Andolana originals

ಆಟೋಟದಲ್ಲಿ ಪಾಲ್ಗೊಂಡ ಮಕ್ಕಳಿಗೆ ಊಟವೇ ಇಲ್ಲ!

ನಂಜನಗೂಡು ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಗಮಿಸಿದ ಮಕ್ಕಳ ಪರದಾಟ

ಎಸ್.ಎಸ್.ಭಟ್‌ 

ನಂಜನಗೂಡು: ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಊಟವೂ ಇಲ್ಲ, ಕುಡಿಯಲು ನೀರೂ ಇಲ್ಲ. ಅವರು ಹಸಿದುಕೊಂಡೇ ಆಟವಾಡಬೇಕು, ಇಲ್ಲವೇ ಅವರೇ ವ್ಯವಸ್ಥೆ ಮಾಡಿಕೊಳ್ಳಬೇಕು. ಇಂಥ ಸನ್ನಿವೇಶ ಕಂಡುಬಂದಿದ್ದು ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ. ಮಕ್ಕಳಿಗೆ ಊಟದ ವ್ಯವಸ್ಥೆ ಇಲ್ಲವಾದರೂ ಅವರನ್ನು ಕರೆ ತಂದ ಶಿಕ್ಷಕರಿಗೆ ಮಾತ್ರ ಉಟದ ವ್ಯವಸ್ಥೆ ಇತ್ತು.

ಹೋಬಳಿ ಮಟ್ಟದಲ್ಲಿ ವಿಜೇತರಾದ ಮಕ್ಕಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲು ಮಂಗಳವಾರ ನಗರದ ಬಾಲಕರ ಕಿರಿಯ ಕಾಲೇಜು, ರೋಟರಿ ಶಾಲೆ, ಕಾರ್ಮೆಲ್ ಶಾಲೆ, ಯುನಿಟಿ ಶಾಲೆ ಹಾಗೂ ಬಸವನಪುರದ ಶಾಲೆಗಳ ಆವರಣದಲ್ಲಿ ವಾಲಿಬಾಲ್, ಥ್ರೋಬಾಲ್, ಟೆನ್ನಿಸ್, ಖೋ ಖೋ,  ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.

ಐದು ಕಡೆ ನಡೆದ ಪಂದ್ಯಾವಳಿಗಳಲ್ಲಿ ಹೋಬಳಿಯನ್ನು ಪ್ರತಿನಿಧಿಸುವ ಸುಮಾರು ೧,೨೫೦ಕ್ಕೂ ಹೆಚ್ಚು ಕ್ರೀಡಾ ಪ್ರತಿಭೆಗಳು ಹಾಗೂ ೩೦೦ ಜನ ಶಿಕ್ಷಕರು ಭಾಗಿಯಾಗಿ ಪಂದ್ಯಾವಳಿಯನ್ನು ನಡೆಸಿದರು. ಹೋಬಳಿಯಿಂದ ಗೆದ್ದು ತಾಲ್ಲೂಕು ಮಟ್ಟದಲ್ಲಿ ಆಡವಾಡಲು ಬಂದ ೭ರಿಂದ ೧೪ ವರ್ಷ ವಯಸ್ಸಿನ ಈ ಚಿಣ್ಣರು ಅನ್ನ, ನೀರಿಲ್ಲದೆ ಬಸವಳಿದಿದ್ದು ಮಾತ್ರ ಶಿಕ್ಷಣ ಇಲಾಖೆಯ ದುಸ್ಥಿತಿಗೆ ಸಾಕ್ಷಿಯಾದಂತಿತ್ತು.

ಮಕ್ಕಳಿಗೆ ಊಟದ ವ್ಯವಸ್ಥೆ ಮಾಡದ ತಾಲ್ಲೂಕು ಶಿಕ್ಷಣ ಇಲಾಖೆ ನಗರದ ಪ್ರತಿಭಾವಂತ ಬಾಲಕಿಯರ ವಸತಿ ಶಾಲೆಯಲ್ಲಿ ಕ್ರೀಡಾ ಶಿಕ್ಷಕರಿಗಾಗಿ ೩೫೦ ಜನರಿಗೆ ೪೦ ಕೆಜಿ ಅಕ್ಕಿಯಲ್ಲಿ ಆಹಾರ ಸಿದ್ಧಪಡಿಸಿ ತರಿಸಿಕೊಂಡಿದ್ದು ಮಾತ್ರ ಸೋಜಿಗವಾಗಿತ್ತು. ತಾಲ್ಲೂಕನ್ನು ಪ್ರತಿನಿಧಿಸುವವರಿಗೆ ಕನಿಷ್ಠ ಊಟದ ವ್ಯವಸ್ಥೆಯಾದರೂ ಬೇಡವೇ? ಎಂದು ಹೆಸರು ಹೇಳಲು ಇಚ್ಛಿಸದ ದೈಹಿಕ ಶಿಕ್ಷಕರೊಬ್ಬರು ಪ್ರಶ್ನಿಸಿದರು.

ಮಕ್ಕಳ ಖಾತೆಗೆ ಹಣ ಹಾಕುವವರು ಯಾರು? ಮಕ್ಕಳಿಗೆ ಹಣ ನೀಡುವುದಾದರೆ ಶಿಕ್ಷಕರಿಗೂ ಟಿಎ, ಡಿಎ ಇರ ಬೇಕಲ್ಲ ಎಂದು ಹೇಳಿದ್ದಕ್ಕೆ, ಅವರಿಗೂ ನೀಡಲಾಗುತ್ತದೆ ಎಂದ ಬಿಇಒ, ಹಾಗಾದರೆ ಮಕ್ಕಳಿಗಿಲ್ಲದ ಊಟದ ವ್ಯವಸ್ಥೆ ಸರ್ಕಾರಿ ವಸತಿ ಶಾಲೆಯಲ್ಲಿ ಮಾಡಿದ್ದು ಏಕೆ ಎಂದಾಗ ಮಹೇಶ ಮೌನಕ್ಕೆ ಶರಣಾದರು.

” ಬೆಳಗಿನ ಜಾವವೇ ಬಂದೆವು. ಊಟ ತಿಂಡಿ ಏನೂ ಇಲ್ಲ. ಇಲ್ಲಿ ಊಟದ ವ್ಯವಸ್ಥೆ ಇರುತ್ತದೆ ಎಂದು ಖಾಲಿ ಜೇಬಿನಲ್ಲಿ ಬಂದೆವು. ಈಗ ಆಟದಲ್ಲೂ ಸೋತು ಹಸಿದ ಒಡಲಿನಲ್ಲೇ ಊರಿಗೆ ತಲುಪಬೇಕಾಗಿದೆ.”

-ಗ್ರಾಮೀಣ ಪ್ರದೇಶದ ಮಕ್ಕಳು

” ಶಿಕ್ಷಣ ಇಲಾಖೆಯಲ್ಲಿ ಇದಕ್ಕೆ ಯಾವುದೇ ಹಣವಿಲ್ಲ. ಕ್ರೀಡೆಯಾಡಲು ಬಂದ ಪ್ರತಿ ಮಕ್ಕಳ ಖಾತೆಗೆ ಬಸ್ ಚಾರ್ಜ್ ಸಹಿತ ತಲಾ ೫೦ ರೂ. ಪಾವತಿಸುವುದರಿಂದ ಅವರನ್ನು ಕರೆ ತಂದ ಶಿಕ್ಷಕರೇ ಮಕ್ಕಳ ಊಟ-ತಿಂಡಿ ವ್ಯವಸ್ಥೆ ನೋಡಿಕೊಳ್ಳಬೇಕು.”

-ಮಹೇಶ, ಕ್ಷೇತ್ರ ಶಿಕ್ಷಣಾಧಿಕಾರಿ

ಆಂದೋಲನ ಡೆಸ್ಕ್

Recent Posts

ರಷ್ಯಾ ಮೇಲೆ ಉಕ್ರೇನ್‌ ಭೀಕರ ಡ್ರೋನ್‌ ದಾಳಿ: 4 ಮಂದಿ ಸಾವು

ಮಾಸ್ಕೋ: ಉಕ್ರೇನ್‌ ಶನಿವಾರ ರಾತ್ರೋರಾತ್ರಿ ಮಾಸ್ಕೋ ಸೇರಿದಂತೆ ರಷ್ಯಾದ ಅನೇಕ ಭಾಗಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ ದಾಳಿ ನಡೆಸಿದೆ. ಈ ವೈಮಾನಿಕ…

4 hours ago

ಮೈಸೂರಿನಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ ಕ್ಷೇತ್ರ ಎಂಬ ಖ್ಯಾತಿ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ನಡೆದ ಜನರೊಂದಿಗೆ ಜನತಾದಳ…

5 hours ago

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮ ರಾಜ್ಯದ ಅನೇಕ ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

5 hours ago

ಕಳೆದ ಮೂರು ದಿನಗಳಿಂದ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತದ ಮಂದಿ ಭಕ್ತರು ಭೇಟಿ

ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ…

5 hours ago

ಕಾಡಿನಲ್ಲಿ ಅಕ್ರಮವಾಗಿ ಚರ್ಚ್‌ ನಿರ್ಮಾಣ: 40ಕ್ಕೂ ಹೆಚ್ಚು ಜನರ ಬಂಧನ

ಕೊಡಗು: ಕಾಡಿನೊಳಗೆ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಚರ್ಚ್‌ ಉದ್ಘಾಟನೆಗೆ ಬಂದಿದ್ದ 40ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕೊಡಗಿನಲ್ಲಿ…

6 hours ago

ಹಾರ್ಮುಜ್‌ ದಾಟಿ ಸುರಕ್ಷಿತವಾಗಿ ಭಾರತಕ್ಕೆ ಬಂತು 20,000 ಟನ್‌ ಎಲ್‌ಪಿಜಿ ಟ್ಯಾಂಕರ್‌

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಿರಂತರ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಇಂಧನ ಬೆಲೆಗಳ ನಡುವೆಯೇ ಸುಮಾರು 20,000 ಟನ್ ಎಲ್‍ಪಿಜಿಯನ್ನು ಹೊತ್ತ…

7 hours ago