ಓದುಗರ ಪತ್ರ
ಸಂತಸ – ಸಂಕಟ
ನಿನ್ನೆ ಗೆದ್ದ ಸಂತಸ…
ಇಂದು ಸತ್ತ ಸಂಕಟ…
ಪಂದ್ಯವಾಗಿತ್ತು ರಣ ರೋಚಕ…
ಮಂದಿಗೀಗ ಸಾವಿನ ಸೂತಕ!
ತಡರಾತ್ರಿಯೆಲ್ಲ ಬಾನಂಗಳದಲ್ಲಿ
ಚುಕ್ಕಿಗಳ ನಾಚಿಸುವ ಚಮಕು!
ತುಡಿತದ ತುಳಿತಕ್ಕೆ ಸಿಕ್ಕವರಿಗೆ
ಮಸಣದ ಹಾದಿಗೆ ಬೆಳಕು!
ಹಸುಗೂಸೋ ಹದಿವಯಸೋ
ಯಾವುದೊಂದನ್ನೂ ನೋಡಲಿಲ್ಲ
ಅಭಿಮಾನದ ಕಿ(ಹು)ಚ್ಚು….!
ಅಂಗಾಲಿನಡಿ ಸಿಲುಕಿದ್ದವರೆಲ್ಲ
ಕಂಗಳ ರೆಪ್ಪೆ ಮಿಟುಕಿಸುವಷ್ಟರಲ್ಲೇ
ಚೆಲ್ಲಿದರು ಉಸಿರು…..!
ಇದಕ್ಕೀಗ ಅಭಿಮಾನವೆನ್ನುವುದೋ
ರಾಜಕೀಯದ ಲೇ(ಲೋ)ಪ ಎನ್ನುವುದೋ…!
ಏನೂ ಹೇಳಲಾಗದ ಪರಿಸ್ಥಿತಿ…!
ಸಂತಸ – ಸಂಕಟ ಒಂದೇ ನಾಣ್ಯದ
ಎರಡು ಮುಖಗಳಿದ್ದಂತೆ….!
ಅಷ್ಟೇ….!
– ಎಸ್. ಶ್ರೀಕರ
ಬಂಡಾಯದ ಹೊಳೆ ಮಿಂಚು ಹೂಮಳೆ ! ಅತಿವೃಷ್ಟಿ,ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ, ಕಾರಣ,…
ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ…
ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು…
ಶುಭಾ ಖಟಾವಕರ ಮ್ಹೆತ್ರಸ್ ಹೊಸ ಇತಿಹಾಸ ಸೃಷ್ಟಿಸಿದ ‘ಜೆನ್ ಝೀ’ ಪೀಳಿಗೆ ಸಂಪ್ರದಾಯಗಳನ್ನು ಪ್ರಶ್ನಿಸಿದ ‘ಬೂಮರ್ಸ್’ ಯುವಜನ ೧೯೦೦ ರಿಂದ…
ಪುನೀತ್ ೩ ವರ್ಷ ಕಳೆದರೂ ಮುಗಿಯದ ಕಾಮಗಾರಿ: ಶೀಘ್ರ ಪೂರ್ಣಗೊಳಿಸಲು ಒತ್ತಾಯ ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದ…
ಮಂಜು ಕೋಟೆ ಕೋಟೆ: ಸಚಿವ ಸ್ಥಾನ ದೊರೆತಿದ್ದರೆ ಹಿಂದುಳಿದ ಕ್ಷೇತ್ರದ ಅಭಿವೃದ್ಧಿಯಾಗುತ್ತಿತ್ತು ಎಂಬ ನಿರೀಕ್ಷೆ ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ…