ಬರುವ ವನ್ಯಪ್ರಾಣಿಗಳನ್ನು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು ಎಚ್.ಡಿ.ಕೋಟೆ: ಬಿಸಿಲಿನ ತಾಪಮಾನದಿಂದ ಮೇವು ಮತ್ತು ಕುಡಿಯುವ…

2 hours ago

ನೀರಿನ ಪೈಪ್‌ಲೈನ್ ಅಳವಡಿಕೆ ಚುರುಕು

  ೧೦೦ ಕಿ.ಮೀ.ಹೆಚ್‌ಡಿಪಿಇ ಪೈಪ್ ಅಳವಡಿಕೆ ಪ್ರಗತಿಯಲ್ಲಿ; ಕಾವೇರಿ ನೀರು ಪೂರೈಸಲು ನಗರಸಭೆ ಕ್ರಮ ಪ್ರಸಾದ್ ಲಕ್ಕೂರು ಚಾಮರಾಜನಗರ: ನಗರದಲ್ಲಿ…

2 hours ago

ಜೂ.20ರಿಂದ ಎಸ್‌ಐಆರ್; ಮತದಾರರಲ್ಲಿ ಇರಲಿ ಜಾಗ್ರತೆ

ಗಿರೀಶ್ ಹುಣಸೂರು ರಾಜ್ಯದ ೫.೫೫ ಕೋಟಿ ಮತದಾರರ ಪರಿಷ್ಕರಣೆ ನಡೆಸಲಿರುವ ಬಿಎಲ್‌ಒಗಳು ಮೈಸೂರು:ಕಳೆದ ಎಲೆಕ್ಷನ್‌ನಲ್ಲಿ ಇದೇ ಬೂತ್‌ನಲ್ಲಿ ವೋಟ್ ಮಾಡಿದ್ದೆ,…

3 hours ago

ರಷ್ಯಾ ಮೇಲೆ ಉಕ್ರೇನ್‌ ಭೀಕರ ಡ್ರೋನ್‌ ದಾಳಿ: 4 ಮಂದಿ ಸಾವು

ಮಾಸ್ಕೋ: ಉಕ್ರೇನ್‌ ಶನಿವಾರ ರಾತ್ರೋರಾತ್ರಿ ಮಾಸ್ಕೋ ಸೇರಿದಂತೆ ರಷ್ಯಾದ ಅನೇಕ ಭಾಗಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ ದಾಳಿ ನಡೆಸಿದೆ. ಈ ವೈಮಾನಿಕ…

15 hours ago