ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶಾಲೆಗಳು ಮತ್ತೆ ಬಾಗಿಲು ತೆರೆದಿವೆ. ಹೊಸ ಕನಸುಗಳೊಂದಿಗೆ ಮಕ್ಕಳು ತರಗತಿಗಳತ್ತ ಹೆಜ್ಜೆ ಇಟ್ಟಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜ್ಯಕ್ಕೂ ಹೊಸ ಅಧ್ಯಾಯ ಆರಂಭವಾಗಿದೆ. ಹೊಸ ನಿರೀಕ್ಷೆಗಳು, ಹೊಸ ಭರವಸೆಗಳು ಮೂಡಿವೆ. ಆದರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಖಾತೆ ಇನ್ನೂ ಹಂಚಿಕೆಯಾಗಿಲ್ಲ. ಇದು ಕೇವಲ ಆಡಳಿತಾತ್ಮಕ ವಿಳಂಬವೇ? ಅಥವಾ ಶಿಕ್ಷಣದ ಆದ್ಯತೆಯ ಬಗ್ಗೆ ಯೋಚಿಸಲು ನೀಡಿದ ಮೌನ ಸಂಕೇತವೇ? ಖಾತೆ ಇಂದಾಗಲಿ ಅಥವಾ ನಾಳೆಯಾಗಲಿ ಖಂಡಿತವಾಗಿಯೂ ಹಂಚಿಕೆಯಾಗುತ್ತದೆ. ಆದರೆ ಪ್ರಶ್ನೆ ದಿನಾಂಕದ ಬಗ್ಗೆ ಅಲ್ಲ; ಪ್ರಶ್ನೆ ಆದ್ಯತೆಯ ಬಗ್ಗೆ. ರೈತನಿಗೆ ಬಿತ್ತನೆಯ ಸಮಯ ಮುಖ್ಯ. ವೈದ್ಯನಿಗೆ ರೋಗಿಯ ಜೀವ ಮುಖ್ಯ. ಹಾಗೆಯೇ ಒಂದು ರಾಜ್ಯಕ್ಕೆ ಮಕ್ಕಳ ಶಿಕ್ಷಣವೇ ಮುಖ್ಯ.
ರಸ್ತೆ ಕಾಮಗಾರಿಯನ್ನು ಮುಂದೂಡಬಹುದು. ಕಟ್ಟಡ ಉದ್ಘಾಟನೆಯನ್ನು ತಡಮಾಡಬಹುದು. ಆದರೆ ಭವಿಷ್ಯ ರೂಪಿಸುವ ಶಿಕ್ಷಣದ ಖಾತೆ ಮಾತ್ರ ಏಕೆ ಕಾಯಬೇಕು? ಪ್ರತಿ ಮಗು ಒಂದು ಭವಿಷ್ಯ. ಪ್ರತಿ ಶಿಕ್ಷಕ ಒಂದು ಆಶಾಕಿರಣ. ಪ್ರತಿ ಶಾಲೆ ಒಂದು ಸಮಾಜದ ಕನಸು. ಖಾಲಿ ಉಳಿದಿರುವುದು ಕೇವಲ ಒಂದು ಸಚಿವ ಖಾತೆಯಲ್ಲ; ಅದು ಸಾವಿರಾರು ಶಾಲೆಗಳ ನಿರೀಕ್ಷೆ, ಲಕ್ಷಾಂತರ ಮಕ್ಕಳ ಭವಿಷ್ಯದ ಪ್ರಶ್ನೆ. ಬಹುಶಃ ಇದಕ್ಕೆ ಆಡಳಿತಾತ್ಮಕ ಕಾರಣಗಳಿರಬಹುದು. ಉತ್ತರ ಶೀಘ್ರದಲ್ಲೇ ಸಿಗಬಹುದು. ಆದರೂ ಒಂದು ಪ್ರಶ್ನೆ ಉಳಿಯುತ್ತದೆ ಶಿಕ್ಷಣವೇ ರಾಜ್ಯದ ಭವಿಷ್ಯವನ್ನು ರೂಪಿಸುವ ಶಕ್ತಿ ಆಗಿದ್ದರೆ, ಅದರ ಹೊಣೆಗಾರಿಕೆ ಮೊದಲ ಆದ್ಯತೆಯಾಗ ಬೇಕಿತ್ತಲ್ಲವೇ?
-ಸರ್ದಾರ್ ಎಂ. ತನಾಝ್, ಮೈಸೂರು
ನೇರಳೆ ಹಣ್ಣಿನ ಬೀಜಗಳ ಔಷಧಿಯ ಗುಣಗಳನ್ನು ಪರಿಗಣಿಸಿ ಸರ್ಕಾರವು ಇವುಗಳ ಸಂರಕ್ಷಣೆ ಮತ್ತು ಮೌಲ್ಯವರ್ಧನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ತೋಟಗಾರಿಕಾ…
ಮೈಸೂರಿನ ರಿಂಗ್ ರಸ್ತೆ ಪರಸಯ್ಯನ ಹುಂಡಿ ಸರ್ಕಲ್ನಲ್ಲಿ ಪ್ರತಿನಿತ್ಯ ಸಾರಿಗೆ ನಿಗಮದ ಬಸ್ಗಳನ್ನು ನಿಲುಗಡೆ ಮಾಡುವುದರಿಂದ ಪ್ರತಿನಿತ್ಯ ಟ್ರಾಫಿಕ್ ಜಾಮ್…
ನವೀನ್ ಡಿಸೋಜ ಜಿಲ್ಲೆಯಲ್ಲಿ ಶೇ.೩೦.೮೫ರಷ್ಟು ಮಂದಿಗೆ ಮಾತ್ರ ಲಸಿಕೆ; ಗರ್ಭಕಂಠ ಕ್ಯಾನ್ಸರ್ ತಡೆಯಲು ಲಸಿಕೆ ಕಡ್ಡಾಯ: ಆರೋಗ್ಯ ಇಲಾಖೆ ಮನವಿ…
ಹೇಮಂತ್ಕುಮಾರ್ ೧೦ ಚಿನ್ನ, ೬ ಬೆಳ್ಳಿ, ೩ ಕಂಚಿನ ಪದಕಗಳನ್ನು ಬಾಚಿದ ಆಕ್ಸ್ಫರ್ಡ್ ಅಕಾಡೆಮಿ ಮಂಡ್ಯ: ಪರಿಶ್ರಮವಿದ್ದೆಡೆ ಸಾಧನೆ ಸಾಧ್ಯ ಎಂಬುದಕ್ಕೆ ಶ್ರೀರಂಗಪಟ್ಟಣ…
ಮಂಜು ಕೋಟೆ ಕೋಟೆ: ಔಷಧ ಸಿಂಪಡಿಸಿದ ಬಿತ್ತನೆ ಬೀಜ ವಿತರಿಸಿದರೂ ಪ್ರಯೋಜನವಾಗದೆ ಲಕ್ಷಾಂತರ ರೂ. ನಷ್ಟ ಎಚ್.ಡಿ.ಕೋಟೆ: ಸಾವಿರಾರು ಎಕರೆಯಲ್ಲಿ…