Andolana originals

ಆಟೋಟದಲ್ಲಿ ಪಾಲ್ಗೊಂಡ ಮಕ್ಕಳಿಗೆ ಊಟವೇ ಇಲ್ಲ!

ನಂಜನಗೂಡು ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಗಮಿಸಿದ ಮಕ್ಕಳ ಪರದಾಟ

ಎಸ್.ಎಸ್.ಭಟ್‌ 

ನಂಜನಗೂಡು: ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಊಟವೂ ಇಲ್ಲ, ಕುಡಿಯಲು ನೀರೂ ಇಲ್ಲ. ಅವರು ಹಸಿದುಕೊಂಡೇ ಆಟವಾಡಬೇಕು, ಇಲ್ಲವೇ ಅವರೇ ವ್ಯವಸ್ಥೆ ಮಾಡಿಕೊಳ್ಳಬೇಕು. ಇಂಥ ಸನ್ನಿವೇಶ ಕಂಡುಬಂದಿದ್ದು ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ. ಮಕ್ಕಳಿಗೆ ಊಟದ ವ್ಯವಸ್ಥೆ ಇಲ್ಲವಾದರೂ ಅವರನ್ನು ಕರೆ ತಂದ ಶಿಕ್ಷಕರಿಗೆ ಮಾತ್ರ ಉಟದ ವ್ಯವಸ್ಥೆ ಇತ್ತು.

ಹೋಬಳಿ ಮಟ್ಟದಲ್ಲಿ ವಿಜೇತರಾದ ಮಕ್ಕಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲು ಮಂಗಳವಾರ ನಗರದ ಬಾಲಕರ ಕಿರಿಯ ಕಾಲೇಜು, ರೋಟರಿ ಶಾಲೆ, ಕಾರ್ಮೆಲ್ ಶಾಲೆ, ಯುನಿಟಿ ಶಾಲೆ ಹಾಗೂ ಬಸವನಪುರದ ಶಾಲೆಗಳ ಆವರಣದಲ್ಲಿ ವಾಲಿಬಾಲ್, ಥ್ರೋಬಾಲ್, ಟೆನ್ನಿಸ್, ಖೋ ಖೋ,  ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.

ಐದು ಕಡೆ ನಡೆದ ಪಂದ್ಯಾವಳಿಗಳಲ್ಲಿ ಹೋಬಳಿಯನ್ನು ಪ್ರತಿನಿಧಿಸುವ ಸುಮಾರು ೧,೨೫೦ಕ್ಕೂ ಹೆಚ್ಚು ಕ್ರೀಡಾ ಪ್ರತಿಭೆಗಳು ಹಾಗೂ ೩೦೦ ಜನ ಶಿಕ್ಷಕರು ಭಾಗಿಯಾಗಿ ಪಂದ್ಯಾವಳಿಯನ್ನು ನಡೆಸಿದರು. ಹೋಬಳಿಯಿಂದ ಗೆದ್ದು ತಾಲ್ಲೂಕು ಮಟ್ಟದಲ್ಲಿ ಆಡವಾಡಲು ಬಂದ ೭ರಿಂದ ೧೪ ವರ್ಷ ವಯಸ್ಸಿನ ಈ ಚಿಣ್ಣರು ಅನ್ನ, ನೀರಿಲ್ಲದೆ ಬಸವಳಿದಿದ್ದು ಮಾತ್ರ ಶಿಕ್ಷಣ ಇಲಾಖೆಯ ದುಸ್ಥಿತಿಗೆ ಸಾಕ್ಷಿಯಾದಂತಿತ್ತು.

ಮಕ್ಕಳಿಗೆ ಊಟದ ವ್ಯವಸ್ಥೆ ಮಾಡದ ತಾಲ್ಲೂಕು ಶಿಕ್ಷಣ ಇಲಾಖೆ ನಗರದ ಪ್ರತಿಭಾವಂತ ಬಾಲಕಿಯರ ವಸತಿ ಶಾಲೆಯಲ್ಲಿ ಕ್ರೀಡಾ ಶಿಕ್ಷಕರಿಗಾಗಿ ೩೫೦ ಜನರಿಗೆ ೪೦ ಕೆಜಿ ಅಕ್ಕಿಯಲ್ಲಿ ಆಹಾರ ಸಿದ್ಧಪಡಿಸಿ ತರಿಸಿಕೊಂಡಿದ್ದು ಮಾತ್ರ ಸೋಜಿಗವಾಗಿತ್ತು. ತಾಲ್ಲೂಕನ್ನು ಪ್ರತಿನಿಧಿಸುವವರಿಗೆ ಕನಿಷ್ಠ ಊಟದ ವ್ಯವಸ್ಥೆಯಾದರೂ ಬೇಡವೇ? ಎಂದು ಹೆಸರು ಹೇಳಲು ಇಚ್ಛಿಸದ ದೈಹಿಕ ಶಿಕ್ಷಕರೊಬ್ಬರು ಪ್ರಶ್ನಿಸಿದರು.

ಮಕ್ಕಳ ಖಾತೆಗೆ ಹಣ ಹಾಕುವವರು ಯಾರು? ಮಕ್ಕಳಿಗೆ ಹಣ ನೀಡುವುದಾದರೆ ಶಿಕ್ಷಕರಿಗೂ ಟಿಎ, ಡಿಎ ಇರ ಬೇಕಲ್ಲ ಎಂದು ಹೇಳಿದ್ದಕ್ಕೆ, ಅವರಿಗೂ ನೀಡಲಾಗುತ್ತದೆ ಎಂದ ಬಿಇಒ, ಹಾಗಾದರೆ ಮಕ್ಕಳಿಗಿಲ್ಲದ ಊಟದ ವ್ಯವಸ್ಥೆ ಸರ್ಕಾರಿ ವಸತಿ ಶಾಲೆಯಲ್ಲಿ ಮಾಡಿದ್ದು ಏಕೆ ಎಂದಾಗ ಮಹೇಶ ಮೌನಕ್ಕೆ ಶರಣಾದರು.

” ಬೆಳಗಿನ ಜಾವವೇ ಬಂದೆವು. ಊಟ ತಿಂಡಿ ಏನೂ ಇಲ್ಲ. ಇಲ್ಲಿ ಊಟದ ವ್ಯವಸ್ಥೆ ಇರುತ್ತದೆ ಎಂದು ಖಾಲಿ ಜೇಬಿನಲ್ಲಿ ಬಂದೆವು. ಈಗ ಆಟದಲ್ಲೂ ಸೋತು ಹಸಿದ ಒಡಲಿನಲ್ಲೇ ಊರಿಗೆ ತಲುಪಬೇಕಾಗಿದೆ.”

-ಗ್ರಾಮೀಣ ಪ್ರದೇಶದ ಮಕ್ಕಳು

” ಶಿಕ್ಷಣ ಇಲಾಖೆಯಲ್ಲಿ ಇದಕ್ಕೆ ಯಾವುದೇ ಹಣವಿಲ್ಲ. ಕ್ರೀಡೆಯಾಡಲು ಬಂದ ಪ್ರತಿ ಮಕ್ಕಳ ಖಾತೆಗೆ ಬಸ್ ಚಾರ್ಜ್ ಸಹಿತ ತಲಾ ೫೦ ರೂ. ಪಾವತಿಸುವುದರಿಂದ ಅವರನ್ನು ಕರೆ ತಂದ ಶಿಕ್ಷಕರೇ ಮಕ್ಕಳ ಊಟ-ತಿಂಡಿ ವ್ಯವಸ್ಥೆ ನೋಡಿಕೊಳ್ಳಬೇಕು.”

-ಮಹೇಶ, ಕ್ಷೇತ್ರ ಶಿಕ್ಷಣಾಧಿಕಾರಿ

ಆಂದೋಲನ ಡೆಸ್ಕ್

Recent Posts

ಪ್ರಧಾನ್‌ ರಾಜೀನಾಮೆ : ವಾಂಗ್ಚುಕ್‌ ಫಸ್ಟ್‌ ರಿಯಾಕ್ಷನ್‌

ನವದೆಹಲಿ : ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಕುರಿತು ಹೋರಾಟಗಾರ ಸೋನಮ್‌ ವಾಂಗ್ಚುಕ್‌ ಮೊದಲ ಪ್ರತಿಕ್ರಿಯೆ…

13 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 25 ಶನಿವಾರ  

22 hours ago

ನೋಟ-ಪ್ರತಿನೋಟ | ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಸರಿಯೇ? ತಪ್ಪೇ?

ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಪ್ರಥಮವಾಗಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಂಬಳಕ್ಕಾಗಿ ಮೈಸೂರಿನಲ್ಲಿ ಸ್ಥಳ ನಿಗದಿಪಡಿಸಿದ್ದು, ಸಿದ್ಧತೆ…

22 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಗೆ ಅಜ್ಜಿ ಒಡವೆ ನೀಡಿದ ಪ್ರಸಂಗ…

ನನ್ನ ಅಜ್ಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಗಾಂಧಿ ಹಕ್ಕಿಯ ಹಾಗೆ ಇದ್ದರು ಮತ್ತು ನಿರುಪದ್ರವಿ ಎಂದು. ಗಾಂಽಯ ಕಾಲದಲ್ಲಿ…

22 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ಉಡುಪು ಯಾಕೆ ಬದಲಾಯಿತು?

  ಡಾ.ಪ್ರಮೀಳಾದೇವಿ ಬಿ.ಕೆ. ಮಹಾತ್ಮಗಾಂಧಿ ಇಂಗ್ಲೆಂಡಿನಲ್ಲಿದ್ದಾಗಲೂ, ಅಲ್ಲಿಂದ ಹಿಂತಿರುಗಿದಾಗ, ಮತ್ತು ಆರಂಭದ ದಿನಗಳಲ್ಲಿ ಅವರು ಎಲ್ಲಾ ವಿದ್ಯಾವಂತರಂತೆ ಬೆಲೆಬಾಳುವ ಸೂಟುಬೂಟು…

22 hours ago

ಗಾಂಧಿ ಅಭಿಯಾನ ಅರಿವಿನ ಯಾನ ; ಸಜ್ಜನನಾದ ಆಂಗ್ಲನಾಗುವ ಪ್ರಯತ್ನ

ಶಾಕಾಹಾರದಲ್ಲಿ ದಿನದಿನಕ್ಕೂ ನನ್ನ ನಂಬಿಕೆ ಹೆಚ್ಚುತ್ತಲೇ ಹೋಯಿತು. ಸಾಲ್ಟ್‌ರ ಗ್ರಂಥದ ವ್ಯಾಸಂಗದಿಂದ, ಆಹಾರದ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಭ್ಯಾಸ ಮಾಡಲು…

22 hours ago