ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶಾಲೆಗಳು ಮತ್ತೆ ಬಾಗಿಲು ತೆರೆದಿವೆ. ಹೊಸ ಕನಸುಗಳೊಂದಿಗೆ ಮಕ್ಕಳು ತರಗತಿಗಳತ್ತ ಹೆಜ್ಜೆ ಇಟ್ಟಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜ್ಯಕ್ಕೂ ಹೊಸ ಅಧ್ಯಾಯ ಆರಂಭವಾಗಿದೆ. ಹೊಸ ನಿರೀಕ್ಷೆಗಳು, ಹೊಸ ಭರವಸೆಗಳು ಮೂಡಿವೆ. ಆದರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಖಾತೆ ಇನ್ನೂ ಹಂಚಿಕೆಯಾಗಿಲ್ಲ. ಇದು ಕೇವಲ ಆಡಳಿತಾತ್ಮಕ ವಿಳಂಬವೇ? ಅಥವಾ ಶಿಕ್ಷಣದ ಆದ್ಯತೆಯ ಬಗ್ಗೆ ಯೋಚಿಸಲು ನೀಡಿದ ಮೌನ ಸಂಕೇತವೇ? ಖಾತೆ ಇಂದಾಗಲಿ ಅಥವಾ ನಾಳೆಯಾಗಲಿ ಖಂಡಿತವಾಗಿಯೂ ಹಂಚಿಕೆಯಾಗುತ್ತದೆ. ಆದರೆ ಪ್ರಶ್ನೆ ದಿನಾಂಕದ ಬಗ್ಗೆ ಅಲ್ಲ; ಪ್ರಶ್ನೆ ಆದ್ಯತೆಯ ಬಗ್ಗೆ. ರೈತನಿಗೆ ಬಿತ್ತನೆಯ ಸಮಯ ಮುಖ್ಯ. ವೈದ್ಯನಿಗೆ ರೋಗಿಯ ಜೀವ ಮುಖ್ಯ. ಹಾಗೆಯೇ ಒಂದು ರಾಜ್ಯಕ್ಕೆ ಮಕ್ಕಳ ಶಿಕ್ಷಣವೇ ಮುಖ್ಯ.
ರಸ್ತೆ ಕಾಮಗಾರಿಯನ್ನು ಮುಂದೂಡಬಹುದು. ಕಟ್ಟಡ ಉದ್ಘಾಟನೆಯನ್ನು ತಡಮಾಡಬಹುದು. ಆದರೆ ಭವಿಷ್ಯ ರೂಪಿಸುವ ಶಿಕ್ಷಣದ ಖಾತೆ ಮಾತ್ರ ಏಕೆ ಕಾಯಬೇಕು? ಪ್ರತಿ ಮಗು ಒಂದು ಭವಿಷ್ಯ. ಪ್ರತಿ ಶಿಕ್ಷಕ ಒಂದು ಆಶಾಕಿರಣ. ಪ್ರತಿ ಶಾಲೆ ಒಂದು ಸಮಾಜದ ಕನಸು. ಖಾಲಿ ಉಳಿದಿರುವುದು ಕೇವಲ ಒಂದು ಸಚಿವ ಖಾತೆಯಲ್ಲ; ಅದು ಸಾವಿರಾರು ಶಾಲೆಗಳ ನಿರೀಕ್ಷೆ, ಲಕ್ಷಾಂತರ ಮಕ್ಕಳ ಭವಿಷ್ಯದ ಪ್ರಶ್ನೆ. ಬಹುಶಃ ಇದಕ್ಕೆ ಆಡಳಿತಾತ್ಮಕ ಕಾರಣಗಳಿರಬಹುದು. ಉತ್ತರ ಶೀಘ್ರದಲ್ಲೇ ಸಿಗಬಹುದು. ಆದರೂ ಒಂದು ಪ್ರಶ್ನೆ ಉಳಿಯುತ್ತದೆ ಶಿಕ್ಷಣವೇ ರಾಜ್ಯದ ಭವಿಷ್ಯವನ್ನು ರೂಪಿಸುವ ಶಕ್ತಿ ಆಗಿದ್ದರೆ, ಅದರ ಹೊಣೆಗಾರಿಕೆ ಮೊದಲ ಆದ್ಯತೆಯಾಗ ಬೇಕಿತ್ತಲ್ಲವೇ?
-ಸರ್ದಾರ್ ಎಂ. ತನಾಝ್, ಮೈಸೂರು
ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಶ್ರಮಪಡುವುದು ಗೊತ್ತಿರುವ ವಿಷಯವೇ. ವೃತ್ತಿಪರ ಕೋರ್ಸ್ಗಳು ಮತ್ತು ನಂತರ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿದ್ಯಾರ್ಥಿಗಳು…
ರಾಜ್ಯದಲ್ಲಿ ಪ್ರತಿದಿನ ಸೃಷ್ಟಿಯಾಗುವ ೧೨,೧೪೯ ಟನ್ ಕಸದಿಂದ ವಿದ್ಯುತ್ ತಯಾರಿಸುವ ಸರ್ಕಾರದ ಪ್ರಸ್ತಾಪವು ಕೇವಲ ಕಾಗದದ ಮೇಲಷ್ಟೇ ಸುಂದರವಾಗಿ ಕಾಣುತ್ತದೆ.…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಪಂಜಬ್ ಮತ್ತು ಹರಿಯಾಣ ರೈತರ ೧೩ ತಿಂಗಳ ನಿರಂತರಹೋರಾಟ ಜನಮಾನಸದಿಂದ ಮರೆಯುತ್ತಿದ್ದಂತೆ ಬಿಜೆಪಿ ನೇತೃತ್ವದ…
ಜಿ.ಕೃಷ್ಣ ಪ್ರಸಾದ್ ‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ…
ಮಧುಕರ ಎಂ.ಎಲ್. ಒಂದು ಕಾಲದಲ್ಲಿ ಚಲನಚಿತ್ರವೇ ನಮ್ಮ ಮನರಂಜನೆ ಮಾಧ್ಯಮವಾಗಿದ್ದು, ಪೌರಾಣಿಕ ಕಥೆಗಳು, ರಾಮಾಯಣ ಕಥೆಗಳು, ಮಹಾಭಾರತ ಪ್ರಸಂಗಗಳು ಚಲನಚಿತ್ರವಾಗಿ…
ಸುರೇಶ ಕಂಜರ್ಪಣೆ ದೆಹಲಿಯ ಯುವ ಜನಾಂಗದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಎಲ್ಲ ಚಳವಳಿಗಳ ಆರಂಭಿಕ ಶಂಕೆ, ಆತಂಕಗಳನ್ನು ಮೀರಿ…