Andolana originals

ಕಪಿಲಾ ತೀರದ ಬಿಸಿ ನೀರಿನ ವ್ಯಾಪಾರ ನಿಂತಿಲ್ಲ, ಸುಲಿಗೆ ತಪ್ಪಿಲ್ಲ

ನಂಜನಗೂಡು : ಮುಜರಾಯಿ ಇಲಾಖೆ ಅದೀನದಲ್ಲಿರುವ ಸುಬ್ರಹ್ಮಣ್ಯದಲ್ಲಿ 1 ಬಕೆಟ್ ನೀರಿಗೆ 5 ರೂ. ಆದರೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ 50 ರೂ. ಇದು ದೇವಾಲಯಗಳಲ್ಲಿ ನಡೆಯುತ್ತಿರುವ ಭಕ್ತರ ಶೋಷಣೆಗೆ ಒಂದು ಉದಾಹರಣೆ.

ಹಿಮಾಲಯದ ತಪ್ಪಲಿನಲ್ಲಿ ಒಂದು ಬಕೆಟ್ ನೀರಿನ ಬೆಲೆ 20 ರೂ. ಆದರೆ ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಕಪಿಲಾ ತೀರದಲ್ಲಿ ಬಕೆಟ್ ನೀರಿಗೆ 50 ರೂ. ನಿಂದ 100 ರೂ. ಪಡೆಯಲಾಗುತ್ತಿದೆ ಎಂಬ ಸುದ್ದಿ ಫೆ. 12ರಂದು ‘ಆಂದೋಲನ’ ದಿನ ಪತ್ರಿಕೆ ಯಲ್ಲಿ ಪ್ರಕಟವಾದಾಗ ಒಂದೆರಡು ವಾರ ಸ್ಥಗಿತವಾಗಿದ್ದ ಬಿಸಿ ನೀರಿನ ಸುಲಿಗೆ ಈಗ ಮತ್ತೆ ರಾಜಾರೋಷವಾಗಿ ಪುನಾರಂಭವಾಗಿದೆ. ಶ್ರೀಕಂಠೇಶ್ವರನ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಬೆಳಗಿನ ಜಾವ ಸೇರಿದಂತೆ ಚಳಿಯಲ್ಲಿ ತೀರ್ಥ ಸ್ನಾನ ಮಾಡುವವರು ಬಿಸಿ ನೀರಿನ ಸ್ನಾನ ಮಾಡಲು ಬಯಸುತ್ತಾರೆ. ಮಕ್ಕಳಿಗಂತೂ ತಣ್ಣೀರಿನ ಸ್ನಾನ ಮಾಡಿಸಲು ಒಪ್ಪದ ಅವರು ಹಣ ನೀಡಿ ಬಿಸಿ ನೀರು ಖರೀದಿಸಿ ಸ್ನಾನ ಮಾಡಿಸುತ್ತಾರೆ.

5 ವರ್ಷಗಳ ಹಿಂದೆ ಕಪಿಲಾ ಸ್ನಾನಘಟ್ಟದಲ್ಲಿ ದೇವಾಲಯದ ವತಿಯಿಂದ ಎರಡು ಬಾಯ್ಲರ್‌ಗಳನ್ನು ಸ್ಥಾಪಿಸಿ ಭಕ್ತರಿಗೆ 5 ರೂ. ಗಳಿಗೆ ಒಂದು ಬಕೆಟ್ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವ್ಯವಸ್ಥೆಯನ್ನು ದೇವಾಲಯದಿಂದ ಸಂಬಳ ಪಡೆಯುವ ಸಿಬ್ಬಂದಿಗಳ ಮೂಲಕವೇ ನಿರ್ವಹಿಸಲಾಗುತ್ತಿತ್ತು. ಆದರೆ ದೇವಾಲಯದ ಈ ಸೌಲಭ್ಯ ಕೆಲವೇ ದಿನಗಳಲ್ಲಿ ಸುಲಿಗೆ ರೂಪ ತಾಳಿ ದೇವಾಲಯದ ಪಾಲಿಗೆ ಉಚಿತವಾಗಿ ಭಕ್ತರ ಜೇಬಿಗೆ ಕನ್ನ ಆಗಿ ಪರಿವರ್ತನೆಯಾಗಿ ಸುಲಿಗೆಕೋರರ ಪಾಲಿಗೆ ದಿನಕ್ಕೆ 10-20 ಸಾವಿರ ರೂ. ಆದಾಯಕ್ಕೆ ದಾರಿಯಾಯಿತು. ನಿತ್ಯ ಕನಿಷ್ಠ 200 ಬಕೆಟ್ ನೀರಿನ ವ್ಯಾಪಾರವಾಗುತ್ತಿದ್ದು, ಭಾನುವಾರ, ಸೋಮವಾರ ಹುಣ್ಣಿಮೆ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ 800 ಬಕೆಟ್‌ವರೆಗೆ ಇಲ್ಲಿ ವ್ಯಾಪಾರ ವಾಗುತ್ತದೆ ಎನ್ನುತ್ತಾರೆ ಈ ಕಾರ್ಯಕ್ಕೆ ದಿನಗೂಲಿ ಸಿಬ್ಬಂದಿ. ಅವರುಗಳೇ ಹೇಳುವ ಪ್ರಕಾರ, ಒಂದು ಬಕೆಟ್‌ಗೆ 50 ರೂ. ಆದರೆ 100 ಬಕೆಟ್‌ಗೆ 5,000 ರೂ. ನಿತ್ಯ ಕನಿಷ್ಠ 200 ಬಕೆಟ್ ಎಂದರೂ 10,000 ರೂ. , ದಿನದ ಆದಾಯ. ವಿಶೇಷ ದಿನಗಳಲ್ಲಿ ಅದು ಐದು ಪಟ್ಟು ಹೆಚ್ಚಾಗಿ 40 ಸಾವಿರ ರೂ. ವರೆಗೂ ಹೋಗುತ್ತದೆ. ಕೊನೆಗೆ ರಶೀತಿಯೇ ಇಲ್ಲದ ಈ ಅಘೋಷಿತ ಆದಾಯ ಎಲ್ಲಿಗೆ ಹೋಗುತ್ತಿದೆ? ಯಾರ ಜೇಬು ಸೇರುತ್ತಿದೆ? ಇದರಲ್ಲಿ ಯಾರ‍್ಯಾರು ಪಾಲುದಾರರು ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರ ದೊರೆಯದಾಗಿದೆ.

 

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ | ಸೆ.28 ರಿಂದ ಅ.5ರವರೆಗೆ ಯುವ ಸಂಭ್ರಮ

ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮಕ್ಕೂ ಮುನ್ನ ಸ್ಥಳೀಯ ಕಾಲೇಜು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡಲು ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ…

1 min ago

ಕಾವೇರಿ ಜಲವಿವಾದ: ಸೆ.15ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಸೆಪ್ಟೆಂಬರ್‌ 15ಕ್ಕೆ ಮುಂದೂಡಿದೆ. ಬಾಕಿ ಇರುವ 17 ಟಿಎಂಸಿ ನೀರನ್ನು…

6 hours ago

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ

ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಸಾವಿನ ಸಂಖ್ಯೆ 903ಕ್ಕೆ ಏರಿಕೆಯಾಗಿದೆ. ಪ್ರವಾಹದ ರಭಸಕ್ಕೆ…

7 hours ago

ಎಚ್.ಡಿ.ಕೋಟೆ: ಸಾರ್ವಜನಿಕರಿಗೆ ಆತಂಕ ಮೂಡಿಸಿದ್ದ ಹುಲಿ ಸೆರೆ

ಎಚ್.ಡಿ. ಕೋಟೆ: ತಾಲೂಕಿನ ಹೊಸ ಹುಳಲು ಗ್ರಾಮದಲ್ಲಿ ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ.…

7 hours ago

ರಾಜಕೀಯ ಮೇಲಾಟ ನಿಲ್ಲಲಿ; ಸಾಮಾನ್ಯರ ವಿಷಯ ಚರ್ಚೆಯಾಗಲಿ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ಕೇಂದ್ರ ಬಿಂದುವಾಗಿದ್ದು,…

12 hours ago

ಪ್ರೇಮವೂ ಬಂಡಾಯದ ದನಿಯೇ – ಅಮೃತಾ ಪ್ರೀತಮ್

ರೇಣುಕಾ ನಿಡಗುಂದಿ ಮತ್ತೆ ಸಿಗುವೆ.. ಆದರೆ ಎಲ್ಲಿ? ಹೇಗೆ ನನಗೂ ತಿಳಿಯದು, ಈ ನಶ್ವರ ಲೋಕದ ಹಂಗು ಆತ್ಮಕ್ಕಿಲ್ಲ ನಾ…

12 hours ago