ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟದ ಪ್ರಸ್ತಾಪ ಚರ್ಚೆಗೆ ಒಳಗಾಗುತ್ತಿದೆ. ಅದು ಆಹಾರ ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ ಅದು ಪರೋಕ್ಷವಾಗಿ ಜತಿ ವ್ಯವಸ್ಥೆಯ ಪರ- ವಿರೋಧವಾಗಿ ಕಾಣುತ್ತಿದೆ. ಯಾರು ಏನೇ ಹೇಳಿದರೂ ದೇಶದಲ್ಲಿ ಜತಿ ಪದ್ಧತಿಯ ಬೇರು ಗಟ್ಟಿಯಾಗುತ್ತಲೇ ಇರುವಂತಿದೆ. ಅಲ್ಲದೆ, ಆಧುನಿಕತೆಗೆ ಒಗಿಕೊಂಡಷ್ಟೂ, ಜತಿವಾದವೂ ನವೀನ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಮಾತಿಗೆ ಒಂದು ‘ಮನೆ ಭೋಗ್ಯಕ್ಕೆ ಖಾಲಿ ಇದೆ’ ಎಂಬ ಭಿತ್ತಿಪತ್ರ (ಗೋಡೆ ಬದಲಿಗೆ ಮರದ ಮೇಲಿದೆ)ದಲ್ಲಿರುವ ಒಕ್ಕಣೆ ಸಾಕ್ಷ್ಯವಾಗಿದೆ.
ಮೈಸೂರಿನ ಬಡಾವಣೆಯೊಂದರಲ್ಲಿ ಆ ಪತ್ರವನ್ನು ಮರಕ್ಕೆ ಅಂಟಿಸಲಾಗಿದೆ. ಅದರಲ್ಲಿ ಒಳಗೆ ೨ ಬಿಎಚ್ಕೆ ಎಂಬುದಾಗಿ ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ. ಅದನ್ನು ಮೀರಿ ಅದೇ ಇಂಗ್ಲಿಷ್ ಭಾಷೆಯಲ್ಲಿ ಆವರಣದ ಒಳಗೆ ‘ವೆಜ್ ಓನ್ಲಿ’ ಎಂಬುದನ್ನು ರಾಜರೋಷವಾಗಿ ಬರೆಯಲಾಗಿದೆ. ಅದೂ ಮೊಬೈಲ್ ಸಂಖ್ಯೆ ಸಹಿತ ದಾಖಲಿಸಿದ್ದಾರೆ. ಆ ಮನೆಯ ಮಾಲೀಕರಿಗೆ ಬಹುಶಃ ಕಾನೂನಿನ ಅರಿವು ಇಲ್ಲದಿರಬಹುದು. ಆದರೆ, ಇದು ಪರಿಶಿಷ್ಟ ಜತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಅಪರಾಧ ಎಂಬುದು ಗೊತ್ತಿಲ್ಲದಿರಬಹುದು. ಆದರೆ, ಈ ನೆಲದಲ್ಲಿ ಜತಿ ಪದ್ಧತಿ ಯನ್ನು ಬೇರು ಸಮೇತ ಕೀಳುವುದು ಸಾಧ್ಯವೇ ಎಂಬ ಬೃಹತ್ ಪ್ರಶ್ನೆಯನ್ನು ಈ ಭಿತ್ತಿಪತ್ರ ಅಣಕಿಸಿ ಕೇಳಿದಂತಿತ್ತು. ಇದು ಒಂದು ಉದಾಹರಣೆ ಅಷ್ಟೆ. (ಬಹುಶಃ ಈಗ ಆ ಭಿತ್ತಿಪತ್ರ ಕಿತ್ತುಹೋಗಿರಬಹುದು)
-ಅನ್ವಿಕ್, ಕೆಎಚ್ಬಿ ಕಾಲೋನಿ, ನಂಜನಗೂಡು
ಲಖನೌ: ಉತ್ತರ ಪ್ರದೇಶದ ಅಲಿಗಂಜ್ನಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡವೊಂದರಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ 15 ವಿದ್ಯಾರ್ಥಿಗಳು…
ಕೀನ್ಯಾ: ಕಾಂಗೋದಲ್ಲಿ ಎಬೋಲಾ ವೈರಸ್ನ ಅಟ್ಟಹಾಸ ಮುಂದುವರಿದಿದ್ದು, ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 1003ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರ…
ಹಲಗೂರು: ಇಲ್ಲಿಗೆ ಸಮೀಪದ ಗಾಣಾಳು ಜಲಪಾತದಲ್ಲಿ ಈಜಲು ಇಳಿದಿದ್ದ ಯುವಕನೊಬ್ಬ ನೀರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.…
ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…
ಬೆಂಗಳೂರು: ದಿನದಿಂದ ದಿನಕ್ಕೆ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಶೀಘ್ರದಲ್ಲೇ ರಾಜ್ಯ ಸರ್ಕಾರ ಬಸ್ ಪ್ರಯಾಣ…
ಲಂಡನ್: ನಿರೀಕ್ಷೆಯಂತೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಡಳಿತಾರೂಢ ಲೇಬರ್ ಪಕ್ಷದೊಳಗೆ…